Asianet Suvarna News Asianet Suvarna News

ಗವರ್ನರ್‌ಗೆ ಪತ್ರ ಬರೆದಿದ್ದು ನಿಜ, ದೂರು ನೀಡಿಲ್ಲ : ಈಶ್ವರಪ್ಪ ಸ್ಪಷ್ಟನೆ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಹಸ್ತಕ್ಷೇಪದ ಆರೋಪದೊಂದಿಗೆ ರಾಜ್ಯಪಾಲರಿಗೆ ಲಿಖಿತ ದೂರು ನೀಡಿರುವ ಬಗ್ಗೆ ಈಶ್ವರಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ. 

ಬೆಂಗಳೂರು (ಏ. 02): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಹಸ್ತಕ್ಷೇಪದ ಆರೋಪದೊಂದಿಗೆ ರಾಜ್ಯಪಾಲರಿಗೆ ಲಿಖಿತ ದೂರು ನೀಡಿರುವ ಬಗ್ಗೆ ಈಶ್ವರಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ. 

'ನಿಯಮಾನುಸಾರ ಸಿಎಂ ಹಣ ಬಿಡುಗಡೆ ಮಾಡಬೇಕು. ನನಗೆ ಗೊತ್ತಿಲ್ಲದಂತೆ ಸಿಎಂ ಹಣ ಬಿಡುಗಡೆ ಮಾಡಿದ್ದು ಸರಿಯಲ್ಲ. ಹೀಗಾಗಿ ನಾನು ಪತ್ರ ಬರೆದಿದ್ದು ನಿಜ. ದೂರು ಕೊಟ್ಟಿಲ್ಲ.  ನಾನು ರೆಬೆಲ್ ಅಲ್ಲ, ಲಾಯಲ್' ಎಂದಿದ್ದಾರೆ.

'ಯಡಿಯೂರಪ್ಪ, ನಾನು ಒಟ್ಟಿಗೆ ಬೆಳೆದವರು. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ವೈಯಕ್ತಿಕವಾಗಿ ನಾವು ಚೆನ್ನಾಗಿದ್ದೇವೆ' ಎಂದು ಸ್ಪಷ್ಟನೆ ನೀಡಿದ್ದಾರೆ.