Asianet Suvarna News Asianet Suvarna News

Farm Laws: ಚುನಾವಣಾ ಎಫೆಕ್ಟ್, ಕೃಷಿಕಾಯ್ದೆ ವಾಪಸ್, ಅಚ್ಚರಿ ಮೂಡಿಸಿದ ಕೇಂದ್ರದ ನಿರ್ಧಾರ

ರೈತರ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ, 3 ವಿವಾದಿತ ಕೃಷಿಕಾಯ್ದೆಯನ್ನು ವಾಪಸ್ ಪಡೆದಿದೆ. ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಮಸೂದೆ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ.

ಬೆಂಗಳೂರು (ನ. 19): ರೈತರ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ, 3 ವಿವಾದಿತ ಕೃಷಿಕಾಯ್ದೆಯನ್ನು ವಾಪಸ್ (Farm Laws) ಪಡೆದಿದೆ. ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಮಸೂದೆ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ರೈತ ಹೋರಾಟಗಾರರನ್ನು ಮನೆಗೆ ತೆರಳುವಂತೆ ಪ್ರಧಾನಿ ಮೋದಿ (PM Modi) ಮನವಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರ ಅಚ್ಚರಿ ಮೂಡಿಸಿದೆ.

Modi Withdraws Farm Bills ವಿವಾದಿತ ಕೃಷಿ ಕಾಯ್ದೆ ಪ್ರಧಾನಿ ಮೋದಿ ಹಿಂಪಡೆಯಲು ಕಾರಣವೇನು.?

'ಉತ್ತರ ಪ್ರದೇಶ ಚುನಾವಣೆ, ಪಂಜಾಬ್ ಚುನಾವಣಾ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಕಾಣಿಸುತ್ತದೆ. ಚುನಾವಣಾ ಸಂದರ್ಭದಲ್ಲಿ ಮೋದಿಯೂ ಕೂಡಾ ಮಣಿಯುತ್ತಾರೆ ಎಂಬ ಸಂದೇಶ ನೀಡಿದ್ದಾರೆ. ಈ ಮಸೂದೆ ವಾಪಸ್‌ನಿಂದ ರೈತರಿಗೆ ನಿಜಕ್ಕೂ ಅನುಕೂಲವಾಗಲಿದಾ ಎಂಬುದು ಚರ್ಚಾಸ್ಪದ ವಿಷಯ' ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ಸಂಪಾದಕರಾದ ಅಜಿತ್ ಹನಮಕ್ಕನವರ್ ವಿಶ್ಲೇಷಿಸಿದ್ದಾರೆ. 

 

Video Top Stories