Published : Aug 01, 2026, 07:45 AM ISTUpdated : Aug 01, 2026, 11:00 PM IST

National News Live: ನೀನೊಬ್ಬ ಮೂರ್ಖ, ಇಷ್ಟೊಂದು ಮುಕ್ತವಾಗಿ ಓಡಾಡಬೇಡ! ಬಂಧನಕ್ಕೂ ಮುನ್ನ ನೀರವ್ ಮೋದಿಗೆ ಎಚ್ಚರಿಸಿದ್ದ ವಿಜಯ್ ಮಲ್ಯ!

ಸಾರಾಂಶ

ನವದೆಹಲಿ (ಆ.1): ಜಾಗತಿಕ ಅಸ್ಥಿರತೆ ಹಾಗೂ ಅವಲಂಬನೆಯಿಂದಾಗಿ ದೇಶದಲ್ಲಿ ತೈಲಾನಿಲ ತತ್ವಾರ ತಲೆದೋರದಂತೆ ತಪ್ಪಿಸುವ ಉದ್ದೇಶದಿಂದ, ಸಮುದ್ರದಾಳದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲದ ನಿಕ್ಷೇಪಗಳ ಅನ್ವೇಷಣೆಗೆ ಕೇಂದ್ರ ಸರ್ಕಾರ 'ಸಮುದ್ರ ಮಂಥನ' ಎಂಬ ಯೋಜನೆ ಘೋಷಿಸಿದೆ. ಇದಕ್ಕಾಗಿ 84,084 ಕೋಟಿ ರು. ಮೀಸಲಿಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಭಾರತವು ಸದ್ಯ ಅಗತ್ಯವಿರುವ ಕಚ್ಚಾತೈಲದ ಶೇ.88ರಷ್ಟನ್ನು ವಿದೇಶಗಳಿಂದ ತರಿಸಿಕೊಳ್ಳುತ್ತಿದೆ. ನೈಸರ್ಗಿಕ ಅನಿಲದ ವಿಷಯದಲ್ಲಿ ಈ ಪ್ರಮಾಣ ಶೇ.50ರಷ್ಟಿದೆ. ಹೀಗಿರುವಾಗ ಕಚ್ಚಾತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. 60 ಕೋಟಿ ಮೆಟ್ರಿಕ್ ಟನ್ ತೈಲ ಉತ್ಪಾದಿಸುವ ಸಾಮರ್ಥ್ಯದ ಹೊಸ ನಿಕ್ಷೇಪಗಳು ಪತ್ತೆಯಾಗುವ ನಿರೀಕ್ಷೆಯಿದೆ. ಇದು ಹೂಡಿಕೆಯನ್ನು ಆಕರ್ಷಿಸುವುದರ ಜತೆಗೆ ಉದ್ಯೋಗವನ್ನೂ ಸೃಷ್ಟಿಸುತ್ತದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

vijay mallya  Nirav Modi

11:00 PM (IST) Aug 01

ನೀನೊಬ್ಬ ಮೂರ್ಖ, ಇಷ್ಟೊಂದು ಮುಕ್ತವಾಗಿ ಓಡಾಡಬೇಡ! ಬಂಧನಕ್ಕೂ ಮುನ್ನ ನೀರವ್ ಮೋದಿಗೆ ಎಚ್ಚರಿಸಿದ್ದ ವಿಜಯ್ ಮಲ್ಯ!

'ಡೈಮಂಡ್ ಕಿಂಗ್' ಪಾಡ್‌ಕಾಸ್ಟ್‌ನ ಪ್ರಕಾರ, ವಿಜಯ್ ಮಲ್ಯ ಅವರು ಲಂಡನ್‌ನಲ್ಲಿ ನೀರವ್ ಮೋದಿಯನ್ನು ಭೇಟಿಯಾಗಿ, ಬಹಿರಂಗವಾಗಿ ಓಡಾಡುವುದು 'ಮೂರ್ಖತನ' ಎಂದು ಎಚ್ಚರಿಸಿದ್ದರು. ಆದರೆ, ಮಲ್ಯರಂತೆ ತನಗೂ ಸುಲಭವಾಗಿ ಜಾಮೀನು ಸಿಗಲಿದೆ ಎಂದು ಭಾವಿಸಿದ್ದ ನೀರವ್, ಆ ಸಲಹೆಯನ್ನು ನಿರ್ಲಕ್ಷಿಸಿ ಕೊನೆಗೆ ಬಂಧನಕ್ಕೊಳಗಾದರು.
Read Full Story

10:45 PM (IST) Aug 01

ಅಪ್ಪನೇ ನನ್ನ ಫಸ್ಟ್ ಚಾಯ್ಸ್... - ದಳಪತಿ ವಿಜಯ್ ಬಗ್ಗೆ ಪುತ್ರ ಜೇಸನ್ ಸಂಜಯ್ ಮಾತು ವೈರಲ್

Jason Sanjay Viral Interview: ತಮ್ಮ 'ಸಿಗ್ಮಾ' ಚಿತ್ರದ ಪ್ರಚಾರದ ವೇಳೆ ನಿರ್ದೇಶಕ ಜೇಸನ್ ಸಂಜಯ್, ತಮ್ಮ ತಂದೆ ದಳಪತಿ ವಿಜಯ್ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಶನ ಈಗ ಸಖತ್ ವೈರಲ್ ಆಗುತ್ತಿದೆ.

Read Full Story

10:38 PM (IST) Aug 01

ಇಷ್ಟ ಬಂದಂತೆ ಮಾಡುವುದೇ ಸ್ವಾತಂತ್ರ್ಯವಲ್ಲ - ಯುವಜನತೆಗೆ NSA ಅಜಿತ್ ದೋವಲ್ ಎಚ್ಚರಿಕೆ!

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು 'ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ 2026' ಸ್ವೀಕರಿಸಿ, ಸ್ವಾತಂತ್ರ್ಯ ಎಂದರೆ ಮನಸ್ಸಿಗೆ ಬಂದಂತೆ ವರ್ತಿಸುವುದಲ್ಲ ಎಂದು ಯುವಜನತೆಗೆ ಕಿವಿಮಾತು ಹೇಳಿದರು. ಲೋಕಮಾನ್ಯ ತಿಲಕರ ದೇಶಪ್ರೇಮವನ್ನು ಅರಿಯಬೇಕು ಮತ್ತು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ರಾಷ್ಟ್ರ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.
Read Full Story

10:32 PM (IST) Aug 01

12 ವರ್ಷಗಳಾದರೂ ಮೋದಿ ಸರ್ವಾಧಿಕಾರಿಯಾಗಲು ಕಲಿಯಲಿಲ್ಲ! ನೆಹರೂ ಇಂದಿರಾಗಾಂಧಿಯಿಂದ ಕಲಿಯಿರಿ - ಪ್ರಧಾನಿಗೆ ಪೂನವಾಲಾ ಪಾಠ!

ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ, ಶೆಹಜಾದ್ ಪೂನವಾಲಾ ಅವರು ಪ್ರಧಾನಿ ಮೋದಿಯವರನ್ನು ವ್ಯಂಗ್ಯವಾಡಿದ್ದಾರೆ. 12 ವರ್ಷವಾದರೂ ಮೋದಿ 'ಸರ್ವಾಧಿಕಾರಿ'ಯಾಗಲು ವಿಫಲರಾಗಿದ್ದಾರೆ ಎಂದು ಲೇವಡಿ ಮಾಡಿದ ಅವರು, ನಿಜವಾದ ಸರ್ವಾಧಿಕಾರವನ್ನು ನೆಹರೂ-ಇಂದಿರಾ ಅವರಿಂದ ಕಲಿಯಬೇಕೆಂದು ಹೇಳಿದ್ದಾರೆ. ತಮ್ಮನ್ನು ನಿಂದಿಸಿದ ವಿದ್ಯಾರ್ಥಿಗಳನ್ನು ಕ್ಷಮಿಸಿದ ಮೋದಿಯವರ ನಡೆಯನ್ನು ಅವರು ಕಾಂಗ್ರೆಸ್‌ನ ದಮನಕಾರಿ ನೀತಿಗಳಿಗೆ ಹೋಲಿಸಿ ಟೀಕಿಸಿದ್ದಾರೆ.
Read Full Story

09:57 PM (IST) Aug 01

ರಶ್ಮಿಕಾ ಮಂದಣ್ಣಗೆ ಗಾಯ.. ಶೂಟಿಂಗ್‌ ವೇಳೆ ಭಾರೀ ಅನಾಹುತ.. ಅಸಲಿಗೆ ಆಗಿದ್ದೇನು?

ನಟಿ ರಶ್ಮಿಕಾ ಮಂದಣ್ಣ ಅವರು 'ರಣಬಾಲಿ' ಅಥವಾ 'ಮೈಸಾ' ಚಿತ್ರದ ಶೂಟಿಂಗ್ ವೇಳೆ ನೃತ್ಯ ಮತ್ತು ಸಾಹಸ ದೃಶ್ಯ ಚಿತ್ರೀಕರಿಸುವಾಗ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೊಂಟಕ್ಕೆ ಪೆಟ್ಟು ಬಿದ್ದಿರುವ ಕಾರಣ ವೈದ್ಯರು ಅವರಿಗೆ ಕನಿಷ್ಠ 6 ವಾರಗಳ ಸಂಪೂರ್ಣ ವಿಶ್ರಾಂತಿ ಮತ್ತು ಪುನರ್ವಸತಿ ಚಿಕಿತ್ಸೆಯನ್ನು ಸೂಚಿಸಿದ್ದು, ಅವರ ಎಲ್ಲಾ ಚಿತ್ರೀಕರಣಗಳನ್ನು ಮುಂದೂಡಲಾಗಿದೆ.
Read Full Story

09:54 PM (IST) Aug 01

ಮರದಲ್ಲಿ ನೇತಾಡಿದ ಮಹಿಳೆಯ ತಲೆ! ಊಟ ಕೊಡಲು ಲೇಟಾಯ್ತೆಂದು ಮೈದುನನಿಂದ ಘನಘೋರ ಕ್ರೌರ್ಯ

ಬಿಹಾರದ ಜೆಹಾನಾಬಾದ್‌ನಲ್ಲಿ, ಊಟ ಬಡಿಸಲು ತಡ ಮಾಡಿದ್ದಕ್ಕೆ ಕೋಪಗೊಂಡ ಮೈದುನ, ತನ್ನ ಅತ್ತಿಗೆಯನ್ನು ಕೊಡಲಿಯಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಕತ್ತರಿಸಿದ ತಲೆಯನ್ನು ಮನೆಯ ಮುಂದಿನ ಮರಕ್ಕೆ ನೇತುಹಾಕಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
Read Full Story

09:44 PM (IST) Aug 01

ರೈಲಿಗೆ ಕಾದೂ ಕಾದೂ ಸುಸ್ತಾದ - ನಿಲ್ದಾಣದಲ್ಲಿ ಕುಳಿತು 240 ಕೋಟಿ ರೂ. ಗಳಿಸಿ ಇತಿಹಾಸವನ್ನೇ ಸೃಷ್ಟಿಸಿಬಿಟ್ಟ

ಒಂದು ದಿನ ರೈಲು ನಿಲ್ದಾಣದಲ್ಲಿ ರೈಲು ವಿಳಂಬವಾದಾಗ ಅಹ್ಮದ್ ನಿಜಾಮ್ ಮೊಹೈದ್ದೀನ್ ಅವರಿಗೆ ಬಂದ ಒಂದು ಐಡಿಯಾ 'Where is my train' ಆ್ಯಪ್‌ಗೆ ಜನ್ಮ ನೀಡಿತು. ಇಂಟರ್ನೆಟ್ ಇಲ್ಲದೆಯೂ ಸೆಲ್ ಟವರ್ ಡೇಟಾ ಬಳಸಿ ರೈಲಿನ ಲೈವ್ ಸ್ಟೇಟಸ್ ತಿಳಿಸುವ ಈ ಆ್ಯಪ್ ಅನ್ನು ಗೂಗಲ್ ಸುಮಾರು 240 ಕೋಟಿ ರೂಪಾಯಿಗೆ ಖರೀದಿಸಿತು, ಇದು ಅವರನ್ನು ಕೋಟ್ಯಧಿಪತಿಯನ್ನಾಗಿಸಿತು.
Read Full Story

09:28 PM (IST) Aug 01

45 ನಿಮಿಷದಲ್ಲಿ 5 ಪ್ಲೇಟ್ ಮಟನ್ ಬಿರಿಯಾನಿ ತಿಂದ.. ಆಮೇಲೆ ಏನಾದ ಗೊತ್ತಾ..?

ಕೋಲ್ಕತ್ತಾದ ಶಿರಾಜ್ ಗೋಲ್ಡನ್ ರೆಸ್ಟೋರೆಂಟ್ ಆಯೋಜಿಸಿದ್ದ 'ದಿ ಬಿರಿಯಾನಿ ಮ್ಯಾನ್ 2026' ಸ್ಪರ್ಧೆಯಲ್ಲಿ ಪ್ರಮಿತ್ ಕುಮಾರ್ ದಾಸ್ ಎಂಬುವವರು ವಿಜೇತರಾಗಿದ್ದಾರೆ. ಅವರು ಕೇವಲ 45 ನಿಮಿಷಗಳಲ್ಲಿ 5 ಪ್ಲೇಟ್ ಮಟನ್ ಬಿರಿಯಾನಿ ತಿಂದು, ಜೀವನಪರ್ಯಂತ ಪ್ರತಿ ವಾರ ಉಚಿತ ಬಿರಿಯಾನಿ ಸವಿಯುವ ಕಾರ್ಡ್ ಅನ್ನು ಬಹುಮಾನವಾಗಿ ಪಡೆದಿದ್ದಾರೆ.
Read Full Story

09:11 PM (IST) Aug 01

ಕೆನಡಾದಲ್ಲಿ ಭಾರತೀಯನ ಮಾಟ - 6.6 ಕೋಟಿಯ ವಂಚನೆ, ಭಾರತಕ್ಕೆ ಪರಾರಿಯಾದ ಶಂಕೆ, ಲುಕ್‌ಔಟ್ ವಾರಂಟ್!

ಆಧ್ಯಾತ್ಮಿಕ ಶಕ್ತಿ ಹಾಗೂ ಮಾಟ-ಮಂತ್ರದ ಹೆಸರಿನಲ್ಲಿ ಕೆನಡಾದ ಪ್ರಜೆಯೊಬ್ಬರಿಗೆ ಸುಮಾರು 6.6 ಕೋಟಿ ರೂಪಾಯಿ ವಂಚಿಸಿ, ಭಾರತಕ್ಕೆ ಪಲಾಯನ ಮಾಡಿರುವ ಗಂಗಾಧರ್ ಬಾಬು ಎಂಬ ಭಾರತೀಯ ಅತೀಂದ್ರಿಯನ ವಿರುದ್ಧ ಟೊರೊಂಟೊ ಪೊಲೀಸರು ಬಂಧನದ ವಾರಂಟ್ ಹೊರಡಿಸಿದ್ದಾರೆ. ಕೆಟ್ಟ ಶಕ್ತಿಗಳಿಂದ ರಕ್ಷಣೆ ನೀಡುವುದಾಗಿ ನಂಬಿಸಿ, ಜೀವ ಬೆದರಿಕೆ ಹಾಕಿ ಆರೋಪಿಯು ಈ ಬೃಹತ್ ಮೊತ್ತವನ್ನು ವಸೂಲಿ ಮಾಡಿದ್ದಾನೆ.
Read Full Story

08:54 PM (IST) Aug 01

'ಅತಿಯಾದ್ರೆ ಅಮೃತವೂ ವಿಷ'.. ರಾವಣ'ನ ಬಗ್ಗೆ ಹಾಲಿವುಡ್ ಅಂಗಳದಲ್ಲಿ ಯಶ್ ಮಾತು; ಇದಪ್ಪ 'ತಾಯ್ನೆಲ'ದ ಅಭಿಮಾನ ಅಂದ್ರೆ!!

ಕನ್ನಡದ ಸ್ಟಾರ್ ನಟ ಯಶ್ ಅವರು ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಂತಹ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ನೀಡಿದ ಮಾಧ್ಯಮ ಸಂದರ್ಶನಗಳಲ್ಲಿ ರಾಮಾಯಣ ಮತ್ತು ರಾವಣನ ಬಗ್ಗೆ ಹೇಳೀರೋ ಮಾತೇನು ಗೊತ್ತಾ?

Read Full Story

08:03 PM (IST) Aug 01

5 ದೊಡ್ಡ ಪದವಿ, ಕೈತುಂಬಾ ಸಂಬಳವಿದ್ರೂ ಸಿಕ್ತಿಲ್ಲ ಹುಡುಗಿ - ವಿದ್ಯುತ್‌ ಕಂಬಗಳ ಮೊರೆ ಹೋದ ಪ್ರೊಫೆಸರ್​

ಐದು ಸ್ನಾತಕೋತ್ತರ ಪದವಿಗಳನ್ನು ಹೊಂದಿರುವ 43 ವರ್ಷದ ಅಸೋಸಿಯೇಟ್ ಪ್ರೊಫೆಸರ್, ಮದುವೆಗೆ ಹುಡುಗಿ ಸಿಗದೆ ವಿಫಲರಾಗಿದ್ದಾರೆ. ಮ್ಯಾಟ್ರಿಮೋನಿಯಲ್ ಸೈಟ್‌ಗಳಿಂದ ನಿರಾಶೆಗೊಂಡ ಅವರು, ಇದೀಗ ವಿದ್ಯುತ್ ಕಂಬಗಳ ಮೇಲೆ ಹಲವು ಭಾಷೆಗಳಲ್ಲಿ ಪೋಸ್ಟರ್ ಅಂಟಿಸಿ, ಸಹಾಯ ಮಾಡಿದವರಿಗೆ ಬಹುಮಾನ ಘೋಷಿಸಿ ವಧುವನ್ನು ಹುಡುಕುತ್ತಿದ್ದಾರೆ.
Read Full Story

07:54 PM (IST) Aug 01

ಅರೆರೆ.. ಇಶಾನ್ ಖಟ್ಟರ್ ಜೊತೆ ಶ್ರೀದೇವಿ ಪುತ್ರಿ ಜಾನ್ವಿ ಮದುವೆ? ವೈರಲ್ ವಿಡಿಯೋ ಹಿಂದಿನ ಸತ್ಯವೇನು?

ಜಾನ್ವಿ ಕಪೂರ್ ಮತ್ತು ಇಶಾನ್ ಖಟ್ಟರ್ ಮತ್ತೆ ಒಂದಾಗಿದ್ದಾರೆ! ಇವರಿಬ್ಬರೂ ವಧು-ವರರಾಗಿ ಕಾಣಿಸಿಕೊಂಡಿರುವ ಒಂದು ಜಾಹೀರಾತಿನ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Read Full Story

07:48 PM (IST) Aug 01

ಸೌಂದರ್ಯ ರಾಣಿಯ ಬದುಕಲ್ಲಿ ಆಘಾತಕಾರಿ ತಿರುವು, 21ರ ಹರೆಯದ ಪ್ರತಿಭೆ ಮಿಸ್ ಅಮೇರಿಕನ್ ನಿಧನಕ್ಕೆ ಇಡೀ ದೇಶವೇ ಕಂಬನಿ

2024ರ 'ಮಿಸ್ ಅಮೇರಿಕನ್ ಫೋರ್ಕ್' ಕಿರೀಟಧಾರಿ ಹಾಗೂ ಪತ್ರಕರ್ತೆ ಬ್ರೈನ್ ಕಾರ್ನೆಸೆಕ್ಕಾ (21) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಸ್ಪರ್ಧೆಗಳ ಜೊತೆಗೆ 'ಎನ್ವಲಪ್ಸ್ ಆಫ್ ಹೋಪ್' ನಂತಹ ಸಾಮಾಜಿಕ ಉಪಕ್ರಮಗಳ ಮೂಲಕ ಗುರುತಿಸಿಕೊಂಡಿದ್ದ ಅವರ ನಿಧನವು ಆಘಾತವನ್ನುಂಟುಮಾಡಿದೆ.

Read Full Story

07:35 PM (IST) Aug 01

ಉತ್ತರ ಪ್ರದೇಶಕ್ಕೆ 19,208 ಕೋಟಿ ಕೊಟ್ಟ ಕೇಂದ್ರ.. ಕರ್ನಾಟಕಕ್ಕೆ ಮೋದಿ ಕೊಟ್ಟಿದ್ದು ಎಷ್ಟು ಕೋಟಿ..?

ಕೇಂದ್ರ ಸರ್ಕಾರವು ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ಹಬ್ಬದ ಸೀಸನ್‌ಗೂ ಮುನ್ನವೇ ತೆರಿಗೆ ಹಂಚಿಕೆಯ ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಿದೆ. ಈ ಮುಂಗಡ ಪಾವತಿಯು ಒಟ್ಟು 1,09,019 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಕರ್ನಾಟಕಕ್ಕೆ 4,504 ಕೋಟಿ ರೂಪಾಯಿಗಳ ಪಾಲು ಸಿಕ್ಕಿದೆ. ಈ ಹಣವು ರಾಜ್ಯಗಳಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವ ಗುರಿ ಹೊಂದಿದೆ.
Read Full Story

07:08 PM (IST) Aug 01

ದಂತಕಥೆಯನ್ನೇ ಬಲಿಪಡೆದ ಸಾವಿನ ಶಿಖರ, ಖ್ಯಾತ ಪರ್ವತಾರೋಹಿ ನಿರ್ಮಲ್ ಸೇರಿ ನಾಲ್ವರು ಸಾವು; 6 ಮಂದಿ ನಾಪತ್ತೆ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬ್ರಾಡ್ ಪೀಕ್ ಪರ್ವತದಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ, ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಈ ಲೇಖನವು ವಿಶ್ವದ 12ನೇ ಅತಿ ಎತ್ತರದ ಶಿಖರವಾದ ಬ್ರಾಡ್ ಪೀಕ್‌ನ ಹಿನ್ನೆಲೆ, ಅದರ ಅಪಾಯಗಳು ಮತ್ತು ಈ ದುರಂತದಲ್ಲಿ ಮಡಿದ 'ನಿಮ್ಸ್‌ದೈ' ಅವರ ಸಾಧನೆಗಳ ಬಗ್ಗೆ ವಿವರಿಸುತ್ತದೆ.
Read Full Story

06:55 PM (IST) Aug 01

ಆಲಿಯಾ ಭಟ್ ಫೋನ್‌ನಲ್ಲಿ ರಣಬೀರ್ ಕಪೂರ್ ಹೆಸರು ಏನಿತ್ತು? ಕೊನೆಗೂ ಆ ಸೀಕ್ರೆಟ್ ರಿವೀಲ್

ಮದುವೆಯಾದ ನಂತರವೂ ಆಲಿಯಾ ಭಟ್ ತಮ್ಮ ಫೋನ್‌ನಲ್ಲಿ ರಣಬೀರ್ ಕಪೂರ್ ಅವರ ಹೆಸರನ್ನು ಹೇಗೆ ಸೇವ್ ಮಾಡಿದ್ದರು ಗೊತ್ತಾ? ಈ ಮುದ್ದಾದ ಸೀಕ್ರೆಟ್ ಅನ್ನು ಅವರೇ ಒಮ್ಮೆ ರಿವೀಲ್ ಮಾಡಿದ್ದರು.

Read Full Story

06:54 PM (IST) Aug 01

ವಿವಾಹೇತರ ಸಂಬಂಧ‌ ತಪ್ಪಲ್ಲ.. ಜನ ಸಂಗಾತಿಗೆ ಏಕೆ ದ್ರೋಹ ಮಾಡ್ತಾರೆ? ಅಚ್ಚರಿ ಸತ್ಯ ರಿವೀಲ್..!

ಮನೋವಿಜ್ಞಾನದ ಪ್ರಕಾರ ವಂಚನೆಗೆ ಕೇವಲ ಸಂಬಂಧದಲ್ಲಿನ ಅತೃಪ್ತಿ ಮಾತ್ರ ಕಾರಣವಲ್ಲ. ಹಲವು ಬಾರಿ ಉತ್ತಮ ಮತ್ತು ತೃಪ್ತಿದಾಯಕ ಸಂಬಂಧದಲ್ಲಿ ಇರುವವರು ಕೂಡ ಸಂಗಾತಿಗೆ ವಂಚಿಸಬಹುದು. ಇದಕ್ಕೆ ಅನೇಕ ಮಾನಸಿಕ ಮತ್ತು ಸಾಮಾಜಿಕ ಕಾರಣಗಳಿವೆ.

Read Full Story

06:28 PM (IST) Aug 01

5.75 ಲಕ್ಷ ರೂ. ಬೆಲೆ..! ಜಸ್ಟ್ 3 ನಿಮಿಷದಲ್ಲಿ ಎಲ್ಲಾ Royal Enfield ಬೈಕ್‌ಗಳು ಸೋಲ್ಡ್ ಔಟ್..!

ರಾಯಲ್ ಎನ್‌ಫೀಲ್ಡ್‌ನ ಅತ್ಯಂತ ದುಬಾರಿ 'ಶಾಟ್‌ಗನ್ 650 ಎಕ್ಸ್ ರಫ್ ಕ್ರಾಫ್ಟ್ಸ್' ಲಿಮಿಟೆಡ್ ಎಡಿಷನ್ ಬೈಕ್, ಭಾರತದಲ್ಲಿ ಕೇವಲ 3 ನಿಮಿಷಗಳಲ್ಲಿ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿದೆ. ತೈವಾನ್‌ನ ವಿನ್‌ಸ್ಟನ್ ಯೇ ಸಹಯೋಗದಲ್ಲಿ ವಿನ್ಯಾಸಗೊಳಿಸಲಾದ ಈ ಕಲೆಕ್ಟರ್ಸ್ ಐಟಂ, ವಿಶಿಷ್ಟ ವಿನ್ಯಾಸ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದು, ಬೈಕ್ ಪ್ರೇಮಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
Read Full Story

05:05 PM (IST) Aug 01

ವೈಭವ್ ಸೂರ್ಯವಂಶಿ ಭಾರತ ಪರ ಮೊದಲ 6 ಪಂದ್ಯಗಳಿಂದ 193 ರನ್..! ಕೊಹ್ಲಿ ಮೊದಲ ಆರು ಟಿ20 ಮ್ಯಾಚ್‌ನಲ್ಲಿ ಗಳಿಸಿದ ರನ್ ಎಷ್ಟು?

15 ವರ್ಷದ ವೈಭವ್ ಸೂರ್ಯವಂಶಿ ತಮ್ಮ ಮೊದಲ ಆರು ಟಿ20 ಪಂದ್ಯಗಳಲ್ಲಿ 193 ರನ್ ಗಳಿಸಿ ಮಿಂಚಿದ್ದಾರೆ. ಇದಕ್ಕೆ ಹೋಲಿಸಿದರೆ, ವಿರಾಟ್ ಕೊಹ್ಲಿ ತಮ್ಮ ಆರಂಭಿಕ ಆರು ಟಿ20 ಪಂದ್ಯಗಳಲ್ಲಿ ಕೇವಲ 87 ರನ್ ಗಳಿಸಿದ್ದರು. ಈ ಅಂಕಿಅಂಶಗಳು ವೈಭವ್ ಅವರನ್ನು ಭವಿಷ್ಯದ ತಾರೆಯಾಗಿ ಬಿಂಬಿಸುತ್ತವೆ.
Read Full Story

04:56 PM (IST) Aug 01

ʼಜಾತಿ, ಧರ್ಮ ಕೇಳಿ ಗುಂಡಿಟ್ಟರು..ʼ ಕಾಶ್ಮೀರದಲ್ಲಿ ಮತ್ತೆ ಉಗ್ರರ ಪೈಶಾಚಿಕ ಕೃತ್ಯ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಛತ್ತೀಸ್‌ಗಢದ ಇಬ್ಬರು ವಲಸೆ ಕಾರ್ಮಿಕರನ್ನು ಹತ್ಯೆ ಮಾಡಲಾಗಿದೆ. ಗುಂಡು ಹಾರಿಸುವ ಮುನ್ನ ಉಗ್ರರು ಕಾರ್ಮಿಕರ ಜಾತಿ ಮತ್ತು ಧರ್ಮವನ್ನು ಕೇಳಿ ಖಚಿತಪಡಿಸಿಕೊಂಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆಯು ವ್ಯಾಪಕ ಖಂಡನೆಗೆ ಗುರಿಯಾಗಿದೆ.
Read Full Story

04:24 PM (IST) Aug 01

Commonwealth ಗೇಮ್ಸ್‌ನಲ್ಲಿ ಭಾರತಕ್ಕೆ 6ನೇ ಚಿನ್ನ.. ಬಾಕ್ಸಿಂಗ್‌ನಲ್ಲಿ ಪ್ರೀತಿ ಪವಾರ್‌ ಮಿಂಚಿದ್ದಾರೆ..

ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ 54 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ, ಭಾರತದ ಪ್ರೀತಿ ಪವಾರ್ ಕೆನಡಾದ ಸ್ಪರ್ಧಿಯನ್ನು ಸೋಲಿಸಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ, ಪುರುಷರ ಟ್ರಿಪಲ್ ಜಂಪ್ ವಿಭಾಗದಲ್ಲಿ ಪ್ರವೀಣ್ ಚಿತ್ರವೇಲ್ ಮತ್ತು ಸೆಲ್ವ ಪ್ರಭು ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ.
Read Full Story

04:22 PM (IST) Aug 01

ಕಾಶ್ಮೀರದ ಕುಲ್ಗಾಂನಲ್ಲಿ ಪೆಹಲ್ಗಾಂ ರೀತಿ ಉಗ್ರ ದಾಳಿ, ಹೆಸರು ಕೇಳಿ ಇಬ್ಬರು ಕಾರ್ಮಿಕರ ಪ್ರತ್ಯೇಕಗೊಳಿಸಿ ಹತ್ಯೆ

ಪೆಹಲ್ಗಾಂನಲ್ಲಿ ಧರ್ಮ ಕೇಳಿ ಪ್ರವಾಸಿಗರ ಮೇಲಿನ ಉಗ್ರ ದಾಳಿ ಆಪರೇಶನ್ ಸಿಂದೂರ್ ಮೂಲಕ ಪ್ರತೀಕಾರ ತೀರಿಸಿಕೊಳ್ಳುವಂತಾಯಿತು. ಇದೀಗ ಕಾಶ್ಮೀರದ ಕುಲ್ಗಾಂನಲ್ಲಿ ಅದೇ ರೀತಿ ಧರ್ಮ ಕೇಳಿ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ.

Read Full Story

03:53 PM (IST) Aug 01

Vivo T5e launched - ಕೇವಲ 13,999 ರೂಪಾಯಿಗೆ ಬಜೆಟ್ ಸ್ನೇಹಿ ಅತ್ಯದ್ಭುತ ಮೊಬೈಲ್..!

ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿವೋ (Vivo) ಸಂಸ್ಥೆಯು ತನ್ನ ಟಿ-ಸರಣಿಯ (T-series) ಅಡಿಯಲ್ಲಿ ಹೊಸದಾಗಿ Vivo T5e ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಅದರ ವಿಶೇಷತೆ ಇಲ್ಲಿದೆ..

Read Full Story

03:44 PM (IST) Aug 01

11 ಬೌಂಡರಿ, 5 ಸಿಕ್ಸರ್ - ಆರ್‌ಸಿಬಿ ಮಾಜಿ ಕ್ರಿಕೆಟಿಗನಿಂದ ವಿಸ್ಪೋಟಕ ಶತಕ! ಆತನನ್ನು ಕೈಬಿಟ್ಟು ಬೆಂಗಳೂರು ಫ್ರಾಂಚೈಸಿಯಿಂದ ಮಹಾ ಎಡವಟ್ಟು?

2026ರ ಡೆಲ್ಲಿ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮಾಜಿ ಆಟಗಾರ ಅನೂಜ್ ರಾವತ್ ಸ್ಪೋಟಕ ಶತಕ (105*) ಸಿಡಿಸಿ ಮಿಂಚಿದ್ದಾರೆ. ಸಂಕಷ್ಟದಲ್ಲಿದ್ದ ಹಳೆ ಡೆಲ್ಲಿ ತಂಡಕ್ಕೆ ಆಸರೆಯಾದರೂ, ಯಶ್ ಧುಲ್ ಅವರ ಉತ್ತಮ ಆಟದಿಂದ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡ ಜಯ ಸಾಧಿಸಿದ್ದರಿಂದ ರಾವತ್ ಶತಕ ವ್ಯರ್ಥವಾಯಿತು.
Read Full Story

03:16 PM (IST) Aug 01

ಆ.4ಕ್ಕೆ ಪ್ರಧಾನಿ ನಿವಾಸಕ್ಕೆ ಕೇಜ್ರಿವಾಲ್ ಚಲೋ, ಕಾಕ್ರೋಚ್ ಹೋರಾಟ ತಣ್ಣಗಾದ ಬೆನ್ನಲ್ಲೇ ಕೆರಳಿದ ಆಪ್

ಆಗಸ್ಟ್ 4ರಂದು ಅರವಿಂದ್ ಕೇಜ್ರಿವಾಲ್ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ನಿರ್ಬಂಧಿತ ಪ್ರಧಾನಿ ನಿವಾಸಕ್ಕೆ ಮಾರ್ಚ್ ಮಾಡುವುದಾಗಿ ಘೋಷಿಸಿದ್ದಾರೆ. ಕಾಕ್ರೋಚ್ ಹೋರಾಟ ತಣ್ಣಗಾದ ಬೆನ್ನಲ್ಲೇ 3 ಬೇಡಿಕೆ ಮುಂದಿಟ್ಟು ಕೇಜ್ರಿವಾಲ್ ಹೋರಾಟಕ್ಕೆ ಸಜ್ಜಾಗಿದ್ದಾರೆ.

Read Full Story

03:13 PM (IST) Aug 01

ಈ ಜೀವಿಗೆ ಮೂರು ಹೃದಯ.. 9 ಮೆದುಳು.. ಅದ್ಯಾವುದು ಹೇಳಿ ನೋಡೋಣ..

ಸಾಮಾನ್ಯವಾಗಿ ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಒಂದೇ ಹೃದಯ, ಒಂದೇ ಮೆದುಳು ಇರುತ್ತದೆ. ಹೃದಯ ಬಡಿತವಿದ್ದರೆ ಮಾತ್ರ ಜೀವವಿದೆ ಎಂದು ನಂಬುತ್ತೇವೆ. ಆದರೆ ಒಂದು ಜೀವಿಗೆ ಬರೋಬ್ಬರಿ 9 ಮೆದುಳುಗಳು ಮತ್ತು 3 ಹೃದಯಗಳಿವೆ. ಹಾಗಾದರೆ ಆ ಜೀವಿ ಯಾವುದು?

Read Full Story

03:00 PM (IST) Aug 01

PM Modi Apology Video - ಪ್ರಧಾನಿ ವಿರುದ್ಧ ನಿಂದನೆ, ಕೈಮುಗಿದು ಕ್ಷಮೆ ಕೋರಿದ ಯುವತಿ!

ಪ್ರಧಾನ ಮಂತ್ರಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾಳೆ ಎನ್ನಲಾದ ಯುವತಿಯೊಬ್ಬಳು, ತಾನು 'ಕ್ಷಮಿಸಲಾಗದ ತಪ್ಪು' ಮಾಡಿದ್ದಾಗಿ ಕೈಮುಗಿದು ಕ್ಷಮೆ ಕೋರಿದ್ದಾಳೆ. ಈ ಯುವತಿಯ ವಿಡಿಯೋ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
Read Full Story

02:45 PM (IST) Aug 01

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಪಾಕ್‌ನ ಅರ್ಶದ್ ನದೀಂಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕೊನೆಯ 3 ಜಾವೆಲಿನ್ ಎಸೆತದಿಂದ ದೂರವಿಟ್ಟಿದ್ದೇಕೆ?

2026ರ ಕಾಮನ್‌ವೆಲ್ತ್ ಗೇಮ್ಸ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪಾಕಿಸ್ತಾನದ ಅರ್ಶದ್ ನದೀಂ ನಿರಾಸೆ ಅನುಭವಿಸಿದರು. ಮೊದಲ ಮೂರು ಎಸೆತಗಳ ನಂತರ ಒಂಬತ್ತನೇ ಸ್ಥಾನ ಪಡೆದಿದ್ದರಿಂದ, ನಿಯಮಗಳ ಪ್ರಕಾರ ಸ್ಪರ್ಧೆಯಿಂದ ಹೊರಬಿದ್ದರು. ಈ ಸ್ಪರ್ಧೆಯಲ್ಲಿ ಶ್ರೀಲಂಕಾದ ರುಮೇಶ್ ತರಂಗಾ ಚಿನ್ನ ಗೆದ್ದರೆ, ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕ ಪಡೆದರು.
Read Full Story

02:40 PM (IST) Aug 01

ಪಾಕ್‌ ಕ್ರಿಕೆಟರ್‌ಗಳಿಗೆ ಹ್ಯಾಂಡ್‌ಶೇಕ್‌ ಕೊಡೋದಿಲ್ಲ ಟೀಮ್‌ ಇಂಡಿಯಾ ಪ್ಲೇಯರ್ಸ್‌, ಆದ್ರೆ ತಬ್ಬಿಕೊಂಡು ಅಭಿನಂದನೆ ಹೇಳಿದ ಜೆಮಿಮಾ!

'ದಿ ಹಂಡ್ರೆಡ್' ಲೀಗ್ ಪಂದ್ಯದ ನಂತರ ಭಾರತದ ಜೆಮಿಮಾ ರೋಡ್ರಿಗಸ್ ಮತ್ತು ಪಾಕಿಸ್ತಾನದ ಫಾತಿಮಾ ಸನಾ ಪರಸ್ಪರ ಆಲಂಗಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಈ ಘಟನೆ ಮಹತ್ವ ಪಡೆದಿದೆ.

Read Full Story

01:44 PM (IST) Aug 01

ಟೀಕೆಗೆ ಗುರಿಯಾದ ಮಹೇಶ್ ಬಾಬು; ಅಣ್ಣನ ಮಗ ಜಯಕೃಷ್ಣಗೆ ಬೆಂಬಲ ನೀಡದ 'ಪ್ರಿನ್ಸ್‌' ಹಿಂದಿರೋದು ಆ ರಹಸ್ಯ ಕಾರಣ'ವೇ?

'ಶ್ರೀನಿವಾಸ ಮಂಗಾಪುರಂ' ಚಿತ್ರಕ್ಕೆ ಮಹೇಶ್ ಬಾಬು ಅವರ ಭೌತಿಕ ಬೆಂಬಲ ಸಿಗದೇ ಇರುವುದು ಚಿತ್ರದ ಬಾಕ್ಸ್ ಆಫೀಸ್ ಮೇಲೆ ಮಾತ್ರವಲ್ಲದೆ, ಮಹೇಶ್ ಬಾಬು ಅವರ 'ಜೆಂಟಲ್‌ಮ್ಯಾನ್' ವರ್ಚಸ್ಸಿನ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಘಟ್ಟಮನೇನಿ ಕುಟುಂಬದಈ ‘ಸೈಲೆಂಟ್ ವಾರ್’ ಸದ್ಯ ಸಖತ್ ಸೌಂಡ್ ಮಾಡುತ್ತಿದೆ!

Read Full Story

01:40 PM (IST) Aug 01

ಮುದ್ದಿನ ನಾಯಿ ಮರಿ ರಕ್ಷಿಸಿ ಅಸ್ಸಾಂ ಪ್ರವಾಹದಲ್ಲಿ ಕೊಚ್ಚಿ ಹೋದ ಬಾಲಕ, ಪೋಷಕರು ಕಂಗಾಲು

ಮೂರು ತಿಂಗಳ ನಾಯಿ ಮರಿಯನ್ನು ರಕ್ಷಿಸಲು ಪ್ರವಾಹ ಲೆಕ್ಕಿಸಿದೆ ಧುಮುಕಿದ್ದಾನೆ. ಆದರೆ ನಾಯಿ ಮರಿಯನ್ನು ರಕ್ಷಿಸುವ ಭರದಲ್ಲಿ 7ನೇ ತರಗತಿ ಬಾಲಕ ಕೊಚ್ಚಿ ಹೋಗಿದ್ದಾನೆ. ಬಾಲಕ ರಕ್ಷಿಸಿದ ನಾಯಿ ಮರಿ ಬಿಗಿದಪ್ಪಿ ಪೋಷಕರು ಕಣ್ಣೀರಿಡುತ್ತಿದ್ದಾರೆ.

Read Full Story

01:05 PM (IST) Aug 01

ನೀರಜ್ ಚೋಪ್ರಾ ಸೋಲಿಸಿದ ಲಂಕಾ ಮಾಜಿ ವೇಗಿ; ಕ್ರಿಕೆಟ್ ಬಿಟ್ಟು ಜಾವಲಿನ್‌ನಲ್ಲಿ ಕಾಮನ್‌ವೆಲ್ತ್ ಚಿನ್ನದ ಪದಕ ಗೆದ್ದ ಅಥ್ಲೀಟ್!

2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ, ಶ್ರೀಲಂಕಾದ ಜಾವೆಲಿನ್ ಪಟು ರುಮೇಶ್ ತರಂಗಾ ಪಥಿರಾಗೆ 89.75 ಮೀಟರ್ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಅವರು ಭಾರತದ ನೀರಜ್ ಚೋಪ್ರಾ ಅವರನ್ನು ಹಿಂದಿಕ್ಕಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಥ್ಲೆಟಿಕ್ಸ್‌ಗೆ ಬರುವ ಮುನ್ನ ಪಥಿರಗೆ ಓರ್ವ ವೇಗದ ಬೌಲರ್ ಆಗಿದ್ದ ಕ್ರಿಕೆಟಿಗ ಎನ್ನುವುದು ವಿಶೇಷ.

Read Full Story

12:38 PM (IST) Aug 01

Toxic - ಯಶ್ 'ಬ್ಲಾಕ್ & ವೈಟ್, ಹ್ಯಾಟ್-ಗನ್ ಮ್ಯಾನ್' ಪೋಸ್ಟರ್‌ ಲುಕ್ ನೋಡಿ ಜಗತ್ತು ಹೇಳ್ತಿರೋದೇನು?

ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ ನಟನೆಯ ರಾಮಾಯಣ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಅವರದೇ ಮತ್ತೊಂದು ಸಿನಿಮಾ ಟಾಕ್ಸಿಕ್ ಟ್ರೇಲರ್ ಅಧಿಕೃತ ಬಿಡುಗಡೆ ಬಗ್ಗೆ ಸುದ್ದಿ ಹೊರಬಿದ್ದಿದೆ. ಸ್ವತಃ ಯಶ್ ಹಾಗೂ ಚಿತ್ರತಂಡ 'ಟಾಕ್ಸಿಕ್' ಚಿತ್ರದ ಟ್ರೇಲರ್ ಬಿಡುಗಡೆಯನ್ನು ಕನ್ಫರ್ಮ್ ಮಾಡಿದೆ.

Read Full Story

12:30 PM (IST) Aug 01

Monsoon - ಅಲ್ಲಿನ ಜನ ನೀರಲ್ಲಿ ಸತ್ರು, ಇಲ್ಲಿ ನೀರಿಲ್ಲದೆ ಸತ್ರು! ಅರ್ಧ ಮಳೆಗಾಲವೇ ಮುಗಿದು ಹೋಯ್ತು!

ದೇಶದ ಕೃಷಿ ಮತ್ತು ಆರ್ಥಿಕತೆಯ ಜೀವನಾಡಿಯಾದ ಮುಂಗಾರು ಮಾರುತಗಳು ಪ್ರಸಕ್ತ ಹಂಗಾಮಿನಲ್ಲಿ ತಮ್ಮ ಅರ್ಧಪ್ರಯಾಣ ಮುಗಿಸಿದ್ದು, ಈ ಅವಧಿಯಲ್ಲಿ ಅಲ್ಲಲ್ಲಿ ಉತ್ತಮ ಮಳೆ ಆಗಿದ್ದರೆ, ಅಲ್ಲಲ್ಲಿ ಬರವೂ ಕಂಡುಬಂದಿದೆ.

Read Full Story

12:18 PM (IST) Aug 01

ಭಾರತೀಯ ರೈಲ್ವೇಯಿಂದ ಗಂಗಾ ಗಯಾ ಸಂಗಮ್ ಯಾತ್ರೆ ಆರಂಭ, ಭಾರತ ದರ್ಶನಕ್ಕೆ ವಿಶೇಷ ರೈಲು

ಪ್ರವಿತ್ರ ಹಾಗೂ ಪ್ರಸಿದ್ಧ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಭಾರತೀಯ ರೈಲ್ವೇ ವಿಶೇಷ ಗಂಗಾ ಗಯಾ ಸಂಗಮ್ ಯಾತ್ರೆ ಆರಂಭಿಸಿದೆ. ಇದಕ್ಕಾಗಿ ಭಾರತ ಗೌರವ್ ಸ್ಪೆಷಲ್ ರೈಲು ನಿಯೋಜನೆ ಮಾಡಲಾಗಿದೆ. ಟಿಕೆಟ್ ಬೆಲೆ, ದಿನಾಂಕ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

Read Full Story

11:57 AM (IST) Aug 01

6 ಎಸೆತ, 21 ರನ್ - ಫಿನಿಶ್ ಮಾಡ್ತಾರೆ ಅಂದ್ಕೊಂಡ್ರೆ, ಅದೇನೋ ಮಾಡಲು ಹೋಗಿ ಟ್ರೋಲ್‌ ಆದ 3D ಆಲ್ರೌಂಡರ್ ವಿಜಯ್ ಶಂಕರ್!

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕ್ಯಾಂಡಿ ರಾಯಲ್ಸ್ ಪರ ಆಡುತ್ತಿರುವ ಭಾರತದ ಮಾಜಿ ಆಟಗಾರ ವಿಜಯ್ ಶಂಕರ್, ಕೊನೆಯ ಓವರ್‌ನಲ್ಲಿ ಒಂದೂ ರನ್ ಗಳಿಸಲು ವಿಫಲರಾದರು. ಈ ಪಂದ್ಯದಲ್ಲಿ ಅವರ ತಂಡ ಸೋತಿದ್ದು, ಮ್ಯಾಚ್ ಫಿನಿಶ್ ಮಾಡಲು ಹೋಗಿ ಶಂಕರ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.
Read Full Story

09:53 AM (IST) Aug 01

ಏಕದಿನ ವಿಶ್ವಕಪ್ ಗೆಲ್ಲಲು ಆರ್‌ಸಿಬಿಯಂತೆ ಪರ್ಫೆಕ್ಟ್‌ ಭಾರತ ತಂಡ ಸೆಲೆಕ್ಟ್ ಮಾಡಿದ ದಿನೇಶ್ ಕಾರ್ತಿಕ್! ಆದ್ರೆ ಗಂಭೀರ್ ಆಪ್ತನಿಗಿಲ್ಲ ಸ್ಥಾನ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ 2027ರ ಏಕದಿನ ವಿಶ್ವಕಪ್‌ಗೆ 15 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಶುಭ್‌ಮನ್ ಗಿಲ್ ನಾಯಕತ್ವದ ಈ ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರರಿದ್ದು, ನಿತೀಶ್ ಕುಮಾರ್ ರೆಡ್ಡಿಯಂತಹ ಅಚ್ಚರಿಯ ಆಯ್ಕೆಗಳಿವೆ. ಗೌತಮ್ ಗಂಭೀರ್ ಅವರ ಆಪ್ತ ಆಟಗಾರ ಹರ್ಷಿತ್ ರಾಣಾಗೆ ತಂಡದಲ್ಲಿ ಸ್ಥಾನ ನೀಡಿಲ್ಲ.
Read Full Story

08:54 AM (IST) Aug 01

ಕಾಮನ್‌ವೆಲ್ತ್ ಗೇಮ್ಸ್ - 3 ವರ್ಷದ ಮಗುವಿನ ತಾಯಿ ಸೀಮಾಗೆ ಡಿಸ್ಕಸ್‌ ಥ್ರೋನಲ್ಲಿ ಕಂಚಿನ ಪದಕ

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳೆಯರ ಡಿಸ್ಕಸ್‌ ಎಸೆತದಲ್ಲಿ ಭಾರತಕ್ಕೆ ಕಂಚಿನ ಪದಕ ಲಭಿಸಿದೆ. ಇದರೊಂದಿಗೆ, ಬಾಕ್ಸಿಂಗ್‌ನಲ್ಲಿ ಐವರು ಭಾರತೀಯ ಬಾಕ್ಸರ್‌ಗಳು ಫೈನಲ್‌ ಪ್ರವೇಶಿಸುವ ಮೂಲಕ ಪದಕಗಳನ್ನು ಖಚಿತಪಡಿಸಿಕೊಂಡಿದ್ದಾರೆ.

Read Full Story

08:40 AM (IST) Aug 01

'ನಾವು ದೇಶವನ್ನು ದೇವರಂತೆ ಪರಿಗಣಿಸಲು ಸಾಧ್ಯವಿಲ್ಲ..' - ವಂದೇ ಮಾತರಂ ಮಸೂದೆಗೆ ಇಸ್ಲಾಮಿಕ್ ಸಂಘಟನೆ ಆಕ್ಷೇಪ

ವಂದೇ ಮಾತರಂಗೆ ಅವಮಾನಿಸುವುದು ಶಿಕ್ಷಾರ್ಹ ಅಪರಾಧ ಈ ಬಗ್ಗೆ ಗುರುವಾರ ಸಂಸತ್ತು ಅಂಗೀಕರಿಸಿದ ಮಸೂದೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರವಾಗಿ ಟೀಕಿಸಿದೆ. ಈ ಮಸೂದೆ ಧಾರ್ಮಿಕ ಮತ್ತು ಸಾಂವಿಧಾನಿಕ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕರೆದಿದೆ.

Read Full Story

08:30 AM (IST) Aug 01

ಕಾಮನ್‌ವೆಲ್ತ್ ಗೇಮ್ಸ್‌ - ಜುಡೋದಲ್ಲಿ ಭಾರತಕ್ಕೆ ಐತಿಹಾಸಿಕ ಡಬಲ್ ಚಿನ್ನ, 36 ವರ್ಷಗಳ ಐತಿಹಾಸಿಕ ಸಾಧನೆ

ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಜುಡೋ ಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಸ್ಮಿತಾ ದೇ, ಹರ್ಷ್‌ ಸಿಂಗ್‌ ಮತ್ತು ಯಾಮಿನಿ ಮೌರ್ಯ ಚಿನ್ನದ ಪದಕ ಗೆಲ್ಲುವ ಮೂಲಕ ಗೇಮ್ಸ್ ಇತಿಹಾಸದಲ್ಲೇ ದೇಶಕ್ಕೆ ಮೊದಲ ಜುಡೋ ಸ್ವರ್ಣ ತಂದುಕೊಟ್ಟಿದ್ದಾರೆ. ಇದೇ ವೇಳೆ, ವೇಟ್‌ಲಿಫ್ಟರ್ ಲವ್‌ಪ್ರೀತ್‌ ಸಿಂಗ್‌ ಬೆಳ್ಳಿ ಪದಕ ಗೆದ್ದು ದೇಶದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.
Read Full Story

More Trending News