Asianet Suvarna News Asianet Suvarna News

ಡಿಕೆಶಿಗೆ ಅತಿಯಾದ ಪಕ್ಷ ನಿಷ್ಠೆನೇ ಮುಳುವಾಗ್ತಿದ್ಯಾ? ಸಿಎಂ ರೇಸ್ ಬಿಟ್ಟುಕೊಟ್ಟು ಪಕ್ಷಕ್ಕಾಗಿ ತ್ಯಾಗಿಯಾದ ಬಂಡೆ!

ಪಕ್ಷಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿಕೊಂಡಿದ್ದೇನೆಂದು ಡಿಕೆಶಿ ಅನೇಕ ಬಾರಿ ಹೇಳಿದ್ದಾರೆ. ಹಾಗಿದ್ರೆ ಸರ್ವಸ್ವವನ್ನೂ ಪಕ್ಷಕ್ಕಾಗಿ ಅರ್ಪಿಸಿರುವ ಡಿಕೆಶಿಗೆ ಕೊನೆಯಲ್ಲಿ ಪಕ್ಷದಿಂದ ಸಿಕ್ಕಿದ್ದೇನು..?

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಬಂದು 5 - 6 ದಿನಗಳ ಬಳಿಕ ಕಾಂಗ್ರೆಸ್‌ ಹಗ್ಗ ಜಗ್ಗಾಟದ ಬಳಿಕ ಕೊನೆಗೂ ಸಿಎಂ ಆಯ್ಕೆ ಮಾಡಿದೆ. ಬಹುತೇಕ ಎಲ್ಲರೂ ಅಂದುಕೊಂಡಂತೆ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಇನ್ನು, ಡಿಕೆಶಿ ಸಿಎಂ ಫೈಟಿಂದ ಹಿಂದೆ ಸರಿದು ತ್ಯಾಗಿಯಾಗಿದ್ದಾರೆ ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ಪಕ್ಷಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿಕೊಂಡಿದ್ದೇನೆಂದು ಡಿಕೆಶಿ ಅನೇಕ ಬಾರಿ ಹೇಳಿದ್ದಾರೆ. ಹಾಗಿದ್ರೆ ಸರ್ವಸ್ವವನ್ನೂ ಪಕ್ಷಕ್ಕಾಗಿ ಅರ್ಪಿಸಿರುವ ಡಿಕೆಶಿಗೆ ಕೊನೆಯಲ್ಲಿ ಪಕ್ಷದಿಂದ ಸಿಕ್ಕಿದ್ದೇನು..? ಡಿಕೆಶಿಗೆ ಅತೀಯಾದ ಪಕ್ಷ ನಿಷ್ಠೆಯೇ ಮುಳುವಾಯ್ತಾ ಅನ್ನೋ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ. ಹಾಗಿದ್ರೆ ಡಿಕೆಶಿಗೆ ನಿಜಕ್ಕೂ ಈಗ ಮುಳುವಾಗಿದ್ದು ಪಕ್ಷದ ಮೇಲಿರುವ ನಿಷ್ಠೆನೇನಾ? ವಿಡಿಯೋ ನೋಡಿ..

Video Top Stories