08:56 AM (IST) Sep 18

Karnataka News Live SSLC ವಿದ್ಯಾರ್ಥಿಗಳೇ ಗಮನಿಸಿ! ಈ ಬಾರಿ ಪ್ರಿಪರೇಟರಿ ಮಾದರಿಯಲ್ಲೇ ಎಸ್‌ಎ-1 ಪರೀಕ್ಷೆ, ಏನಿದು ಹೊಸ ಬದಲಾವಣೆ?

SSLC Exam Update: ಎಸ್‌ಎಸ್‌ಎಲ್‌ಸಿ(SSCL) ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ರಾಜ್ಯಮಟ್ಟದ 1ನೇ ಸಂಕಲನಾತ್ಮಕ ಮೌಲ್ಯಮಾಪನವನ್ನು (ಎಸ್‌ಎ-1) ಸೆ.23 ರಿಂದ 30 ರವರೆಗೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.

Read Full Story
08:55 AM (IST) Sep 18

Karnataka News Live ಕರಾವಳಿ, ಮಲೆನಾಡು ಅಭಿವೃದ್ಧಿಗೆ ಸರ್ಕಾರದ ಹೊಸ ಪ್ಲಾನ್, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಎಂ ಡಿಕೆಶಿ ಹೇಳಿಕೆ

ಕರಾವಳಿ ಮತ್ತು ಮಲೆನಾಡು ಭಾಗದ ಮಾನವ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿಯ ಹೊಸ ರೂಪ ನೀಡಲು ಸರ್ಕಾರ ಮುಂದಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಬೇಡಿಕೆಗಳು ಹಾಗೂ ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story
08:45 AM (IST) Sep 18

Karnataka News Live ಧರ್ಮಸ್ಥಳಕ್ಕೆ ರೈಲು - ಮಂಗಳೂರು-ಉಜಿರೆ-ಧರ್ಮಸ್ಥಳ ಮೂಲಕ ಸುಬ್ರಹ್ಮಣ್ಯಕ್ಕೆ ಹೊಸ ರೈಲು ಮಾರ್ಗಕ್ಕೆ ಬೇಡಿಕೆ!

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ರೈಲ್ವೆ ಜಾಲವನ್ನು ವಿಸ್ತರಿಸಬೇಕೆಂಬ ಕೂಗು ಪ್ರವಾಸಿಗರು ಹಾಗೂ ಸ್ಥಳೀಯರಿಂದ ಕೇಳಿಬರುತ್ತಿದೆ. ಮಂಗಳೂರು-ಉಜಿರೆ-ಧರ್ಮಸ್ಥಳ ಮೂಲಕ ಸುಬ್ರಹ್ಮಣ್ಯಕ್ಕೆ ಹೊಸ ರೈಲು ಮಾರ್ಗ ನಿರ್ಮಾಣವಾದರೆ ಭಕ್ತರಿಗೆ, ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಅಪಾರ ಅನುಕೂಲವಾಗಲಿದೆ.

Read Full Story
08:29 AM (IST) Sep 18

Karnataka News Live Bengaluru Traffic Jam - 5 ಕಿಮೀಗೆ ಎರಡು ಗಂಟೆ ಪ್ರಯಾಣ! ಈ ಏರಿಯಾ ಟ್ರಾಫಿಕ್ ಕಂಡು IFS ಅಧಿಕಾರಿ ಶಾಕ್

ಬೆಂಗಳೂರಿನ ವೈಟ್‌ಫೀಲ್ಡ್, ಗುಂಜೂರು ಮತ್ತು ವರ್ತೂರು ಭಾಗಗಳಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗಿದ್ದು, ಶಾಲಾ ಮಕ್ಕಳು ಕೇವಲ ನಾಲ್ಕೈದು ಕಿಲೋಮೀಟರ್ ದೂರದ ಶಾಲೆ ತಲುಪಲು ಎರಡು ಗಂಟೆಗಳ ಕಾಲ ರಸ್ತೆಯಲ್ಲೇ ಕಳೆಯುವಂತಾಗಿದೆ. ತುರ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Read Full Story
08:29 AM (IST) Sep 18

Karnataka News Live ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಡಿಸೆಂಬರ್‌ಗೆ ಪೂರ್ಣ, ₹485 ಕೋಟಿ ವೆಚ್ಚದಲ್ಲಿ ಮರು ಅಭಿವೃದ್ಧಿ - ಸಚಿವ ಸೋಮಣ್ಣ

ಕೇಂದ್ರ ಸಚಿವ ವಿ.ಸೋಮಣ್ಣ ಅವರು ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲು ನಿಲ್ದಾಣಗಳ ಮರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ನಡೆದ 'ಸೇವಾ ದಿವಸ' ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.
Read Full Story
08:08 AM (IST) Sep 18

Karnataka News Live ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದ 9 ಯೋಜನೆಗಳೇನು? ಯಾರಿಗೆ ಲಾಭ?

ಕಲಬುರಗಿಯಲ್ಲಿ ನಡೆದ 79ನೇ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 9 ಅಂಶಗಳ ಯೋಜನೆಯನ್ನು ಘೋಷಿಸಿದ್ದಾರೆ. ಇದರಲ್ಲಿ ಎಕಾನಮಿ ಮಿಷನ್, ಐಟಿ ಪಾರ್ಕ್, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು 50,000 ನಿವೇಶನಗಳ ವಿತರಣೆ ಸೇರಿವೆ. ಜೊತೆಗೆ 1,917.13 ಕೋಟಿ ರೂ. ಮೊತ್ತದ 940 ಕಾಮಗಾರಿಗಳಿಗೆ ಚಾಲನೆ ನೀಡಿದರು.

Read Full Story
08:03 AM (IST) Sep 18

Karnataka News Live ಪ್ರಧಾನಿ ಮೋದಿ ಜನ್ಮದಿನದಂದು ದೀಪ ಹಚ್ಚಿದ ಕುರಿತು ಬಿಕೆ ಹೇಳಿದ ಆ ಮಾತಿಗೆ ಬಿಜೆಪಿ ಕಿಡಿ!

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಯುವ ಕಾಂಗ್ರೆಸ್ 'ವಿಶ್ವ ನಿರುದ್ಯೋಗ ದಿನ'ವನ್ನಾಗಿ ಆಚರಿಸಿ ಪ್ರತಿಭಟನೆ ನಡೆಸಿದೆ. ದೇಶದಲ್ಲಿ ಶೇ.72ರಷ್ಟು ಯುವಕರು ನಿರುದ್ಯೋಗದಿಂದ ಬಳಲುತ್ತಿದ್ದು, ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.

Read Full Story
07:27 AM (IST) Sep 18

Karnataka News Live ಕರಾವಳಿಯಲ್ಲಿ ಮೊದಲ ಕ್ಯಾಬಿನೆಟ್‌ - ದ.ಕ.ಬದಲು ಮಂಗಳೂರು, ತುಳುಗೆ 2ನೇ ರಾಜ್ಯ ಭಾಷೆ, ಟೂರಿಸಂಗಾಗಿ CRZ ನೀತಿ ಪರಿಷ್ಕಾರ?

ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಕರಾವಳಿ ಅಭಿವೃದ್ಧಿಗೆ 5000 ಕೋಟಿ ರೂ. ಪ್ಯಾಕೇಜ್ ಸೇರಿದಂತೆ ಹಲವು ಮಹತ್ವದ ಘೋಷಣೆಗಳ ನಿರೀಕ್ಷೆಯಿದೆ. ತುಳು ಭಾಷೆಗೆ 2ನೇ ರಾಜ್ಯ ಭಾಷೆ ಸ್ಥಾನಮಾನ, ಜಿಲ್ಲೆಯ ಹೆಸರು ಬದಲಾವಣೆ ಸಾಧ್ಯತೆಯಿದೆ. ಸಭೆಗೂ ಮುನ್ನ ಮುಖ್ಯಮಂತ್ರಿ ಹಾಗೂ ಸಚಿವರು ತೆರೆದ ಬಸ್‌ನಲ್ಲಿ ರೋಡ್ ಶೋ ನಡೆಸಲಿದ್ದಾರೆ.

Read Full Story