07:48 AM (IST) Aug 23

Karnataka News Live 23 August 2026ಖ್ಯಾತಿ, ಚಪ್ಪಾಳೆಗೆ ಕಲಾವಿದ ಬದುಕಬಾರದು ಟಿ.ಎನ್.ಸೀತಾರಾಮ ಮಾತು

ಬುಕ್‌ ಬ್ರಹ್ಮ ಲಿಟರೇಚರ್‌ ಫೆಸ್ಟಿವಲ್‌ನಲ್ಲಿ ಮಾತನಾಡಿದ ನಿರ್ದೇಶಕ ಟಿ.ಎನ್.ಸೀತಾರಾಮ, ಕಲಾವಿದರು ಕೇವಲ ಚಪ್ಪಾಳೆ, ಖ್ಯಾತಿ ಮತ್ತು ಹಣಕ್ಕಾಗಿ ಕಲೆಯನ್ನು ಸೃಷ್ಟಿಸಬಾರದು ಎಂದು ಅಭಿಪ್ರಾಯಪಟ್ಟರು. ಕಲಾವಿದನ ಆಂತರಿಕ ಸಂಘರ್ಷ ಮತ್ತು ಕಲೆಯೊಂದಿಗಿನ ಪ್ರಾಮಾಣಿಕತೆಯೇ ಮುಖ್ಯವೇ ಹೊರತು, ಕ್ಷಣಿಕ ಮೆಚ್ಚುಗೆಯಲ್ಲ.

Read Full Story
07:30 AM (IST) Aug 23

Karnataka News Live 23 August 2026Bengaluru fake medicine racket - ನಕಲಿ ಔಷಧ ದಂಧೆ ಕಿಂಗ್‌ಪಿನ್‌ ಪ್ರಶಾಂತ್‌ ಅಜರ್‌ಬೈಜಾನಲ್ಲಿ ವಶಕ್ಕೆ

ಕರ್ನಾಟಕದ ನಕಲಿ ಔಷಧ ಮಾರಾಟ ಜಾಲಕ್ಕೆ ವಿದೇಶಿ ನಂಟು ಪತ್ತೆಯಾಗಿದೆ. ದಂಧೆಯ ಪ್ರಮುಖ ಆರೋಪಿ ಪ್ರಶಾಂತ್, ಅಜರ್‌ಬೈಜಾನ್‌ನಿಂದ ಕಡಿಮೆ ಬೆಲೆಯ ಔಷಧ ಸಾಗಿಸಲು ಯತ್ನಿಸುವಾಗ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ವಶಕ್ಕೆ ಪಡೆಯಲು ಎಸ್‌ಐಟಿ ಈಗ ಇಂಟರ್‌ಪೋಲ್‌ ನೆರವು ಕೋರಿದೆ.
Read Full Story
07:13 AM (IST) Aug 23

Karnataka News Live 23 August 2026Anekal - ತಮಿಳುನಾಡಿನ ಕಡತದಲ್ಲಿದ್ದ ಆನೇಕಲ್‌ ತಾಲೂಕಿನ 8 ಗ್ರಾಮ ಕರ್ನಾಟಕಕ್ಕೆ ಸೇರ್ಪಡೆ

ಆನೇಕಲ್‌ ತಾಲೂಕಿನ ಮರಸೂರು ಪಂಚಾಯ್ತಿಗೆ ಸೇರಿದ ಎಂಟು ಗ್ರಾಮಗಳ ಕಂದಾಯ ದಾಖಲೆಗಳು 1956ರಿಂದ ತಮಿಳುನಾಡಿನ ಹೊಸೂರು ಕಡತಗಳಲ್ಲಿದ್ದವು. ಒಂದು ವರ್ಷದ ಸತತ ಪ್ರಯತ್ನದ ನಂತರ, ಈ ದಾಖಲೆಗಳನ್ನು ಅಧಿಕೃತವಾಗಿ ಕರ್ನಾಟಕದ ದಾಖಲೆಗಳಿಗೆ ಸೇರ್ಪಡೆ ಮಾಡಲಾಗಿದ್ದು, ಇದರಿಂದ ಸುಮಾರು 3000 ರೈತರಿಗೆ ಅನುಕೂಲವಾಗಿದೆ.

Read Full Story