ದೇವರ ಪೂಜೆ ಮಾಡ್ಕೊಂಡು ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿಗೆ ತಾನು ಹೇಳಿದ ಜ್ಯೋತಿಷ್ಯವೇ ಜೀವಕ್ಕೆ ಮುಳುವಾಯ್ತು!

ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಜ್ಯೋತಿಷ್ಯ ಹೇಳಿಕೊಂಡು ಜೀವನ ಮಾಡುತ್ತಿದ್ದ ಪೂಜಾರಿಗೆ ತಾನು ಹೇಳಿದ್ದ ಜ್ಯೋತಿಷ್ಯವೇ ತನ್ನ ಜೀವಕ್ಕೆ ಮುಳುವಾಯ್ತು! 

Share this Video
  • FB
  • Linkdin
  • Whatsapp

ಆತ ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿ.. ಭೂಮಿಯಲ್ಲಿ ಸಿಕ್ಕ ದಕ್ಷಿಣ ವೈಷ್ಣೋದೇವಿಯ ವಿಗ್ರಹಕ್ಕೆ ದೇವಸ್ಥಾನ ಕಟ್ಟಿ ಬಂದ ಭಕ್ತಾದಿಗಳಿಗೆ ಭವಿಷ್ಯ ಹೇಳುತ್ತಿದ್ದ.. ಇನ್ನೂ ಮಾಠ ಮಂತ್ರ ಕೂಡ ಮಾಡ್ತಿದ್ದ ಅನ್ನೋ ಮಾತಿದೆ.. ಇಂಥಹ ಪೂಜಾರಿ ಆವತ್ತು ದೇವಸ್ಥಾನಕ್ಕೆ ಬೀಗ ಹಾಕಿ ಮನೆಗೆ ಹೋಗುವಾಗ್ಲೇ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ.. ಕಾರ್​​ ಹತ್ತುವಾಗ್ಲೇ ಎಂಟ್ರಿ ಕೊಟ್ಟ ಹಂತಕ ಪೂಜಾರಿಗೆ ಚಾಕು ಹಾಕಿ ಎಸ್ಕೇಪ್​​​ ಆಗಿಬಿಟ್ಟಿದ್ದ.. ಇನ್ನೂ ತನಿಖೆ ನಡೆಸಿದ ಪೊಲೀಸರು 24 ಗಂಟೆಗಳಲ್ಲೇ ಹಂತಕನನ್ನ ಸೆರೆಹಿಡಿದಿದ್ರು.. ಆಗಲೇ ನೋಡಿ ಗೊತ್ತಾಗಿದ್ದು, ಹಂತಕ ಪೂಜಾರಿಯನ್ನ ಮುಗಿಸಲು 7 ವರ್ಷ ಕಾದಿದ್ದ ಅಂತ.. ಅಷ್ಟಕ್ಕೂ ಆ ಹಂತಕ ಯಾರು..? ಏನವನ 7 ವರ್ಷದ ದ್ವೇಷದ ಕಥೆ..? ಪೂಜಾರಿಯೊಬ್ಬನ ಬರ್ಬರ ಕೊಲೆಯ ರೋಚಕ ಇನ್ವೆಸ್ಟಿಗೇಷನ್​ ಕಥೆಯಾಗಿದೆ.

Add Asianetnews Kannada as a Preferred SourcegooglePreferred

ಈತ ಯಾರ ವಿರೋಧವನ್ನೂ ಕಟ್ಟಿಕೊಂಡಿರಲಿಲ್ಲ. ದ್ವೇಷ ಅಂತೂ ಇಲ್ವೇ ಇಲ್ಲ. ಸದಾ ತಾಯಿಯ ಸೇವೆ ಮಾಡಿಕೊಂಡಿದ್ದವನು ಆವತ್ತು ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ವೈಷ್ಣೋದೇವಿ ಪೂಜೆ ಮಾಡಿಕೊಂಡಿದ್ದ ಅಜ್ಜ ಜೊತೆ ಜೊತೆಗೆ ಬರೋ ಭಕ್ತರಿಗೆ ಜ್ಯೋತಿಷ್ಯವನ್ನೂ ಹೇಳ್ತಿದ್ದ.. ಈತ ಹೇಳಿದಂತೆ ಆಗುತ್ತೆ ಅನ್ನೋದನ್ನ ಹಲವರು ನಂಬಿದ್ದರು.. ಆದ್ರೆ ಈತನಿಂದ ನನ್ನ ಕುಟುಂಬವೇ ಸರ್ವನಾಶವಾಗಿತ್ತು ಅನ್ನೋದನ್ನ ಅವನೊಬ್ಬ ನಂಬಿಬಿಟ್ಟಿದ್ದ.. ಈತನಿಗೆ ಆಗದವರು ಇದೇ ಅಜ್ಜನಿಂದ ಮಾಟ ಮಂತ್ರ ಮಾಡಿಸಿ ನನ್ನ ಕುಟುಂಬವನ್ನ ಸರ್ವನಾಶ ಮಾಡಿದ್ರು ಅಂತ ಕೋಪಕೊಂಡು ತನ್ನ ಈ ಸ್ತಿತಿಗೆ ಕಾರಣವಾದ ಅಜ್ಜನನ್ನ ಮುಗಿಸಿಬಿಡಬೇಕು ಅಂತ ನಿರ್ಧರಿಸಿದ್ದನು..

ಎರಡುವರೆ ವರ್ಷದ ಹಿಂದೆ ಮನೆಗೇ ನುಗ್ಗಿ ಅಜ್ಜನಿಗೆ ಚಾಕು ಹಾಕಿದ್ದ. ಆದ್ರೆ ಆವತ್ತು ಬದುಕಿದ್ದ ದೇವೇಂದ್ರಪ್ಪ ಎರಡನೇ ಬಾರಿಯ ಪ್ರಯತ್ನದಲ್ಲಿ ಸತ್ತೇ ಹೋಗಿದ್ದಾನೆ. ಸದ್ಯ ಪೊಲೀಸರು ಈತನನ್ನ ಅರೆಸ್ಟ್​​ ಮಾಡಿ ವಿಚಾರಣೆ ಮಾಡ್ತಿದ್ದಾರೆ.. ಆದ್ರೆ ತನ್ನ ಪಾಡಿಗೆ ದೇವಿಯ ಪೂಜೆ ಮಾಡಿಕೊಂಡು, ನಂಬಿದವರಿಗೆ ಜ್ಯೋತಿಷ್ಯ ಹೇಳುತ್ತಿದ್ದ ದೇವೇಂದ್ರಪ್ಪ ಮಾಡದ ತಪ್ಪಿಗೆ ಹೆಣವಾಗಿದ್ದಾನೆ..

Related Video