
ಪಾದರಾಯನಪುರ ಆಯ್ತು..ಈಗ ರಾಯಪುರದಲ್ಲಿ ಕಿರಿಕ್: ಕೋವಿಡ್ ಟೆಸ್ಟ್ಗೆ ಸ್ಥಳೀಯರಿಂದ ವಿರೋಧ
ಕೊರೋನಾ ಪರೀಕ್ಷೆ ಮಾಡಿಸದಂತೆ ಸ್ಥಳೀಯರ ವಿರೋಧ| ಬೆಂಗಳೂರಿನ ರಾಯಪುರದಲ್ಲಿ ನಡೆದ ಘಟನೆ| ಕಾರ್ಪೊರೇಟರ್ ಸಹೋದರನಿಗೆ ಮುತ್ತಿಗೆ ಹಾಕಿ ಸ್ಥಳೀಯರಿಂದ ಪ್ರತಿಭಟನೆ| ರಾಯಪುರದಲ್ಲಿ ಪೌಕಾರ್ಮಿಕರೇ ವಾಸಿಸುತ್ತಿದ್ದಾರೆ|
ಬೆಂಗಳೂರು(ಮೇ.17): ಕೊರೋನಾ ಪರೀಕ್ಷೆ ಮಾಡಬೇಡಿ ಎಂದು ಸ್ಥಳೀಯರು ಗಲಾಟೆ ಮಾಡಿದ ಘಟನೆ ರಾಯಪುರದಲ್ಲಿ ನಡೆದಿದೆ. ನಮ್ಮ ಏರಿಯಾದಲ್ಲಿ ಕೊರೋನಾ ಟೆಸ್ಟ್ ಮಾಡಿಸಬೇಡಿ ಎಂದು ಕಾರ್ಪೊರೇಟರ್ ಸಹೋದರನಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಿತ್ರದುರ್ಗ: ತಬ್ಲಿಘಿಗಳ ಜೊತೆ ನಂಟು, ಕ್ವಾರಂಟೈನ್ನಲ್ಲಿದ್ದ ವ್ಯಕ್ತಿ ಸಾವು
ಹೀಗಾಗಿ ಪ್ರತಿಭಟನಾಕಾರರನ್ನ ಕಾರ್ಪೊರೇಟರ್ ಸಹೋದರ ಕೇಶವ್ ಅವರು ಸಮಾಧಾನಪಡಿಸುವ ಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಪೌಕಾರ್ಮಿಕರೇ ವಾಸಿಸುತ್ತಿದ್ದಾರೆ. ಹೀಗಾಗಿ ನಮ್ಮ ಪ್ರದೇಶದಲ್ಲಿ ಒಂದೇ ಒಂದು ಕೊರೋನಾ ಕೇಸ್ ಪತ್ತೆಯಾಗಿಲ್ಲ, ಹೀಗಾಗಿ ಕೋವಿಡ್ ಟೆಸ್ಟ್ ಮಾಡಿಸಬೇಡಿ ಎಂದು ಕಿರಿಕ್ ತಗೆದಿದ್ದಾರೆ.