Asianet Suvarna News Asianet Suvarna News

Omicron Threat: ಸರ್ಕಾರದ ನಿರ್ಧಾರಗಳಿಗೆ ನಮ್ಮ ಸಹಕಾರ ಇರುತ್ತದೆ: ಸಿದ್ದರಾಮಯ್ಯ

ಒಮಿಕ್ರಾನ್ (Omicron)  ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಸರ್ಕಾರಕ್ಕೆ ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಚಿಕ್ಕಮಗಳೂರಿನಲ್ಲಿ (Chikkamagalur) ಹೇಳಿದ್ದಾರೆ. 
 

ಬೆಂಗಳೂರು (ಡಿ. 03): ಒಮಿಕ್ರಾನ್ (Omicron)  ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಸರ್ಕಾರಕ್ಕೆ ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಚಿಕ್ಕಮಗಳೂರಿನಲ್ಲಿ (Chikkamagalur) ಹೇಳಿದ್ದಾರೆ. 

Omicron Threat:ಬೆಂಗ್ಳೂರಿಗೂ ಬಂತು ಒಮಿಕ್ರಾನ್, ಹೊಸವರ್ಷ, ಕ್ರಿಸ್‌ಮಸ್ ಸೆಲಬ್ರೇಶನ್‌ಗೆ ಬ್ರೇಕ್

ಒಮಿಕ್ರಾನ್ ತಡೆಗೆ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಿ. ಎಲ್ಲರಿಗೂ 2  ಡೋಸ್ ವ್ಯಾಕ್ಸಿನೇಷನ್ ತ್ವರಿತಗೊಳಿಸಬೇಕು. ವೈರಸ್ ಹರಡದಂತೆ ಸರ್ಕಾರ ನೋಡಿಕೊಳ್ಳಬೇಕು. ವಿದೇಶ ವಿಮಾನಗಳನ್ನು ರದ್ದುಗೊಳಿಸಬೇಕು. ರಾಜಕೀಯ ಸಮಾವೇಶಗಳಿಗೆ ಬೇಕಾದರೂ ನಿರ್ಬಂಧ ಹೇರಿ, ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಸಹಕಾರ ಇರುತ್ತದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.