Asianet Suvarna News Asianet Suvarna News

ಭಿಕ್ಷೆ ಬೇಡಿದ ಹಣ ದಾನ; ಅಜ್ಜಿಯ ಹೃದಯ ಶ್ರೀಮಂತಿಕೆ ದೊಡ್ಡದು ಬಿಡಿ!

ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಅಜ್ಜಿಯೊಬ್ಬಳು ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ 1 ಲಕ್ಷ ರೂ ದಾನ ಮಾಡಿದ್ದಾಳೆ. 

ಬೆಂಗಳೂರು (ಫೆ. 24): ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಅಜ್ಜಿಯೊಬ್ಬಳು ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ 1 ಲಕ್ಷ ರೂ ದಾನ ಮಾಡಿದ್ದಾಳೆ. ಅಜ್ಜಿಯ ಹೃದಯ ಶ್ರೀಮಂತಿಕೆ ಕಂಡು ಎಲ್ಲರೂ ಬೆರಗಾಗಿದ್ದಾರೆ. ದೇವಸ್ಥಾನದ ಅನ್ನ ಸಂತರ್ಪಣೆಗೆ ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. 

ಈ ಅಜ್ಜಿಯ ಹೆಸರು ಅಶ್ವತ್ಥಮ್ಮ. ಇವರು ಕುಂದಾಪುರದ ಗಂಗೊಳ್ಳಿ ಊರಿನವರು. ಇವರು ಬೇರೆ ಬೇರೆ ದೇವಸ್ಥಾನಗಳಲ್ಲಿ ಭಕ್ತಾದಿಗಳಲ್ಲಿ ಹಣದ ನೆರವನ್ನು ಯಾಚಿಸಿ ಜೀವನ ನಡೆಸುತ್ತಾರೆ. 
 

Video Top Stories