Asianet Suvarna News Asianet Suvarna News

ನನ್ನ ವೋಟು ನನ್ನ ಮಾತು :ಚಾಮುಂಡೇಶ್ವರಿ ಹೊಟಗಳ್ಳಿ ಕ್ಷೇತ್ರದ ಮಂದಿ ಏನ್ ಹೇಳ್ದ್ರು ?

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಚಾಮುಂಡೇಶ್ವರಿ ಹೊಟಗಳ್ಳಿ ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ,ಚಾಮುಂಡೇಶ್ವರಿ ಬೀರಿಹುಂಡಿ  ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದೆ, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.  ರಾಜಕಾರಣಿಗಳು ಬಿಝಿಯಾಗಿದ್ದಾರೆ. ಇನ್ನೊಂದು ಕಡೆ ಮತದಾರರು ಕೂಡಾ ಎಲ್ಲವನ್ನು ಕೂತು ಗಮನಿಸುತ್ತಿದ್ದು, ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಭ್ಯರ್ಥಿ ಮುಖ್ಯ ಅಲ್ಲ ಮೋದಿ ಮುಖ್ಯ ಎಂದು ಹೇಳಿದ್ದಾರೆ. ಹಾಗೇ ಚಾಮುಂಡೇಶ್ವರಿಯಲ್ಲಿ ಒಕ್ಕಲಿಗರ ಸಂಖ್ಯೆ ಜಾಸ್ತಿ ಇರುವುದರಿಂದ ಎಲ್ಲರ ಮತ ಜೆಡಿಎಸ್‌ಗೆ ಮೀಸಲು ಅದಕ್ಕಾಗಿ ಜೆಡಿಎಸ್‌ ಬರುತ್ತೆ ಎಂದು ಹೇಳಿದ್ದಾರೆ.  ಹಾಗೇ  ಯಾವ  ಪಕ್ಷ ಬಂದರು ಯಾವ ಅಭಿವೃದ್ದ ಮಾಡಿಲ್ಲ  ಜಿಟಿ ದೇವೇಗೌಡ ಆಗಿರಬಹುದು, ಸಿದ್ದರಾಮಯ್ಯ ಆಗಿರಬಹುದು  ಸಾರ್ವಜನಿಕರಿಗಾಗಿ  ಕೆಲಸ ಮಾಡಲ್ಲ ಎಂದು ಹೊಟಗಳ್ಳಿ  ಕ್ಷೇತ್ರದ ಮಂದಿ ಹೇಳಿದ್ದಾರೆ.