MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
CM DK Shivakumar vs HD Devegowda
KPSC Scam
Ganesh Idol Theft
Swachh Vayu Survekshan
108 Ambulance Services
Duleep Trophy Final
Today's Horoscope in Kannada
Mantralaya Online Scam
Hubballi Ganeshotsava
Kalaburagi Drought List
Pitru Paksha 2026 Date
PM Modi Meeting
Karnataka Farmers
Gulbarga Bus Accident
Western Ghats ESA
Karnataka Taxi Fare Meter
Bigg Boss Kannada 13
  • Home
  • Karnataka Districts
  • ಮಲೆನಾಡಿನ ಈ ಹಳ್ಳಿ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಕ್ತಿಲ್ಲ; ಕಾರಣ ಈ ಊರಿಗೆ ರಸ್ತೆಯೇ ಸರಿಯಿಲ್ಲ!

ಮಲೆನಾಡಿನ ಈ ಹಳ್ಳಿ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಕ್ತಿಲ್ಲ; ಕಾರಣ ಈ ಊರಿಗೆ ರಸ್ತೆಯೇ ಸರಿಯಿಲ್ಲ!

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕದ ದುಸ್ಥಿತಿಯಿಂದಾಗಿ ಮದುವೆ ಸಂಬಂಧವೊಂದು ಮುರಿದುಬಿದ್ದಿದೆ. ಸುಮಾರು 20 ವರ್ಷಗಳಿಂದ ಡಾಂಬರು ಕಾಣದ ಈ ರಸ್ತೆಗಳಿಂದಾಗಿ ಗ್ರಾಮಸ್ಥರು, ಶಾಲಾ ಮಕ್ಕಳು ನಿತ್ಯ ಪರದಾಡುತ್ತಿದ್ದಾರೆ.

2 Min read
Author : Sathish Kumar KH
Published : Sep 08 2026, 09:47 AM IST
Share this Photo Gallery
  • FB
  • TW
  • Linkdin
  • Whatsapp
17
ನಿಮ್ಮೂರಿನಲ್ಲಿ ರಸ್ತೆ ಸರಿ ಇಲ್ಲ, ಹೆಣ್ಣು ಕೊಡಲ್ಲ
Image Credit : Asianet News

ನಿಮ್ಮೂರಿನಲ್ಲಿ ರಸ್ತೆ ಸರಿ ಇಲ್ಲ, ಹೆಣ್ಣು ಕೊಡಲ್ಲ

ಚಿಕ್ಕಮಗಳೂರು: ‘ನಿಮ್ಮೂರಿನಲ್ಲಿ ರಸ್ತೆ ಸರಿ ಇಲ್ಲ, ಹೆಣ್ಣು ಕೊಡಲ್ಲ’ ಎಂಬ ಮಾತು ಕೇಳಿಬರುವ ಪರಿಸ್ಥಿತಿ ಇದೀಗ ಮಲೆನಾಡಿನ ಕೆಲವು ಗ್ರಾಮಗಳಲ್ಲಿ ನಿರ್ಮಾಣವಾಗಿದೆ. ರಸ್ತೆ ಸಂಪರ್ಕದ ದುಸ್ಥಿತಿಯಿಂದಾಗಿ ಒಂದು ಮದುವೆ ಸಂಬಂಧವೇ ಕಳೆದುಹೋಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಎದುರಾಗಿರುವ ತೀವ್ರ ರಸ್ತೆ ಸಮಸ್ಯೆ ಇದೀಗ ಸಾಮಾಜಿಕ ಸಮಸ್ಯೆಯ ರೂಪವನ್ನೂ ಪಡೆದುಕೊಂಡಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಕಳಸ ತಾಲೂಕಿನ ಎಡೆಯೂರು, ಮರಸಣಿಗೆ, ಮಾವಿನಕೆರೆ ಹಾಗೂ ಕೆ.ಕೆಳಗೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯಿಂದ ಬಳಲುತ್ತಿವೆ. ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಗ್ರಾಮಸ್ಥರ ಸಂಚಾರವೇ ದುಸ್ತರವಾಗಿದೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ರಸ್ತೆ ಸರಿಯಿಲ್ಲವೆಂದು ವಧು ನೀಡಲು ನಿರಾಕರಣೆ?
Image Credit : Asianet News

ರಸ್ತೆ ಸರಿಯಿಲ್ಲವೆಂದು ವಧು ನೀಡಲು ನಿರಾಕರಣೆ?

ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಈ ಭಾಗದ ರಸ್ತೆಗಳ ಸ್ಥಿತಿ ಕಂಡು ಹೊರಗಿನ ಕುಟುಂಬವೊಂದು ವಿವಾಹ ಸಂಬಂಧ ಮುಂದುವರಿಸಲು ಹಿಂದೇಟು ಹಾಕಿದೆ. ‘ರಸ್ತೆ ಸರಿಯಿಲ್ಲದ ಊರಿಗೆ ಹೆಣ್ಣು ಕೊಡುವುದಿಲ್ಲ’ ಎಂಬ ಮನೋಭಾವ ವ್ಯಕ್ತವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ವಿವಾಹದಂತಹ ವೈಯಕ್ತಿಕ ಸಂಬಂಧಕ್ಕೂ ಗ್ರಾಮದಲ್ಲಿನ ರಸ್ತೆ ಸಮಸ್ಯೆ ಅಡ್ಡಿಯಾಗುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Related image1
ಚಿಕ್ಕಮಗಳೂರು: ಎರಡೇ ತಿಂಗಳಲ್ಲಿ ಹಾಳಾದ ರಸ್ತೆ, ಕಿತ್ತು ಬರ್ತೀರೋ ಟಾರ್ ಕಂಡು ಜನರ ಆಕ್ರೋಶ
Related image2
Now Playing
Chikkamagaluru road potholes: ಚಿಕ್ಕಮಗಳೂರು: ರಸ್ತೆ ಗುಂಡಿಗಳಿಗೆ ಬೇಸತ್ತು ತಾವೇ ಗುಂಡಿ ಮುಚ್ಚಿದ ಚಾಲಕರು!
37
20 ವರ್ಷಗಳಿಂದ ಟಾರ್ ಕಂಡಿಲ್ಲ!
Image Credit : Asianet News

20 ವರ್ಷಗಳಿಂದ ಟಾರ್ ಕಂಡಿಲ್ಲ!

ಸ್ಥಳೀಯರ ಪ್ರಕಾರ, ಈ ಗ್ರಾಮಗಳ ರಸ್ತೆಗೆ ಸುಮಾರು 20 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ ಅನುದಾನದ ಮೂಲಕ ಡಾಂಬರೀಕರಣವಾಗಿತ್ತು. ಅದಾದ ಬಳಿಕ ಸಮರ್ಪಕವಾಗಿ ಟಾರ್ ಕಾಮಗಾರಿ ನಡೆದಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಕಳೆದ 10 ವರ್ಷಗಳಿಂದ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

47
ಸುಮಾರು 450–500 ಮನೆಗಳ ಗ್ರಾಮಗಳು
Image Credit : Asianet News

ಸುಮಾರು 450–500 ಮನೆಗಳ ಗ್ರಾಮಗಳು

ಎಡೆಯೂರು, ಮರಸಣಿಗೆ, ಮಾವಿನಕೆರೆ ಹಾಗೂ ಕೆ.ಕೆಳಗೂರು ಭಾಗದಲ್ಲಿ ಸುಮಾರು 450ರಿಂದ 500 ಮನೆಗಳು ಇದ್ದು, ಹೆಚ್ಚಿನ ಕುಟುಂಬಗಳು ಕೂಲಿ ಕೆಲಸ ಸೇರಿದಂತೆ ವಿವಿಧ ಜೀವನೋಪಾಯಗಳ ಮೇಲೆ ಅವಲಂಬಿತವಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಸ್ತೆ ಹದಗೆಟ್ಟಿರುವುದರಿಂದ ದಿನನಿತ್ಯದ ಅಗತ್ಯ ಸೇವೆಗಳಿಗೂ ತೊಂದರೆ ಎದುರಾಗುತ್ತಿದೆ. ಮಳೆಗಾಲದಲ್ಲಿ ವಾಹನ ಸಂಚಾರ ಮತ್ತಷ್ಟು ಅಪಾಯಕಾರಿಯಾಗುತ್ತದೆ ಎಂಬುದು ಸ್ಥಳೀಯರ ಅಳಲು.

57
ಶಾಲಾ-ಕಾಲೇಜು ಮಕ್ಕಳಿಗೂ ನಿತ್ಯ ಪರದಾಟ
Image Credit : Asianet News

ಶಾಲಾ-ಕಾಲೇಜು ಮಕ್ಕಳಿಗೂ ನಿತ್ಯ ಪರದಾಟ

ರಸ್ತೆ ಸಮಸ್ಯೆಯ ಪರಿಣಾಮ ಶಿಕ್ಷಣಕ್ಕೂ ತಟ್ಟಿದೆ ಎನ್ನಲಾಗಿದೆ. ಈ ಭಾಗದಲ್ಲಿ ಸುಮಾರು 70ರಿಂದ 80 ಮಕ್ಕಳು ಶಾಲಾ-ಕಾಲೇಜುಗಳಿಗೆ ತೆರಳಲು ಪ್ರತಿದಿನವೂ ಕಷ್ಟಪಡುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಸಮರ್ಪಕ ರಸ್ತೆ ಇಲ್ಲದ ಕಾರಣ ಮಳೆಗಾಲದಲ್ಲಿ ವಾಹನ ಸೌಲಭ್ಯ, ಶಾಲಾ-ಕಾಲೇಜಿಗೆ ತೆರಳುವಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮಕ್ಕಳು ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

67
ಚುನಾವಣೆಯ ವೇಳೆ ಮಾತ್ರ ಭರವಸೆ?
Image Credit : Asianet News

ಚುನಾವಣೆಯ ವೇಳೆ ಮಾತ್ರ ಭರವಸೆ?

ಗ್ರಾಮಸ್ಥರ ಪ್ರಕಾರ, ಚುನಾವಣೆ ಬಂದಾಗ ರಸ್ತೆ ಸಮಸ್ಯೆಗೆ ಪರಿಹಾರ ನೀಡುವುದಾಗಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಭರವಸೆ ನೀಡಿದ್ದರು. ಚುನಾವಣೆ ಗೆದ್ದ ಬಳಿಕ ‘ಹಣ ಮಂಜೂರಾಗಿದೆ’, ‘ಸ್ಯಾಂಕ್ಷನ್ ಆಗಿದೆ’ ಎಂಬ ಮಾತುಗಳನ್ನು ಹೇಳುತ್ತಾ ವರ್ಷಗಳು ಕಳೆದಿವೆ. ಆದರೆ ನೆಲಮಟ್ಟದಲ್ಲಿ ರಸ್ತೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದಾಗಿ ರಾಜಕಾರಣಿಗಳ ಭರವಸೆಗಳ ಬಗ್ಗೆ ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ಮೂಡಿದ್ದು, ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

77
‘ಭರವಸೆ ಸಾಕು, ರಸ್ತೆ ಬೇಕು’ ಎನ್ನುತ್ತಿರುವ ಗ್ರಾಮಸ್ಥರು
Image Credit : Asianet News

‘ಭರವಸೆ ಸಾಕು, ರಸ್ತೆ ಬೇಕು’ ಎನ್ನುತ್ತಿರುವ ಗ್ರಾಮಸ್ಥರು

ವರ್ಷಗಳಿಂದ ಮನವಿ, ಪ್ರತಿಭಟನೆ ಹಾಗೂ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಸಮಸ್ಯೆ ಬಗೆಹರಿಯದಿರುವುದರಿಂದ ಇದೀಗ ಕಠಿಣ ನಿರ್ಧಾರಕ್ಕೆ ಮುಂದಾಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ‘ರಸ್ತೆ ಅಭಿವೃದ್ಧಿ ಆಗುವವರೆಗೂ ಚುನಾವಣಾ ಸಂದರ್ಭದಲ್ಲಿ ಮತ ಕೇಳಲು ಬರುವ ರಾಜಕಾರಣಿಗಳನ್ನು ಪ್ರಶ್ನಿಸುತ್ತೇವೆ’ ಎಂಬ ಸಂದೇಶವನ್ನು ಗ್ರಾಮಸ್ಥರು ನೀಡಿದ್ದಾರೆ. ರಸ್ತೆ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಂಡು, ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಚಿಕ್ಕಮಗಳೂರು
ರಸ್ತೆ ಸಾರಿಗೆ
ಮದುವೆ

Latest Videos
Recommended Stories
Recommended image1
ಕಾನೂನು ರೀತಿ ಸೈಟ್‌: ಬೇಕಿದ್ರೆ ಉಪವಾಸ ಕೂರಿ, ನನಗೂ ಸಾಮಾನ್ಯ ಜ್ಞಾನ ಇದೆ, ದೇವೇಗೌಡಗೆ ಸಿಎಂ ತಿರುಗೇಟು
Recommended image2
ದೇವೇಗೌಡ - ಡಿಕೆ ನೈಸ್‌ ಫೈಟ್‌: ನೈಸ್ ಯೋಜನೆ ದೇಶದ ಅತಿ ದೊಡ್ಡ ಅಕ್ರಮ, 1453 ನಿವೇಶನ ನೆಪದಲ್ಲಿ ಭೂ ಲೂಟಿಗೆ ಯತ್ನ
Recommended image3
'ನಿಂಗ್ ರೇಷನ್ ಸಿಗದಹಾಗೆ ಮಾಡ್ತೇವೆ..' ಕೆಪಿಎಸ್ಸಿ ಅಕ್ರಮದ ದೂರುದಾರನಿಗೆ ಬೆದರಿಕೆ ಕರೆ! ಆಡಿಯೋ ವೈರಲ್
Related Stories
Recommended image1
ಚಿಕ್ಕಮಗಳೂರು: ಎರಡೇ ತಿಂಗಳಲ್ಲಿ ಹಾಳಾದ ರಸ್ತೆ, ಕಿತ್ತು ಬರ್ತೀರೋ ಟಾರ್ ಕಂಡು ಜನರ ಆಕ್ರೋಶ
Recommended image2
Now Playing
Chikkamagaluru road potholes: ಚಿಕ್ಕಮಗಳೂರು: ರಸ್ತೆ ಗುಂಡಿಗಳಿಗೆ ಬೇಸತ್ತು ತಾವೇ ಗುಂಡಿ ಮುಚ್ಚಿದ ಚಾಲಕರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved