08:18 AM (IST) Jul 09

Karnataka News Live 9 July 2026ಮುಂಡಗೋಡನಿಂದ ಹುಬ್ಬಳ್ಳಿ, ಗದಗ, ಕೊಪ್ಪಳ ಮಾರ್ಗವಾಗಿ ರಾಯಚೂರು ನಗರಕ್ಕೆ ನೇರ ಬಸ್ ಆರಂಭ

Mundagoda-Raichur bus service begins: ಮುಂಡಗೋಡ ಘಟಕದಿಂದ ರಾಯಚೂರಿಗೆ ನೂತನ ಬಸ್ ಸೇವೆ ಆರಂಭಗೊಂಡಿದೆ. ಈ ಬಸ್ ಪ್ರತಿದಿನ ಮುಂಡಗೋಡದಿಂದ ಹೊರಟು, ಹುಬ್ಬಳ್ಳಿ, ಗದಗ, ಕೊಪ್ಪಳ, ಸಿಂಧನೂರು ಮಾರ್ಗವಾಗಿ ರಾಯಚೂರು ತಲುಪಲಿದೆ.

Read Full Story
08:01 AM (IST) Jul 09

Karnataka News Live 9 July 2026Mysuru - ಸರಗೂರು ಅಂಚೆ ಕಚೇರಿಯಲ್ಲಿ 1.3 ಕೋಟಿ ರೂಪಾಯಿ ಮಾಯ; CBIನಿಂದ ಇಬ್ಬರ ಬಂಧನ,

ಮೈಸೂರು ಜಿಲ್ಲೆಯ ಸರಗೂರು ಅಂಚೆ ಕಚೇರಿಯಲ್ಲಿ 44 ಉಳಿತಾಯ ಖಾತೆಗಳಿಂದ 1.3 ಕೋಟಿ ರು. ದುರ್ಬಳಕೆ ಮಾಡಿದ ಆರೋಪದ ಮೇಲೆ ಸಿಬಿಐ ಇಬ್ಬರು ನೌಕರರನ್ನು ಬಂಧಿಸಿದೆ. ಆರೋಪಿಗಳು ಗ್ರಾಹಕರ ಲಾಗಿನ್ ವಿವರಗಳನ್ನು ಬಳಸಿ ಹಣವನ್ನು ತಮ್ಮ ಮತ್ತು ಸಂಬಂಧಿಕರ ಖಾತೆಗಳಿಗೆ ವರ್ಗಾಯಿಸಿ ವಂಚನೆ ಎಸಗಿದ್ದಾರೆ. ಈ ಪ್ರಕರಣದ ಕುರಿತು ಸಿಬಿಐ ಹೆಚ್ಚಿನ ತನಿಖೆ ನಡೆಸುತ್ತಿದೆ.
Read Full Story
07:48 AM (IST) Jul 09

Karnataka News Live 9 July 2026Bengaluru - 2ನೇ ವಿಮಾನ ನಿಲ್ದಾಣ ಎಲ್ಲಿ? ಕನಕಪುರ, ನೆಲಮಂಗಲ ರಸ್ತೆಯ ಈ ಗ್ರಾಮಗಳಿ ಶಾರ್ಟ್‌ಲಿಸ್ಟ್‌

ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸಭೆ ನಡೆದಿದೆ. ಕನಕಪುರ ರಸ್ತೆ ಮತ್ತು ನೆಲಮಂಗಲ ಬಳಿ ಗುರುತಿಸಲಾದ ಸ್ಥಳಗಳ ಪೈಕಿ, ಕಡಿಮೆ ಭೂಸ್ವಾಧೀನ ಮತ್ತು ಗ್ರಾಮಗಳ ಸ್ಥಳಾಂತರವಿರುವ ಜಾಗವನ್ನು ಅಂತಿಮಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ತಾಂತ್ರಿಕ ಕಾರ್ಯಸಾಧ್ಯತಾ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
Read Full Story
07:33 AM (IST) Jul 09

Karnataka News Live 9 July 2026NH 169 - ತನಿಕೋಡ್‌ನಿಂದ SK ಬಾರ್ಡರ್‌ವರೆಗೆ ಭಾರೀ ವಾಹನಗಳಿಗೆ ನಿಷೇಧ; ಪರ್ಯಾಯ ಮಾರ್ಗ ಹೀಗಿದೆ

ರಾಷ್ಟ್ರೀಯ ಹೆದ್ದಾರಿ 169ರಲ್ಲಿನ ಕಿರು ಸೇತುವೆಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಕುಸಿಯುವ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ, 2026ರ ಸೆಪ್ಟೆಂಬರ್ 30ರವರೆಗೆ 12 ಟನ್‌ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ತನಿಕೋಡ್‌ನಿಂದ ಎಸ್.ಕೆ. ಬಾರ್ಡರ್‌ವರೆಗೆ ನಿಷೇಧಿಸಲಾಗಿದೆ. ಪ

Read Full Story
07:15 AM (IST) Jul 09

Karnataka News Live 9 July 2026ಗಂಗಾವತಿ - ಮನೆ ಮುಂದೆ ಮಂಡಲ, ಅರಿಶಿನ ಕುಂಕುಮ! ವಾಮಾಚಾರಕ್ಕೆ ಬೆಚ್ಚಿಬಿದ್ದ ಜನ!

ಕೊಪ್ಪಳ ಜಿಲ್ಲೆಯ ಗಂಗಾವತಿಯ ಮುಜಾವರ್ ಕ್ಯಾಂಪ್‌ನಲ್ಲಿ ಕಿಡಿಗೇಡಿಗಳು ಹಲವು ಮನೆಗಳ ಮುಂದೆ ಮಂಡಲ, ಅರಿಶಿನ-ಕುಂಕುಮ ಹಾಗೂ ನಿಂಬೆಹಣ್ಣು ಇಟ್ಟು ವಾಮಾಚಾರ ನಡೆಸಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.

Read Full Story