ಸುವರ್ಣನ್ಯೂಸ್ ವರದಿಗೆ ಎಚ್ಚೆತ್ತ ಸರ್ಕಾರ; ಡಬಲ್ ದರ ಪ್ರಸ್ತಾಪ ಕೈಬಿಟ್ಟ ಸಾರಿಗೆ!
ಲಾಕ್ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ತೆರಳಲು ಸರ್ಕಾರ ಅನುಮತಿ ನೀಡಿದೆ. ಆದರೆ ಸಾರಿಗೆ ಇಲಾಖೆ ದುಡ್ಡೇ ಇಲ್ಲದ ಕಾರ್ಮಿಕರ ಬಳಿ ಡಬಲ್ ದರ ವಸೂಲಿ ಮಾಡುತ್ತಿತ್ತು. ಈ ಕುರಿತು ಸುವರ್ಣನ್ಯೂಸ್ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ದುಬಾರಿ ವಸೂಲಿ ಕೈಬಿಟ್ಟಿದೆ.
ಬೆಂಗಳೂರು(ಮೇ.02): ಲಾಕ್ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ತೆರಳಲು ಸರ್ಕಾರ ಅನುಮತಿ ನೀಡಿದೆ. ಆದರೆ ಸಾರಿಗೆ ಇಲಾಖೆ ದುಡ್ಡೇ ಇಲ್ಲದ ಕಾರ್ಮಿಕರ ಬಳಿ ಡಬಲ್ ದರ ವಸೂಲಿ ಮಾಡುತ್ತಿತ್ತು. ಈ ಕುರಿತು ಸುವರ್ಣನ್ಯೂಸ್ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ದುಬಾರಿ ವಸೂಲಿ ಕೈಬಿಟ್ಟಿದೆ.