ಅವಳಿಗೆ ಸರ್ಕಾರಿ ಕೆಲಸ ಸಿಕ್ಕಿದ್ದೇ ತಪ್ಪಾಗಿಹೊಯ್ತು: ನಡು ರಸ್ತೆಯಲ್ಲೇ ಹೆಂಡತಿಗೆ ಮಚ್ಚಿನೇಟು!

ಮಕ್ಕಳಿಲ್ಲ ಅಂತಾ ಆ ದಂಪತಿ ಮರುಕಪಟ್ಟಿತ್ತು. ದೇವರಿಗೆ ಹರಿಕೆ ಕಟ್ಕೊಂಡ ನಂತ್ರ ಆ ದಂಪತಿಗೆ ಮಗ ಹುಟ್ಟಿದ್ದ. ಬೆಳೆದ ಮಗನಿಗೆ ಸಂಬಂಧದಲ್ಲೇ ಕನ್ಯಾ ನೋಡಿ ಮದ್ವೆ ಮಾಡಿದ್ರು. ಆದ್ರೆ, ಕುಲಪತ್ರ. ಸಂಸಾರ ಮಾಡೋ ಬದ್ಲು ಜೀವನ ಬೆಳಗಿಸಲು ಬಂದಿದ್ದ ಪತ್ನಿಯ ಪ್ರಾಣ ಪಕ್ಷಿ ಹಾರಿಸೋದಲ್ಲಿ ಮುಂದಾಗಿದ್ದ.

Share this Video
  • FB
  • Linkdin
  • Whatsapp

ಮಕ್ಕಳಿಲ್ಲ ಅಂತಾ ಆ ದಂಪತಿ ಮರುಕಪಟ್ಟಿತ್ತು. ದೇವರಿಗೆ ಹರಿಕೆ ಕಟ್ಕೊಂಡ ನಂತ್ರ ಆ ದಂಪತಿಗೆ ಮಗ ಹುಟ್ಟಿದ್ದ. ಬೆಳೆದ ಮಗನಿಗೆ ಸಂಬಂಧದಲ್ಲೇ ಕನ್ಯಾ ನೋಡಿ ಮದ್ವೆ ಮಾಡಿದ್ರು. ಆದ್ರೆ, ಕುಲಪತ್ರ. ಸಂಸಾರ ಮಾಡೋ ಬದ್ಲು ಜೀವನ ಬೆಳಗಿಸಲು ಬಂದಿದ್ದ ಪತ್ನಿಯ ಪ್ರಾಣ ಪಕ್ಷಿ ಹಾರಿಸೋದಲ್ಲಿ ಮುಂದಾಗಿದ್ದ. ಹೆಂಡತಿಯ ಮೇಲೆ ಮೃಗೀಯವಾಗಿ ಎರಗಿ ಮಚ್ಚು ಬೀಸಿದ್ದಾನೆ. ಅಷ್ಟಕ್ಕೂ ತಾಳಿ ಕಟ್ಟಿದ ಹೆಂಡತಿ ಮೇಲೆಯೇ ಆ ಕಿರಾತಕ ಮಚ್ಚು ಬೀಸಿದ್ದೇಕೆ? ಅಂಥ ತಪ್ಪು ಆ ಹೆಣ್ಣು ಮಗಳು ಮಾಡಿದ್ದೇನು? ಒಬ್ಬ ದಾರಿ ತಪ್ಪಿದ ಮಗನ ಕಥೆಯೇ ಇವತ್ತಿನ ಎಫ್​​.ಐ.ಆರ್​​. ಉಂಡಾಡಿಗುಂಡನಂತೆ ಬೆಳೆದಿದ್ದ ಬೇಲೂರಪ್ಪ ಮದ್ವೆಯಾದ್ಮೇಲಾದ್ರೂ ಸುಧಾರಿಸ್ತಾನೆ ಅಂತಾ ಕುಟುಂಬ ಅನ್ಕೊಂಡಿತ್ತು. ಆದ್ರೆ, ಆದ್ರೆ ಬೇಲೂರಪ್ಪ ಅದಾಗ್ಲೆ ದಾರಿ ಬಿಟ್ಟಾಗಿತ್ತು. ಇನ್ನೂ ತಾನೇ ಗೀತಾಳನ್ನ ಓದಿಸಿ ಒಳ್ಳೆ ಕೆಲಸ ಕೊಡಸಿದವನು, 

Add Asianetnews Kannada as a Preferred SourcegooglePreferred

ತಾನೇ ಮಚ್ಚಿನೇಟು ಹಾಕಿದ್ದೇಕೆ? ಅಷ್ಟಕ್ಕೂ ಆವತ್ತು ಘಟನೆ ನಡೆದ ದಿನ ಏನೇನಾಯ್ತು? ಬೇಲೂರಪ್ಪ 12ನೇ ಕ್ಲಾಸ್​​​ ಪಾಸ್ ಆಗಿದ್ರೆ, ಹೆಂಡತಿ ಚನ್ನಾಗಿ ಓದಿ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ನಿಂದ ಪೋಸ್ಟ್ ವುಮೆನ್ ಆಗಿ ಭಡ್ತಿ ಪಡೆದಿದ್ಲು. ಐದು ಸಾವಿರ ರೂಪಾಯಿ ವಿದ್ದ ಸ್ಯಾಲರಿ 40 ಸಾವಿರ ರೂಪಾಯಿಯಾಗಿತ್ತು. ಹೀಗೆ ಹೆಂಡತಿಯ ಬೆಳವಣಿಗೆ ಬೇಲೂರಪ್ಪನ ತೆಲೆ ತಿರುಗಿಸಿತ್ತು. ಅಲ್ದೆ, ಹಣದ ಮೇಲಿನ ವ್ಯಾಮೋಹವೂ ದಿನದಿಂದ ದಿನಕ್ಕೆ ಬೆಳೆದಿತ್ತು. ಇವೇ ಕಾರಣಗಳು ಬೇಲೂರಪ್ಪ ಹೆಂಡತಿಯ ಮೇಲೆ ದೌರ್ಜನ್ಯ ಮಾಡೋವರೆಗೂ ಕೊಂಡ್ಯೊಯ್ದಿತ್ತು ಆ ತಾಯಿಗೆ ಏನಾದ್ರೂ ಆಗಿದ್ರೆ ಮಕ್ಕಳ ಭವಿಷ್ಯ ಏನಾಗ್ತಿತ್ತು. ಅಸಹ್ಯದ ಕೃತ್ಯ ಮಾಡಿ ಹೆತ್ತ ತಂದೆ ತಾಯಿಯಿಂದ್ಲೂ ಬೇಲೂರಪ್ಪ ದೂರವಾದಂತಾಗಿದೆ. ತಂದೆ-ತಾಯಿಯೇ ಮಗನಿಗೆ ಗಲ್ಲು ಶಿಕ್ಷೆಕೊಡಿ ಅಂತಿದ್ದಾರೆ. ಬೇಲೂರಪ್ಪ ಮಾಡಿದ ಪಾಪಕ್ಕೆ ಶಿಕ್ಷೆಯಾಗ್ಲಿ. ಜೊತೆಗೆ ಈಗ್ಲಾದ್ರೂ ಬೇಲೂರಪ್ಪನಿಗೆ ಬುದ್ಧಿ ಕಲೆಯುವಂತಾಗ್ಲಿ.

Related Video