- Home
- News
- State
- Karnataka News Live: ಡಾಲಿ ಧನಂಜಯ ಬಿರಿಯಾನಿ ತಿನ್ನೋ ವಿಡಿಯೋ ವೈರಲ್ ಆಗ್ತಿರೋದೇಕೆ? ಮಾಂಸ ತಿಂದ್ರೆ ಏನ್ ತಪ್ಪು?
Karnataka News Live: ಡಾಲಿ ಧನಂಜಯ ಬಿರಿಯಾನಿ ತಿನ್ನೋ ವಿಡಿಯೋ ವೈರಲ್ ಆಗ್ತಿರೋದೇಕೆ? ಮಾಂಸ ತಿಂದ್ರೆ ಏನ್ ತಪ್ಪು?

ಹಾಸನ: ರಾಜಕೀಯ ಏಳುಬೀಳುಗಳ ನಡುವೆ ಮಂಕಾಗಿರುವ ಜೆಡಿಎಸ್ ಪುಟಿದೇಳಲು ರಣತಂತ್ರ ರೂಪಿಸುತ್ತಿದ್ದು, ಇದಕ್ಕಾಗಿ ತನ್ನ ತವರು ನೆಲದಿಂದಲೇ ಪ್ರಯತ್ನ ಶುರು ಮಾಡಿದೆ. ಇದರ ಮೊದಲ ಹಂತವಾಗಿ ಹಾಸನದಲ್ಲಿ ಶನಿವಾರ ಜೆಡಿಎಸ್ ಜನತಾ ಸಮಾವೇಶ ಹಮ್ಮಿಕೊಂಡಿದೆ.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಎಂಎಲ್ಸಿ ಸೂರಜ್ ರೇವಣ್ಣ ಭಾಗವಹಿಸಲಿದ್ದಾರೆ
Karnataka News Live 24 January 2026ಡಾಲಿ ಧನಂಜಯ ಬಿರಿಯಾನಿ ತಿನ್ನೋ ವಿಡಿಯೋ ವೈರಲ್ ಆಗ್ತಿರೋದೇಕೆ? ಮಾಂಸ ತಿಂದ್ರೆ ಏನ್ ತಪ್ಪು?
Karnataka News Live 24 January 2026ನಿಮ್ಮ ಮ್ಯಾನೇಜರ್ಗೆ ಒಳ್ಳೇ ಲೀಡರ್ಶಿಪ್ ಕ್ವಾಲಿಟಿ ಇದೆಯಂದ್ರೆ ಪಕ್ಕಾ ಈ ರಾಶಿಯವರು!
Sun Signಗೂ ಹಲವರ ವ್ಯಕ್ತಿತ್ವಕ್ಕೂ ನೇರಾ ನೇರಾ ಸಂಬಂಧವಿರುತ್ತೆ. ಕೆಲವರು ಲೀಡರ್ಸ್ ಆಗಿರುತ್ತಾರೆ. ಯಾರು ಆ ಹುದ್ದೆಯನ್ನು ಸಮರ್ಪಕವಾಗಿ ಮ್ಯಾನೇಜ್ ಮಾಡುತ್ತಾರೋ ಅವರು ಇವೇ ನಾಲ್ಕು ರಾಶಿಯವರು.
Karnataka News Live 24 January 2026ದಶಕದ ಪ್ರೀತಿಯನ್ನು ಸೈಲೆಂಟ್ ಆಗಿ ಸಂಭ್ರಮಿಸಿದ ರಿಷಭ್ ಶೆಟ್ಟಿ, 'ಇದೇ ಬದುಕಿನ ಅತಿದೊಡ್ಡ ಅಚ್ಚರಿ' ಎಂದ ಡಿವೈನ್ ಸ್ಟಾರ್!
ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ತಮ್ಮ ಪ್ರೀತಿಗೆ 10 ವರ್ಷ ತುಂಬಿದ ಸಂಭ್ರಮವನ್ನು ಆಚರಿಸಿದ್ದಾರೆ. ಈ ವಿಶೇಷ ದಿನದಂದು ರಿಷಭ್, ತಮ್ಮ ಪ್ರೀತಿಯ ಪಯಣವನ್ನು 'ಬದುಕಿನ ಸುಂದರ ಅಚ್ಚರಿ' ಮತ್ತು 'ಅತ್ಯಂತ ಸುಂದರವಾದ ಚಿತ್ರಕಥೆ' ಎಂದು ಬಣ್ಣಿಸಿದ್ದಾರೆ.
Karnataka News Live 24 January 2026ಲುಕ್ಕುಂಡಿ ಮಣ್ಣಿನಡಿ ಹುದುಗಿದೆಯಾ 1000 ದೇಗುಲ, ಇತಿಹಾಸ ತಜ್ಞೆ ಹನುಮಾಕ್ಷಿ ಸ್ಫೋಟಕ ಮಾಹಿತಿ
ಲುಕ್ಕುಂಡಿ ಮಣ್ಣಿನಡಿ ಹುದುಗಿದೆಯಾ 1000 ದೇಗುಲ, ಹಿಂದೂ ದೇವಸ್ಥಾನ, ಜಿನ ದೇಗುಲ ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿರಗಳಿದ್ದ ಅತ್ಯಂತ ಸಮೃದ್ಧ ನಗರ ಲುಕ್ಕುಂಡಿ ಇದೀಗ ಮಣ್ಣಿನಡಿ ಹುದುಗಿ ಹೋಗಿದೆಯಾ? ಏನಿದರ ಇತಿಹಾಸ
Karnataka News Live 24 January 2026ಮಹಿಳೆಯನ್ನು ಕಟ್ಟಿ ಹಾಕಿ ಮತ್ತೊಬ್ಬ ಮಹಿಳೆಯಿಂದ ಥಳಿತ, ಚಾಮರಾಜನಗರದಲ್ಲಿ ಅಮಾನುಷ ಘಟನೆ
ಮಹಿಳೆಯನ್ನು ಕಟ್ಟಿ ಹಾಕಿ ಮತ್ತೊಬ್ಬ ಮಹಿಳೆಯಿಂದ ಥಳಿತ, ದನ ಮೇಯುತ್ತಿದೆ ಎಂದು ಎಚ್ಚರಿಕೆ ಕೊಟ್ಟ ಮಹಿಳೆಯನ್ನೇ ಕಟ್ಟಿ ಹಾಕಿ ಥಳಿಸಿದ ಘಟನೆ ಇದು. ಘಟನೆ ಸಂಬಂಧ ಮೂವರು ವಿರುದ್ದ ಪ್ರಕರಣ ದಾಖಲಾಗಿದೆ.
Karnataka News Live 24 January 2026ಜೈಲು ಡಿಜಿಪಿ ಅಲೋಕ್ ಕುಮಾರ್ ಆದೇಶ ಕೇಳಿ ಕಿಲ್ಲಿಂಗ್ ಸ್ಟಾರ್ ದರ್ಶನ್ ಕೊತ ಕೊತ!
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಸೇರಿದಂತೆ ರಾಜ್ಯದ ಎಲ್ಲಾ ಕೈದಿಗಳಿಗೆ ಜೈಲಿನ ಡಿಜಿಪಿ ಅಲೋಕ್ ಕುಮಾರ್ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಈ ಆದೇಶದ ಪ್ರಕಾರ, ಕೈದಿಗಳಿಗೆ ಹೊರಗಿನಿಂದ ಸರಬರಾಜು ಮಾಡುವ ಆಹಾರ, ಬಟ್ಟೆ ಮತ್ತು ಇತರ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.
Karnataka News Live 24 January 2026ಬಿಗ್ ಬಾಸ್ ಗಿಲ್ಲಿಗೆ 2 ಮಿಲಿಯನ್ ಫಾಲೋವರ್ಸ್ ದಾಖಲೆ, ನಿವೇದಿತಾಗೆ ಠಕ್ಕರ್ ಕೊಡ್ತನಾ ಚಾಂಪಿಯನ್?
ಬಿಗ್ ಬಾಸ್ ಗಿಲ್ಲಿಗೆ 2 ಮಿಲಿಯನ್ ಫಾಲೋವರ್ಸ್ ದಾಖಲೆ, ಬಿಗ್ ಬಾಸ್ 12ರ ಮೂಲಕ ಜನರ ಮನಸ್ಸು ಗೆದ್ದಿರುವ ಗಿಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಇದೀಗ ನಿವೇದಿತಾ ಗೌಡ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.
Karnataka News Live 24 January 2026ಜನವರಿ 25 ರಥ ಸಪ್ತಮಿ, 2026 ಸೂರ್ಯ ವರ್ಷ, ವೀಕ್ ಇರೋರು ಹೀಗ್ ಮಾಡಿ ಪವರ್ ಹೆಚ್ಚಿಸಿಕೊಳ್ಳಿ
ಸೂರ್ಯ ದೇವನ ಹುಟ್ಟು ಹಬ್ಬವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ. ಸೂರ್ಯ ಉತ್ತರ ದಿಕ್ಕಿಗೆ ಆರಂಭಿಸುವ ಪಯಣ (ಉತ್ತರಾಯಣ) ಹಾಗೂ ಚಳಿಗಾಲದ ಅಂತ್ಯದ ಸೂಚಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
Karnataka News Live 24 January 2026'ನನ್ನ ಕಿಡ್ನಿ ಫೇಲ್ ಆಗಿ 3 ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಿಸ್ತೀನಿ, ಹೋರಾಟದ ಕಿಚ್ಚು ಆರಿಲ್ಲ'; ದೇವೇಗೌಡರ ಗುಡುಗು
ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಅನಾರೋಗ್ಯದ ನಡುವೆಯೂ ಕುಟುಂಬದ ವಿರುದ್ಧದ ರಾಜಕೀಯ ಸಂಚುಗಳನ್ನು ಎದುರಿಸುವ ದೃಢ ಸಂಕಲ್ಪ ವ್ಯಕ್ತಪಡಿಸಿದರು. ರೇವಣ್ಣ ಬಂಧನವನ್ನು ನೆನೆದು ಭಾವುಕರಾದರು, ಜೆಡಿಎಸ್ ಈಗ ಎನ್ಡಿಎ ಮೈತ್ರಿಯ ಪ್ರಬಲ ಭಾಗವಾಗಿದೆ ಎಂದರು.
Karnataka News Live 24 January 2026ಕನಸಲ್ಲಿ ಹಾವು ಕಂಡ್ರೆ ಕೆಟ್ಟದ್ದೋ, ಒಳ್ಳೇದೋ? ದ್ವಂದ್ವವೋ, ಹೊಸತನದ ಸಂಕೇತವೋ?
ಹಾವೆಂದರೆ ಮನುಷ್ಯನಿಗೆ ಎಲ್ಲಿಲದ ಭಯ, ಆತಂಕ. ಕನಸಲ್ಲಿ ಈ ಸರಿಸೃಪವನ್ನು ಕಂಡು ಬೆಚ್ಚಿ ಬೀಳಿ ಎಚ್ಚರವಾಗೋದಿದೆ. ಅಷ್ಟಕ್ಕೂ ಹಾವು ಶುಭ ಸೂಚಕವೋ, ಅಶುಭವೋ?
Karnataka News Live 24 January 2026ದುಡ್ಡಿಲ್ಲದೇ ಹೂವು ಮಾರ್ತಿದ್ದೆ - ಬಡತನದ ದಿನ ನೆನೆದು ವೇದಿಕೆ ಮೇಲೆ ಬಿಕ್ಕಿಬಿಕ್ಕಿ ಅತ್ತ Bhargavi LLB
‘ಅಮೃತಧಾರೆ’ ಧಾರಾವಾಹಿಯ ಮಲ್ಲಿಯಿಂದ ಭಾರ್ಗವಿ ಎಲ್ಎಲ್ಬಿ ಆಗಿ ಜನಪ್ರಿಯರಾಗಿರುವ ನಟಿ ರಾಧಾ ಭಗವತಿ, ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ವೇದಿಕೆಯಲ್ಲಿ ತಮ್ಮ ಹಿಂದಿನ ಬಡತನದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಗಾಯಕಿಯಾಗಲು ಬಂದು ನಟಿಯಾಗಿ ಯಶಸ್ಸು ಕಂಡ ತಮ್ಮ ನೋವಿನ ಹಾದಿ ತಿಳಿಸಿದ್ದಾರೆ.
Karnataka News Live 24 January 2026ದಿಢೀರ್ ಲೈವ್ಗೆ ಬಂದ Gilli Nata - ಕನ್ನಡಿಯಲ್ಲಿ ಮುಖ ನೋಡಲು ಆಗ್ತಿಲ್ಲ ಎನ್ನುತ್ತಲೇ ಫ್ಯಾನ್ಸ್ಗೆ ಮಾಡಿದ್ರು ಮನವಿ
ಬಿಗ್ಬಾಸ್ ವಿನ್ನರ್ 'ಗಿಲ್ಲಿ ನಟ' ಇನ್ಸ್ಟಾಗ್ರಾಮ್ ಲೈವ್ನಲ್ಲಿ ಅಭಿಮಾನಿಗಳ ಪ್ರೀತಿಗೆ ಮೂಕರಾಗಿದ್ದಾರೆ. ತಮ್ಮ ಗೆಲುವನ್ನು ನಂಬಲಾಗುತ್ತಿಲ್ಲ ಎಂದಿರುವ ಅವರು, ಈ ಪ್ರೀತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಒಂದು ಮನವಿ ಮಾಡಿಕೊಂಡಿದ್ದಾರೆ. ಏನದು?
Karnataka News Live 24 January 2026ಪಿಎಸ್ಐ ನೇಮಕಾತಿ ಹಗರಣ - ಎಡಿಜಿಪಿ ಅಮೃತ್ ಪಾಲ್ ಸೇರಿ ಇಬ್ಬರ ₹1.53 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ಪಿಎಸ್ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು (ಇಡಿ) ಮಾಜಿ ಎಡಿಜಿಪಿ ಅಮೃತ್ ಪಾಲ್ ಮತ್ತು ಹೆಡ್ ಕಾನ್ಸ್ಟೇಬಲ್ ಶ್ರೀಧರ್ ಅವರಿಗೆ ಸೇರಿದ 1.53 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದರು.
Karnataka News Live 24 January 2026Bigg Boss ಗೆಲುವಿನ ಬೆನ್ನಲ್ಲೇ ಗಿಲ್ಲಿ ನಟ ರಾಜಕೀಯಕ್ಕೆ ಎಂಟ್ರಿ? ಯಾವ ಪಕ್ಷ? ಗುಟ್ಟು ರಟ್ಟು ಮಾಡಿದ ವಿನ್ನರ್
ಬಿಗ್ಬಾಸ್ ಸೀಸನ್ 12 ಗೆದ್ದು ಐತಿಹಾಸಿಕ ದಾಖಲೆ ಬರೆದ ಗಿಲ್ಲಿ ನಟನಿಗೆ ರಾಜಕೀಯ ನಾಯಕರಿಂದಲೂ ಬೆಂಬಲ ವ್ಯಕ್ತವಾಗಿತ್ತು, ಇದು ಅವರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಹುಟ್ಟುಹಾಕಿತ್ತು. ಇದರ ಬಗ್ಗೆ ಮಾಧ್ಯಮದವರು ಕೇಳಿರೋ ಪ್ರಶ್ನೆಗೆ ಗಿಲ್ಲಿ ನಟ ಹೇಳಿದ್ದೇನು?
Karnataka News Live 24 January 2026ರಾಜ್ಯದ ಜನತೆಗೆ ಬಜೆಟ್ ಫ್ರೆಂಡ್ಲಿಯಾದ ನಂದಿನಿ - ಇನ್ಮುಂದೆ ಕೇವಲ ₹10ಕ್ಕೆ ಹಾಲು, ಮೊಸರು!
ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಗ್ರಾಹಕರಿಗೆ ಕೇವಲ 10 ರೂಪಾಯಿಗೆ ನಂದಿನಿ ಹಾಲು (160 ML) ಮತ್ತು ಮೊಸರಿನ (140 ML) ಸಣ್ಣ ಪ್ಯಾಕೆಟ್ಗಳನ್ನು ಪರಿಚಯಿಸಿದೆ. ಸಿಎಂ ಸಿದ್ದರಾಮಯ್ಯನವರಿಂದ ಲೋಕಾರ್ಪಣೆಗೊಂಡ ಈ ಉತ್ಪನ್ನಗಳು, ಬ್ಯಾಚುಲರ್ಗಳು, ಒಬ್ಬಂಟಿಗಳಿಗೆ ಹಣ ಉಳಿತಾಯಕ್ಕೆ ಸಹಕಾರಿಯಾಗಲಿವೆ.
Karnataka News Live 24 January 2026ಕಳೆದು ಹೋದ ಸಾಕು ನಾಯಿ ಹುಡುಕಲು ಹೋದ ಮಗ ರೈಲ್ವೆ ಟ್ರ್ಯಾಕ್ ಹೆಣವಾದ; ರೈಲು ಡಿಕ್ಕಿಯಾಗಿ 16ರ ಬಾಲಕ ಸಾವು!
Karnataka News Live 24 January 2026ಕೆಜಿಗಟ್ಟಲೆ ಚಿನ್ನದ ಹಾರ ಹಾಕಿದಾಗ್ಲೇ ಕೆಟ್ಟೋದ ಲಿಫ್ಟ್! ಸಿಕ್ಕಾಕ್ಕೊಂಡು ಪೇಚಿಗೆ ಸಿಲುಕಿದ ಗಿಲ್ಲಿ ನಟ - ಶಾಕಿಂಗ್ ವಿಡಿಯೋ
Karnataka News Live 24 January 2026ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿ ನೀಡ್ತಿದ್ದ ವ್ಯಕ್ತಿಗೆ ಪೊಲೀಸರ ಕಿರುಕುಳ; ವಿಧಾನಸೌಧ ಮುಂದೆ ವಿಷ ಸೇವನೆ!
Karnataka News Live 24 January 2026ಗಂಡು ಕಾಳಿಂಗ ಸರ್ಪ ಏಕಪತ್ನಿ ವ್ರತಸ್ಥನಾ? ಮಿಲನದ ನಂತರ ಸಂಗಾತಿಯನ್ನೇ ತಿನ್ನುತ್ತಾ?
King Cobra ಅಧ್ಯಯನಕ್ಕೆ ಜಗತ್ತಿನೆಲ್ಲೆಡೆಯಿಂದ ಉರಗ ಪ್ರಿಯರು, ವಿಜ್ಞಾನಿಗಳು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಗೆ ಬರುತ್ತಾರೆ. ಕೆಲವರು ಹೇಳುವ ಪ್ರಕಾರ ಮಿಲನದ ನಂತರ ಸಂಗಾತಿಯನ್ನೇ ಕಾಳಿಂಗ ಸರ್ಪ ಕೊಲ್ಲುತ್ತಂತೆ. ಎಷ್ಟು ಸತ್ಯವಿದು?
Karnataka News Live 24 January 2026Annayya Serial ಶಿವು ಅರೆಸ್ಟ್ - ಪೊಲೀಸರು ಕರೆದೊಯ್ದ ವಿಡಿಯೋ ಕಂಡು ಫ್ಯಾನ್ಸ್ ಶಾಕ್- ಏನಾಯ್ತು?
ಅಣ್ಣಯ್ಯ ಸೀರಿಯಲ್ನಲ್ಲಿ ಮನೆಯಿಂದ ಹೊರಬಿದ್ದ ಶಾರದಮ್ಮನಿಗೆ ಮಗ ಶಿವುವೇ ಆಸರೆಯಾಗುತ್ತಾನೆ. ಇದರ ನಡುವೆ ಅಣ್ಣಯ್ಯನ ಬಂಧನದ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?