Asianet Suvarna News Asianet Suvarna News

'ಗಣಿಧಣಿ'ಯಿಂದ ಹೊಸ ಪಕ್ಷ ಸ್ಥಾಪನೆ: ಇಂದು 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ನೋಂದಣಿ

ರಾಜ್ಯದಲ್ಲಿ ಮತ್ತೊಂದು ಹೊಸ ಪ್ರಾದೇಶಿಕ ಪಕ್ಷ ಉದಯವಾಗಲಿದ್ದು,  ಬಿಜೆಪಿಯಿಂದ ಮುನಿಸಿಕೊಂಡಿರುವ ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಸ್ಥಾಪನೆಯಾಗಿದೆ.
 

ದೆಹಲಿಯಲ್ಲಿ ಇಂದು ಜನಾರ್ದನ ರೆಡ್ಡಿಯ ಹೊಸ ಪಕ್ಷ ನೋಂದಣಿ ಆಗಲಿದ್ದು, 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಎಂಬ ಹೆಸರಿನಲ್ಲಿ  ನೋಂದಣಿಯಾಗಲಿದೆ. ಇಂದು ಅಧಿಕೃತವಾಗಿ ಹೆಸರು ಘೋಷಣೆಯಾಗಿದ್ದು, ಬೆಂಬಲಿಗರ ಮೂಲಕ ಪಕ್ಷ ನೋಂದಣಿ ಮಾಡಲಿದ್ದಾರೆ ಗಣಿಧಣಿ. ಡಿಸೆಂಬರ್‌ 14ರಂದು ಗಂಗಾವತಿಯಲ್ಲಿ ರೆಡ್ಡಿ ಮನೆ ಗೃಹ ಪ್ರವೇಶ ಇದ್ದು, ಬ್ರಹತ್‌ ಮೆರವಣಿಗೆ ಮೂಲಕ ಜನಾರ್ದನರೆಡ್ಡಿ ಗಂಗಾವತಿ ಪ್ರವೇಶ ಮಾಡಲಿದ್ದಾರೆ. ಪಕ್ಷ ನೋಂದಣಿ ಬಳಿಕ ಚಿಹ್ನೆ ಪಡೆದು ಗಂಗಾವತಿಗೆ ರೆಡ್ಡಿ ಎಂಟ್ರಿಯಾಗಲಿದ್ದಾರೆ.

ಆನೆ ದಾಳಿಯಿಂದ ಹಾನಿ, ಪರಿಹಾರ ಮೊತ್ತ ಡಬಲ್‌: ಸಿಎಂ ಸಭೆ ತೀರ್ಮಾನ