Asianet Suvarna News Asianet Suvarna News

ಚೈತ್ರಾ ಮಾತಿಗೆ ಮರುಳಾಗಿ 5 ಕೋಟಿ ರೂ ಕಳೆದುಕೊಂಡ ಉದ್ಯಮಿ ಹಿಂದಿನ ರೋಚಕ ಕಹಾನಿ!

ಚೈತ್ರಾ ಕುಂದಾಪುರ ವಂಚನೆ ಹಿಂದೆ ಹಲವು ನಾಟಕ ಬಹಿರಂಗ, ವಿಶ್ವನಾಥ್ ಹೆಸರಿನಲ್ಲಿ 3.5 ಕೋಟಿ ರೂ ಪಡೆದಿದ್ದ ಚೈತ್ರಾ, 5 ಕೋಟಿ ರೂ ನೀಡಿ ಮೋಸ ಹೋದ ಗೋವಿಂದ ಬಾಬು ಪೂಜಾರಿ ಕತೆ ರೋಚಕ, ಸನಾತನ ಧರ್ಮ ವಿರೋಧಿ ಹೇಳಿಕೆ ನೀಡಬೇಡಿ, ನಾಯಕರಿಗೆ ಸಿಎಂ ಸ್ಟಾಲಿನ್ ಪತ್ರ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Sep 13, 2023, 11:37 PM IST | Last Updated Sep 13, 2023, 11:37 PM IST

ಹಿಂದುತ್ವ ಭಾಷಣಕಾರ್ತಿ ಚೈತ್ರಾ ಕುಂದಾಪುರ ಜೈಲು ಸೇರಿದ ಬೆನ್ನಲ್ಲೇ ವಂಚನೆ ಕತೆ ತೆರೆದುಕೊಂಡಿದೆ. ಚೈತ್ರ ಆಡಿಯೋ ಬಹಿರಂಗವಾಗಿದ್ದು, ಹಲವು ನಾಟಕಗಳು ಹೊರಬಿದ್ದಿದೆ.  ಗೋವಿಂದ ಬಾಬು ಪೂಜಾರಿ ಕೈಯಿಂದ 5 ಕೋಟಿ ರೂಪಾಯಿ ಪಡೆದು ವಂಚಿಸಿದ ಆರೋಪ ಚೈತ್ರಾ ಕುಂದಾಪರು ಮೇಲಿದೆ. ತನ್ನ 13ನೇ ವಯಸ್ಸಿಗೆ ಮುಂಬೈಗೆ ತೆರಳಿ ಬೆವರಿನ ಹನಿ ಮೂಲಕ ದುಡಿದು ಸಂಪಾದಿಸಿ ಹಣವನ್ನು ಚೈತ್ರಾ ಕುಂದಾಪುರ ಗುಳುಂ ಮಾಡಿದ್ದಾರೆ ಎಂದು ಪೂಜಾರಿ ಆರೋಪಿಸಿದ್ದಾರೆ. ಶೂನ್ಯದಿಂದ ಬದುಕು ಆರಂಭಿಸಿ 5,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಮ್ರಾಜ್ಯ ಕಟ್ಟಿದ ಗೋವಿಂದ ಬಾಬು ಪೂಜಾರಿ ಹಿಂದಿದೆ ರೋಚಕ ಕತೆ.