Asianet Suvarna News Asianet Suvarna News

ಹೆಂಡತಿ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ: ಸಾವಿಗೂ ಮುನ್ನ ಸಹೋದರನಿಗೆ ಆಡಿಯೋ ಮೆಸೇಜ್..!

ಆತ ಹುಟ್ಟಿ ಬೆಳೆದಿದ್ದು ಹಳ್ಳಿಯಲ್ಲಾದ್ರು. ಕೆಲಸ ನಿರ್ವಹಿಸುತ್ತಿದಿದ್ದು ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಂಪನಿಯಲ್ಲಿ ಇಂಜಿನಿಯರ್ ಆಗಿ‌. ನೋಡೋರ ಕಣ್ಣಿಗೆ ಕೈ ತುಂಬ ಸಂಬಳ ಪಡೆಯುವ ಇಂಜಿನಿಯರ್ ಆಗಿದ್ರೆ. ತನ್ನ ಮಡದಿಗೆ ಮಾತ್ರ ವಿಲನ್ ಆಗಿ ಬಿಟ್ಟಿದ್ದ. ದಿನ ಕಳೆದಂತೆ ಪತ್ನಿ ಕೊಡ್ತಿದ್ದ ಕಿರುಕುಳಕ್ಕೆ ಇದೀಗ ಆತನೇ ಪ್ರಾಣಬಿಟ್ಟಿದ್ದಾನೆ.
 

ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗ. ತಿಂಗಳಾದ್ರೆ ಸಾಕು ಕೈತುಂಬ ಸಂಬಳ. ಐಷಾರಾಮಿ ಬದುಕು.. ಎಲ್ಲವೂ ಚೆನ್ನಾಗಿಯೇ ಇತ್ತು. ಸತಿಯಾಗಿ ಬಂದವಳು ಆತನ ಬದುಕಿಗೆ ಕಿಚ್ಚು ಹಚ್ಚಿದ್ಳು. ಕುಂದೂರು ಪಾಳ್ಯದ ನಿವಾಸಿ ಮಂಜುನಾಥ್ ಪತ್ನಿ(Wife) ಕಿರುಕುಳದಿಂದ ಜೀವವನ್ನೇ ಕಳೆದುಕೊಂಡಿದ್ದಾನೆ. ಸಾಯುವ ಮೊದಲು ಆಡಿಯೋ ರೆಕಾರ್ಡ್‌(Audio Record) ಮಾಡಿದ್ದಾನೆ. ನನಗೆ ಬದುಕಲು ಆಗ್ತಿಲ್ಲ. ನನ್ನ ಹೆಂಡತಿ ಪ್ರತಿನಿತ್ಯವೂ ಚುಚ್ಚಿಚುಚ್ಚಿ ಮಾತಾಡ್ತಾಳೆ. ನಾನು ಸಾಯ್ತಿದ್ದೀನಿ ಎಲ್ಲರೂ ಕ್ಷಮಿಸಿ ಬಿಡಿ. ನನ್ನ ಮಗಳನ್ನ ಚೆನ್ನಾಗಿ ನೋಡಿಕೊಳ್ಳಿ ಅಂತ ತನ್ನ ಸಹೋದರನಿಗೆ ಆಡಿಯೋ ಮೆಸೆಜ್ ಕಳುಹಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ. ಘಟನೆ ನಡೆದಿರೋದು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯಿರುವ ಕುಂದೂರು ಪಾಳ್ಯದಲ್ಲಿ. ಕುಂದೂರು ಪಾಳ್ಯದ ನಿವಾಸಿ ಮಂಜುನಾಥ್ 10 ವರ್ಷದ ಹಿಂದೆ ತುರುವೇಕೆರೆ ಮೂಲದ ಯುವತಿಯನ್ನು ಮದುವೆಯಾಗಿದ್ದ. ದಂಪತಿಗೆ ಹೆಣ್ಣು ಮಗು ಕೂಡ ಇದೆ.. ಆದ್ರೆ ಏನಾಯ್ತೋ ಗೊತ್ತಿಲ್ಲ.. ಕೆಲ ವರ್ಷಗಳಿಂದ ಗಂಡ ಹೆಂಡತಿ ನಡುವೆ ಗಲಾಟೆ ಶುರುವಾಗಿತ್ತಂತೆ. ಹಲವು ಬಾರಿ ಸಂಬಂಧಿಕರು ರಾಜಿ ಪಂಚಾಯ್ತಿ ಮಾಡಿಸಿದ್ರಂತೆ. ಇಷ್ಟಾದ್ರೂ ಪರಿಸ್ಥಿತಿ ಸರಿಹೋಗಿರಲಿಲ್ಲ. ಈಗ ಮನನೊಂದ ಮಂಜುನಾಥ್ ಇಹಲೋಕವನ್ನೇ ತ್ಯಜಿಸಿದ್ದಾನೆ. ಸದ್ಯ ಮಂಜುನಾಥ್ ಪೋಷಕರು ಕಿಬ್ಬನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ವಸೂಲಿಗಿಳಿದ ಬಸ್‌ಗಳ ಮೇಲೆ ಅಧಿಕಾರಿಗಳ ರೇಡ್..60ಕ್ಕೂ ಹೆಚ್ಚು ಕೇಸ್ ದಾಖಲು