11:54 PM (IST) Oct 03

Karnataka News Liveಹೃದಯ ಕಾಯಿಲೆ ತಪ್ಪಿಸಲು ನಿಮ್ಮ ಆಹಾರದಲ್ಲಿರಲಿ ಈ 4 ಮಸಾಲೆ ಪದಾರ್ಥಗಳು!

Natural Spices for a Healthy Heart Diet: ಸರಿಯಾದ ಆಹಾರ ಮತ್ತು ವ್ಯಾಯಾಮ ಇಲ್ಲದಿದ್ದಾಗ ಹೃದ್ರೋಗ ಉಂಟಾಗುತ್ತದೆ. ಅಡುಗೆಮನೆಯಲ್ಲಿ ಬಳಸುವ ಈ ಮಸಾಲೆ ಪದಾರ್ಥಗಳಿಂದ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು.

Read Full Story
11:34 PM (IST) Oct 03

Karnataka News Liveತುಮಕೂರು - ತಾಂತ್ರಿಕದೋಷದಿಂದ ಕಾಂತಾರ ಸಿನಿಮಾ ಶೋ ರದ್ದು, ರೊಚ್ಚಿಗೆದ್ದ ಪ್ರೇಕ್ಷಕರು!

Tumakuru INOX technical glitch: ತುಮಕೂರಿನ ಎಸ್ ಮಾಲ್ ಐನಾಕ್ಸ್‌ನಲ್ಲಿ 'ಕಾಂತಾರ' ಪ್ರದರ್ಶನದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ಪ್ರದರ್ಶನ ರದ್ದುಗೊಳಿಸಲು ಮುಂದಾದಾಗ ಪ್ರೇಕ್ಷಕರು ರೊಚ್ಚಿಗೆದ್ದರು. ಪ್ರೇಕ್ಷಕರ ಒತ್ತಾಯಕ್ಕೆ ಮಣಿದ ಸಿಬ್ಬಂದಿ, ಒಂದೂವರೆ ಗಂಟೆ ಬಳಿಕ ಸಿನಿಮಾ ಪ್ರದರ್ಶಿಸಿದರು.

Read Full Story
10:59 PM (IST) Oct 03

Karnataka News LiveBengaluru Rains - ಸಂಜೆ ಸುರಿದ ಮಳೆಗೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮಿನಿಫಾಲ್ಸ್!

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ವೀರಸಂದ್ರ ಬಳಿಯ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ಇದೇ ವೇಳೆ, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಿಂದ ನೀರು ಜಲಪಾತದಂತೆ ಧುಮ್ಮಿಕ್ಕುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story
10:57 PM (IST) Oct 03

Karnataka News LiveBBK 12 - ಜಾನ್ವಿ ರೀತಿಯಲ್ಲಿರೋ ಆಂಟಿಗಳಂದ್ರೆ ನನಗಿಷ್ಟ ಎಂದ ಅಭಿಷೇಕ್ ಫ್ಲರ್ಟ್

ಬಿಗ್‌ಬಾಸ್ ಮನೆಯಲ್ಲಿ ನಟ ಅಭಿಷೇಕ್ ಮತ್ತು ನಿರೂಪಕಿ ಜಾನ್ವಿ ನಡುವೆ ವಯಸ್ಸಿನ ಬಗ್ಗೆ ನಡೆದ ಸಂಭಾಷಣೆ ಗಮನ ಸೆಳೆದಿದೆ. ತಮಗಿಂತ 10 ವರ್ಷ ದೊಡ್ಡವರಾದ ಜಾನ್ವಿ ಜೊತೆ ಅಭಿಷೇಕ್ ಫ್ಲರ್ಟ್ ಮಾಡಿದ್ದು, ಇದೇ ವೇಳೆ ಜಾನ್ವಿ ತಮ್ಮ ವಿಚ್ಛೇದನ ಮತ್ತು ಮಾಜಿ ಪತಿಯ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ.
Read Full Story
10:30 PM (IST) Oct 03

Karnataka News Liveಶಿವಮೊಗ್ಗ - ಜಾತಿ ಗಣತಿ ಹೆಸರಲ್ಲಿ ಒಂಟಿ ಮಹಿಳೆ ಮೇಲೆ ದರೋಡೆ ಯತ್ನ - ಖತರ್ನಾಕ್ ದಂಪತಿ ಅರೆಸ್ಟ್

Caste survey crime: ಶಿವಮೊಗ್ಗದ ಆಜಾದ್ ನಗರದಲ್ಲಿ, ಜಾತಿ ಸಮೀಕ್ಷೆಯ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ಬಂದ ದಂಪತಿಗಳು ದರೋಡೆಗೆ ಯತ್ನಿಸಿದ್ದಾರೆ. ಸ್ಥಳೀಯರಿಂದ ಹಿಡಿದು ಪೊಲೀಸರಿಗೆ ಒಪ್ಪಿಸಲ್ಪಟ್ಟ ಆರೋಪಿಗಳು, ಸಂತ್ರಸ್ತೆಯ ಸಂಬಂಧಿಕರೇ ಆಗಿದ್ದು, ಅವರ ಬ್ಯಾಗ್‌ನಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ.

Read Full Story
09:57 PM (IST) Oct 03

Karnataka News Liveಮಹಾರಾಷ್ಟ್ರದ ಸೀರೋಡಾ ಸಮುದ್ರದಲ್ಲಿ ಘನಘೋರ ದುರಂತ - ದಸರಾ ರಜೆ ಕಳೆಯಲು ಹೋಗಿದ್ದ ಬೆಳಗಾವಿಯ ಒಂದೇ ಕುಟುಂಬದ ಮೂವರು ಜಲಸಮಾಧಿ, ನಾಲ್ವರು ಕಣ್ಮರೆ!

Siroda beach Maharashtra tragedy :ದಸರಾ ರಜೆ ಕಳೆಯಲು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೀರೋಡಾ ಸಮುದ್ರ ತೀರಕ್ಕೆ ತೆರಳಿದ್ದ ಬೆಳಗಾವಿಯ ಒಂದೇ ಕುಟುಂಬದ ಮೂವರು ಜಲಸಮಾಧಿಯಾಗಿದ್ದಾರೆ. ನಾಲ್ವರು ಕಣ್ಮರೆಯಾಗಿದ್ದು, ಒಬ್ಬ ಮಹಿಳೆಯನ್ನು ರಕ್ಷಿಸಲಾಗಿದೆ. ನಾಪತ್ತೆಯಾದವರ ಶೋಧಕಾರ್ಯ ಮುಂದುವರೆದಿದೆ.

Read Full Story
09:44 PM (IST) Oct 03

Karnataka News LiveKarna Serial ಮದ್ವೆ ವಿಡಿಯೋ ಶೇರ್​ ಮಾಡಿ ಬಿಗ್​ ಅಪ್​ಡೇಟ್​ ಕೊಟ್ಟ ನಮ್ರತಾ ಗೌಡ- ಫ್ಯಾನ್ಸ್ ಬೇಸರ

ಕರ್ಣ ಸೀರಿಯಲ್‌ನಲ್ಲಿ ನಿತ್ಯಾ ಪಾತ್ರಕ್ಕೆ ವೀಕ್ಷಕರಿಂದ ದ್ವೇಷ ವ್ಯಕ್ತವಾಗುತ್ತಿರುವ ಬಗ್ಗೆ ನಟಿ ನಮ್ರತಾ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ನಿತ್ಯಾಳ ಮದುವೆಯ ಸಂಚಿಕೆಯಲ್ಲಿ ಆಕೆ ಗರ್ಭಿಣಿ ಎನ್ನುವ ಸತ್ಯ ಕರ್ಣನಿಗೆ ತಿಳಿಯುವುದರೊಂದಿಗೆ ಕಥೆಯು ರೋಚಕ ತಿರುವು ಪಡೆಯಲಿದೆ.
Read Full Story
09:25 PM (IST) Oct 03

Karnataka News Liveಮನೆ-ಮನೆ ಜಾತಿ ಗಣತಿಗೆ ಹೋದ ಸರ್ಕಾರಿ ಶಾಲೆಯ ಟೀಚರ್ ದಾರಿ ಮಧ್ಯದಲ್ಲಿಯೇ ಸಾವು!

ಬಾಗಲಕೋಟೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕಾರ್ಯವನ್ನು ಮುಗಿಸಿ ಮಗನೊಂದಿಗೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದ ಶಿಕ್ಷಕಿ ದಾನಮ್ಮ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಘಟನೆ ಸರ್ಕಾರಿ ನೌಕರರಲ್ಲಿ ಆತಂಕ ಸೃಷ್ಟಿಸಿದೆ.

Read Full Story
09:02 PM (IST) Oct 03

Karnataka News Liveಕಾಂತಾರ ಚಾಪ್ಟರ್-1 ಬಗ್ಗೆಯೂ ತುಟಿಬಿಚ್ಚಿದ ಕರವೇ ನಾರಾಯಣಗೌಡ; ಪ್ರತಿಕ್ರಿಯೆ ನೀಡಿದ ರಿಷಬ್ ಶೆಟ್ಟಿ!

ಕಾಂತಾರ ಚಾಪ್ಟರ್-1 ಸಿನಿಮಾ ವಿಶ್ವದ 30 ದೇಶಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಈ ಬಗ್ಗೆ ದೇಶ-ವಿದೇಶಗಳಿಂದ ಮೆಚ್ಚುಗೆ ಮಹಾಪೂರ ಬರುತ್ತಿವೆ. ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ನಟ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

Read Full Story
08:49 PM (IST) Oct 03

Karnataka News LiveHiriyur road accident - ಚಿತ್ರದುರ್ಗ ಬಳಿ ಕಾರು ಪಲ್ಟಿ, ಯಾದಗಿರಿ ಮೂಲದ ಮಗು ಸೇರಿ ಮೂವರು ದಾರುಣ ಸಾವು!

Hiriyur road accident: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಕಾರು ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಾದಗಿರಿ ಮೂಲದವರೆಂದು ಗುರುತಿಸಲಾದ ಮೃತರ ದುರ್ಘಟನೆಗೆ ಚಾಲಕನ ನಿಯಂತ್ರಣ ತಪ್ಪಿದ್ದೇ ಕಾರಣ ಎಂದು ಹೇಳಲಾಗಿದೆ. ಕಳವಳ ಮೂಡಿಸಿದೆ.

Read Full Story
08:35 PM (IST) Oct 03

Karnataka News Liveಕಾಂತಾರ-1 ಸಿನಿಮಾ ನೋಡೋಕೆ ಇಡೀ ಥಿಯೇಟರ್ ಟಿಕೆಟ್ ಖರೀದಿಸಿದ ಪ್ರತಾಪ್ ಸಿಂಹ; ಕಾರ್ಯಕರ್ತರಿಗೆ ಆಹ್ವಾನ!

ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ, ತಮ್ಮ ಪಕ್ಷದ ಕಾರ್ಯಕರ್ತರಿಗಾಗಿ ಮೈಸೂರಿನ ಡಿಆರ್‌ಸಿ ಮಲ್ಟಿಪ್ಲೆಕ್ಸ್‌ನಲ್ಲಿ 'ಕಾಂತಾರ ಚಾಪ್ಟರ್-1' ಚಿತ್ರದ ಸಂಪೂರ್ಣ ಸ್ಕ್ರೀನ್ ಅನ್ನು ಬುಕ್ ಮಾಡಿದ್ದಾರೆ. ತಮ್ಮ ವೈಯಕ್ತಿಕ ₹69,000 ಹಣ ಖರ್ಚು ಮಾಡಿದ್ದಾರೆ.

Read Full Story
08:21 PM (IST) Oct 03

Karnataka News LiveMadikeri Dasara 2025 - ಮಡಿಕೇರಿ ದಸರಾಕ್ಕೆ ಕಪ್ಪುಚುಕ್ಕೆ ಇಟ್ಟ ಪೊಲೀಸರ ಮೇಲಿನ ಹಲ್ಲೆ, ವ್ಯಕ್ತಿ ಬಂಧನ

Madikeri Dasara 2025: ಮಡಿಕೇರಿ ದಸರಾ ಮಂಟಪ ಪ್ರಶಸ್ತಿ ವಿಚಾರವಾಗಿ ಗಲಾಟೆ ನಡೆದಿದೆ. ತೀರ್ಪಿನ ಬಗ್ಗೆ ಅಸಮಾಧಾನಗೊಂಡ ಕರವಲೆ ಭಗವತಿ ದೇವಾಲಯ ಸಮಿತಿ ವೇದಿಕೆ ಏರಿ ದಾಂಧಲೆ ನಡೆಸಿದೆ. ಈ ವೇಳೆ ಗಲಾಟೆ ನಿಯಂತ್ರಿಸಲು ಹೋದ ಡಿವೈಎಸ್ಪಿ ಸೂರಜ್ ಅವರ ಮೇಲೆ ಹಲ್ಲೆ. ವೈಭವದ ದಸರಾಕ್ಕೆ ಕಪ್ಪುಚುಕ್ಕಿ ಇಟ್ಟಿದೆ.

Read Full Story
07:58 PM (IST) Oct 03

Karnataka News Liveಯಾದಗಿರಿ - ಇ-ಖಾತಾ ಮಾಡಿಕೊಡಲು ₹8000 ಲಂಚ, ಲೋಕಾ ಬಲೆಗೆ ಬಿದ್ದ ಬಿಲ್ ಕಲೆಕ್ಟರ್

Lokayukta raid Yadgir city council corruption: ಯಾದಗಿರಿ ನಗರಸಭೆಯ ಬಿಲ್ ಕಲೆಕ್ಟರ್ ನರಸಪ್ಪ, ಇ-ಖಾತಾ ಮಾಡಿಕೊಡಲು ₹8,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅರ್ಜಿದಾರರಿಂದ ₹5,000 ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

Read Full Story
07:31 PM (IST) Oct 03

Karnataka News Liveವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಆರೋಪಿಗಳು ಖುಲಾಸೆ, ತೀರ್ಪಿನ ವಿಷಯ ತಿಳಿದು ತಾಯಿ ಕಣ್ಣೀರು!

ಕೊಪ್ಪಳದ ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. ಈ ತೀರ್ಪಿನಿಂದ ತೀವ್ರ ದುಃಖಿತರಾದ ಮೃತನ ತಾಯಿ ಕೆಂಚಮ್ಮ, ಇದು ಕೊಲೆ, ಆತ್ಮಹತ್ಯೆಯಲ್ಲ ಎಂದು ಕಣ್ಣೀರು ಹಾಕಿದ್ದಾರೆ. ನ್ಯಾಯಕ್ಕಾಗಿ ಮುಂದಿನ ಕಾನೂನು ಹೋರಾಟಕ್ಕೆ ಸಿದ್ಧರಿರುವುದಾಗಿ ಅವರು ತಿಳಿಸಿದ್ದಾರೆ.
Read Full Story
06:58 PM (IST) Oct 03

Karnataka News Liveಮಲೆ ಮಹದೇಶ್ವರ ಕಾಡಲ್ಲಿ ಮತ್ತೊಂದು ಹುಲಿ ಬಲಿ, ಹತ್ಯೆಗೆ ಕಾರಣ ನಿಗೂಢ!

ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಹತ್ಯೆ ಪ್ರಕರಣದ ಬೆನ್ನಲ್ಲೇ, ಮತ್ತೊಂದು ಹುಲಿಯನ್ನು ಕೊಡಲಿಯಿಂದ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯು ವನ್ಯಧಾಮದಲ್ಲಿ ವನ್ಯಜೀವಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಅರಣ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ.
Read Full Story
06:47 PM (IST) Oct 03

Karnataka News Liveಕಾಂತಾರ ಚಾಪ್ಟರ್-1 ಸಿನಿಮಾ ವೀಕ್ಷಕರಿಗೆ ಸರ್ಕಾರದಿಂದಲೇ ಕ್ಯಾಶ್‌ಬ್ಯಾಕ್; ಟಿಕೆಟ್ ದಾಖಲೆ ಜೋಪಾನವಾಗಿಟ್ಟಿಕೊಳ್ಳಿ!

ಮಲ್ಟಿಪ್ಲೆಕ್ಸ್‌ಗಳಲ್ಲಿ ₹200 ಟಿಕೆಟ್ ದರ ನಿಗದಿಪಡಿಸುವ ಸರ್ಕಾರದ ಆದೇಶ ಕುರಿತು ಹೈಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಅಂತಿಮ ತೀರ್ಪು ಸರ್ಕಾರದ ಪರ ಬಂದರೆ, ಮಲ್ಟಿಪ್ಲೆಕ್ಸ್‌ಹಳು ಗ್ರಾಹಕರಿಂದ ಪಡೆದ ಹೆಚ್ಚುವರಿ ಹಣ ವಾಪಸ್ ಕೊಡಲಿವೆ. ಟಿಕೆಟ್‌ಗಳನ್ನು ಭದ್ರವಾಗಿರಿಸಿಕೊಳ್ಳಲು ಸರ್ಕಾರ ಸೂಚಿಸಿದೆ.

Read Full Story
06:22 PM (IST) Oct 03

Karnataka News Liveಚಿಕ್ಕೋಡಿ - ಕಾಂಗ್ರೆಸ್‌ ಸರ್ಕಾರ ಬದುಕಿದ್ದರೆ ರೈತರಿಗೆ ಪರಿಹಾರ ಕೊಟ್ಟು ಸಾಬೀತುಪಡಿಸಲಿ -ಸಿಟಿ ರವಿ ಸವಾಲು

ಚಿಕ್ಕೋಡಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಸಿ.ಟಿ. ರವಿ, ಸರ್ಕಾರ ಹಾರಾಟ ನಿಲ್ಲಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ರೈತರಿಗೆ ಪರಿಹಾರ ನೀಡಿ ತಮ್ಮ ಬದ್ಧತೆಯನ್ನು ಸಾಬೀತುಪಡಿಸುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದರು.
Read Full Story
06:03 PM (IST) Oct 03

Karnataka News Liveಕೈವಾರ ತಾತಯ್ಯನಿಗೆ ಹೋಗಿ ಬರುತ್ತಿದ್ದ ಅಕ್ಕ-ತಂಗಿ ಸ್ಕೂಟರ್‌ನಿಂದ ಬಿದ್ದು ದಾರುಣ ಸಾವು!

ಹೊಸಕೋಟೆ-ಚಿಂತಾಮಣಿ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅಕ್ಕ-ತಂಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆ ಕಾಮಗಾರಿಯ ನಿರ್ಲಕ್ಷ್ಯದಿಂದ ಬಿದ್ದಿದ್ದ ಜಲ್ಲಿಕಲ್ಲುಗಳ ಮೇಲೆ ದ್ವಿಚಕ್ರ ವಾಹನ ಸ್ಕಿಡ್ ಆದ ಪರಿಣಾಮ, ಹಿಂಬದಿಯಿಂದ ಬಂದ ಕ್ಯಾಂಟರ್ ಅವರ ಮೇಲೆ ಹರಿದು ಈ ದುರ್ಘಟನೆ ಸಂಭವಿಸಿದೆ.

Read Full Story
05:39 PM (IST) Oct 03

Karnataka News Liveಚಿಕ್ಕಬಳ್ಳಾಪುರದಲ್ಲಿ ಲಾರಿಗೆ ಡಿಕ್ಕಿ ಹೊಡೆದ ಕಾರು, ಮಂತ್ರಾಲಯ ರಾಘವೇಂದ್ರಸ್ವಾಮಿ ಭಕ್ತೆ ಸ್ಥಳದಲ್ಲೇ ಸಾವು!

ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿವೆ. ಮಂತ್ರಾಲಯದಿಂದ ಹಿಂದಿರುಗುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದು ತುಮಕೂರಿನ ಮಹಿಳೆಯೊಬ್ಬರು ಮೃತಪಟ್ಟರೆ, ಮತ್ತೊಂದೆಡೆ ಬೈಕ್‌ಗಳ ಡಿಕ್ಕಿಯಿಂದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.

Read Full Story
05:13 PM (IST) Oct 03

Karnataka News Liveಹಾಸನದಲ್ಲಿ ಅಡುಗೆ ಮಾಡಿಲ್ಲವೆಂದು ತಾಯಿ ಮೇಲೆ ಹಲ್ಲೆ ಮಾಡಿದ ಮಗ; ಅಸುನೀಗಿದ ಅಮ್ಮ!

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ, ಅಡುಗೆ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮಗನೊಬ್ಬ ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಕಂಠಪೂರ್ತಿ ಕುಡಿದಿದ್ದ 19 ವರ್ಷದ ಸಂತೋಷ, ದೊಣ್ಣೆಯಿಂದ ತಾಯಿ ಪ್ರೇಮಾ ಅವರ ತಲೆಗೆ ಹೊಡೆದ ಪರಿಣಾಮ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Read Full Story