ಮೈಸೂರು ರಸ್ತೆಯ ದೀಪಾಂಜಲಿ ನಗರದಿಂದ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ 1.5 ಕಿ.ಮೀ ಉದ್ದದ ಹೊಸ ಲಿಂಕ್ ರಸ್ತೆ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ. ಈ ರಸ್ತೆಯು ರಿಂಗ್ ರಸ್ತೆ ಹಾಗೂ ನೈಸ್ ರಸ್ತೆಯ ಮೂಲಕ ಮೈಸೂರು, ಮಾಗಡಿ, ಮತ್ತು ತುಮಕೂರು ರಸ್ತೆಗಳಿಗೆ ಸುಗಮ ಪ್ರಯಾಣವನ್ನು ಒದಗಿಸಲಿದೆ.
- Home
- News
- State
- Karnataka News Live: Bengaluru - ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ 1.5 ಕಿ.ಮೀ ಉದ್ದದ ಹೊಸ ಲಿಂಕ್ ರೋಡ್; ಟ್ರಾಫಿಕ್ನಿಂದ ಬಚಾವ್
Karnataka News Live: Bengaluru - ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ 1.5 ಕಿ.ಮೀ ಉದ್ದದ ಹೊಸ ಲಿಂಕ್ ರೋಡ್; ಟ್ರಾಫಿಕ್ನಿಂದ ಬಚಾವ್

ಬಾಗಲಕೋಟೆ: ಬಜೆಟ್ ಬಳಿಕವೂ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯುತ್ತಾರಾ ಎಂಬ ಪ್ರಶ್ನೆಗೆ ಬಾಗಲಕೋಟೆಯಲ್ಲಿ ಭಾನುವಾರ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಈಗ ಅವರೇ ಇದ್ದಾರೆ, ಮುಂದೆ ಅವರೇ ಮುಂದುವರೀತಾರೆ ಎಂದು ಲೆಕ್ಕಾಚಾರ ಅಷ್ಟೇ. ಅರ್ಧಗಿರ್ಧ ಎಂದು ನಾವೆಲ್ಲೂ ಕೇಳಿಲ್ಲ, ಈಗ ಅವರಿದ್ದಾರೆ. ಅವರೇ ಮುಂದುವರೀತಾರೆ ಅನ್ನೋದಷ್ಟೇ ನಮ್ಮ ಲೆಕ್ಕಾಚಾರ. ಮಿಕ್ಕಿದ್ದೆಲ್ಲಾ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು.
ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೇರೆ ಬೇರೆ ಕಾರ್ಯಕ್ರಮ ಇರುತ್ತವೆ. ಹಾಗಾಗಿ ದೆಹಲಿಗೆ ಹೋಗ್ತಿವಿ. ಇದೇನು ಹೊಸದಲ್ಲ, ತಿಂಗಳಿಗೊಮ್ಮೆ ದೆಹಲಿ ವಿಸಿಟ್ ಮಾಡೇ ಮಾಡ್ತೀವಿ. ಆ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಆಗಿದ್ದೇವೆ. ಸ್ವಾಭಾವಿಕವಾಗಿ ರಾಜಕೀಯ ಮಾತಾಡಬೇಕಾಗುತ್ತದೆ ಮಾತಾಡಿದ್ದೇವೆ. ದೆಹಲಿಯಲ್ಲಿ ನಿರ್ಣಯ ಆಗಿದೆ ಎನ್ನುವ ವಿಚಾರ ಇರುವ ಗೊಂದಲ ಬಗೆಹರಿಸುವ ನಿರ್ಣಯ ಆಗಿದೆ. ರಾಜ್ಯದಲ್ಲಿ ಗೊಂದಲ ಇದೆ ಅದನ್ನ ಬಗೆಹರಿಸಲು ಹೇಳಿದ್ದೇವೆ. ನೀವು ಮಧ್ಯ ಪ್ರವೇಶಿಸಬೇಕು, ಇಲ್ಲವಾದರೆ ಕಾರ್ಯಕರ್ತರಿಗೆ, ಸರ್ಕಾರಕ್ಕೆ, ಪಕ್ಷಕ್ಕೂ ತೊಂದರೆ ಆಗುತ್ತದೆ ಎಂದು ಹೇಳಿದ್ದೇವೆ. ಆದಷ್ಟು ಬೇಗ ಮಾಡುತ್ತೇವೆ ಎಂದು ಖರ್ಗೆಯವರು ಹೇಳಿದ್ದಾರೆ ಎಂದು ಹೇಳಿದರು.
Karnataka News Live 23 February 2026Bengaluru - ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ 1.5 ಕಿ.ಮೀ ಉದ್ದದ ಹೊಸ ಲಿಂಕ್ ರೋಡ್; ಟ್ರಾಫಿಕ್ನಿಂದ ಬಚಾವ್
Karnataka News Live 23 February 2026ಒರಿಜಿನಲ್ ಚಾಯ್ಸ್ ಬ್ಯಾಡ್ ಚಾಯ್ಸ್ ಸೆಲ್ಲಿಂಗ್ ವಿಸ್ಕಿ ಈಸ್ ರಿಸ್ಕಿ ಅಂದ್ರು ಜಡ್ಜ್
Karnataka News Live 23 February 2026ಆಳ್ವಾಸ್ ಕನ್ನಡ ಶಾಲೆ - 200 ಸೀಟು, 23 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆ; ಯಾಕಿಷ್ಟು ಡಿಮ್ಯಾಂಡ್?
Karnataka News Live 23 February 2026ಮನೆ ಅಂಗಳದಲ್ಲಿ 8-12 ಅಡಿಯ 6 ಹೆಬ್ಬಾವು ಪ್ರತ್ಯಕ್ಷ! ಒಂದೆಡೆ ಇಷ್ಟೊಂದು ಹಾವು ಬಂದಿದ್ಯಾಕೆ?
ಕಾರವಾರದ ಕಠಿಣಕೋಣ ಗ್ರಾಮದ ಮನೆಯೊಂದರ ಅಂಗಳದಲ್ಲಿ 8 ರಿಂದ 12 ಅಡಿ ಉದ್ದದ ಆರು ಬೃಹತ್ ಹೆಬ್ಬಾವುಗಳು ಪತ್ತೆಯಾಗಿವೆ. ಉರಗ ರಕ್ಷಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಈ ಹಾವುಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.
Karnataka News Live 23 February 2026ಯಾವ ಶಾಸಕರಾದರೂ 5 ಲಕ್ಷ ತೆಗೆದುಕೊಳ್ತಾರಾ? ಚಂದ್ರು ಲಮಾಣಿ ಪರ ಶ್ರೀರಾಮುಲು ಬ್ಯಾಟಿಂಗ್
ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ಶ್ರೀರಾಮುಲು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರನ್ನು ಮಾತ್ರ ಬಂಧಿಸಿ, ಉಳಿದವರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು.
Karnataka News Live 23 February 2026ಸಂಸದೆಯರ ಮುಂದೆಬಿಟ್ಟು ಪ್ರಧಾನಿ ಆಗಬೇಕೆ ? - ಮೋದಿ
ಇತ್ತೀಚೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ನ ಮಹಿಳಾ ಸಂಸದರು ತಮ್ಮ ಸ್ಥಾನದತ್ತ ಧಾವಿಸಿ ಬಂದ ಘಟನೆಯ ಬಗ್ಗೆ ಮೊದಲ ಬಾರಿ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ ‘ಸಂಸತ್ತಿನಲ್ಲಿ ಕಾಂಗ್ರೆಸ್ ತಾನೂ ಕೆಲಸ ಮಾಡಲ್ಲ, ತನ್ನ ಮಿತ್ರ ಪಕ್ಷಗಳಿಗೂ ಕೆಲಸ ಮಾಡಲು ಬಿಡಲ್ಲ.
Karnataka News Live 23 February 2026ಗೌಡ, ಎಚ್ಡಿಕೆ ಜಾತಿವಾದಿಗಳಲ್ಲ, ಕುಟುಂಬವಾದಿಗಳು - ಸಿದ್ದರಾಮಯ್ಯ ತರಾಟೆ
‘ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡ ಜಾತಿವಾದಿಗಳಲ್ಲ, ಸ್ವಜಾತಿ ವಿರೋಧಿಗಳು. ಸ್ವಜಾತಿ ನಾಯಕರು ಬೆಳೆಯದಂತೆ ಒಬ್ಬೊಬ್ಬರನ್ನು ಮುಗಿಸಿದ ಕುಟುಂಬವಾದಿಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿದ್ದಾರೆ.
Karnataka News Live 23 February 2026₹ 5 ಅಕ್ರಮದಲ್ಲಿ ಪಾರಾಗಿದ್ದ ಲಮಾಣಿ ₹5 ಲಕ್ಷ ಕೇಸ್ನಲ್ಲಿ ಲೋಕಾ ಖೆಡ್ಡಾಕ್ಕೆ!
ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ₹5 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಪಾಲಾಗಿರುವ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಈ ಹಿಂದೆಯೂ ಲೋಕಾಯುಕ್ತ ಬಿಸಿ ಎದುರಿಸಿದ್ದರು.