
ಕಾಳಸರ್ಪ ದೋಷಕ್ಕೆ ಕಾಳಹಸ್ತಿ ಭೇಟಿಯೊಂದೇ ಪರಿಹಾರ! ಶ್ರೀಕ್ಷೇತ್ರದ ಮಹಿಮೆ ಅಪಾರ!
ಕಾಳಹಸ್ತಿಗೆ ಯಾರೆಲ್ಲ ಭೇಟಿ ನೀಡಬೇಕು, ಏಕಾಗಿ ಭೇಟಿ ನೀಡಬೇಕು, ಇಲ್ಲಿ ಯಾವ ಸೇವೆಗಳನ್ನು ಮಾಡಿಸುವುದರಿಂದ ಒಳಿತಾಗುವುದು ಮುಂತಾದ ವಿವರಗಳನ್ನು ಬ್ರಹ್ಮಾಂಡ ಗುರೂಜಿ ತಿಳಿಸಿದ್ದಾರೆ.
ಶನೈಶ್ಚರನ ಮೇಲಿರುವ ಭಯ ಬಹಳಷ್ಟು ಜನಕ್ಕೆ ರಾಹುಕೇತುಗಳ ಮೇಲಿಲ್ಲ. ಆದರೆ, ಇವು ಕೂಡಾ ಪಾಪ ಗ್ರಹಗಳೇ. ಸರ್ಪ ದೋಷವಿದ್ದರೆ ಅದು ರಾಹುಕೇತು ದೋಷವೇ. ಕಾಳಸರ್ಪ ದೋಷ ಹಾಗೂ ಕಾಳ ಸರ್ಪ ಯೋಗದ ನಡುವಿನ ವ್ಯತ್ಯಾಸವೇನು? ದೋಷಕ್ಕೆ ಪರಿಹಾರವೇನು? ಎಂಬುದನ್ನು ಬ್ರಹ್ಮಾಂಡ ಗುರುಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಪ್ರತಿ ಒಂದೂವರೆ ವರ್ಷಕ್ಕೆ ಕಾಳಸರ್ಪ ದೋಷಕ್ಕೆ ಪರಿಹಾರ ಮಾಡಲೇಬೇಕಾಗುತ್ತದೆ ಎನ್ನುತ್ತಾರೆ ಗುರೂಜಿ. ಇದೇಕೆ, ಇದರ ಹಿನ್ನೆಲೆಯೇನು?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೇಡರ ಕಣ್ಣಪ್ಪನ ಕತೆಗೂ ಕಾಳಹಸ್ತಿಗೂ ಸಂಬಂಧವೇನು? ಮುಗ್ಧತೆಗೆ ಒಲಿದ ಪರಮೇಶ್ವರನ ಕತೆಯೇನು? ಮಕ್ಕಳ ಚರ್ಮವ್ಯಾಧಿಗೆ, ಅವಕಾಶಗಳ ಅಡ್ಡಗಾಲಿಗೆ ಪರಿಹಾರಕ್ಕಾಗಿ ಕಾಳಹಸ್ತಿಗೆ ಭೇಟಿ ನೀಡಬೇಕು. ಇಲ್ಲಿ ಯಾವೆಲ್ಲ ಸೇವೆ ಮಾಡಿಸಬೇಕು, ಹೇಗೆ ಮಾಡಿಸಬೇಕು ಎಂಬ ವಿವರವನ್ನು ಬ್ರಹ್ಮಾಂಡ ಗುರೂಜಿ ತಿಳಿಸಿದ್ದಾರೆ.
ಈ ಎರಡೇ ಮಂತ್ರ ಸಾಕು ನಿಮಗೆ ನೀವು ರಾಜಯೋಗ ಸೃಷ್ಟಿ ಮಾಡ್ಕೊಳೋಕೆ, ಪ್ರತಿ ದಿನ ಹೇಳೋದು ಮರೀಬೇಡಿ!