ಇಸ್ಲಾಮಾಬಾದ್: ‘ನಮ್ಮ ನೀರಿನ ಭದ್ರತೆಗೆ ಅಪಾಯ ಎದುರಾದರೆ ಭಾರತದ ವಿರುದ್ಧ ಪಾಕಿಸ್ತಾನವು ಮಿಲಿಟರಿ ಕ್ರಮ (ಯುದ್ಧ) ಕೈಗೊಳ್ಳಬಹುದು’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಎಚ್ಚರಿಸಿದ್ದಾರೆ.
ಕಳೆದ ವರ್ಷ ಪಹಲ್ಗಾಂ ದಾಳಿ ನಂತರ ಭಾರತವು ಪಾಕಿಸ್ತಾನಕ್ಕೆ ಸಿಂಧು ನದಿ ಹರಿವು ನಿಲ್ಲಿಸಿದೆ. ಹೀಗಾಗಿ ಪಾಕ್ನಲ್ಲಿ ಜಲ ಕ್ಷಾಮ ಉಂಟಾಗಿದೆ. ಹೀಗಾಗಿ ಆಸಿಫ್ ಈ ಎಚ್ಚರಿಕೆ ನೀಡಿದ್ದಾರೆ.
ಎಆರ್ವೈ ನ್ಯೂಸ್ಗೆ ಸಂದರ್ಶನ ನೀಡಿದ ಆಸಿಫ್, ‘ನಮ್ಮ ನಮ್ಮ ರಾಷ್ಟ್ರೀಯ ಭದ್ರತೆಯ ಭಾಗವಾಗಿದೆ ಎಂದು ನಾವು ಭಾವಿಸಿದ ತಕ್ಷಣವೇ ನಾವು ಖಂಡಿತವಾಗಿಯೂ ಭಾರತದ ವಿರುದ್ಧ ಯುದ್ಧಕ್ಕೆ ಹೋಗುತ್ತೇವೆ’ ಎಂದು ಘೋಷಿಸಿದರು.
ಕಳೆದ ವರ್ಷ ಭಾರತ ಆಪರೇಷನ್ ಸಿಂದೂರ ನಡೆಸಿದಾಗ ಪಾಕಿಸ್ತಾನವು ಕದನವಿರಾಮಕ್ಕೆ ಗೋಗರೆದು, ಮುಖಭಂಗ ಅನುಭವಿಸಿತ್ತು
11:17 PM (IST) Jun 22
ನಿರ್ದೇಶಕಿ Nandini Reddy ಈಗ ಎಲ್ಲರಿಗೂ ಚಿರಪರಿಚಿತರು. ಆದರೆ, ಒಂದು ಕಾಲದಲ್ಲಿ ಸಹಾಯಕ ನಿರ್ದೇಶಕಿಯಾಗಿ ಅವಕಾಶ ಸಿಗುವುದೇ ಅವರಿಗೆ ಕಷ್ಟವಾಗಿತ್ತು. ನಟಿ ರಮ್ಯಾ ಕೃಷ್ಣನ್ ಮಾಡಿದ ಒಂದೇ ಒಂದು ಫೋನ್ ಕಾಲ್ನಿಂದ ತಮ್ಮ ಬದುಕೇ ಬದಲಾಯ್ತು ಎಂದು ನಂದಿನಿ ರೆಡ್ಡಿ ಹೇಳಿಕೊಂಡಿದ್ದಾರೆ.
10:30 PM (IST) Jun 22
ಮಮತಾ ಬ್ಯಾನರ್ಜಿ ಸ್ಥಾಪಿಸಿದ ಟಿಎಂಸಿ ಪಕ್ಷ ಒಡೆದು ಹೋಳಾಗಿದೆ. ಇದೀಗ ಬಂಡಾಯ ಗುಂಪು ಕಾರ್ಯಕಾರಿ ಸಮಿತಿ ರಚಿಸಿದೆ. ವಿಶೇಷ ಅಂದರೆ ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ಕಿತ್ತೆಸೆದಿದೆ. ಇತ್ತ ಅಭಿಷೇಕ್ ಬ್ಯಾನರ್ಜಿಯನ್ನು ಅಮಾನತು ಮಾಡಿದೆ.
10:02 PM (IST) Jun 22
ಈ 'ಖುಷಿಯ ವಿಚಾರ' ಯಾವುದು? ಅದು ಸಮಂತಾ ತಾಯಿ ಆಗುತ್ತಿರುವ ವಿಚಾರವೇ? ಅಥವಾ ಅವರ ವೃತ್ತಿಜೀವನದ ಹೊಸ ಮೈಲಿಗಲ್ಲೇ? ಎಂಬ ಗೊಂದಲ ಈಗ ಅಭಿಮಾನಿಗಳಲ್ಲಿ ಮನೆಮಾಡಿದೆ. ಅದೇನು ಹೇಳ್ಬಿಟ್ರು ಸಮಂತಾ ಗೆಳತಿ ನಂದಿನಿ ರೆಡ್ಡಿ?
09:33 PM (IST) Jun 22
08:38 PM (IST) Jun 22
ಅಪ್ಪಾ ಹೇಗಾದರೂ ಮಾಡಿ ಕಾಪಾಡು. ಇದು ಲಖನೌ ಕೋಚಿಂಗ್ ಸೆಂಟರ್ ಅಗ್ನಿಅವಘಡದಲ್ಲಿ ಸಜೀವ ದಹನವಾದ ವಿದ್ಯಾರ್ಥಿಯ ಕೊನೆಯ ಕರೆ. ತಂದೆ ಸ್ಥಳಕ್ಕೆ ಆಗಮಿಸುವಷ್ಟರಲ್ಲೇ ಮಗ ಸುಟ್ಟು ಕರಕಲಾಗಿದ್ದ.
08:30 PM (IST) Jun 22
Vishnu Priya Instagram Earnings: ಸದ್ಯಕ್ಕೆ ವಿಷ್ಣು ಪ್ರಿಯಾ ಕೈಯಲ್ಲಿ ಯಾವುದೇ ಸಿನಿಮಾ ಆಫರ್ಗಳಿಲ್ಲ. ಆದರೂ, ಆಕೆಯ ತಿಂಗಳ ಆದಾಯ ಕೇಳಿದ್ರೆ ಎಲ್ಲರೂ ಶಾಕ್ ಆಗ್ತಾರೆ. ಆ ವಿವರಗಳು ಈ ಸ್ಟೋರಿಯಲ್ಲಿದೆ.
07:51 PM (IST) Jun 22
ಮೆಟಾ ಮಾಲೀಕತ್ವದ ಅತೀದೊಡ್ಡ ಮೆಸೇಜಿಂಗ್ ಪ್ಲಾಟ್ಫಾರ್ಮ್ ವ್ಯಾಟ್ಸಾಪ್ ಮುಖ್ಯಸ್ಥ ಸ್ಥಾನದಿಂದ ವಿಲ್ ಕ್ಯಾಥಕಾರ್ಟ್ ರಾಜೀನಾಮೆ ನೀಡಿದ್ದಾರೆ. ಈ ಸ್ಥಾನಕ್ಕೆ ಕ್ರೆಡ್ ಸಂಸ್ಥೆ ಸಂಸ್ಥಾಪಕ ಕುನಾಲ್ ಶಾ ನೇಮಕಗೊಂಡಿದ್ದಾರೆ.
07:35 PM (IST) Jun 22
ಈ ಬಾರಿಯ ವಿಜಯ್ ಹುಟ್ಟುಹಬ್ಬ ಹಿಂದೆಂದಿಗಿಂತಲೂ ಸ್ಪೆಷಲ್. ಯಾಕೆಂದರೆ, ಇದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಜನ್ಮದಿನ. ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯರು ವಿಜಯ್ಗೆ ಶುಭ ಕೋರುತ್ತಿದ್ದಾರೆ.
07:33 PM (IST) Jun 22
07:05 PM (IST) Jun 22
07:04 PM (IST) Jun 22
06:59 PM (IST) Jun 22
Actress Samantha Second Husband: ನಟಿ ಸಮಂತಾ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗ್ತಿದೆ. ಆದರೆ ಅವರ ಎರಡನೇ ಪತಿ ರಾಜ್ ನಿಡಿಮೊರು ಅವರ ಮೊದಲ ಪತ್ನಿ ಈಗ ಚರ್ಚೆಯಲ್ಲಿದ್ದಾರೆ. ಹೌದು ರಾಜ್ ಫಸ್ಟ್ ಪತ್ನಿ ಶ್ಯಾಮಿಲಿ ದೇ ಈಗ ಜ್ಯೋತಿಷಿ ಆಗಿದ್ದಾರೆ.
06:52 PM (IST) Jun 22
Priyanka Pandit: ಒಂದು ಕಾಲದಲ್ಲಿ ಭೋಜ್ಪುರಿ ಚಿತ್ರರಂಗದಲ್ಲಿ ಮಿಂಚುತ್ತಿದ್ದ ನಟಿಯೊಬ್ಬರು, ಕೇವಲ ಒಂದು ವೈರಲ್ MMS ವಿವಾದದಿಂದಾಗಿ ತಮ್ಮ ಕೆರಿಯರ್ ಅನ್ನೇ ಕಳೆದುಕೊಂಡರು. ಕೊನೆಗೆ ಗ್ಲಾಮರ್ ಲೋಕವನ್ನೇ ಬಿಟ್ಟು ಹೋಗಬೇಕಾಯ್ತು.
06:26 PM (IST) Jun 22
ಭಾರತದಲ್ಲಿ 146 ವರ್ಷಗಳಲ್ಲೇ ಅತ್ಯಂತ ಒಣ ಜೂನ್ ತಿಂಗಳು ದಾಖಲಾಗಿದ್ದು, ದೇಶಾದ್ಯಂತ ಶೇ. 46ರಷ್ಟು ಮಳೆ ಕೊರತೆ ಉಂಟಾಗಿದೆ. 'ಎಲ್ ನಿನೋ' ಪ್ರಭಾವದಿಂದಾಗಿ ಮುಂಗಾರು ವಿಳಂಬವಾಗಿದ್ದು, ಮಹಾರಾಷ್ಟ್ರದಂತಹ ರಾಜ್ಯಗಳು ತೀವ್ರ ಬರಗಾಲವನ್ನು ಎದುರಿಸುತ್ತಿವೆ.
05:53 PM (IST) Jun 22
ಕೋಚಿಂಗ್ ಸೆಂಟರ್ನಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣದಲ್ಲಿ ಹೊತ್ತಿ ಉರಿದಿದೆ. ಪರಿಣಾಮ 13 ಮಂದಿ ಮೃತಪಟ್ಟರೆ, ಪ್ರಾಣ ಉಳಿಸಿಕೊಳ್ಳಲು ಕೆಲ ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಜಿಗಿದ ಘಟನೆ ನಡೆದಿದೆ.
05:31 PM (IST) Jun 22
Orry: ಇತ್ತೀಚೆಗೆ ಪಾಡ್ಕಾಸ್ಟ್ ಒಂದರಲ್ಲಿ ಜೆಂಡರ್-ಲೆಸ್ ವಾಶ್ರೂಮ್ಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಭಾರತದಲ್ಲಿ ಇಂತಹ ವ್ಯವಸ್ಥೆ ಸುರಕ್ಷಿತವೇ, ಇದರಿಂದ ಖಾಸಗಿತನಕ್ಕೆ ಧಕ್ಕೆಯಾಗಲ್ವಾ ಎಂದು ಕೇಳಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
05:15 PM (IST) Jun 22
Actor Pawan Kalyan: ಪವನ್ ಕಲ್ಯಾಣ್ ಅವರ ಮೊದಲ ಪತ್ನಿ ನಂದಿನಿ ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇದೀಗ ನಿರ್ದೇಶಕ ಗೀತಾ ಕೃಷ್ಣ ಈ ಕುರಿತು ಹಲವು ಆಸಕ್ತಿಕರ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
04:43 PM (IST) Jun 22
04:38 PM (IST) Jun 22
Travis Head statement on Virat Kohli: ಐಪಿಎಲ್ 2026ರ ಸನ್ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿ ವಾಗ್ವಾದಕ್ಕೆ ಇಳಿದಿದ್ದು ಭಾರೀ ಸುದ್ದಿ ಆಗಿತ್ತು. ಈ ಬಗ್ಗೆ ಈಗ ಟ್ರಾವಿಸ್ ಹೆಡ್ ಮಾತನಾಡಿದ್ದಾರೆ.
04:25 PM (IST) Jun 22
Samantha: ತಾಯಿಯಾಗುವ ಆಸೆಯನ್ನು ಹಲವು ಬಾರಿ ವ್ಯಕ್ತಪಡಿಸಿದ್ದ ಸಮಂತಾ ಬಗ್ಗೆ ಹೊಸ ಸುದ್ದಿ ವೈರಲ್ ಆಗಿದೆ. ವರ್ಷಗಳ ಹಿಂದೆ ಹೇಳಿದ್ದ ಕನಸು ಈಗ ನನಸಾಯಿತೇ ಎಂಬ ಚರ್ಚೆ ಅಭಿಮಾನಿಗಳ ನಡುವೆ ಜೋರಾಗಿದೆ.
04:00 PM (IST) Jun 22
Triveni Rao Biplab Kumar Deb marriage: ಟಗರು ಸಿನಿಮಾ ಖ್ಯಾತಿಯ ಸರೋಜ ಅವರು ಮದುವೆ ಆಗಿದ್ದಾರೆ. ಏಕಾಏಕಿ ಅವರ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಜೊತೆ ಅವರು ಮದುವೆ ಆಗಿದ್ದಾರೆ.
03:47 PM (IST) Jun 22
Cooking gas in USA: ಭಾರತದಲ್ಲಿರುವಂತೆ ಅಮೆರಿಕದ ಜನರು ಗ್ಯಾಸ್ ಸಿಲಿಂಡರ್ಗಳನ್ನು ಖರೀದಿಸುವುದಿಲ್ಲ. ಹಾಗಾದರೆ ಅವರಿಗೆ ಅಡುಗೆ ಅನಿಲ ಹೇಗೆ ಸಿಗುತ್ತದೆ ಗೊತ್ತಾ? ಈ ಕುತೂಹಲಕಾರಿ ವಿಷಯದ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ.
03:38 PM (IST) Jun 22
03:38 PM (IST) Jun 22
ಕಾಲ್ತುಳಿತ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ಅಲ್ಲು ಅವರಿಗೆ ನ್ಯಾಯಾಲಯವು ಶಾಕ್ ಕೊಟ್ಟಿದೆ. "ಇಲ್ಲಿ ಸಿನಿಮಾ ಡೈಲಾಗ್ ನಡೆಯಲ್ಲ, ಕಾನೂನು ಎಲ್ಲರಿಗೂ ಒಂದೇ. ಪ್ರಕರಣದ ಗಂಭೀರತೆ ನಮಗೊತ್ತು, ನೀವು ಖುದ್ದಾಗಿ ನ್ಯಾಯಾಲಯಕ್ಕೆ ಬರಲೇಬೇಕು" ಎಂದು ಖಡಕ್ ಆಗಿ ಹೇಳಿದ್ದಾರೆ.
02:33 PM (IST) Jun 22
ಬೆಂಗಳೂರು: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಟ್ರೇಡಿಂಗ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಮುಂಬೈ ಫ್ರಾಂಚೈಸಿ ಯಶಸ್ವಿ ಜೈಸ್ವಾಲ್ಗೆ ಗಾಳ ಹಾಕಿದೆ ಎಂದು ವರದಿಯಾದ ಬೆನ್ನಲ್ಲೇ ಜೈಸ್ವಾಲ್ ಮುಂಬೈ ಬಳಿಕ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ವರದಿಯಾಗಿದೆ.
02:03 PM (IST) Jun 22
ನಟಿಯ 14 ವರ್ಷಗಳ ಸಿನಿ ಕೆರಿಯರ್ನಲ್ಲಿ ಒಂದು ಸಿನಿಮಾ ಹೊರತುಪಡಿಸಿ ಯಶಸ್ಸು ಕಂಡಿಲ್ಲ. ಆದರೆ, 40ನೇ ವಯಸ್ಸಿನಲ್ಲಿ ವೆಬ್ ಸಿರೀಸ್ನ ಬೋಲ್ಡ್ ಪಾತ್ರದ ಮೂಲಕ ಭಾರಿ ಸಂಚಲನ ಸೃಷ್ಟಿಸಿದರು. ಈ ನಟಿ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
01:42 PM (IST) Jun 22
ದಂಬುಲ್ಲಾ: ಬಾಲ್ ಇರುವುದೇ ದಂಡಿಸುವುದಕ್ಕೆ ಎನ್ನುವ ರೀತಿಯಲ್ಲಿ ಬ್ಯಾಟ್ ಬೀಸುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ, ಮತ್ತೊಮ್ಮೆ ಅಬ್ಬರಿಸಿದ್ದಾರೆ. ಲಂಕಾ ನೆಲದಲ್ಲಿ ಸ್ಪೋಟಕ ಆಟವಾಡಿದ ವೈಭವ್ ಸೂರ್ಯವಂಶಿ, ಬಿಸಿಸಿಐ ಸೆಲೆಕ್ಟರ್ಸ್ಗೆ ಖಡಕ್ ಮೆಸೇಜ್ ರವಾನಿಸಿದ್ದಾರೆ.
01:39 PM (IST) Jun 22
ಕೇಂದ್ರ ಸರ್ಕಾರವು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ (ESA) ಅಂತಿಮ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ. ಗುಜರಾತ್, ಮಹಾರಾಷ್ಟ್ರದಂತಹ ರಾಜ್ಯಗಳು ಒಪ್ಪಿಗೆಯ ಅಂಚಿನಲ್ಲಿದ್ದರೆ, ಕರ್ನಾಟಕ ಮತ್ತು ಕೇರಳದ ವಿರೋಧ ಮುಂದುವರಿದಿದ್ದು, ಹಂತ-ಹಂತದ ಜಾರಿಗೆ ಕೇಂದ್ರ ಚಿಂತನೆ ನಡೆಸಿದೆ.
12:56 PM (IST) Jun 22
12:44 PM (IST) Jun 22
ಮ್ಯಾಂಚೆಸ್ಟರ್: 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು, ದಕ್ಷಿಣ ಆಫ್ರಿಕಾ ಎದುರು ಸೋಲುಂಡಿದೆ. ಇದರ ಬೆನಲ್ಲೇ ಸೆಮೀಸ್ ಲೆಕ್ಕಾಚಾರ ತಲೆ ಕಳೆಗಾಗಿದೆ. ಭಾರತಕ್ಕೆ ಇನ್ನೂ ಸೆಮೀಸ್ಗೇರುವ ಅವಕಾಶ ಇದೆಯಾ? ನೋಡೋಣ ಬನ್ನಿ.
12:44 PM (IST) Jun 22
Mahindra New Cars 2026 List Photo: ಮಹೀಂದ್ರಾ ಪ್ರಿಯರಿಗೆ ಭರ್ಜರಿ ಸುದ್ದಿ ಇಲ್ಲಿದೆ! ಮುಂಬರುವ ದಿನಗಳಲ್ಲಿ ಮಹೀಂದ್ರಾ ಆಟೋಮೋಟಿವ್ ಸಂಸ್ಥೆಯು ಸದ್ದಿಲ್ಲದೆ ಬರೋಬ್ಬರಿ 15ಕ್ಕೂ ಹೆಚ್ಚು ಹೊಸ ಎಸ್ಯುವಿಗಳನ್ನು (SUV) ಸಿದ್ಧಪಡಿಸುತ್ತಿದೆ.
11:47 AM (IST) Jun 22
ವಿಮಾನಗಳು ಆಕಾಶದಲ್ಲಿ ನಿರಂತರವಾಗಿ ಹಾರಾಡುತ್ತಲೇ ಇರುತ್ತವೆ. ಹಾಗೆಯೇ, ಆಕಾಶದಲ್ಲಿ ಸಿಡಿಲುಗಳು ಕೂಡ ಸಾಮಾನ್ಯ. ಆದರೆ, ಹಾರುತ್ತಿರುವ ವಿಮಾನದ ಮೇಲೆ ಸಿಡಿಲು ಬಡಿದರೆ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ.
11:23 AM (IST) Jun 22
ಜೂನ್ 12 ರಂದು ನಡೆದ ಆ ಭವ್ಯ ಸಮಾರಂಭದಲ್ಲಿ ನೋರಾ ಫತೇಹಿ ಸ್ಟೇಜ್ ಮೇಲೆ ಕಾಲಿಡುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಕುಣಿದು ಕುಪ್ಪಳಿಸಿತು. ಅವರ ಪವರ್-ಪ್ಯಾಕ್ಡ್ ಡ್ಯಾನ್ಸ್ ಮತ್ತು ಎನರ್ಜಿ ಕಂಡು ಜಗತ್ತೇ ದಂಗಾಯಿತು. ಈ ಸ್ಟೋರಿ ನೋಡಿ..
10:50 AM (IST) Jun 22
ಭಾರತೀಯ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಲು ವಿಶೇಷ ಆವೃತ್ತಿಯ ಏಪ್ರಿಲಿಯಾ SR 175 ಟ್ರಿಬ್ಯೂಟ್ ಎಡಿಷನ್ (Aprilia SR 175 Tribute Edition) ಸ್ಕೂಟರ್ ಈಗ ಭಾರತದಲ್ಲಿ 1.21 ಲಕ್ಷ ರೂಪಾಯಿಗೆ ಬಿಡುಗಡೆಯಾಗಿದೆ. ಇದು ಮಿಲಿಟರಿ ಸಮವಸ್ತ್ರದಿಂದ ಪ್ರೇರಿತವಾಗಿದೆ.
10:45 AM (IST) Jun 22
ನಕಲಿ ಮೊಬೈಲ್ ಚಾರ್ಜರ್ಗಳು ನಿಮ್ಮ ದುಬಾರಿ ಫೋನ್ಗಳಿಗೆ ಹಾನಿಯುಂಟುಮಾಡುವುದಲ್ಲದೆ, ಸ್ಫೋಟದಂತಹ ಗಂಭೀರ ಅಪಾಯಗಳನ್ನು ಉಂಟುಮಾಡಬಹುದು. ಈ ಲೇಖನದಲ್ಲಿ ಅಸಲಿ ಮತ್ತು ನಕಲಿ ಚಾರ್ಜರ್ಗಳನ್ನು ಗುರುತಿಸುವುದು ಹೇಗೆಂದು ವಿವರಿಸಲಾಗಿದೆ.
10:35 AM (IST) Jun 22
ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಸದ್ಯದಲ್ಲಿಯೇ ನಿವೃತ್ತಿ ವಾಪಾಸ್ ಪಡೆದು ಟೆಸ್ಟ್ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲಿದ್ದಾರೆ ಎನ್ನುವ ಚರ್ಚೆ ಜೋರಾಗಿತ್ತು. ಇದೀಗ ವಿಚಾರದ ಬಗ್ಗೆ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ವಿರಾಟ್ ಏನಂದ್ರು ನೋಡೋಣ ಬನ್ನಿ.
10:28 AM (IST) Jun 22
ಹೈದರಾಬಾದ್ನ ರಾಯದುರ್ಗಂನಲ್ಲಿರುವ ಐದು ಎಕರೆ ಭೂಮಿಗೆ ಸಂಬಂಧಿಸಿದಂತೆ ಎಸ್ಬಿಐ ಮತ್ತು ತೆಲಂಗಾಣ ಸರ್ಕಾರದ ನಡುವೆ ಕಾನೂನು ಸಂಘರ್ಷ ಆರಂಭವಾಗಿದೆ. ಸರ್ಕಾರವು ಭೂಮಿಯನ್ನು ಹರಾಜು ಹಾಕಲು ಮುಂದಾಗಿದ್ದಕ್ಕೆ ಎಸ್ಬಿಐ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ.
09:54 AM (IST) Jun 22
ರಕ್ಷಣಾ ವಲಯದಲ್ಲಿ ಆಮದು ಅವಲಂಬನೆ ಕಡಿಮೆ ಮಾಡಲು ಕೇಂದ್ರ ಸರ್ಕಾರವು ದೇಶದಾದ್ಯಂತ ಏಳು ಹೊಸ ರಕ್ಷಣಾ ಉತ್ಪಾದನಾ ಕ್ಲಸ್ಟರುಗಳನ್ನು ಸ್ಥಾಪಿಸುತ್ತಿದೆ. ಈ ಜಂಟಿ ಕ್ಲಸ್ಟರಿಂಗ್ ವ್ಯವಸ್ಥೆಯಲ್ಲಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಐಐಟಿಗಳು ಭಾಗಿಯಾಗಲಿದೆ.
08:26 AM (IST) Jun 22
07:58 AM (IST) Jun 22