Asianet Suvarna News Asianet Suvarna News

ಶಿಕಾರಿಪುರದ ವಿಜಯ ಕೇಸರಿಗೆ ಬಿಜೆಪಿ ಪ್ರಮೋಶನ್; ಹಿಂದಿದೆ ಈ ರೀಸನ್.!

ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು ನಿರೀಕ್ಷೆಯಂತೆಯೇ ಬಿಎಸ್‌ವೈ ಪುತ್ರ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿಜಯೇಂದ್ರ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ. 

ಬೆಂಗಳೂರು (ಆ. 02): ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು ನಿರೀಕ್ಷೆಯಂತೆಯೇ ಬಿಎಸ್‌ವೈ ಪುತ್ರ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿಜಯೇಂದ್ರ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ. 

ವಿಜಯೇಂದ್ರ ಅವರಿಗೆ ತಂದೆಯ ನಾಮಬಲದ ಜೊತೆಗೆ ಅವರ ಖದರ್ ಕೂಡಾ ಬದಲಾಗಿದೆ. ಕೆಆರ್‌ ಪೇಟೆ ಉಪಚುನಾವಣೆ. ಈ ಚುನಾವಣೆ ವಿಜಯೇಂದ್ರ ಅವರ ಖದರ್ ಬದಲಾಯಿಸಿತು. ಯಾವ ನೆಲ ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿತ್ತೋ, ಯಾವ ನೆಲದಲ್ಲಿ ಬಿಜೆಪಿಗೆ ಬ್ಯಾನರ್ ಕಟ್ಟೋಕೂ ಕಾರ್ಯಕರ್ತರಿಲ್ಲ ಎನಿಸಿಕೊಂಡಿತ್ತೋ ಅದೇ ನೆಲದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಇತಿಹಾಸ ನಿರ್ಮಿಸಿದ್ದು ಇದೇ ವಿಜಯೇಂದ್ರ. ಆ ಐತಿಹಾಸಿಕ ಗೆಲುವಿನ ನಂತರ ಸಿಎಂ ಪುತ್ರ ಹೈ ಕಮಾಂಡ್‌ಗೂ ಹತ್ತಿರವಾಗಿದ್ದಾರೆ. 

ಸಿಎಂ ಪುತ್ರ ಎನ್ನುವ ಕಾರಣಕ್ಕೆ ಬಿಜೆಪಿ ಹೈ ಕಮಾಂಡ್ ವಿಜಯೇಂದ್ರ ಅವರಿಗೆ ಉಪಾಧ್ಯಕ್ಷ ಸ್ಥಾನ ಕೊಟ್ಟಿಲ್ಲ. ಅವರಿಗೆ ಅವರದ್ದೇ ಆದ ಮಾನದಂಡಗಳಿವೆ. ಹಾಗಾದರೆ ಆ ಮಾನದಂಡಗಳೇನು? ಇಲ್ಲಿದೆ ಒಂದು ಪರಿಚಯ..!