ಬಾಗಲಕೋಟೆ ಜಿಲ್ಲೆಯ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ, ಮಕ್ಕಳು ಬಿಸಿಯೂಟದ ನಂತರ ಚರಂಡಿ ಪಕ್ಕದಲ್ಲಿ ತಟ್ಟೆ ತೊಳೆಯುತ್ತಿರುವ ದೃಶ್ಯ ವೈರಲ್ ಆಗಿದೆ. ಶಾಲೆಯಲ್ಲಿ ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದು ಈ ದುಸ್ಥಿತಿಗೆ ಕಾರಣವಾಗಿದ್ದು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಕಿಡಿ
- Home
- News
- State
- State News Live: ಬಾಗಲಕೋಟೆ - ಬಿಸಿಯೂಟದ ಬಳಿಕ ಕೊಳಚೆ ನೀರಲ್ಲೇ ಪ್ಲೇಟ್ ತೊಳೆಯುವ ದುಸ್ಥಿತಿಯಲ್ಲಿ ಶಾಲಾ ಮಕ್ಕಳು!
State News Live: ಬಾಗಲಕೋಟೆ - ಬಿಸಿಯೂಟದ ಬಳಿಕ ಕೊಳಚೆ ನೀರಲ್ಲೇ ಪ್ಲೇಟ್ ತೊಳೆಯುವ ದುಸ್ಥಿತಿಯಲ್ಲಿ ಶಾಲಾ ಮಕ್ಕಳು!

ಬೆಂಗಳೂರು (ಜ.28): ಗಾಂಧೀಜಿ ಹೆಸರಿನ 'ಮನರೇಗಾ' ಯೋಜನೆ ಕೈಬಿಟ್ಟು ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ 'ಜಿ ರಾಮ್ ಜಿ' ಕಾಯ್ದೆ ವಿರುದ್ದ ಬೃಹತ್ ಪ್ರತಿಭಟನೆ, ಲೋಕಭವನ ಚಲೋ ಮೂಲಕ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ. 'ಮನರೇಗಾ' ಮರು ಜಾರಿಯಾಗುವವರೆಗೆ ಹಂತ ಹಂತವಾಗಿ ಹೋರಾಟ ತೀವ್ರ ಗೊಳಿಸಲಾಗುವುದು. ಕರಾಳ ಕೃಷಿ ಕಾಯ್ದೆ ವಿರುದ್ಧ ನಡೆದ ರೈತ ಚಳವಳಿ ಮಾದರಿಗೆ ಈ ಹೋರಾಟ ಕೊಂಡೊಯ್ಯುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 28th January:ಬಾಗಲಕೋಟೆ - ಬಿಸಿಯೂಟದ ಬಳಿಕ ಕೊಳಚೆ ನೀರಲ್ಲೇ ಪ್ಲೇಟ್ ತೊಳೆಯುವ ದುಸ್ಥಿತಿಯಲ್ಲಿ ಶಾಲಾ ಮಕ್ಕಳು!
Karnataka News Live 28th January:Brahmagantu ದೀಪಾನೂ ಅಲ್ಲ ದಿಶಾನೂ ಅಲ್ಲ- ಈಕೆ ದಿಯಾ! ರೊಮ್ಯಾಂಟಿಕ್ ಸ್ಟೆಪ್ಗೆ ಫ್ಯಾನ್ಸ್ ಫಿದಾ
ಬ್ರಹ್ಮಗಂಟು ಧಾರಾವಾಹಿಯ ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್ ಅವರ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಶ್ರೇಷ್ಠ ಎಂಬ ಸಂದೇಶ ಸಾರುವ ಈ ಪಾತ್ರಕ್ಕಾಗಿ ಅವರು ಗಂಟೆಗಟ್ಟಲೆ ಮೇಕಪ್ ಮಾಡಿಕೊಳ್ಳುತ್ತಾರೆ.
Karnataka News Live 28th January:ಸತ್ತಿದ್ದು ಪತ್ನಿ, ಡೆತ್ ಸರ್ಟಿಫಿಕೇಟ್ ಪತಿಯ ಹೆಸರಲ್ಲಿ! ರಟ್ಟಿಹಳ್ಳಿ ತಹಸೀಲ್ದಾರ್ ಎಡವಟ್ಟಿಗೆ ಏನು ಹೇಳ್ತೀರಿ?
ಹಾವೇರಿಯ ರಟ್ಟಿಹಳ್ಳಿ ತಹಶೀಲ್ದಾರ್ ಕಚೇರಿಯಲ್ಲಿ, ಮೃತ ಪತ್ನಿಯ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ ಪತಿಗೆ, ಅವರ ಹೆಸರಿನಲ್ಲೇ ಮರಣ ಪ್ರಮಾಣಪತ್ರ ನೀಡಿದ ಘಟನೆ ನಡೆದಿದೆ. ಐದು ವರ್ಷಗಳ ಹಿಂದಿನ ಎಡವಟ್ಟಿನಿಂದ ಜೀವಂತ ಇರುವ ತೋಪನಗೌಡ ಎಂಬುವವರ ರೇಷನ್ ಕಾರ್ಡ್ ರದ್ದಾಗಿ ತೊಂದರೆ ಅನುಭವಿಸುತ್ತಿದ್ದಾರೆ.
Karnataka News Live 28th January:ಪಕ್ಕಾ ಪ್ಲಾನ್ ಮಾಡಿ ಬೆಂಗಳೂರಿನ ಮನೆಯಿಂದ 18 ಕೋಟಿ ರೂ ಚಿನ್ನಾಭರಣ ಕಳವು, ಕೆಲಸದವರ ಕೈಚಳಕ
ಪಕ್ಕಾ ಪ್ಲಾನ್ ಮಾಡಿ ಬೆಂಗಳೂರಿನ ಮನೆಯಿಂದ 18 ಕೋಟಿ ರೂ ಚಿನ್ನಾಭರಣ ಕಳವು, ಮನೆಕೆಲಸ ಮಾಡುತ್ತಿದ್ದ ನೇಪಾಳಿ ದಂಪತಿಗಳ ಕೃತ್ಯಕ್ಕೆ ಮನೆ ಮಂದಿ ಕಂಗಾಲಾಗಿದ್ದಾರೆ. ಇದು ಪಕ್ಕಾ ಪ್ಲಾನ್ ಮಾಡಿದ ಕೃತ್ಯ, ನಿಮ್ಮ ಮನೆಯಲ್ಲಿ ಮನೆಗೆಲದವರಿದ್ದರೆ ಈ ವಿಚಾರದಲ್ಲಿ ಗಮನಹರಿಸಿ.
Karnataka News Live 28th January:ಉತ್ತರ ಕನ್ನಡ - ಎರಡೂವರೆ ಗಂಟೆ ರಸ್ತೆಗೆ ಅಡ್ಡ ನಿಂತ ಗೂಡ್ಸ್ ರೈಲು, ಊರಿಗೆ ಊರೇ ಸಂಪರ್ಕ ಬಂದ್! ಜನರ ಪರದಾಟ
ದಾಂಡೇಲಿಯಲ್ಲಿ ಗೂಡ್ಸ್ ರೈಲು ರೈಲ್ವೆ ಗೇಟ್ ಬಳಿ ಎರಡೂವರೆ ಗಂಟೆ ನಿಂತಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಸಂಕಷ್ಟಕ್ಕೀಡಾದರು. ಇನ್ನೊಂದೆಡೆ, ಬೆಂಗಳೂರಿನಲ್ಲಿ ರೈಲ್ವೆ ಹಳಿ ಮೇಲೆ ಚಾಲಕನ ಅಜಾಗರೂಕತೆಯಿಂದ ರಿವರ್ಸ್ ತೆಗೆದುಕೊಂಡ ಬಿಎಂಟಿಸಿ ಬಸ್ಸಿಗೆ ರೈಲು ಡಿಕ್ಕಿ ಹೊಡೆದು ಜಖಂಗೊಂಡಿದೆ.
Karnataka News Live 28th January:ಇವ್ರ ಒಂದೇ ನೋಟಕ್ಕೆ ನೂರಾರು ಹೆಣ್ಮಕ್ಕಳು ಬೀಳ್ತಿದ್ರಂತೆ ನೋಡ್ರಪ್ಪಾ! 'ಕನ್ನಡದ ಆಮೀರ್ ಖಾನ್' ವಿಡಿಯೋ ವೈರಲ್
ಬಿಗ್ಬಾಸ್ ಖ್ಯಾತಿಯ ಡಾಗ್ ಸತೀಶ್, ತಮ್ಮನ್ನು ಯೌವನದಲ್ಲಿ ಆಮೀರ್ ಖಾನ್ ಎಂದು ಕರೆಯುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಸದ್ಯ ಅವರ ಹಳೆಯ ಸಿನಿಮಾದ ತುಣುಕೊಂದು ವೈರಲ್ ಆಗಿದ್ದು, 'ಕನ್ನಡದ ಆಮೀರ್ ಖಾನ್' ಫೋಟೋ ನೋಡಿ ಎಂದು ಟ್ರೋಲ್ ಮಾಡ್ತಿದ್ದಾರೆ ನೆಟ್ಟಿಗರು!
Karnataka News Live 28th January:ಬೋರ್ವೆಲ್ ಲಾರಿಗೆ ಗುದ್ದಿದ ಬೊಲೆರೊ ಜೀಪ್ - ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವು, ಕೂಲಿ ಮಾಡಿ ಮನೆಗೆ ಮರಳುವಾಗ ದುರಂತ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಬಳಿ ಕೂಲಿ ಕೆಲಸ ಮುಗಿಸಿ ಮರಳುತ್ತಿದ್ದ ಕಾರ್ಮಿಕರಿದ್ದ ಬೊಲೆರೊ ಜೀಪ್, ನಿಂತಿದ್ದ ಬೋರ್ವೆಲ್ ಲಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ.
Karnataka News Live 28th January:ಮಂಗಳೂರು ಜಂಕ್ಷನ್ನಿಂದ ತಮಿಳುನಾಡಿಗೆ ಅಮೃತ ಭಾರತ್ ಎಕ್ಸ್ಪ್ರೆಸ್ ರೈಲು ಆರಂಭ, ಸಮಯ, ನಿಲುಗಡೆ ಮಾಹಿತಿ ಇಲ್ಲಿದೆ
Karnataka News Live 28th January:ನಟರು ಅಷ್ಟು ಸುಲಭದಲ್ಲಿ ನಟಿಯನ್ನು ಎತ್ತೋದು ಹೇಗಪ್ಪಾ ಅಂತೀರಾ? ಇಲ್ಲಿದೆ ನೋಡಿ ಅಸಲಿ ವಿಡಿಯೋ
ಚಲನಚಿತ್ರ ಮತ್ತು ಸೀರಿಯಲ್ಗಳಲ್ಲಿ ನಟರು ನಟಿಯರನ್ನು ಸುಲಭವಾಗಿ ಎತ್ತುವ ದೃಶ್ಯಗಳ ಹಿಂದಿನ ಸತ್ಯವೇ ಬೇರೆ. ಇದು ನಟರ ನಿಜವಾದ ಬಲವಲ್ಲ, ಬದಲಿಗೆ ಗ್ರೀನ್ ಸ್ಕ್ರೀನ್ ತಂತ್ರಜ್ಞಾನ ಮತ್ತು ಶೂಟಿಂಗ್ ಸೆಟ್ನಲ್ಲಿ ಬಳಸುವ ಟೇಬಲ್ಗಳಂತಹ ಆಧಾರಗಳ ಸಹಾಯದಿಂದ ಚಿತ್ರೀಕರಿಸಲಾಗುತ್ತದೆ.
Karnataka News Live 28th January:ಸಾರಿಗೆ ನೌಕರರ ಧ್ವನಿ ಅನಂತ ಸುಬ್ಬರಾವ್ ವಿಧಿವಶ - ಪತಿ ನಿಧನ ಹಿನ್ನೆಲೆ ಪತ್ನಿ ಆರೋಗ್ಯದಲ್ಲಿ ಏರುಪೇರು
Karnataka News Live 28th January:ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಟಾಯ್ಸ್ ಪಾರ್ಕ್ ನಿರ್ಮಾಣ, ಬರೋಬ್ಬರಿ 8 ಎಕರೆ ಜಮೀನು ಸ್ವಾದೀನ
ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ, ಚನ್ನಪಟ್ಟಣ-ರಾಮನಗರ ನಡುವೆ 8 ಎಕರೆ ಜಾಗದಲ್ಲಿ ಟಾಯ್ಸ್ ಪಾರ್ಕ್ ನಿರ್ಮಾಣವಾಗಲಿದೆ. ಎಕ್ಸ್ಪ್ರೆಸ್ ವೇಯಿಂದಾಗಿ ಕುಸಿದಿರುವ ಸ್ಥಳೀಯ ಬೊಂಬೆ ಉದ್ಯಮಕ್ಕೆ ಉತ್ತೇಜನ ನೀಡುವುದು, ಕಲೆಗಾರರಿಗೆ, ಪ್ರವಾಸಿಗರನ್ನು ಆಕರ್ಷಿಸುವುದು ಇದರ ಮುಖ್ಯ ಉದ್ದೇಶ.
Karnataka News Live 28th January:ಸಚಿವ ಶರಣಪ್ರಕಾಶ್ ಪಾಟೀಲ್ ಬಿಗ್ ಡೀಲ್ - 600ಕ್ಕೂ ಹೆಚ್ಚು GTCC ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ರ್ಯಾಂಗ್ಸನ್ಸ್ ಹಾಗೂ ಎಕ್ಸೈಡ್ ರೆಡಿ!
ರ್ಯಾಂಗ್ಸನ್ಸ್ ಏರೋಸ್ಪೇಸ್ ಮತ್ತು ಎಕ್ಸೈಡ್ ಎನರ್ಜಿ ಕಂಪನಿಗಳು ಜಿಟಿಟಿಸಿಯಲ್ಲಿ ತರಬೇತಿ ಪಡೆದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಒಪ್ಪಂದ ಮಾಡಿಕೊಂಡಿವೆ. ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರ ಸಮ್ಮುಖದಲ್ಲಿ ಬೆಂಗಳೂರಿನ ರಾಜಾಜಿನಗರ ಕ್ಯಾಂಪಸ್ನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು
Karnataka News Live 28th January:ಕರ್ಣನಿಗೆ ಅವರಪ್ಪನ ಜತೆಗೆ ಅವರ ಅತ್ತೆಯ ಮುಖವಾಡವೂ ಗೊತ್ತಾಯ್ತಾ? ಆ ಕಠಿಣ ನಿರ್ಧಾರ ಕಠಿಣ ನಿರ್ಧಾರ ತಗೊಂಡಿದ್ದೇಕೆ?
ಮಹಾಭಾರತದಲ್ಲಿ ತ್ಯಾಗಮಯಿ ಹಾಗೂ ಕರುಣಾಮಯಿಯಾಗಿದ್ದ ಕರ್ಣನಂತೆ ಇದ್ದ ಕಿರಣ್ ರಾಜ್, ಕರ್ಣ ಧಾರಾವಾಹಿಯಲ್ಲಿ ಇದ್ದಕ್ಕಿದ್ದಂತೆಯೇ ಬದಲಾಗಿ ಹೋಗಿದ್ದಾನೆ. ಅವರ ಅಪ್ಪನ ಕಂತ್ರಿ ಬುದ್ದಿ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ತಮ್ಮ ಅತ್ತೆಯ ಮುಖವಾಡ ಬಯಲಾದಂತೆ ಅನಿಸುತ್ತಿದೆ. ಏನದು ಹೊಸ ಅಪ್ಡೇಟ್ಸ್.
Karnataka News Live 28th January:ಡಿಸ್ಚಾರ್ಜ್ ಮಾಡ್ವಾಗ ಈ ಪರಿ ಮೇಕಪ್ ಮಾಡಿ ಕಳಿಸೋ ಆಸ್ಪತ್ರೆಗೆ ಭಾರಿ ಡಿಮಾಂಡ್ - ಅಡ್ರೆಸ್ ಕೇಳ್ತಿರೋ ವೀಕ್ಷಕರು!
'ನಾ ನಿನ್ನ ಬಿಡಲಾರೆ' ಸೀರಿಯಲ್ನಲ್ಲಿ ಎತ್ತರದ ಕಟ್ಟಡದಿಂದ ಬಿದ್ದ ಮಾಯಾ ಪಾತ್ರಕ್ಕೆ ಏನೂ ಆಗುವುದಿಲ್ಲ. ಅಷ್ಟೇ ಅಲ್ಲದೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ಫುಲ್ ಮೇಕಪ್ನಲ್ಲಿ ಕಾಣಿಸಿಕೊಂಡು ನೆಟ್ಟಿಗರಿಂದ ಸಖತ್ ಟ್ರೋಲ್ ಆಗುತ್ತಿದ್ದಾಳೆ.
Karnataka News Live 28th January:ಉಡುಪಿ - ದೋಣಿ ದುರಂತ ಬಳಿಕ ಎಚ್ಚೆತ್ತ ಸರ್ಕಾರ, 45 ದಿನಗಳಲ್ಲಿ ಎಲ್ಲಾ ಬೋಟುಗಳಿಗೆ ಕಡ್ಡಾಯ ನೋಂದಣಿ ಆದೇಶ
Karnataka News Live 28th January:ನಾಳೆ ಸಾರಿಗೆ ನೌಕರರ ಹೋರಾಟ ಹಮ್ಮಿಕೊಂಡಿದ್ದ ಮುಖಂಡ ಮುಖಂಡ ಅನಂತ್ ಸುಬ್ಬರಾವ್ ನಿಧನ
ನಾಳೆ ಸಾರಿಗೆ ನೌಕರರ ಹೋರಾಟ ಹಮ್ಮಿಕೊಂಡಿದ್ದ ಮುಖಂಡ ಮುಖಂಡ ಅನಂತ್ ಸುಬ್ಬರಾವ್ ನಿಧನ, ಕಾರ್ಮಿಕ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದ ಅನಂತ್ ಸುಬ್ಬರಾವ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
Karnataka News Live 28th January:ವಿಶ್ವದ ಶ್ರೇಷ್ಠ ವೈದ್ಯಕೀಯ ಕಾಲೇಜು ಪಟ್ಟಿಯಲ್ಲಿ ದೇಶದ ಏಕೈಕ ಸಂಸ್ಥೆ ಕೆಎಂಸಿ ಮಣಿಪಾಲ, ರಾಜ್ಯಕ್ಕಿದು ಹೆಮ್ಮೆ
ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಸಿಂಗಾಪುರ ಸರ್ಕಾರದ ಮಾನ್ಯತೆ ಪಡೆದು ವಿಶ್ವದ ಶ್ರೇಷ್ಠ ವೈದ್ಯಕೀಯ ಕಾಲೇಜುಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಸಿಂಗಾಪುರ ಮೆಡಿಕಲ್ ಕೌನ್ಸಿಲ್ನ ಕಟ್ಟುನಿಟ್ಟಿನ ಮೌಲ್ಯಮಾಪನದ ನಂತರ, ಹೊಸದಾಗಿ ಮಾನ್ಯತೆ ಪಡೆದ ಭಾರತದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
Karnataka News Live 28th January:ಮದುವೆ ಮಂಟಪದಲ್ಲಿ ತಾಳಿಕಟ್ಟಲು ಅರ್ಧ ಗಂಟೆಯಿದ್ದಾಗ ಕಿರಣ್ ರಾಜ್ಗೆ ಪ್ರಪೋಸ್! ಆ ಘಟನೆ ಮೆಲುಕು ಹಾಕಿದ ಕರ್ಣ ಸೀರಿಯಲ್ ನಟ
ಜಿ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿರುವ ಕರ್ಣ ಸೀರಿಯಲ್ನಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಕರ್ಣ ಉರೂಪ್ ಕಿರಣ್ ರಾಜ್ ಅವರಿಗೆ ಲೇಡಿಸ್ ಫ್ಯಾನ್ಸ್ ತುಂಬಾನೆ ಇದ್ದಾರೆ ಎನ್ನುವುದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಈ ಕುರಿತಂತೆ ಮಾತಾಡಿದ್ದಾರೆ.
Karnataka News Live 28th January:ಧಾರವಾಡದಲ್ಲಿ ಹುಚ್ಚು ನಾಯಿ ಕಡಿತಕ್ಕೆ 9 ಜನರಿಗೆ ಗಂಭೀರ ಗಾಯ, ಪಂಚಾಯ್ತಿ ನಿರ್ಲಕ್ಷ್ಯ,ರೊಚ್ಚಿಗೆದ್ದ ಸ್ಥಳೀಯರಿಂದಲೇ ಶ್ವಾನ ಸಂಹಾರ
ಧಾರವಾಡದ ಶಿರಡಿ ನಗರದಲ್ಲಿ ಹುಚ್ಚು ನಾಯಿಯೊಂದು ದಾಳಿ ಮಾಡಿ 9 ಜನರನ್ನು ಗಾಯಗೊಳಿಸಿದೆ. ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಪಗೊಂಡ ಸ್ಥಳೀಯ ನಿವಾಸಿಗಳು, ಅಂತಿಮವಾಗಿ ನಾಯಿ ಹಿಡಿದು ಹೊಡೆದು ಕೊಂದಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Karnataka News Live 28th January:ರಾಜ್ಯದ 25 ಶಾಸಕರಿಗೆ ಗುಡ್ ನ್ಯೂಸ್ - ನಿಗಮ-ಮಂಡಳಿಗಳ ಅಧ್ಯಕ್ಷರ ಅವಧಿ ವಿಸ್ತರಿಸಿ ಸರ್ಕಾರ ಆದೇಶ
ರಾಜ್ಯ ಸರ್ಕಾರವು 25 ಶಾಸಕರ ನಿಗಮ ಮಂಡಳಿ ಅಧ್ಯಕ್ಷರ ಅಧಿಕಾರಾವಧಿಯನ್ನು ವಿಸ್ತರಿಸಿ ಮಹತ್ವದ ಆದೇಶ ಹೊರಡಿಸಿದೆ. ಈ ಶಾಸಕರು ಮುಂದಿನ ಎರಡು ವರ್ಷಗಳ ಕಾಲ ಅಥವಾ ಮುಂದಿನ ಆದೇಶದವರೆಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಈ ಆದೇಶವು ಜ.26, 2026 ರಿಂದ ಪೂರ್ವಾನ್ವಯ.