MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ದುಡ್ಡಿಲ್ಲದೇ ಹೂವು ಮಾರ್ತಿದ್ದೆ: ಬಡತನದ ದಿನ ನೆನೆದು ವೇದಿಕೆ ಮೇಲೆ ಬಿಕ್ಕಿಬಿಕ್ಕಿ ಅತ್ತ Bhargavi LLB

ದುಡ್ಡಿಲ್ಲದೇ ಹೂವು ಮಾರ್ತಿದ್ದೆ: ಬಡತನದ ದಿನ ನೆನೆದು ವೇದಿಕೆ ಮೇಲೆ ಬಿಕ್ಕಿಬಿಕ್ಕಿ ಅತ್ತ Bhargavi LLB

‘ಅಮೃತಧಾರೆ’ ಧಾರಾವಾಹಿಯ ಮಲ್ಲಿಯಿಂದ ಭಾರ್ಗವಿ ಎಲ್​ಎಲ್​ಬಿ ಆಗಿ ಜನಪ್ರಿಯರಾಗಿರುವ ನಟಿ ರಾಧಾ ಭಗವತಿ, ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ವೇದಿಕೆಯಲ್ಲಿ ತಮ್ಮ ಹಿಂದಿನ ಬಡತನದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಗಾಯಕಿಯಾಗಲು ಬಂದು ನಟಿಯಾಗಿ ಯಶಸ್ಸು ಕಂಡ ತಮ್ಮ ನೋವಿನ ಹಾದಿ ತಿಳಿಸಿದ್ದಾರೆ.

2 Min read
Author : Suchethana D
Published : Jan 24 2026, 06:48 PM IST
Share this Photo Gallery
  • FB
  • TW
  • Linkdin
  • Whatsapp
17
ಮಲ್ಲಿಯಿಂದ ಭಾರ್ಗವಿಯಾಗಿ
Image Credit : our own

ಮಲ್ಲಿಯಿಂದ ಭಾರ್ಗವಿಯಾಗಿ

ಅಕ್ಕವ್ರೇ ಅಕ್ಕವ್ರೇ ಎಂದು ಅಮೃತಧಾರೆಯ ಭೂಮಿಕಾ ಹಿಂದೆ ಮುಂದೆ ಓಡಾಡ್ತಿದ್ದ ಮಲ್ಲಿ ಭಾರ್ಗವಿ ಎಲ್​ಎಲ್​ಬಿ ಆಗಿ ಹಲವು ತಿಂಗಳುಗಳೇ ಕಳೆದಿವೆ. ಮಾವನ ವಿರುದ್ಧವೇ ಸಿಡಿದೆದ್ದು ಹೆಣ್ಣೊಬ್ಬಳಿಗೆ ನ್ಯಾಯ ಕೊಡಿಸುವ ಪಾತ್ರದಲ್ಲಿ, ಭಾರ್ಗವಿ ಆಗಿ ಎಲ್ಲರ ಮನಸ್ಸನ್ನು ಗೆಲ್ಲುತ್ತಿರುವವರು ನಟಿ ರಾಧಾ ಭಗವತಿ (Radha Bagavathi).

27
ವಿಭಿನ್ನ ಕ್ಯಾರೆಕ್ಟರ್​ಗಳಲ್ಲಿಯೂ ಸೈ
Image Credit : Instagram

ವಿಭಿನ್ನ ಕ್ಯಾರೆಕ್ಟರ್​ಗಳಲ್ಲಿಯೂ ಸೈ

ಅಲ್ಲಿ ಮಲ್ಲಿಯಾಗಿ, ಇಲ್ಲಿ ಭಾರ್ಗವಿಯಲ್ಲಿ ಎರಡೂ ವಿಭಿನ್ನ, ತದ್ವಿರುದ್ಧ ಕ್ಯಾರೆಕ್ಟರ್​ನಲ್ಲಿ ನಟಿಸಿ ಎರಡರಲ್ಲಿಯೂ ಸೈ ಎನ್ನಿಸಿಕೊಂಡಿರುವ ನಟಿ ರಾಧಾ ಭಗವತಿ, ಭಾರ್ಗವಿಯಾಗಿ ಹವಾ ಸೃಷ್ಟಿಸುತ್ತಿದ್ದಾರೆ. ಇದಾಗಲೇ ಇವರ ನಟನೆಯ ಅಪಾಯವಿದೆ ಎಚ್ಚರಿಕೆ ಸಿನಿಮಾ ಕೂಡ ರಿಲೀಸ್​ ಆಗಿದೆ.

Related Articles

Related image1
ದಿಢೀರ್​ ಲೈವ್​ಗೆ ಬಂದ Gilli Nata: ಕನ್ನಡಿಯಲ್ಲಿ ಮುಖ ನೋಡಲು ಆಗ್ತಿಲ್ಲ ಎನ್ನುತ್ತಲೇ ಫ್ಯಾನ್ಸ್​ಗೆ ಮಾಡಿದ್ರು ಮನವಿ
Related image2
Bigg Boss ಗೆಲುವಿನ ಬೆನ್ನಲ್ಲೇ ಗಿಲ್ಲಿ ನಟ ರಾಜಕೀಯಕ್ಕೆ ಎಂಟ್ರಿ? ಯಾವ ಪಕ್ಷ? ಗುಟ್ಟು ರಟ್ಟು ಮಾಡಿದ ವಿನ್ನರ್​
37
ಕಿರುತೆರೆ, ಹಿರಿತೆಯಲ್ಲಿ ಮಿಂಚಿಂಗ್​
Image Credit : Instagram

ಕಿರುತೆರೆ, ಹಿರಿತೆಯಲ್ಲಿ ಮಿಂಚಿಂಗ್​

ಅಂದಹಾಗೆ ರಾಧಾ ಭಗವತಿ ಅವರು, ರಾಮ್​ಜಿ ನಿರ್ದೇಶನದ ‘ರಾಮಾಚಾರಿ’ ಧಾರಾವಾಹಿಯಲ್ಲಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆಯಿಂದ ಕಳೆದ ವರ್ಷ ರಿಲೀಸ್​ ಆದ ವಸಂತಕಾಲದ ಹೂವುಗಳು ಚಿತ್ರದಲ್ಲಿ ಇವರು ಅಭಿನಯಿಸುವ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟರು. ವಿಜಯಪುರದ ರಾಧಾ ಅವರು, ಈ ಚಿತ್ರದಲ್ಲಿ ಸುಮಾ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ಬಳಿಕ ಈಗ ಮತ್ತೆ ಕಿರುತೆರೆಗೆ ಪ್ರವೇಶ ಪಡೆದು ಅಮೃತಧಾರೆಯಲ್ಲಿ ನಟಿಸಿದರು. ಮಾಡೆಲ್ ಕೂಡ ಆಗಿರುವ ಇವರಿಗೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಆಸೆ ಎಂದಿದ್ದಾರೆ. ಎಂಥ ಪಾತ್ರ ಕೊಟ್ಟರೂ ಸಲೀಸಾಗಿ ಮಾಡುವ ಇವರಿಗೆ ಉಜ್ವಲ ಭವಿಷ್ಯವಿದೆ ಎನ್ನುವುದು ಸಿನಿ ಪ್ರಿಯರ ಅಭಿಮತ.

47
ಅನುಬಂಧ ಅವಾರ್ಡ್​
Image Credit : Instagram

ಅನುಬಂಧ ಅವಾರ್ಡ್​

ಇದೀಗ ಅವರು ಕಲರ್ಸ್​ ಕನ್ನಡದ ಅನುಬಂಧ ಅವಾರ್ಡ್​ನಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದು, ಈ ಕ್ಷಣದಲ್ಲಿ ಅವರು ತಮ್ಮ ಹಿಂದಿನ ದಿನಗಳನ್ನು ನೆನೆದು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಸೋಜಿಗದ ಸೂಜಿ ಮಲ್ಲಿಗೆ ಹಾಡು ಹೇಳಿದ ರಾಧಾ, ನಾನು ಗಾಯಕಿಯಾಗಲು ಈ ಇಂಡಸ್ಟ್ರಿಗೆ ಬಂದೆ. ಆದರೆ ಇದೀಗ ಇಷ್ಟು ದೊಡ್ಡ ಮಟ್ಟದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದೇನೆ ಎಂದು ಭಾವುಕರಾದರು.

57
ಹೂವು ಮಾರಿದ ದಿನ ನೆನೆದ ನಟಿ
Image Credit : Instagram

ಹೂವು ಮಾರಿದ ದಿನ ನೆನೆದ ನಟಿ

ಇದೇ ವೇಳೆ ಬಡತನದ ದಿನಗಳನ್ನು ನೆನಪಿಸಿಕೊಂಡ ಅವರು, ಮನೆಯಲ್ಲಿ ತುಂಬಾ ಬಡತನವಿತ್ತು. ದುಡ್ಡು ಇಲ್ಲದೇ ಹೂವನ್ನು ಮಾರಿದ್ದೇನೆ ಎಂದು ನೆನೆದು ವೇದಿಕೆಯ ಮೇಲೆ ಬಿಕ್ಕಿ ಬಿಕ್ಕಿ ಅತ್ತರು. ಇವರ ನೋವಿನ ಹಿನ್ನೆಲೆ ಕೇಳಿ ಅಲ್ಲಿದ್ದ ಕಲಾವಿದೆಯರು ಕೂಡ ಕಣ್ಣೀರು ಹಾಕಿದರು. ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ಶೇರ್​ ಮಾಡಿಕೊಂಡಿದೆ.

67
ರಾಧಾ ಅವರ ಬಣ್ಣದ ಲೋಕ
Image Credit : Instagram

ರಾಧಾ ಅವರ ಬಣ್ಣದ ಲೋಕ

ಅಂದಹಾಗೆ, ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.

77
ಕಲಾವಿದರ ಕುಟುಂಬ
Image Credit : Instagram

ಕಲಾವಿದರ ಕುಟುಂಬ

ರಾಧಾ ಅವರ ಕುಟುಂಬದವೇ ಕಲಾವಿದರ ಕುಟುಂಬ. ಇವರ ಅಜ್ಜ ರಂಗಭೂಮಿ ಕಲಾವಿದರು. ಇದರ ಜೊತೆಗೆ ಸವರು ಹರಿಕಥೆ ದಾಸರೂ ಕೂಡಾ ಆಗಿದ್ದರು. ರಾಧಾ ಅವರ ತಾಯಿಯೂ ಜನಪದ ಗೀತೆಗಳಿಗೆ ದನಿಯಾದವರು. ಮನೆಯಲ್ಲಿ ಕಲೆಯ ವಾತಾವರಣವಿದ್ದ ಕಾರಣದಿಂದಲೋ ಏನೋ ರಾಧಾ ಭಗವತಿ ಅವರಿಗೆ ನಟನೆಯತ್ತ ಎಳೆ ವಯಸ್ಸಿನಲ್ಲಿಯೇ ಆಸಕ್ತಿ ಮೂಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕಲರ್ಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ದಿಢೀರ್​ ಲೈವ್​ಗೆ ಬಂದ Gilli Nata: ಕನ್ನಡಿಯಲ್ಲಿ ಮುಖ ನೋಡಲು ಆಗ್ತಿಲ್ಲ ಎನ್ನುತ್ತಲೇ ಫ್ಯಾನ್ಸ್​ಗೆ ಮಾಡಿದ್ರು ಮನವಿ
Recommended image2
Bigg Boss ಗೆಲುವಿನ ಬೆನ್ನಲ್ಲೇ ಗಿಲ್ಲಿ ನಟ ರಾಜಕೀಯಕ್ಕೆ ಎಂಟ್ರಿ? ಯಾವ ಪಕ್ಷ? ಗುಟ್ಟು ರಟ್ಟು ಮಾಡಿದ ವಿನ್ನರ್​
Recommended image3
ಕೆಜಿಗಟ್ಟಲೆ ಚಿನ್ನದ ಹಾರ ಹಾಕಿದಾಗ್ಲೇ ಕೆಟ್ಟೋದ ಲಿಫ್ಟ್! ಸಿಕ್ಕಾಕ್ಕೊಂಡು ಪೇಚಿಗೆ ಸಿಲುಕಿದ ಗಿಲ್ಲಿ ನಟ: ಶಾಕಿಂಗ್ ವಿಡಿಯೋ
Related Stories
Recommended image1
ದಿಢೀರ್​ ಲೈವ್​ಗೆ ಬಂದ Gilli Nata: ಕನ್ನಡಿಯಲ್ಲಿ ಮುಖ ನೋಡಲು ಆಗ್ತಿಲ್ಲ ಎನ್ನುತ್ತಲೇ ಫ್ಯಾನ್ಸ್​ಗೆ ಮಾಡಿದ್ರು ಮನವಿ
Recommended image2
Bigg Boss ಗೆಲುವಿನ ಬೆನ್ನಲ್ಲೇ ಗಿಲ್ಲಿ ನಟ ರಾಜಕೀಯಕ್ಕೆ ಎಂಟ್ರಿ? ಯಾವ ಪಕ್ಷ? ಗುಟ್ಟು ರಟ್ಟು ಮಾಡಿದ ವಿನ್ನರ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved