
ಸಿದ್ದರಾಮಯ್ಯ, ಡಿಕೆಶಿ, ರಮೇಶ್ ಕುಮಾರ್ ಏಕಪತ್ನಿ ವ್ರತಸ್ಥರಲ್ವಾ, ಈ ತನಿಖೆಗೆ ಒಪ್ಪಲಿ: ಸುಧಾಕರ್ ಸವಾಲ್..!
6 ಸಚಿವರ ರಾಜಿನಾಮೆಗೆ ಕಾಂಗ್ರೆಸ್ ಪಟ್ಟು ಹಿಡಿದ ಹಿನ್ನಲೆ, ಎಲ್ಲಾ 224 ಶಾಸಕರ ವಿರುದ್ಧ ತನಿಖೆಯಾಗಲಿ ಎಂದು ಆರೋಗ್ಯ ಸಚಿವ ಸುಧಾಕರ್ ಸವಾಲು ಹಾಕಿದ್ದಾರೆ.
ಬೆಂಗಳೂರು (ಮಾ. 24): 6 ಸಚಿವರ ರಾಜಿನಾಮೆಗೆ ಕಾಂಗ್ರೆಸ್ ಪಟ್ಟು ಹಿಡಿದ ಹಿನ್ನಲೆ, ಎಲ್ಲಾ 224 ಶಾಸಕರ ವಿರುದ್ಧ ತನಿಖೆಯಾಗಲಿ ಎಂದು ಆರೋಗ್ಯ ಸಚಿವ ಸುಧಾಕರ್ ಸವಾಲು ಹಾಕಿದ್ದಾರೆ.
Add Asianetnews Kannada as a Preferred Source

224 ಶಾಸಕರ ತನಿಖೆಯಾಗಲಿ. ಯಾರ್ಯಾರು ಸಿಎಂ ಆಗಿದ್ಧಾಗ ಏನ್ಮಾಡಿದ್ರು? ಯಾರಿಗೆ ಅನೈತಿಕ ಸಂಬಂಧ ಇದೆ..? ವಿವಾಹೇತರ ಸಂಬಂಧ ಇದೆ..? ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಎಚ್ಡಿಕೆ ಎಲ್ಲರೂ ಏಕಪತ್ನಿ ವ್ರತಸ್ಥರು. ಸತ್ಯ ಹರಿಶ್ಚಂದ್ರರು ಅಲ್ವಾ..? ಎಲ್ಲರೂ ತನಿಖೆಗೆ ಒಪ್ಪಲಿ' ಎಂದು ಸವಾಲು ಹಾಕಿದ್ದಾರೆ.
ಜಾರಕಿಹೊಳಿ ಸೀಡಿ VS ಮೇಟಿ ಸೀಡಿ: ಕಾಂಗ್ರೆಸ್ ಬ್ರಹ್ಮಾಸ್ತ್ರಕ್ಕೆ ಬಿಜೆಪಿ ಪ್ರತ್ಯಸ್ತ್ರ