ನಾನು ರೆಬೆಲ್‌ ಅಲ್ಲ, ಲಾಯಲ್‌ ; ಈಶ್ವರಪ್ಪ ಬಹಿರಂಗ ಹೇಳಿಕೆಗೆ ಹೈಕಮಾಂಡ್‌ ಬೀಗ.!

 ರಾಜ್ಯಪಾಲರು, ಬಿಜೆಪಿ ಹೈಕಮಾಂಡ್‌ಗೆ ಬರೆದ ಪತ್ರದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರ ಸುದೀರ್ಘ ವಿವರಣೆ, ಬಿಎಸ್‌ವೈ ವಿರುದ್ಧ ವೈಯಕ್ತಿಕ ಕಾರಣಕ್ಕೆ ಪತ್ರ ಬರೆದಿಲ್ಲ, ನಿಯಮ ಮೀರಿ ನನ್ನ ಇಲಾಖೆ ಅನುದಾನ ಹಂಚಿಕೆ ಮಾಡದಂತೆ ಕೋರಿದ್ದೆ, ದೂರು ನೀಡಿಲ್ಲ : ಈಶ್ವರಪ್ಪ

Share this Video
  • FB
  • Linkdin
  • Whatsapp

ಬೆಂಗಳೂರು (ಏ. 03): ಇಲಾಖೆ ಅನುದಾನ ಬಿಡುಗಡೆಗೆ ಸಂಬಂಧಿಸಿ ರಾಜ್ಯಪಾಲರಿಗೆ ಪತ್ರ ಬರೆದಿರುವುದನ್ನು ಸಮರ್ಥಿಸಿಕೊಂಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ನಾನು ಪಕ್ಷದ ರೆಬೆಲ್‌ ಅಲ್ಲ, ಲಾಯಲ್‌ ಎಂದು ಹೇಳಿದ್ದಾರೆ. ಜತೆಗೆ ಇಲಾಖೆಗೆ ನಿಗದಿಯಾದ ಅನುದಾನವನ್ನು ಕಾನೂನು ಮತ್ತು ನಿಯಮ ಮೀರಿ ವರ್ಗಾಯಿಸದಂತೆ ಕೋರಿದ್ದೇನೆಯೇ ಹೊರತು, ಯಾರ ವಿರುದ್ಧವೂ ಯಾವುದೇ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನ್ನ ಮತ್ತು ಯಡಿಯೂರಪ್ಪ ಅವರ ನಡುವಿನ ವೈಯಕ್ತಿಕ ಕಾರಣಗಳಿಗೆ ಪತ್ರ ಬರೆದಿಲ್ಲ, ನಮ್ಮಿಬ್ಬರ ನಡುವಿನ ಸಂಬಂಧ ಚೆನ್ನಾಗಿಯೇ ಇದ್ದು ಚುನಾವಣೆ ಬಳಿಕ ಸಮಸ್ಯೆ ಬಗೆಹರಿಸುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಪಕ್ಷದೊಳಗೆ ತನ್ನ ವಿರುದ್ಧ ಎದ್ದಿರುವ ಅಸಮಾಧಾನಕ್ಕೂ ತಿರುಗೇಟು ನೀಡಿರುವ ಅವರು ನಾನು ಯಾವುದಕ್ಕೂ ಜಗ್ಗುವುದಿಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ. ಈಶ್ವರಪ್ಪ- ಬಿಎಸ್‌ವೈ ನಡುವಿನ ಸ್ನೇಹ ಎಂತದ್ದು..? ಅವರೇ ಹೇಳ್ತಾರೆ ಕೇಳಿ. 

Related Video