Asianet Suvarna News Asianet Suvarna News

ಬಿಡಿಎ ನಿರ್ಲಕ್ಷ್ಯಕ್ಕೆ ಒಡೆದ ಹೊಸಕೆರೆ ಹಳ್ಳಿ ಕೆರೆ; ಅಧಿಕಾರಿಗಳ ಮೇಲೆ ಆಕ್ರೋಶ

ಬಿಡಿಎ ನಿರ್ಲಕ್ಷಕ್ಕೆ ಹೊಸಕೆರೆ ಹಳ್ಳಿ ಕೆರೆ ಒಡೆದು ಹೋಗಿದೆ. ಒಡೆದು ಹೋದ ಕೆರೆಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಈಗ ಕುಸಿದು ರಸ್ತೆ ಮೇಲೆ ಅಪಾರ ಪ್ರಮಾಣದ ಮಣ್ಣು ಬಿದ್ದಿದೆ. ಹೊಸಕೆರೆಹಳ್ಳಿ- ರಾಜರಾಜೇಶ್ವರಿ ನಗರಕ್ಕೆ ಸಂಪರ್ಕ ಬಂದ್ ಮಾಡಲಾಗಿದೆ. ರಸ್ತೆ ಮೇಲಿರುವ ಮಣ್ಣು ಹೊರ ತೆಗೆಯಲು ಹರಸಾಹಸಪಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ಬಿಡಿಎ ಇಲ್ಲಿ ಕಾಮಗಾರಿ ನಡೆಸುತ್ತಿತ್ತು. ಕೆರೆಯಲ್ಲಿ ನೀರು ಹೊರ ಹೋಗದೇ ಸ್ಟ್ರಾಮ್ ವಾಟರ್ ಹೆಚ್ಚಾಗಿತ್ತು. ಇದರಿಂದ ಸೊಳ್ಳೆ ಜಾಸ್ತಿಯಾಗಿ ಸ್ಥಳೀಯರಿಗೆ ತೊಂದರೆ ಆಗುತ್ತಿತ್ತು. ಸ್ಟ್ರಾಮ್ ವಾಟರ್ ಹೊರ ಹಾಕಲು ಬಿಡಿಎ ದಡ ಕೊರೆದಿದ್ದೇ ಈ ಅಪಾಯಕ್ಕೆ ಕಾರಣ ಎನ್ನಲಾಗುತ್ತಿದೆ. 

 

ಬಿಡಿಎ ನಿರ್ಲಕ್ಷಕ್ಕೆ ಹೊಸಕೆರೆ ಹಳ್ಳಿ ಕೆರೆ ಒಡೆದು ಹೋಗಿದೆ. ಒಡೆದು ಹೋದ ಕೆರೆಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆ ಈಗ ಕುಸಿದು ರಸ್ತೆ ಮೇಲೆ ಅಪಾರ ಪ್ರಮಾಣದ ಮಣ್ಣು ಬಿದ್ದಿದೆ. ಹೊಸಕೆರೆಹಳ್ಳಿ- ರಾಜರಾಜೇಶ್ವರಿ ನಗರಕ್ಕೆ ಸಂಪರ್ಕ ಬಂದ್ ಮಾಡಲಾಗಿದೆ. ರಸ್ತೆ ಮೇಲಿರುವ ಮಣ್ಣು ಹೊರ ತೆಗೆಯಲು ಹರಸಾಹಸಪಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ಬಿಡಿಎ ಇಲ್ಲಿ ಕಾಮಗಾರಿ ನಡೆಸುತ್ತಿತ್ತು. ಕೆರೆಯಲ್ಲಿ ನೀರು ಹೊರ ಹೋಗದೇ ಸ್ಟ್ರಾಮ್ ವಾಟರ್ ಹೆಚ್ಚಾಗಿತ್ತು. ಇದರಿಂದ ಸೊಳ್ಳೆ ಜಾಸ್ತಿಯಾಗಿ ಸ್ಥಳೀಯರಿಗೆ ತೊಂದರೆ ಆಗುತ್ತಿತ್ತು. ಸ್ಟ್ರಾಮ್ ವಾಟರ್ ಹೊರ ಹಾಕಲು ಬಿಡಿಎ ದಡ ಕೊರೆದಿದ್ದೇ ಈ ಅಪಾಯಕ್ಕೆ ಕಾರಣ ಎನ್ನಲಾಗುತ್ತಿದೆ. 

Video Top Stories