Explained: ಸಾವರ್ಕರ್ ಸುತ್ತ ಯಾಕಿಷ್ಟು ವಿವಾದ.? ಕ್ಷಮಾಪಣಾ ಪತ್ರದಲ್ಲಿದ್ದದ್ಧೇನು..?

ಭಾರತ ಕಂಡ ಅಪ್ರತಿಮ ದೇಶಭಕ್ತ ವೀರ ಸಾವರ್ಕರ್ ಬಗ್ಗೆ ಸಾಕಷ್ಟು ಚರ್ಚೆ, ವಿವಾದ ನಡೆದಿದೆ. ಸಾವರ್ಕರ್ ಅವರ ಆದರ್ಶ, ಜೀವನಶೈಲಿ, ಚಿಂತನೆಗಳನ್ನು ಅಳವಡಿಸಿಕೊಂಡು ಬದುಕುತ್ತಿರುವವರಿದ್ದಾರೆ. ವೀರ ಸಾವರ್ಕರ್ ಎಲ್ಲರಿಗಿಂತ ಮೊದಲು ಸ್ವತಂತ್ರ ಭಾರತದ ಕನಸು ಕಂಡವರು. ಬ್ರಿಟಿಷರ ವಿರುದ್ಧ ಹೋರಾಡಲು ಸ್ವದೇಶಿ ಆಂದೋಲನಕ್ಕೆ ಮಿಂಚಿನ ವೇಗ ತಂದರು. 
 

Share this Video
  • FB
  • Linkdin
  • Whatsapp

ಭಾರತ ಕಂಡ ಅಪ್ರತಿಮ ದೇಶಭಕ್ತ ವೀರ ಸಾವರ್ಕರ್ (Veer Savarkr) ಬಗ್ಗೆ ಸಾಕಷ್ಟು ಚರ್ಚೆ, ವಿವಾದ ನಡೆದಿದೆ. ಸಾವರ್ಕರ್ ಅವರ ಆದರ್ಶ, ಜೀವನಶೈಲಿ, ಚಿಂತನೆಗಳನ್ನು ಅಳವಡಿಸಿಕೊಂಡು ಬದುಕುತ್ತಿರುವವರಿದ್ದಾರೆ. ವೀರ ಸಾವರ್ಕರ್ ಎಲ್ಲರಿಗಿಂತ ಮೊದಲು ಸ್ವತಂತ್ರ ಭಾರತದ ಕನಸು ಕಂಡವರು. ಬ್ರಿಟಿಷರ ವಿರುದ್ಧ ಹೋರಾಡಲು ಸ್ವದೇಶಿ ಆಂದೋಲನಕ್ಕೆ ಮಿಂಚಿನ ವೇಗ ತಂದರು. 

1857ರ ಮೊದಲ ಸ್ವಾತಂತ್ರ್ಯ ಹೋರಾಟ ಸಿಪಾಯಿ ದಂಗೆಯ ಬಗ್ಗೆ ಸಾವರ್ಕರ್‌ ಅವರು ಪುಸ್ತಕ ಬರೆಯುವ ಮೂಲಕ ಸ್ವಾತಂತ್ರ್ಯ ಹೋರಾಟದ ಕೆಚ್ಚೆದೆಯನ್ನು ಭಾರತೀಯರಲ್ಲಿ ಮೂಡಿಸಿದ್ದರು. ಇದಕ್ಕೆ ಪ್ರತಿಯಾಗಿ ಬ್ರಿಟಿಷರು ಅವರನ್ನು ಕರಿನೀರಿನ ಶಿಕ್ಷೆ ವಿಧಿಸಿದ್ದರು. ದೇಶದಲ್ಲಿ ಪ್ರತ್ಯೇಕತೆಯ ಕೂಗಿಗೆ ನೀವು ಬಂದರೆ ನಮ್ಮ ಜೊತೆ, ನೀವು ಬರದಿದ್ದರೆ ನಿಮ್ಮನ್ನು ಬಿಟ್ಟು, ನೀವು ಅಡ್ಡ ನಿಂತರೆ ನಿಮ್ಮನ್ನು ಮೆಟ್ಟಿಹೋರಾಟ ಮಾಡುತ್ತೇವೆ ಎಂದು ಹೇಳಿದ್ದರು ಸಾವರ್ಕರ್‌. ಇಂತಹ ಅಪ್ರತಿಮ ರಾಷ್ಟ್ರಭಕ್ತ ಸಾವರ್ಕರ್ ಬಗ್ಗೆ ವಿವಾದವೇಕೆ..? ಅವರ ಹೋರಾಟದ ಹಾದಿ ವಿವಾದಾಸ್ಪದವಾಗಿತ್ತಾ..? ಒಂದು ವರದಿ

Related Video