Asianet Suvarna News Asianet Suvarna News

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ ಬಿಎಸ್‌ವೈ

ಕೊರೋನಾ ತಡೆಗಟ್ಟುವ ವಿಚಾರದಲ್ಲಿ ನಾನು ಇನ್ನೆಷ್ಟು ಮೀಟಿಂಗ್ ಮಾಡಬೇಕು ಎಂದು ಅಧಿಕಾರನ್ನು ಬಿಎಸ್‌ವೈ ತರಾಟೆಗೆ ತೆಗೆದುಕೊಂಡಿದ್ದಾರೆ. ಜನ ಸಾಯ್ತಾ ಇದ್ರೂ ನಿಮಗೆ ಮಾನವೀಯತೆ ಇಲ್ವಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು(ಜು.22): ರಾಜ್ಯರಾಜಧಾನಿ ಬೆಂಗಳೂರು ಅನ್‌ಲಾಕ್ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಲಯವಾರು ಸಭೆ ನಡೆಸಿದ್ದಾರೆ. ಆರ್.ಆರ್ ನಗರ ವಲಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಬಿಎಸ್‌ವೈ ಕೆಂಡಾಮಂಡಲವಾಗಿದ್ದಾರೆ.

ಕೊರೋನಾ ತಡೆಗಟ್ಟುವ ವಿಚಾರದಲ್ಲಿ ನಾನು ಇನ್ನೆಷ್ಟು ಮೀಟಿಂಗ್ ಮಾಡಬೇಕು ಎಂದು ಅಧಿಕಾರನ್ನು ಬಿಎಸ್‌ವೈ ತರಾಟೆಗೆ ತೆಗೆದುಕೊಂಡಿದ್ದಾರೆ. ಜನ ಸಾಯ್ತಾ ಇದ್ರೂ ನಿಮಗೆ ಮಾನವೀಯತೆ ಇಲ್ವಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ಟೆಸ್ಟಿಂಗ್ ಟಾರ್ಗೆಟ್ ಫಿಕ್ಸ್...!

ಪ್ರತಿಯೊಂದನ್ನು ನಿಮಗೆ ನಾನೇ ಹೇಳ್ಬೇಕಾ? ನಿಮಗೆ ಇದೆಲ್ಲ ಅರ್ಥ ಆಗಲ್ವಾ ಎಂದು ಅಧಿಕಾರಿಗಳನ್ನು ಯಡಿಯೂರಪ್ಪ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.