Asianet Suvarna News Asianet Suvarna News

ಒಂದೆಡೆ ಚಕ್ಕಾ ಜಾಮ್, ಇನ್ನೊಂದೆಡೆ ರೈತ ಮುಖಂಡರಿಗೆ ಕೃಷಿ ಕಾಯ್ದೆ ಬಗ್ಗೆ ಪಾಠ ಮಾಡಿದ ರೈತ.!

ವಿವಾದಿತ 3 ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿರುವಂತದ್ದು. ಇದು ರೈತರ ಬದುಕನ್ನು ಬರ್ಬಾದ್ ಮಾಡುತ್ತಿವೆ. ಇದರಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಪ್ರತಿಭಟನಾ ನಿರತ ರೈತರು ಹೇಳುತ್ತಿದ್ದಾರೆ. 

ಬೆಂಗಳೂರು (ಫೆ. 06): ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟ 74 ನೇ ದಿನಕ್ಕೆ ಕಾಲಿಟ್ಟಿದೆ. ಕೃಷಿ ಕಾಯ್ದೆ ವಿರುದ್ಧ ಬೇರೆ ಬೇರೆ ರೀತಿಯಲ್ಲಿ ರೈತರು ಪ್ರತಿಭಟನೆ ಮಾಡಿದ್ದಾರೆ. ಇಂದು ಚಕ್ಕಾ ಜಾಮ್‌ಗೆ ಕರೆ ನೀಡಿದ್ದಾರೆ.

ವಿವಾದಿತ 3 ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿರುವಂತದ್ದು. ಇದು ರೈತರ ಬದುಕನ್ನು ಬರ್ಬಾದ್ ಮಾಡುತ್ತಿವೆ. ಇದರಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಪ್ರತಿಭಟನಾ ನಿರತ ರೈತರು ಹೇಳುತ್ತಿದ್ದಾರೆ. ಈ ಕೃಷಿ ಕಾಯ್ದೆಯ ಪರ - ವಿರೋಧ ಚರ್ಚೆಗಳು ಸಾಕಷ್ಟು ನಡೆದಿದೆ. ಇಲ್ಲೊಬ್ಬ ರೈತ, ಕೃಷಿ ಕಾಯ್ದೆ ಬಗ್ಗೆ ರೈತ ಮುಖಂಡರಿಗೆ, ಪ್ರತಿಭಟನಾ ನಿರತರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇವರ ಸಮರ್ಥನೆ ಏನು..? 

ಚಕ್ಕಾ ಜಾಮ್‌ಗೆ ಪಕ್ಕಾ ಬ್ಲೂ ಪ್ರಿಂಟ್, ತಡೆಗೋಡೆಗೆ ಹೋರಾಟಗಾರರ ನ್ಯೂ ಪ್ಲ್ಯಾನ್..!

Video Top Stories