ಇಬ್ಬರಿಗೂ ಬೇಡವಾಯ್ತು ಬಾದಾಮಿ ಕ್ಷೇತ್ರ: ಕೋಲಾರಕ್ಕೆ ಸಿದ್ದು, ಶ್ರೀರಾಮುಲು ಎಲ್ಲಿಗೆ?
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಅಖಾಡ ಸಿದ್ಧವಾಗಿದ್ದೆ. ಸಿದ್ದರಾಮಯ್ಯ ಮಾತ್ರವಲ್ಲದೆ, ಶ್ರೀರಾಮುಲು ಕೂಡ ಕ್ಷೇತ್ರದ ಹುಡುಕಾಟದಲ್ಲಿ ಇದ್ದಾರೆ.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ, ಸಚಿವ ಶ್ರೀರಾಮಲು ಎಲ್ಲಿಂದ ಚುನಾವಣೆಗೆ ನಿಲ್ತಾರೆ ಎಂಬ ಲೆಕ್ಕಾಚಾರ ಶುರುವಾಗಿದೆ. ಕಳೆದ ಬಾರಿ ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಸೋಲು ಅನುಭವಿಸಿದ್ದರು. ಇದೀಗ ಶ್ರೀರಾಮುಲು ಮತ್ತೆ ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಬಾದಾಮಿ ಬಿಟ್ಟು ಕೋಲಾರಕ್ಕೆ ಹೋಗಿರುವ ಸಿದ್ದರಾಮಯ್ಯ, ಈ ಬಾರಿ ಬಾದಾಮಿಯಿಂದ ಸ್ಪರ್ಧೆ ಮಾಡಲ್ಲ. 2018ರಲ್ಲಿ ಬಾದಾಮಿ ಜೊತೆಗೆ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇದೀಗ ಇಬ್ಬರು ನಾಯಕರಿಗೂ ಬಾದಾಮಿ ವಿಧಾನಸಭಾ ಕ್ಷೇತ್ರ ಬೇಡವಾಗಿದೆ.