06:46 PM (IST) Jun 27

Karnataka News Live 27 June 2026Daali Dhananjaya - ತಾಯಿ ಸೆಂಟಿಮೆಂಟ್‌, ಗ್ಯಾಂಗ್‌ವಾರ್‌, ಕ್ರಿಕೆಟ್ ಬೆಟ್ಟಿಂಗ್... 'ಮದರ್ ಪ್ರಾಮಿಸ್'ನಲ್ಲಿ ಏನಿದೆ?

Mother Promise: ಡಾಲಿ ಧನಂಜಯ ನಟಿಸಿ ನಿರ್ಮಿಸಿರುವ 'ಮದರ್ ಪ್ರಾಮಿಸ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸ್ನೇಹ, ಗ್ಯಾಂಗ್‌ವಾರ್‌, ತಾಯಿ-ಮಗನ ಭಾವನಾತ್ಮಕ ಕಥೆಯೊಂದಿಗೆ ಜುಲೈ 10ರಂದು ಸಿನಿಮಾ ಬಿಡುಗಡೆಯಾಗಲಿದೆ.

Read Full Story
06:28 PM (IST) Jun 27

Karnataka News Live 27 June 2026Hebbal ಟ್ರಾಫಿಕ್‌ ಕಿರಿಕಿರಿಗೆ ಮುಕ್ತಿ, ವೆಟರ್ನರಿ ಕಾಲೇಜು ಆವರಣದಲ್ಲಿ ಸುರಂಗ ಮಾರ್ಗಕ್ಕೆ ಮಣ್ಣು ಪರೀಕ್ಷೆ ಆರಂಭ

ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿನ ತೀವ್ರ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) 2.18 ಕಿ.ಮೀ ಉದ್ದದ ಕಿರು ಸುರಂಗ ರಸ್ತೆ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ. ಈ ಯೋಜನೆಯ ಭಾಗವಾಗಿ ಪಶುವೈದ್ಯಕೀಯ ಕಾಲೇಜು ಆವರಣದಲ್ಲಿ ಮಣ್ಣು ಪರೀಕ್ಷೆ ಆರಂಭವಾಗಿದೆ,

Read Full Story
06:12 PM (IST) Jun 27

Karnataka News Live 27 June 2026Shivamogga - ಲಿಂಗನಮಕ್ಕಿಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ; ಕರಗಿದ ಜಲರಾಶಿ, ರಾಜ್ಯಕ್ಕೆ ಎದುರಾಗಲಿದೆಯೇ ಪವರ್ ಕಟ್ ಭೀತಿ?

ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಈ ಹಿನ್ನೆಲೆಯಲ್ಲಿ, ಕೆಪಿಸಿಎಲ್ ಲಿಂಗನಮಕ್ಕಿ ಜಲವಿದ್ಯುತ್ ಕೇಂದ್ರದ ಒಂದು ಘಟಕದಲ್ಲಿ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 

Read Full Story
06:12 PM (IST) Jun 27

Karnataka News Live 27 June 20268 ಗಂಟೆ ಮೇಕಪ್‌, ನಿದ್ದೆಯೇ ಇಲ್ಲ... 'ನಾಗಬಂಧಂ'ಗಾಗಿ KGF ಗರುಡ ರಾಮ್ ಪಟ್ಟ ಕಷ್ಟ ಏನು?

Nagabandham ಸಿನಿಮಾದಲ್ಲಿ ಗರುಡ ರಾಮ್ 8 ಗಂಟೆ ಮೇಕಪ್ ಮಾಡಿಕೊಂಡು ನಟಿಸಿದ್ದಾರೆ. ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ನಿಗೂಢ ರಹಸ್ಯ ಆಧಾರಿತ ಈ ಪ್ಯಾನ್ ಇಂಡಿಯಾ ಸಿನಿಮಾ ಜುಲೈ 3ರಂದು ಬಿಡುಗಡೆಯಾಗಲಿದೆ.

Read Full Story
05:57 PM (IST) Jun 27

Karnataka News Live 27 June 2026Uttara kannada ಇತಿಹಾಸಕ್ಕೆ ಹೊಸ ತಿರುವು ನೀಡಿದ ಹೊನ್ನಾವರ ಕಡತೋಕೆ ಶಾಸನದ ಮರು ಸಂಶೋಧನೆ!

ಹೊನ್ನಾವರದ ಕಡತೋಕೆ ಶಿಲಾಶಾಸನದ ಮರು-ಅಧ್ಯಯನವು ಐತಿಹಾಸಿಕ ಸತ್ಯವನ್ನು ಬಹಿರಂಗಪಡಿಸಿದೆ. ಶಾಸನದಲ್ಲಿ ಉಲ್ಲೇಖಿಸಲಾದ 'ಕಡತೋಕೆಯ ದೇವರು' ದೇವಸ್ಥಾನದ ಮೂರ್ತಿಯಲ್ಲ, ಬದಲಿಗೆ ಸ್ವರ್ಣವಲ್ಲಿ ಮಠದ 26ನೇ ಯತಿಗಳಾದ ಶ್ರೀ ವಿಶ್ವವಂದ್ಯ ಸರಸ್ವತೀ ಸ್ವಾಮೀಜಿ ಎಂದು ಸಂಶೋಧಕ ಶ್ಯಾಮಸುಂದರ ಗೌಡರು ಸಾಬೀತುಪಡಿಸಿದ್ದಾರೆ. ಈ ಸಂಶೋಧನೆಯು ಶಾಸನದ ಕಾಲವನ್ನು ನಿಖರವಾಗಿ ನಿರ್ಣಯಿಸಿ, ಗುರು ಪರಂಪರೆಯ ಇತಿಹಾಸವನ್ನು ಪರಿಷ್ಕರಿಸಿದೆ.
Read Full Story
05:47 PM (IST) Jun 27

Karnataka News Live 27 June 2026Priya Anand Interview - ನನಗೆ ಬಾಲಿವುಡ್‌ಗಿಂತ ಕನ್ನಡ ಚಿತ್ರವೇ ದೊಡ್ಡ ಅವಕಾಶ - ಪ್ರಿಯಾ ಆನಂದ್‌

Priya Anand Interview: 'ಬಲರಾಮನ ದಿನಗಳು' ಚಿತ್ರದ ಬಗ್ಗೆ, ವಿನೋದ್ ಪ್ರಭಾಕರ್ ಜೊತೆಗಿನ ಅನುಭವ, ಪುನೀತ್ ರಾಜ್‌ಕುಮಾರ್ ನೆನಪುಗಳು ಮತ್ತು ಕನ್ನಡ ಚಿತ್ರರಂಗದ ಕುರಿತು ಪ್ರಿಯಾ ಆನಂದ್ ವಿಶೇಷ ಸಂದರ್ಶನ.

Read Full Story
05:45 PM (IST) Jun 27

Karnataka News Live 27 June 2026ಪತ್ನಿ ದೂರು ಕೊಟ್ಟ ತಕ್ಷಣ ಪತಿ ಬಂಧನ - ಅರೆಸ್ಟ್​ ನಿಮಗೆ ಆಟನಾ? ಪೊಲೀಸರ ಬೆವರಿಳಿಸಿದ ಹೈಕೋರ್ಟ್​

ಪತ್ನಿಯ ನಕಲಿ ದಾಖಲೆ ಮತ್ತು ವಂಚನೆ ಆರೋಪದ ಮೇಲೆ ಪತಿಯನ್ನು ಬಂಧಿಸಿದ್ದ ಪೊಲೀಸರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಾನೂನನ್ನು ದುರುಪಯೋಗಪಡಿಸಿಕೊಂಡು ನಾಗರಿಕರ ಜೀವನದೊಂದಿಗೆ ಆಟವಾಡುತ್ತಿದ್ದೀರಿ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಪತಿಯನ್ನು ತಕ್ಷಣ ಬಿಡುಗಡೆ ಮಾಡಲು ಮತ್ತು ತನಿಖಾಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದೆ.
Read Full Story
05:32 PM (IST) Jun 27

Karnataka News Live 27 June 2026Vijayanagara - ಧರ್ಮಸಾಗರದಲ್ಲಿ ಅಪರೂಪದ ಕಪ್ಪು ಕಲ್ಲಿನ ಶಾಸನ ಪತ್ತೆ, ಆದಿಮಾನವರ ವಾಸಸ್ಥಾನದ ಕುರುಹು ಪತ್ತೆ!

ಹೊಸಪೇಟೆಯ ಧರ್ಮಸಾಗರ ಗ್ರಾಮದಲ್ಲಿ ಸಂಶೋಧನಾ ತಂಡವೊಂದು ಅಪರೂಪದ ಕಪ್ಪು ಕಲ್ಲಿನ ಶಿಲಾಶಾಸನ, ಆದಿಮಾನವರು ಬಳಸುತ್ತಿದ್ದ ಕಲ್ಲುಗೊಡಲಿಗಳು ಮತ್ತು 101 ಲಿಂಗಗಳಿರುವ ವಿಶಿಷ್ಟ ಗುಡಿಯನ್ನು ಪತ್ತೆಹಚ್ಚಿದೆ. ಈ ಅನ್ವೇಷಣೆಯು ವಿಜಯನಗರ ಕಾಲದ ಇತಿಹಾಸ ಮತ್ತು ಪ್ರಾಗೈತಿಹಾಸಿಕ ಕುರುಹುಗಳ ಮೇಲೆ ಹೊಸ ಬೆಳಕು ಚೆಲ್ಲಿದೆ.
Read Full Story
05:14 PM (IST) Jun 27

Karnataka News Live 27 June 2026Vinod Prabhakar Interview - 'ಸ್ಕ್ರಿಪ್ಟ್‌ಗಾಗಿ ನಟರು'... ವಿನೋದ್ ಪ್ರಭಾಕರ್ ಮಾತಿನ ಮರ್ಮವೇನು?

Vinod Prabhakar: 'ಬಲರಾಮನ ದಿನಗಳು' ಚಿತ್ರಕ್ಕಾಗಿ ಪಾತ್ರವಾಗಿಯೇ ಬದುಕಿದ್ದೇನೆ. 'ಸ್ಕ್ರಿಪ್ಟ್‌ನೇ ಹೀರೋ', 13 ಕೋಟಿ ಬಜೆಟ್ ಸಿನಿಮಾ, 'ಮಾದೇವ' ಯಶಸ್ಸು ಮತ್ತು ನಿರ್ದೇಶನದ ಕನಸಿನ ಬಗ್ಗೆ ವಿನೋದ್ ಪ್ರಭಾಕರ್ ವಿಶೇಷ ಸಂದರ್ಶನ.

Read Full Story
05:13 PM (IST) Jun 27

Karnataka News Live 27 June 2026ಅಭಿವೃದ್ಧಿಯ ಗಂಧಗಾಳಿಯೇ ಗೊತ್ತಿಲ್ಲದ ಅಧಿಕಾರಿಗಳು ಕಟ್ಟಿದ ಹೈಟೆಕ್‌ ಸ್ಮಶಾನ, 'ಬೆಂಗಳೂರಿನ ಅಂಡರ್‌ಗ್ರೌಂಡ್ ಎಸಿ ಮಾರ್ಕೆಟ್‌'!

ಬೆಂಗಳೂರಿನ 'ಕೃಷ್ಣದೇವರಾಯ ಪಾಲಿಕೆ ಬಜಾರ್' ಎಂಬ ₹14 ಕೋಟಿ ವೆಚ್ಚದ ಹವಾನಿಯಂತ್ರಿತ ಭೂಗತ ಮಾರುಕಟ್ಟೆಯು ಉದ್ಘಾಟನೆಯಾಗಿ 23 ತಿಂಗಳು ಕಳೆದರೂ ಜನರಿಲ್ಲದೆ ಭಣಗುಡುತ್ತಿದೆ. ವ್ಯಾಪಾರಿಗಳ ನಿರಾಸಕ್ತಿಯಿಂದಾಗಿ ಸಾರ್ವಜನಿಕರ ಹಣ ಪೋಲಾಗಿರುವುದಕ್ಕೆ ಸಾಕ್ಷಿಯಾಗಿದೆ.

Read Full Story
04:58 PM (IST) Jun 27

Karnataka News Live 27 June 2026ಬೆಂಗಳೂರಲ್ಲಿ ಕಿಡ್ನಾಪ್, ತುಮಕೂರಲ್ಲಿ ಕಾರ್ ಬ್ಲಾಸ್ಟ್ - ಪಾಗಲ್ ಪ್ರೇಮಿ ಸಜೀವ ದಹನ, ಸಿನಿಮೀಯ ರೀತಿ ಬದುಕಿದ ಯುವತಿ!

ಪ್ರೀತಿ ನಿರಾಕರಿಸಿದ ಕಾರಣಕ್ಕೆ ಬೆಂಗಳೂರಿನಿಂದ ಯುವತಿಯನ್ನು ಅಪಹರಿಸಿದ್ದ ಯುವಕ, ತುಮಕೂರು ಬಳಿ ಚಲಿಸುವ ಕಾರಿನಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಲು ಯತ್ನಿಸಿದ್ದಾನೆ. ಈ ಘಟನೆಯಲ್ಲಿ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿ ಯುವಕ ಕಾರಿನಲ್ಲೇ ಸಜೀವ ದಹನವಾಗಿದ್ದಾನೆ.
Read Full Story
04:55 PM (IST) Jun 27

Karnataka News Live 27 June 2026Simple Suni Interview - ಈ ಕತೆಗೆ ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ ಚಿತ್ರವೇ ಸ್ಫೂರ್ತಿ - ಸಿಂಪಲ್‌ ಸುನಿ

Simple Suni Interview: 'ಮೋಡ ಕವಿದ ವಾತಾವರಣ' ಚಿತ್ರದ ಕಥೆ ಹೇಗೆ ಹುಟ್ಟಿತು? ಶೀಲಂ ಹೀರೋ ಆದದ್ದು ಹೇಗೆ? ದಿಗಂತ್ ಜೊತೆ ಅಂಡರ್‌ವರ್ಡ್ ಸಿನಿಮಾ ಯೋಜನೆ ಏನು? ಸಿಂಪಲ್‌ ಸುನಿ ವಿಶೇಷ ಸಂದರ್ಶನ ಓದಿ.

Read Full Story
04:42 PM (IST) Jun 27

Karnataka News Live 27 June 2026Aditi AI Film - ಶೂಟಿಂಗ್ ಇಲ್ಲದೆ ಸಿನಿಮಾ? ಎಐ ಮೂಲಕ ಸಿದ್ಧವಾದ ಟೆಲಿಚಿತ್ರ 'ಅದಿತಿ'ಯಲ್ಲಿ ಏನಿದೆ?

Aditi AI Film: ಎಐ ತಂತ್ರಜ್ಞಾನ ಬಳಸಿ ಪಿ.ವಿ. ಪ್ರದೀಪ್ ಕುಮಾರ್ ನಿರ್ದೇಶಿಸಿರುವ ಕನ್ನಡ ಟೆಲಿಚಿತ್ರ 'ಅದಿತಿ' ಮಂಗಳೂರಿನಲ್ಲಿ ಬಿಡುಗಡೆಯಾಗಿದೆ. ಸಸ್ಪೆನ್ಸ್, ಆಕ್ಷನ್ ಮತ್ತು ಪ್ರೇಮಕಥೆಯೊಂದಿಗೆ ಹೊಸ ಪ್ರಯೋಗ.

Read Full Story
04:24 PM (IST) Jun 27

Karnataka News Live 27 June 2026ಗಂಡ, ಇಬ್ಬರು ಮಕ್ಕಳ ಬಿಟ್ಟು ಪ್ರಿಯಕರನೊಂದಿಗೆ ಬಂದಿದ್ದ ಮಹಿಳೆ ನಿಗೂಢ ಕೊ*; ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ!

ಬೆಂಗಳೂರಿನ ಜಿಗಣಿಯಲ್ಲಿ, ಪತಿ-ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ವಾಸಿಸುತ್ತಿದ್ದ ಅಕ್ಷತಾ ಎಂಬ ಮಹಿಳೆಯನ್ನು ಉಸಿರುಗಟ್ಟಿಸಿ ಕೊ* ಮಾಡಲಾಗಿದೆ. ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಕೊ* ಬಳಿಕ ಪ್ರಿಯಕರ ನಾನಾ ಸಾಹೇಬ್ ಪರಾರಿಯಾಗಿದ್ದಾನೆ. ಜಿಗಣಿ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Read Full Story
04:21 PM (IST) Jun 27

Karnataka News Live 27 June 2026Balaramana Dinagalu Review - 80ರ ದಶಕದ ಬೆಂಗಳೂರಿನ ಭೂಗತ ಜಗತ್ತಿನಲ್ಲಿ ಮರಿ ಟೈಗರ್ ಆರ್ಭಟ!

Balaramana Dinagalu Review: 80ರ ದಶಕದ ಬೆಂಗಳೂರಿನ ಭೂಗತ ಜಗತ್ತು, ವಿನೋದ್ ಪ್ರಭಾಕರ್ ಅಭಿನಯ ಮತ್ತು ಕೆ.ಎಂ. ಚೈತನ್ಯ ನಿರ್ದೇಶನದ 'ಬಲರಾಮನ ದಿನಗಳು' ಸಿನಿಮಾ ಹೇಗಿದೆ? ಸಂಪೂರ್ಣ ಕನ್ನಡ ವಿಮರ್ಶೆ ಮತ್ತು ರೇಟಿಂಗ್ ಓದಿ.

Read Full Story
04:17 PM (IST) Jun 27

Karnataka News Live 27 June 2026Kiccha Sudeep Caravan - ಅಬ್ಬಬ್ಬಾ.. 6.5 ಕೋಟಿ ರೂ ಬೆಲೆ ಕ್ಯಾರವಾನ್‌ ಖರೀದಿಸಿದ ಕಿಚ್ಚ ಸುದೀಪ್!

Actor Kiccha Sudeep News: ಭಾರತದಲ್ಲಿ ಸಾಕಷ್ಟು ದಿಗ್ಗಜರು ಸ್ವಂತ ಕ್ಯಾರವಾನ್‌ ಹೊಂದಿರುತ್ತಾರೆ. ಅದರಲ್ಲಿ ಬಾತ್‌ರೂಮ್‌, ಬೆಡ್‌, ಕಿಚನ್‌ ಸೇರಿದಂತೆ ಕೆಲ ಸೌಲಭ್ಯಗಳು ಇರುತ್ತವೆ. ಈಗ ನಟ ಕಿಚ್ಚ ಸುದೀಪ್‌ ಅವರು ಕ್ಯಾರವಾನ್‌ ಖರೀದಿ ಮಾಡಿದ್ದಾರೆ.

Read Full Story
04:05 PM (IST) Jun 27

Karnataka News Live 27 June 2026Moda Kavida Vatavarana Review - ಮಳೆ, ಮಂಜು, ಹಸಿರು ಬೆಟ್ಟಗಳ ನಡುವೆ ಸಿಂಪಲ್ ಸುನಿ ಮ್ಯಾಜಿಕ್!

Moda Kavida Vatavarana Review: ಮಳೆ, ಹಸಿರು ಬೆಟ್ಟಗಳು, ಕಾವ್ಯಾತ್ಮಕ ನಿರೂಪಣೆ ಮತ್ತು ಸಸ್ಪೆನ್ಸ್‌ ಕಥೆಯೊಂದಿಗೆ ಸಿಂಪಲ್ ಸುನಿ ನಿರ್ದೇಶನದ ಮೋಡ ಕವಿದ ವಾತಾವರಣ ಸಿನಿಮಾ ಹೇಗಿದೆ? ಸಂಪೂರ್ಣ ಕನ್ನಡ ವಿಮರ್ಶೆ ಹಾಗೂ ರೇಟಿಂಗ್ ಓದಿ.

Read Full Story
03:50 PM (IST) Jun 27

Karnataka News Live 27 June 2026ತುಮಕೂರು - ಕ್ಯಾಬ್ ಮಾಡಿ ಉತ್ತರಕನ್ನಡಕ್ಕೆ ಯುವತಿ ಜತೆ ಹೊರಟ ಯುವಕ ಕಾರೊಳಗೆ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಸಾವು!

ತುಮಕೂರು ಜಿಲ್ಲೆಯ ಶಿರಾ ಬಳಿ, ಚಲಿಸುತ್ತಿದ್ದ ಕಾರಿನಲ್ಲಿ ಯುವಕನೊಬ್ಬ ಯುವತಿಗೆ ಚಾಕುವಿನಿಂದ ಇರಿದು, ಬಳಿಕ ಕಾರಿನೊಳಗೆ ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಸಜೀವ ದಹನವಾಗಿದ್ದಾನೆ. ಈ ಭೀಕರ ಘಟನೆಯಲ್ಲಿ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
Read Full Story
03:43 PM (IST) Jun 27

Karnataka News Live 27 June 2026ನಾಯಕನಾದ ಮೊದಲ ಪಂದ್ಯದಲ್ಲೇ ಸೋಲು..! ಕೆಟ್ಟ ದಾಖಲೆ ಬೆನ್ನಲ್ಲೇ ಗುಡುಗಿದ ಶ್ರೇಯಸ್ ಅಯ್ಯರ್!

ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 34 ರನ್‌ಗಳಿಂದ ಸೋತಿದ್ದು, ನಾಯಕನಾಗಿ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ ಕೆಟ್ಟ ದಾಖಲೆ ಬರೆದಿದ್ದಾರೆ. ಈ ಮೂಲಕ, ನಾಯಕರಾದ ಮೊದಲ ಪಂದ್ಯದಲ್ಲೇ ಸೋತ ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಶುಭಮನ್ ಗಿಲ್ ಅವರ ಸಾಲಿಗೆ ಅಯ್ಯರ್ ಸೇರಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅಯ್ಯರ್, ತಂಡದ ಕಳಪೆ ಪ್ರದರ್ಶನವನ್ನು ಒಪ್ಪಿಕೊಂಡಿದ್ದಾರೆ.
Read Full Story
03:12 PM (IST) Jun 27

Karnataka News Live 27 June 2026Bidadi Township - ಸಿಎಂ ಡಿಕೆಶಿಗೆ ಒಂದು ಕುರ್ಚಿ ಮೀಸಲಿಟ್ಟು ಕಾದು ಕುಳಿತ ಹೆಚ್‌ಡಿಕೆ! ಮಳೆ ನಡುವೆ ಭಾಷಣ ಕೇಳುತ್ತ ನಿಂತ ರೈತರು!

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ಗಾಗಿ ರೈತರ ಭೂಸ್ವಾಧೀನವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿ, ಅವರಿಗಾಗಿ ಖಾಲಿ ಕುರ್ಚಿ ಇಟ್ಟು ಕಾದರು. ರೈತರ ಭೂಮಿ ಉಳಿಸುವ ಹೋರಾಟವನ್ನು ಮುಂದುವರೆಸುವುದಾಗಿ ಅವರು ಭರವಸೆ.

Read Full Story