MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Rural
  • ಪಕ್ಕಾ ಪ್ಲಾನ್ ಮಾಡಿ ಬೆಂಗಳೂರಿನ ಮನೆಯಿಂದ 18 ಕೋಟಿ ರೂ ಚಿನ್ನಾಭರಣ ಕಳವು, ಕೆಲಸದವರ ಕೈಚಳಕ

ಪಕ್ಕಾ ಪ್ಲಾನ್ ಮಾಡಿ ಬೆಂಗಳೂರಿನ ಮನೆಯಿಂದ 18 ಕೋಟಿ ರೂ ಚಿನ್ನಾಭರಣ ಕಳವು, ಕೆಲಸದವರ ಕೈಚಳಕ

ಪಕ್ಕಾ ಪ್ಲಾನ್ ಮಾಡಿ ಬೆಂಗಳೂರಿನ ಮನೆಯಿಂದ 18 ಕೋಟಿ ರೂ ಚಿನ್ನಾಭರಣ ಕಳವು, ಮನೆಕೆಲಸ ಮಾಡುತ್ತಿದ್ದ ನೇಪಾಳಿ ದಂಪತಿಗಳ ಕೃತ್ಯಕ್ಕೆ ಮನೆ ಮಂದಿ ಕಂಗಾಲಾಗಿದ್ದಾರೆ. ಇದು ಪಕ್ಕಾ ಪ್ಲಾನ್ ಮಾಡಿದ ಕೃತ್ಯ, ನಿಮ್ಮ ಮನೆಯಲ್ಲಿ ಮನೆಗೆಲದವರಿದ್ದರೆ ಈ ವಿಚಾರದಲ್ಲಿ ಗಮನಹರಿಸಿ.

2 Min read
Author : Chethan Kumar
Published : Jan 28 2026, 10:15 PM IST
Share this Photo Gallery
  • FB
  • TW
  • Linkdin
  • Whatsapp
16
ಬೆಂಗಳೂರಿನಲ್ಲಿ 18 ಕೋಟಿ ರೂ ಚಿನ್ನಾಭರಣ ಕಳವು
Image Credit : ChatGPT AI

ಬೆಂಗಳೂರಿನಲ್ಲಿ 18 ಕೋಟಿ ರೂ ಚಿನ್ನಾಭರಣ ಕಳವು

ಬೆಂಗಳೂರಿನ ಮನೆಯಿಂದ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಡೈಮಂಡ್ ಸೇರಿದಂತೆ ಆಭರಣ ಕಳ್ಳತನ ನಡೆದಿದೆ. ಮನೆ ಕೆಲಸ ಮಾಡುತ್ತಿದ್ದ ದಂಪತಿಗಳ ಕೈಚಳಕ್ಕೆ ಮನೆ ಮಾಲೀಕ ಹಾಗೂ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮನೆಯ ಲಾಕರ್ ಒಡೆದು ಚಿನ್ನಾಭರಣ, ಒಂದಷ್ಟು ನಗದು ಕಳ್ಳತನವಾಗಿದೆ

26
ನೇಪಾಳಿ ದಂಪತಿಗಳ ಕೃತ್ಯ
Image Credit : ChatGpt

ನೇಪಾಳಿ ದಂಪತಿಗಳ ಕೃತ್ಯ

ಮಾರತ್ತಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಿಲ್ಡರ್‌ಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ. ಶ್ರೀಮಂತ ಕುಟುಂಬದಲ್ಲಿ ಮನೆ ಕೆಲಸ ಮಾಡುತ್ತಿದ್ದ ನೇಪಾಳಿ ದಂಪತಿ ಈ ಕೃತ್ಯ ಎಸಗಿದ್ದಾರೆ. ಇದರ ಹಿಂದೆ ಅತೀ ದೊಡ್ಡ ಜಾಲವೊಂದು ಅಡಗಿರುವ ಬಗ್ಗೆ ಪೊಲೀಸರಿಗೆ ಸುಳಿವುಗಳು ಸಿಕ್ಕಿದೆ. ಹೀಗಾಗಿ ಬೆಂಗಳೂರಿನ ಮನೆಗಳಲ್ಲಿ ಯಾರೆಲ್ಲಾ ಮನೆ ಕೆಲಸದವರಿದ್ದಾರೋ, ಎಲ್ಲಾ ಮಾಲೀಕರು ಈ ಪ್ಲಾನ್ ಕುರಿತು ಗಮನಹರಿಸಬೇಕು.

Related Articles

Related image1
Kanakapura Temple Theft: ಡಿಸಿಎಂ ಡಿಕೆ ಶಿವಕುಮಾರ ಮನೆದೇವರು ಕೆಂಕೇರಮ್ಮ ದೇಗುಲ ಕಳ್ಳತನ; ದೇವಿಯ ಮೈಮೇಲಿನ ತಾಳಿ ಚಿನ್ನಾಭರಣ ಕದ್ದ ಖದೀಮರು!
Related image2
Jewelry Theft Case: ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲು ಆಭರಣ ಕದ್ದ ಕೆಲಸದಾಕೆ ಬಂಧನ
36
28 ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದ ದಂಪತಿ
Image Credit : Asianet News

28 ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದ ದಂಪತಿ

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಕೆಲಸಕ್ಕಿದ್ದ ನೇಪಾಳಿ ದಂಪತಿ ಕಳ್ಳತನ ಮಾಡಿರುವುದು ಬಹುತೇಕ ಖಚಿತಗೊಂಡಿದೆ. ಕಳ್ಳತನ ಬಳಿಕ ಈ ನೇಪಾಳಿ ದಂಪತ್ತಿ ನಾಪತ್ತೆಯಾಗಿದ್ದಾರೆ. ಕೇವಲ 28 ದಿನಗಳ ಹಿಂದಷ್ಟೇ ನೇಪಾಳಿ ದಂಪತಿಗಲಾದ ದಿನೇಶ್ ಹಾಗೂ ಕಮಲಾ ಕೆಲಸಕ್ಕೆ ಸೇರಿದ್ದರು. ಇದೀಗ ಇಬ್ಬರು ನಾಪತ್ತೆಯಾಗಿದ್ದಾರೆ. ಈ ಪ್ರಕರಣದ ಪ್ಲಾನ್ ಇಲ್ಲಿಗೆ ಮುಗಿದಿಲ್ಲ. ಇದರ ಹಿಂದೆ ಮತ್ತೊಂದು ಪ್ಲಾನ್ ಇದೆ.

46
8 ತಿಂಗಳು ಕೆಲಸ ಮಾಡಿದ್ದ ಮತ್ತೊಂದು ನೇಪಾಳಿ ದಂಪತಿ
Image Credit : Getty

8 ತಿಂಗಳು ಕೆಲಸ ಮಾಡಿದ್ದ ಮತ್ತೊಂದು ನೇಪಾಳಿ ದಂಪತಿ

ಬೆಂಗಳೂರಿನಲ್ಲಿ ನೇಪಾಳಿ ಮೂಲದವರು ಅತೀ ಕಡಿಮೆ ವೇತನಕ್ಕೆ ಲಭ್ಯವಾಗುತ್ತಾರೆ. ಈ ಮಾರತಳ್ಳಿಯ ಮನೆಯಲ್ಲಿ 8 ತಿಂಗಳಿನಿಂದ ನೇಪಾಳಿ ದಂಪತಿಗಳಾದ ಮಾಯಾ ಹಾಗೂ ವಿಕಾಸ್ ಕೆಲಸ ಮಾಡುತ್ತಿದ್ದರು. ಒಂದು ತಿಂಗಳ ಹಿಂದೆ ನೇಪಾಳದಲ್ಲಿ ಕೆಲಸವಿದೆ ಎಂದು ದಿಢೀರ್ ಮನೆ ಕೆಲಸ ಬಿಟ್ಟಿದ್ದಾರೆ.

56
ದಿನೇಶ್ ಹಾಗೂ ಕಮಲಾರನ್ನು ಸೇರಿಸಿ ಕೆಲ ಬಿಟ್ಟಿದ್ದ ಮಾಯಾ ವಿಕಾಸ್
Image Credit : Getty

ದಿನೇಶ್ ಹಾಗೂ ಕಮಲಾರನ್ನು ಸೇರಿಸಿ ಕೆಲ ಬಿಟ್ಟಿದ್ದ ಮಾಯಾ ವಿಕಾಸ್

ಮಾಯಾ ಹಾಗೂ ವಿಕಾಸ್ ಕೆಲಸ ಬಿಡುವಾಗ ನೇಪಾಳಿಗಳಾದ ದಿನೇಶ್ ಹಾಗೂ ಕಮಲಾರನ್ನು ಕೆಲಸಕ್ಕೆ ಸೇರಿಸಿದ್ದರು. ಹೀಗಾಗಿ ಮಾಲೀಕ ಹೆಚ್ಚಿನ ವಿಚಾರಣೆ ಮಾಡಲು ಹೋಗಿಲ್ಲ. ಆದರೆ ಇದು ಪ್ಲಾನ್ ಆಗಿತ್ತು. ಒಂದು ತಿಂಗಳಲ್ಲಿ ಬಿಲ್ಡರ್ ಮನೆಯಲ್ಲಿ ಎಲ್ಲೆಲ್ಲಿ ಏನೇನಿದೆ ಅನ್ನೋದು ಗೊತ್ತಾಗಲ್ಲ. ಇದನ್ನು ಮಾಯಾ ಹಾಗೂ ವಿಕಾಸ್ ಈ ದಂಪತಿಗಳಿಗೆ ಹೇಳಿಕೊಟ್ಟಿರುವ ಸಾಧ್ಯತೆ ಇದೆ.

66
ಓರ್ವನ ವಿಚಾರಣೆ
Image Credit : Asianet News

ಓರ್ವನ ವಿಚಾರಣೆ

ನೇಪಾಳಿಗರು ಬೆಂಗಳೂರಿನಲ್ಲಿ ಬಂದು ಇಲ್ಲಿ ಗ್ಯಾಂಗ್ ಕಟ್ಟಿಕೊಂಡು ವ್ಯವಸ್ಥಿತವಾಗಿ ನಡೆಸುತ್ತಿರುವ ಕಳ್ಳತನ ಪ್ರಕರಣ ಎಂದು ಪೊಲೀಸರು ಅನುಮಾನಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಹಲವು ಮನೆಗಳ್ಳತನ ಪ್ರಕರಣಗಳಲ್ಲಿ ನೇಪಾಳಿಗರು ಆರೋಪಿಗಳಾಗಿದ್ದಾರೆ. ಇದೂ ಕೂಡ ಅದೇ ಗ್ಯಾಂಗ್ ಪ್ಲಾನ್ ಮಾಡಿ ಮಾಡಿರುವ ಕೃತ್ಯದ ಅನುಮಾನ ಹೆಚ್ಚಾಗಿದೆ. ಎರಡು ನೇಪಾಳಿ ದಂಪತಿಗಳ ಮೇಲೂ ಪ್ರಕರಣ ದಾಖಲಾಗಿದೆ. ಮಾರತ್ತಹಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದು, ಓರ್ವನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಓರ್ವನ ವಿಚಾರಣೆ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಬೆಂಗಳೂರು
ಪೊಲೀಸ್
ಕಳ್ಳತನ ಪ್ರಕರಣ

Latest Videos
Recommended Stories
Recommended image1
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಟಾಯ್ಸ್ ಪಾರ್ಕ್ ನಿರ್ಮಾಣ, ಬರೋಬ್ಬರಿ 8 ಎಕರೆ ಭೂಸ್ವಾಧೀನ
Recommended image2
ಬೆಂಗಳೂರು ಪೊಲೀಸರ ಭರ್ಜರಿ ಬೇಟೆ ಥೈಲ್ಯಾಂಡ್‌ನಿಂದ ತರಿಸಿದ 4 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ, 10 ಮಂದಿ ಆರೋಪಿಗಳ ಬಂಧನ
Recommended image3
ಬೆಂಗಳೂರಿನ ಕಳ್ಳತನ ಪ್ರಕರಣಕ್ಕೆ ಅಮೆರಿಕಾದಿಂದ ದೂರು, ಡಿಜಿ–ಐಜಿಪಿಗೆ ನೇರವಾಗಿ ಕರೆ ಮಾಡಿದ ಯುಎಸ್ ರಾಯಭಾರ ಕಚೇರಿ!
Related Stories
Recommended image1
Kanakapura Temple Theft: ಡಿಸಿಎಂ ಡಿಕೆ ಶಿವಕುಮಾರ ಮನೆದೇವರು ಕೆಂಕೇರಮ್ಮ ದೇಗುಲ ಕಳ್ಳತನ; ದೇವಿಯ ಮೈಮೇಲಿನ ತಾಳಿ ಚಿನ್ನಾಭರಣ ಕದ್ದ ಖದೀಮರು!
Recommended image2
Jewelry Theft Case: ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಲು ಆಭರಣ ಕದ್ದ ಕೆಲಸದಾಕೆ ಬಂಧನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved