11:20 PM (IST) Aug 08

Karnataka News Live 8th August 2025 ಕಲಬುರಗಿಯ ಬಯಲು ಸೀಮೆಯಲ್ಲಿ ಚಿರತೆ ಪ್ರತ್ಯಕ್ಷ, ಹೊಲದಲ್ಲಿ ಕಟ್ಟಿದ್ದ ಎತ್ತಿನ ಮೇಲೆ ದಾಳಿ, ಗ್ರಾಮಸ್ಥರಲ್ಲಿ ಆತಂಕ

ಕಲಬುರಗಿ ಹೊರವಲಯದ ಪಾಣೆಗಾಂವ್ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡು ಎತ್ತಿನ ಮೇಲೆ ದಾಳಿ ಮಾಡಿದೆ. ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದೆ. ಚಿರತೆ ಭೀತಿಯಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
Read Full Story
10:57 PM (IST) Aug 08

Karnataka News Live 8th August 2025 ಹಾಸನ ನೂತನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೃಷ್ಣಭೈರೇಗೌಡ ನೇಮಕ

ಹಾಸನ ಜಿಲ್ಲೆಗೆ ಕೃಷ್ಣಭೈರೇಗೌಡರನ್ನು ನೂತನ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಕೆ.ಎನ್.ರಾಜಣ್ಣ ಅವರ ಬದಲಿಗೆ ಕೃಷ್ಣಭೈರೇಗೌಡರು ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಬದಲಾವಣೆಯನ್ನು ಜೆಡಿಎಸ್ ಶಾಸಕ ಹೆಚ್‌ಪಿ ಸ್ವರೂಪ್ ಸ್ವಾಗತಿಸಿದ್ದಾರೆ.
Read Full Story
10:56 PM (IST) Aug 08

Karnataka News Live 8th August 2025 ಸತತ 2 ಗಂಟೆ ಸುರಿದ ಭಾರಿ ಮಳೆಗೆ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೂ ನುಗ್ಗಿದ ನೀರು

ಸವದತ್ತಿ ತಾಲೂಕಿನಾದ್ಯಂತ ಭಾರೀ‌ ಮಳೆ ಹಿನ್ನೆಲೆ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೂ ಹಳ್ಳದ ನೀರು ನುಗ್ಗಿದೆ. ಗರ್ಭಗುಡಿಯಲ್ಲಿ 3 ಅಡಿಯಷ್ಟು ನೀರು ತುಂಬಿಕೊಂಡಿದೆ.

Read Full Story
10:08 PM (IST) Aug 08

Karnataka News Live 8th August 2025 ಸಿಲಿಂಡರ್ ಬದಲಿಸುವಾಗ ಸೋರಿಕೆಯಾದ ಅನಿಲ, ಹೊತ್ತಿಕೊಂಡ ಬೆಂಕಿಯಿಂದ ಮನೆ ಭಸ್ಮ

ಸಿಲಿಂಡರ್ ಬದಲಿಸಿ ಸ್ಟವ್ ಹಚ್ಚಿದ್ದಾರೆ. ದಿಢೀರ್ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ. ಕೆಲವೇ ಕ್ಷಣದಲ್ಲಿ ಬೆಂಕಿ ಮನೆಗೆ ಆವರಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ.

Read Full Story
09:33 PM (IST) Aug 08

Karnataka News Live 8th August 2025 ಕ್ರಿಕೆಟಿಗರು ತಮ್ಮ ಮಕ್ಕಳ ಜೊತೆ ಆಡುವಾಗ ಮಗನ ನೆನಪಾಯಿತು, ಭಾವುಕರಾದ ಶಿಖರ್ ಧವನ್

WCL ಟೂರ್ನಿ ಬಿಡುವಿನ ವೇಳೆ ಕ್ರಿಕೆಟಿಗರು ತಮ್ಮ ಮಕ್ಕಳ ಜೊತೆ ಆಟವಾಡುವಾಗ ನನ್ನ ಮಗನ ನೆನಪಾಯಿು. ಮಗ ನನ್ನ ಜೊತೆಗಿದ್ದರೆ ಆ ಖುಷಿಯೇ ಬೇರೆ ಇತ್ತು. ಆದರೆ..ಶಿಖರ್ ಧವನ್ ತನ್ನ ಮಗನ ನೆನೆದು ಭಾವುಕರಾಗಿದ್ದಾರೆ. ಮಗನ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ.

Read Full Story
09:21 PM (IST) Aug 08

Karnataka News Live 8th August 2025 ವಿದ್ಯಾರ್ಥಿಗೆ ಥಳಿಸಿದ ಪ್ರಕರಣ - ನಿನ್ನೆ ಕ್ಷಮೆಯಾಚಿಸಿದ್ದ ಶಿಕ್ಷಕಿ ಇಂದು ಅಮಾನತು!

ಕಾರವಾರದ ಮುಂಡಗೋಡ ತಾಲೂಕಿನ ಕಾಳಗನಕೊಪ್ಪ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ ಶಿಕ್ಷಕಿ ಭಾರತಿ ನಾಯ್ಕ್‌ರನ್ನ ಅಮಾನತು ಮಾಡಲಾಗಿದೆ. ಬರೆಯದಿರುವುದು ಮತ್ತು ಕಲಿತದ್ದನ್ನು ಮನನ ಮಾಡದಿರುವ ಕಾರಣಕ್ಕೆ ಶಿಕ್ಷಕಿ ವಿದ್ಯಾರ್ಥಿಯನ್ನು ಹೊಡೆದಿದ್ದರು.
Read Full Story
08:54 PM (IST) Aug 08

Karnataka News Live 8th August 2025 ಬೆಂಗಳೂರು-ಪುಣೆ ಕೇವಲ 5 ಗಂಟೆ ಪ್ರಯಾಣ, ಹೊಸ ಎಕ್ಸ್‌ಪ್ರೆಸ್ ವೇ ಘೋಷಿಸಿದ ನಿತಿನ್ ಗಡ್ಕರಿ

ಬೆಂಗಳೂರು ಪುಣೆ ರಸ್ತೆ ಸಂಚಾರ ಇನ್ನು ಕೇವಲ 5 ಗಂಟೆ ಮಾತ್ರ. ಕೇಂದ್ರ ಸಚಿವ ನಿತಿಕ್ ಗಡ್ಕರಿ ಹೊಸ ಎಕ್ಸ್‌ಪ್ರೆಸ್‌ವೇ ಘೋಷಿಸಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲಿ ಅತೀ ವೇಗದ ರಸ್ತೆ ದಾಖಲೆಗೆ ಭಾರತ ಸಜ್ಜಾಗಿದೆ.

Read Full Story
08:29 PM (IST) Aug 08

Karnataka News Live 8th August 2025 ಮಂಗಳೂರು, ಗೊಮಟೇಶ್ವರ, ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಸೆಂಟ್ರಲ್‌ ನಿಲ್ದಾಣಕ್ಕೆ ವಿಸ್ತರಣೆಗೆ ಮನವಿ

ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲುಗಳನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸುವಂತೆ ರೈಲ್ವೆ ಸಂಘಟನೆಗಳು ಒತ್ತಾಯಿಸಿವೆ. ಹಲವು ರೈಲುಗಳ ವಿಸ್ತರಣೆ, ಹೊಸ ರೈಲುಗಳ ಆರಂಭ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಬೇಡಿಕೆಗಳನ್ನು ಮನವಿಯಲ್ಲಿ ಸಲ್ಲಿಸಲಾಗಿದೆ.

Read Full Story
08:26 PM (IST) Aug 08

Karnataka News Live 8th August 2025 ಅವ್ರ ಕೆಲಸ ಅವ್ರಿಗೆ ಮಾಡಲು ಬಿಟ್ಟುಬಿಡಿ... ವಿಷ್ಣುವರ್ಧನ್​ ಸಮಾಧಿ ನೆಲಸಮಕ್ಕೆ ವಿಜಯ ರಾಘವೇಂದ್ರ ಹೇಳಿದ್ದೇನು?

ವಿಷ್ಣುವರ್ಧನ್​ ಸಮಾಧಿ ನೆಲಸಮದ ವಿಚಾರವಾಗಿ ಮಾತನಾಡಿರುವ ನಟ ವಿಜಯ ರಾಘವೇಂದ್ರ ಅವರು ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೇಗೆ? ಅವ್ರ ಕೆಲಸ ಅವ್ರಿಗೆ ಮಾಡಲು ಬಿಟ್ಟುಬಿಡಿ ಎಂದು ಹೇಳಿದ್ದೇಕೆ?

Read Full Story
08:26 PM (IST) Aug 08

Karnataka News Live 8th August 2025 ಧರ್ಮಸ್ಥಳ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ, ಎಸ್ಐಟಿಗೆ ಪೊಲೀಸ್ ಠಾಣೆ ಪವರ್ ನೀಡಿದ ಸರ್ಕಾರ

ಧರ್ಮಸ್ಥಳದಲ್ಲಿನ ಶವ ಹೂತಿಟ್ಟ ಪ್ರಕರಣದ ತನಿಖೆ ನಡುವೆ ಮಹತ್ವದ ಬೆಳವಣಿಗೆ ಆಗಿದೆ. ತನಿಖೆ ನಡೆಸುತ್ತಿರುವ ಎಸ್ಐಟಿಗೆ ಇದೀಗ ರಾಜ್ಯ ಸರ್ಕಾರ ಪೊಲೀಸ್ ಠಾಣೆ ಪವರ್ ನೀಡಿದೆ.

Read Full Story
08:12 PM (IST) Aug 08

Karnataka News Live 8th August 2025 ದೇಶದಲ್ಲೇ ಅತ್ಯಂತ ಸುರಕ್ಷಿತ ನಗರ ಪಟ್ಟ ಗಳಿಸಿದ ಮಂಗಳೂರು!

ಜಾಗತಿಕ ಡೇಟಾ ಸಂಸ್ಥೆ ನಂಬಿಯೋ ಬಿಡುಗಡೆ ಮಾಡಿದ ಸುರಕ್ಷತಾ ಸೂಚ್ಯಂಕದಲ್ಲಿ ಮಂಗಳೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಜಾಗತಿಕವಾಗಿ 49ನೇ ಸ್ಥಾನದೊಂದಿಗೆ, ಮಂಗಳೂರಿನ 74.2 ಸುರಕ್ಷತಾ ಸೂಚ್ಯಂಕವು 'ಬ್ಯಾಕ್ ಟು ಊರಿಗೆ' ಪ್ರೋತ್ಸಾಹಿಸುತ್ತಿದೆ.
Read Full Story
08:08 PM (IST) Aug 08

Karnataka News Live 8th August 2025 ಹರ್ಷೇಂದ್ರಗೆ ಹಿನ್ನಡೆ, ಧರ್ಮಸ್ಥಳ ಕುರಿತು ವರದಿ ಮಾಡದಂತೆ ಮಾಧ್ಯಮಗಳಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ!

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಕೊಲೆ ಪ್ರಕರಣದ ವರದಿಗೆ ನಿರ್ಬಂಧ ಹೇರಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ದೇವಾಲಯದ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್‌ ಅವರ ಅರ್ಜಿಯನ್ನು ತಿರಸ್ಕರಿಸಿದೆ.

Read Full Story
07:46 PM (IST) Aug 08

Karnataka News Live 8th August 2025 ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ, ಪ್ರವೇಶ ಶುಲ್ಕ ಯಾರಿಗೆ ಎಷ್ಟು?

ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನವರ 218ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ. ಚೆನ್ನಮ್ಮ ಮತ್ತು ರಾಯಣ್ಣನವರ ಶೌರ್ಯ-ತ್ಯಾಗಗಳ ಸ್ಮರಣೆ.
Read Full Story
07:32 PM (IST) Aug 08

Karnataka News Live 8th August 2025 ಲೈಂಗಿಕ ಸಮ್ಮತಿ ವಯಸ್ಸು ಇಳಿಕೆ ಕುರಿತು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದ್ದೇನು?

ಲೈಂಗಿಕ ಸಮ್ಮತಿ ವಯಸ್ಸನ್ನು 18 ರಿಂದ 16ಕ್ಕೆ ಇಳಿಸುವ ಕುರಿತು ಭಾರಿ ಚರ್ಚೆಯಾಗುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ತನ್ನ ಅಭಿಪ್ರಾಯ ಹೇಳಿದೆ. ಇಷ್ಟೇ ಅಲ್ಲ ಕೆಲ ಆತಂಕ ವ್ಯಕ್ತಪಡಿಸಿದೆ.

Read Full Story
07:17 PM (IST) Aug 08

Karnataka News Live 8th August 2025 ತುಮಕೂರಿನಲ್ಲಿ 200 ಅಡಿಕೆ ಗಿಡಗಳ ಕಡಿದ ಕಿಡಿಗೇಡಿಗಳು, ಮತ್ತೊಂದೆಡೆ ಕೆರೆ ಒಡೆದು ನೀರು ಪೋಲು

ತುಮಕೂರು ಜಿಲ್ಲೆಯಲ್ಲಿ ರೈತರೊಬ್ಬರ 200 ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ. ಚೆನ್ನತಿಮ್ಮನಪಾಳ್ಯ ಗ್ರಾಮದಲ್ಲಿ ಕೆರೆ ಏರಿ ಒಡೆದು ನೀರು ಪೋಲಾಗಿ ರೈತರಿಗೆ ಬೆಳೆ ಹಾನಿಯಾಗಿದೆ. ದುರಸ್ತಿ ಕಾಮಗಾರಿಯಲ್ಲಿನ ಲೋಪದೋಷಗಳಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Read Full Story
07:17 PM (IST) Aug 08

Karnataka News Live 8th August 2025 ಸ್ಟಾರ್‌ ನಟರೆಲ್ಲ ಬದುಕಿದ್ದೂ ಸತ್ತಂಗೆ, ವಿಷ್ಣು ಸರ್‌ ಬದುಕಿದ್ದಾಗಲೂ ನೆಮದ್ದಿ ಇಲ್ಲ, ಸತ್ತಾಗ್ಲೂ ನೆಮ್ಮದಿ ಇಲ್ಲ - ಅಭಿಮಾನಿಗಳ ದುಃಖ

ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮಗೊಳಿಸಿರುವುದಕ್ಕೆ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಬಾಲಣ್ಣ ಕುಟುಂಬದ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಸ್ಟಾರ್ ನಟರು ಈ ಬಗ್ಗೆ ಧ್ವನಿ ಎತ್ತಬೇಕೆಂದು ಒತ್ತಾಯಿಸಿದ್ದಾರೆ. ಸ್ಮಾರಕಕ್ಕೆ ಪುನಃ ಜಾಗ ನೀಡುವಂತೆ ಮನವಿ ಮಾಡಿದ್ದಾರೆ.
Read Full Story
06:52 PM (IST) Aug 08

Karnataka News Live 8th August 2025 ಉತ್ತರಾಖಂಡ ಮೇಘಸ್ಫೋಟ ದುರಂತ - 35 ವರ್ಷದ ಬಳಿಕ ಒಂದಾಗಿದ್ದ 24 ಸ್ನೇಹಿತರು ಗುಂಪು ನಾಪತ್ತೆ

ಉತ್ತರಾಖಂಡದಲ್ಲಿ ಭೀಕರ ಮೇಘಸ್ಫೋಟದಿಂದಾಗಿ ಮಹಾರಾಷ್ಟ್ರದ ಪ್ರವಾಸಿಗರ ತಂಡವೊಂದು ಸಿಲುಕಿಕೊಂಡಿದೆ. ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಈ ತಂಡದ ಸದಸ್ಯರ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
Read Full Story
06:27 PM (IST) Aug 08

Karnataka News Live 8th August 2025 ಮೇರುನಟ ವಿಷ್ಣುವರ್ಧನ್‌ ಸಮಾಧಿ ನೆಲಸಮ, ಬಾಲಣ್ಣ ಅವರ ಪುತ್ರಿ ಗೀತಾ ಬಾಲಿ ಹೇಳಿದ್ದೇನು?

ಡಾ. ವಿಷ್ಣುವರ್ಧನ್ ಅವರ ಸಮಾಧಿ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಗೀತಾ ಬಾಲಿ ಅವರು ತಮ್ಮ ಪಾತ್ರವಿಲ್ಲ ಎಂದು ಹೇಳಿದ್ದಾರೆ. ಆದರೆ, ವೀರಕಪುತ್ರ ಶ್ರೀನಿವಾಸ್ ಅವರು ಗೀತಾ ಬಾಲಿ ಅವರನ್ನೇ ದೂಷಿಸಿದ್ದಾರೆ. ಈ ವಿವಾದಕ್ಕೆ ಕಾರಣವೇನು?
Read Full Story
06:26 PM (IST) Aug 08

Karnataka News Live 8th August 2025 ಅಮೆರಿಕ ಅಧ್ಯಕ್ಷರ ತಿಂಗಳ ಸ್ಯಾಲರಿ ಎಷ್ಟು? ಖರ್ಚು ವೆಚ್ಚದ ರೂಪದಲ್ಲೂ ಸಿಗುತ್ತಿದೆ ಲಕ್ಷ ಲಕ್ಷ

ಅಮರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಸ್ಯಾಲರಿಯನ್ನು ವೈಟ್ ಹೌಸ್ ನವೀಕರಣಕ್ಕೆ ನೀಡಿದ್ದಾರೆ. ಹೀಗಾಗಿ ಅಮೆರಿಕ ಅಧ್ಯಕ್ಷರ ತಿಂಗಳ ವೇತನ ಚರ್ಚೆಯಾಗುತ್ತಿದೆ. ಎಷ್ಟಿದೆ ಅಮೆರಿಕ ಅಧ್ಯಕ್ಷರ ವೇತನ ಗೊತ್ತಾ?

Read Full Story
06:14 PM (IST) Aug 08

Karnataka News Live 8th August 2025 ಮತದಾರರ ಪಟ್ಟಿ ಹಗರಣ - ಅಗತ್ಯವಿದ್ದರೆ ವರುಣಾ, ಚಾಮರಾಜಪೇಟೆಯಲ್ಲೂ ತನಿಖೆಯಾಗಲಿ! ಡಿ.ಕೆ. ಶಿವಕುಮಾರ್

ರಾಜ್ಯದ ಮತದಾರರ ಪಟ್ಟಿ ಅಕ್ರಮಗಳ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ. ಚುನಾವಣಾ ಆಯೋಗವು ಅಗತ್ಯವಿದ್ದರೆ ವರುಣಾ ಮತ್ತು ಚಾಮರಾಜಪೇಟೆ ಕ್ಷೇತ್ರಗಳಲ್ಲಿಯೂ ತನಿಖೆ ನಡೆಸಲಿ ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ. ಚಿಲುಮೆ ಸಂಸ್ಥೆಯ ಮೂಲಕ ಬಿಜೆಪಿ ಅಕ್ರಮ ಎಸಗಿದೆ ಎಂದು ಆರೋಪಿಸಿದ್ದಾರೆ.
Read Full Story