- Home
- Entertainment
- 'ಅತಿಯಾದ್ರೆ ಅಮೃತವೂ ವಿಷ'.. 'ರಾವಣ'ನ ಬಗ್ಗೆ ಹಾಲಿವುಡ್ ಅಂಗಳದಲ್ಲಿ ಯಶ್ ಮಾತು; ಇದಪ್ಪ 'ತಾಯ್ನೆಲ'ದ ಅಭಿಮಾನ ಅಂದ್ರೆ!!
'ಅತಿಯಾದ್ರೆ ಅಮೃತವೂ ವಿಷ'.. 'ರಾವಣ'ನ ಬಗ್ಗೆ ಹಾಲಿವುಡ್ ಅಂಗಳದಲ್ಲಿ ಯಶ್ ಮಾತು; ಇದಪ್ಪ 'ತಾಯ್ನೆಲ'ದ ಅಭಿಮಾನ ಅಂದ್ರೆ!!
ಕನ್ನಡದ ಸ್ಟಾರ್ ನಟ ಯಶ್ ಅವರು ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಂತಹ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ನೀಡಿದ ಮಾಧ್ಯಮ ಸಂದರ್ಶನಗಳಲ್ಲಿ ರಾಮಾಯಣ ಮತ್ತು ರಾವಣನ ಬಗ್ಗೆ ಹೇಳೀರೋ ಮಾತೇನು ಗೊತ್ತಾ?

ಇತ್ತೀಚೆಗೆ ಹಾಲಿವುಡ್ ಅಂಗಳದಲ್ಲಿ ನಡೆದ 'ರಾಮಾಯಣ' ಈವೆಂಟ್ (Ramayana Event) ವೇಳೆ ನಡೆದ ಮಾತುಕತೆಯಲ್ಲಿ ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ರಾಮಾಯಣ ಹಾಗೂ ರಾವಣನ ಬಗ್ಗೆ ಮಾತನ್ನಾಡಿದ್ದಾರೆ.
ಸಹಜವಾಗಿಯೇ ಹಾಲಿವುಡ್ ಅಂದ್ರೆ ಅದು ಅಮೆರಿಕಾ. ಅಲ್ಲಿನ ಜನರಿಗೆ ಹಾಗೂ ಅಂದು ಅಲ್ಲಿ ಸೇರಿದ್ದ ಜನರಿಗೆ ರಾಮಾಯಣದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ. ಸರಿಯಾದ ಎನ್ನೊವುದಕ್ಕಿಂತ ಹೆಚ್ಚಿನ ಜನರಿಗೆ 'ರಾಮಾಯಣ'ದ ಕಥೆಯೇ ಗೊತ್ತಿಲ್ಲ.
ಹಾಲಿವುಡ್ನ ಜಾಗತಿಕ ವೇದಿಕೆಯಲ್ಲಿ ನಟ ಯಶ್ ಅವರು ನಮ್ಮ ಭಾರತದ, ಅದರಲ್ಲೂ ಮುಖ್ಯವಾಗಿ ಸನಾತನ ಧರ್ಮದ ಐತಿಹಾಸಿಕ ಕಥೆ 'ರಾಮಾಯಣ'ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆ. ಅದರಲ್ಲೂ ವಿಶೇಷವಾಗಿ ತಾವು ನಿರ್ವಹಿಸುತ್ತಿರುವ ರಾವಣನ ಬಗ್ಗೆ ಹೇಳಿದ್ದಾರೆ.
ಯಶ್ ಅಲ್ಲಿ ಹೇಳಿದಂತೆ 'ರಾವಣ ಎಂದರೆ ಶಕ್ತಿ-ಸಾಮರ್ಥ್ಯ, ಸಂಪತ್ತು ಹಾಗೂ ದುರಾಸೆ ಎಲ್ಲವೂ ಮಿತಿಮೀರಿ ಅತಿಯಾಗಿ ಇರುವ ವ್ಯಕ್ತಿ. ಜೊತೆಗೆ, ಯಾರಿಗೂ ಇರಬಾರದಷ್ಟು ಅಂಹಕಾರವೂ ಸೇರಿಕೊಂಡು ತನ್ನಲ್ಲಿರುವ ಈ 'ಅತಿ'ಯಾದ ಶಕ್ತಿಗೇ ಬೆಲೆತೆತ್ತ ರಕ್ಕಸ ಸ್ವಭಾವದ ವ್ಯಕ್ಕಿ.
ಇನ್ನು ರಾಮಾಯಣದ ಬಗ್ಗೆ ಹೇಳಿದ ಯಶ್, 'ಸಾವಿರಾರು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಈ ಐತಿಹಾಸಿಕ ಮಹಾಕಾವ್ಯ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ, ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಿದೆ ಎಂದರೆ ಅದನ್ನು ಸಾಮಾನ್ಯ ಕಥೆ ಎಂದು ಹೇಗೆ ಹೇಳುವುದು? ಆ ಕಾರಣಕ್ಕೇ ರಾಮಾಯಣ ಒಂದು ಅಸಾಮಾನ್ಯ ಕಥೆ ಎನ್ನಲೇಬೇಕು.
ಇನ್ನು ರಾಮಾಯಣದ ಬಗ್ಗೆ ಹೇಳಿದ ಯಶ್, 'ಸಾವಿರಾರು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಈ ಐತಿಹಾಸಿಕ ಮಹಾಕಾವ್ಯ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ, ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಿದೆ ಎಂದರೆ ಅದನ್ನು ಸಾಮಾನ್ಯ ಕಥೆ ಎಂದು ಹೇಗೆ ಹೇಳುವುದು? ಆ ಕಾರಣಕ್ಕೇ ರಾಮಾಯಣ ಒಂದು ಅಸಾಮಾನ್ಯ ಕಥೆ ಎನ್ನಲೇಬೇಕು.
ಜೊತೆಗೆ, ಇಂದೂ ಕೂಡ ಈ ರಾಮಾಯಣ ಕಥೆ ತಮ್ಮ ಪ್ರಸ್ತುತತೆ ಉಳಿಸಿಕೊಂಡಿದೆ. ಜೊತೆಗೆ, ಇಂದಿನ ಸಮಾಜಕ್ಕೂ ಕೂಡ ಇದರಲ್ಲಿರುವ ಮೌಲ್ಯಗಳು ಆದರ್ಶಗಳಾಗಿಯೇ ಉಳಿದಿವೆ. ಭಾರತದ ಪರಂಪರೆಯ ಇಂಥ ಮಹಾನ್ ಕಥೆ ರಾಮಾಯಣವನ್ನು ನಾವು ಇಡೀ ಜಗತ್ತಿಗೆ 'ರಾಮಾಯಣ' ಸಿನಿಮಾ ಮೂಲಕ ಪರಿಚಯಿಸಲಿದ್ದೇವೆ' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

