Asianet Suvarna News Asianet Suvarna News

ಚಾಮುಂಡಿ ಬೆಟ್ಟದಲ್ಲಿರುವ ರುಂಡ ಭೈರವನ ದರ್ಶನ ಮಾಡಿದರೆ ಐಶ್ವರ್ಯ

ಚಾಮುಂಡಿ ಬೆಟ್ಟದಲ್ಲಿರುವ ರುಂಡ ಭೈರವನ ದರ್ಶನದಿಂದ ಆರ್ಥಿಕ ಕಷ್ಟಗಳೆಲ್ಲ ತೀರುತ್ತವೆ.. 

ರುಂಡದ ಮೇಲೆ ಕಾಲಿಟ್ಟಿರುವ ಭೈರವನನ್ನು ಚಾಮುಂಡಿ ಬೆಟ್ಟದಲ್ಲಿ ಕಾಣಬಹುದು. ಈ ರೀತಿ ರುಂಡ ಭೈರವ ಕರ್ನಾಟಕದಲ್ಲಿ 8 ದಿಕ್ಕಿನಲ್ಲಿದ್ದಾನೆ. ರುಂಡ ಭೈರವ ಚಾಮುಂಡೇಶ್ವರಿಗೆ ರಕ್ಷಕ. ದೇವೀಕೆರೆ ಪಕ್ಕದಲ್ಲಿ ರುಂಡದ ಮೇಲೆ ಲಿಂಗ ಪ್ರತಿಷ್ಠಾಪನೆಯಾಗಿರುವುದನ್ನು ನೋಡಬಹುದು. ಇಲ್ಲಿ ಕಾಳಭೈರವನ ಕಾಲು ತೊಳೆಯುತ್ತಾಳೆ ಗಂಗೆ. ಈ ರುಂಡ ಭೈರವನ ದರ್ಶನದಿಂದ ಐಶ್ವರ್ಯ ಪ್ರಾಪ್ತಿಯಾಗುವುದು. ಐಶ್ವರ್ಯ ಈಶ್ವರ ಈತ. ಆರ್ಥಿಕ ಕಷ್ಟವಿದ್ದರೆ ದೇವಿಕೆರೆಯಿಂದ ನೀರು ತೆಗೆದುಕೊಂಡು ಹೋಗಿ ರುಂಡ ಭೈರವನಿಗೆ ಅರ್ಪಿಸಿ. ಆ ನೀರು ಭದ್ರಕಾಳಿ ಬನದಲ್ಲಿ ಹರಿದು ಹೋಗುತ್ತದೆ. ಅಲ್ಲಿ ಶಾಖಿನಿ ಡಾಖಿನಿ ಕಲ್ಯಾಣಿಗಳಿವೆ. ಅಲ್ಲಿಗೆ ನಮಸ್ಕಾರ ಮಾಡಿ ಬನ್ನಿ.. ಈ ಬಗ್ಗೆ ಬ್ರಹ್ಮಾಂಡ ಗುರೂಜಿಯಿಂದ ವಿವರ ತಿಳಿಯೋಣ ಬನ್ನಿ..