Asianet Suvarna News Asianet Suvarna News

ಬ್ರೈನ್ ಟ್ಯೂಮರ್‌; ಹೆಣ್ಣು ಮಗಳ ಸಹಾಯಕ್ಕೆ ಮುಂದಾದ ಡಿ ಬಾಸ್ ಅಭಿಮಾನಿಗಳು!

ಬೆಂಗಳೂರು (ಜ. 13): ಸ್ಟಾರ್ ಹುಟ್ಟುಹಬ್ಬ ಅಂದ್ಮೆಲೆ ಅಲ್ಲಿ ಜಾತ್ರೆ ಹಾಗೂ ಹಬ್ಬದ ಸಂಭ್ರಮ ಮನೆ ಮಾಡೋದು ಕಾಮನ್ ವಿಚಾರ. ಅದರಂತೆ ದರ್ಶನ್ ಹುಟ್ಟುಹಬ್ಬದಲ್ಲಿಯೂ ಸಂಭ್ರಮ ಶುರುವಾಗಿದೆ. ಬರ್ತಡೇಯನ್ನು ಅರ್ಥಪೂರ್ಣವಾಗಿ ಆಚರಿಸಲು ಈಗಾಗಲೇ ದರ್ಶನ್ ಅಭಿಮಾನಿ ಸಂಘಟನೆಗಳು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ. ಏನೆಲ್ಲಾ ವಿಶೇ‍ಷತೆಗಳಿವೆ? ಇಲ್ಲಿದೆ ನೋಡಿ!

 

ಬೆಂಗಳೂರು (ಜ. 13): ಸ್ಟಾರ್ ಹುಟ್ಟುಹಬ್ಬ ಅಂದ್ಮೆಲೆ ಅಲ್ಲಿ ಜಾತ್ರೆ ಹಾಗೂ ಹಬ್ಬದ ಸಂಭ್ರಮ ಮನೆ ಮಾಡೋದು ಕಾಮನ್ ವಿಚಾರ. ಅದರಂತೆ ದರ್ಶನ್ ಹುಟ್ಟುಹಬ್ಬದಲ್ಲಿಯೂ ಸಂಭ್ರಮ ಶುರುವಾಗಿದೆ. ಬರ್ತಡೇಯನ್ನು ಅರ್ಥಪೂರ್ಣವಾಗಿ ಆಚರಿಸಲು ಈಗಾಗಲೇ ದರ್ಶನ್ ಅಭಿಮಾನಿ ಸಂಘಟನೆಗಳು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ. 

ಪುತ್ರನನ್ನೇ ಉದಾಹರಣೆಯಾಗಿಸಿ ಮಕ್ಕಳಿಗೆ ಕನ್ನಡ ಕಲಿಸಿ ಎಂದ ದರ್ಶನ್!

ಚಕ್ರವರ್ತಿ ದರ್ಶನ್ ಅಭಿಮಾನಿಗಳ ಸಂಘ ವಿಜಯಪುರ ಸಂಘದ ವತಿಯಿಂದ ಡಿ ಬಾಸ್ ಹುಟ್ಟು ಹಬ್ಬದ ಪ್ರಯುಕ್ತ ಒಂದು ಹೆಣ್ಣು ಮಗುವಿನ ಜೀವ ಉಳಿಸುವ ದೃಷ್ಟಿಯಿಂದ ಸಣ್ಣ ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ. ದೇವನಹಳ್ಳಿ ತಾಲ್ಲೂಕಿನ ಒಂದು ಸಣ್ಣ ಗ್ರಾಮದ ಬಡ ಕುಟುಂಬದ ರೈತನ ಮಗಳಾದ ಚೈತನ್ಯ ಎಂಬ ಹೆಣ್ಣು ಮಗು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳುತ್ತಿದ್ದು ಆ ಮಗುವಿಗೆ ಸಹಾಯ ಮಾಡಲು ದರ್ಶನ್ ಫ್ಯಾನ್ಸ್ ನಿರ್ಧಾರ ಮಾಡಿದ್ದಾರೆ.