- Home
- News
- State
- Karnataka News Live: ನೈಸ್ ರಸ್ತೆ ವಿವಿಧ ವಿವಾದ - ದಶಕಗಳ ಗೊಂದಲಕ್ಕೆ ಶೀಘ್ರವೇ ತೆರೆ, ಕಂಪನಿ ವಿರುದ್ಧ ಕ್ರಮಕ್ಕೆ ಸರ್ಕಾರ ಭರವಸೆ
Karnataka News Live: ನೈಸ್ ರಸ್ತೆ ವಿವಿಧ ವಿವಾದ - ದಶಕಗಳ ಗೊಂದಲಕ್ಕೆ ಶೀಘ್ರವೇ ತೆರೆ, ಕಂಪನಿ ವಿರುದ್ಧ ಕ್ರಮಕ್ಕೆ ಸರ್ಕಾರ ಭರವಸೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3 ವರ್ಷದಲ್ಲಿ 3 ಪಟ್ಟು ಸಾಲ ಮಾಡಿದ್ದಾರೆ. ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಜಾರಿಯಾಗಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಶಿಗ್ಗಾಂವಿ ಪಟ್ಟಣದ ಸವಣೂರ ರಸ್ತೆಯಲ್ಲಿರುವ ಬೊಮ್ಮಾಯಿ ನಿವಾಸದಲ್ಲಿ ಬಿಜೆಪಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಿದ್ದರಾಮಯ್ಯ ಅವರ ಸರ್ಕಾರ ಸುಳ್ಳಿನ ಸರ್ಕಾರವಾಗಿದೆ. ಬಜೆಟ್ನಲ್ಲಿ ₹1.32 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ನಾವಿದ್ದಾಗ ₹54 ಸಾವಿರ ಕೋಟಿ ಸಾಲ ಮಾಡಿದ್ದೇವು. ನಾವು ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಮಾಡಿದ್ದ ಸಾಲವನ್ನು ತೀರಿಸಿದೆವು ಎಂದು ಹೇಳಿದರು.
ಕ್ಷೇತ್ರದ ಜನರ ಮನದಲ್ಲಿ ನಾನು ನೆಲೆ ಊರಿದ್ದೇನೆ. ಜನರ ಪ್ರೀತಿ ವಿಶ್ವಾಸವೇ ನನ್ನ ಕೆಲಸಗಳಿಗೆ ಸಾಕ್ಷಿ. ಶಿಗ್ಗಾಂವಿ-ಸವಣೂರು ಅಭಿವೃದ್ಧಿ ಪರ್ವ ಮುಂದುವರೆಯಬೇಕು. ಚಾಕು ಚೂರಿ ಸಂಸ್ಕೃತಿ ಬಂದಾಗಬೇಕು ಎಂದು ಹೇಳಿದರು.
Karnataka News Live 17 March 2026ನೈಸ್ ರಸ್ತೆ ವಿವಿಧ ವಿವಾದ - ದಶಕಗಳ ಗೊಂದಲಕ್ಕೆ ಶೀಘ್ರವೇ ತೆರೆ, ಕಂಪನಿ ವಿರುದ್ಧ ಕ್ರಮಕ್ಕೆ ಸರ್ಕಾರ ಭರವಸೆ
Karnataka News Live 17 March 2026ಕಲಬುರಗಿಗೆ ಆರ್ಥಿಕ ಹಿನ್ನಡೆ, ತಲಾ ಆದಾಯ ಇದೇ ಮೊದಲ ಬಾರಿಗೆ ಋಣಾತ್ಮಕ! ಜಿಲ್ಲೆ ಕೊನೆಯ ಸ್ಥಾನಕ್ಕೆ ಕುಸಿತ!
ವರದಿ: ಶೇಷಮೂರ್ತಿ ಅವಧಾನಿ
2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ, ಕಲಬುರಗಿ ಜಿಲ್ಲೆಯ ತಲಾ ಆದಾಯವು ಮೊದಲ ಬಾರಿಗೆ ಋಣಾತ್ಮಕ ಬೆಳವಣಿಗೆ ದಾಖಲಿಸಿ, ರಾಜ್ಯದಲ್ಲೇ ಕೊನೆಯ ಸ್ಥಾನ ಪಡೆದಿದೆ. ಕೃಷಿ ವೈಫಲ್ಯ, ಉದ್ದಿಮೆಗಳ ತೀವ್ರ ಕೊರತೆ ಜಿಲ್ಲೆಯು ಆರ್ಥಿಕವಾಗಿ ತೀವ್ರ ಹಿನ್ನಡೆ ಅನುಭವಿಸಿದೆ.
Karnataka News Live 17 March 2026ಸಿಲಿಂಡರ್ ಕೊರತೆಗೆ ಕೇಂದ್ರ ಸರ್ಕಾರ ಕಾರಣ - ಸಚಿವ ಕೆ.ಜೆ.ಜಾರ್ಜ್ ಆಕ್ರೋಶ
ಸಿಲಿಂಡರ್ ಅಭಾವದ ಬಗ್ಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸುವುದು ಸರಿಯಲ್ಲ. ಮುನ್ನೆಚ್ಚರಿಕೆ ವಹಿಸಿ ಸಿದ್ಧತೆ ಮಾಡಿಕೊಳ್ಳದ ಕಾರಣವೇ ಇಂದು ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಆಕ್ರೋಶ ವ್ಯಕ್ತಪಡಿಸಿದರು.
Karnataka News Live 17 March 2026ಬೆಳಗಾವಿ - ಮಳೆ ನಿಲ್ಲಲು ಕಾಯುತ್ತಿದ್ದವರಿಗೆ ಕಾದಿತ್ತು ಮೃತ್ಯು - ಮನೆ ಗೋಡೆ ಕುಸಿದು ಪತ್ನಿ ಸಾವು, ಪತಿ ಜಸ್ಟ್ ಮಿಸ್
Woman dies in wall collapse: ಬೆಳಗಾವಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಅಕಾಲಿಕ ಮಳೆಗೆ ಪಾಳು ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ನಿಂತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Karnataka News Live 17 March 2026ಚಿಕ್ಕಮಗಳೂರು - ರೈಲಿನಲ್ಲಿ ಪ್ರಯಾಣಿಕರು ಮರೆತ ಚಿನ್ನದ ಬ್ಯಾಗ್, ತೆರೆದಾಗ ಪೊಲೀಸರಿಗೆ ಕಾದಿತ್ತು ಅಚ್ಚರಿ!
Karnataka News Live 17 March 2026ಬಿಗ್ಬಾಸ್ ಲವ್ಬರ್ಡ್ಸ್ ಸೂರಜ್-ರಾಶಿಕಾ ಬ್ರೇಕಪ್? ಉಂಗುರ ತೊಡಿಸಿದ ಬೆನ್ನಲ್ಲೇ ಶುರುವಾಯ್ತು ಅನುಮಾನ!
Karnataka News Live 17 March 2026ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ - ರಾಜ್ಯ ಸರ್ಕಾರದ ವಿರುದ್ಧ ಧನಂಜಯ ಸರ್ಜಿ ವಾಗ್ದಾಳಿ
ಕೆಮ್ಮು, ಜ್ವರದಂತಹ ಸಾಮಾನ್ಯ ಕಾಯಿಲೆಗಳಿಗೂ ಔಷಧಿ ಲಭ್ಯವಿಲ್ಲದಿರುವುದು ದುರದೃಷ್ಟಕರ," ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Karnataka News Live 17 March 2026ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ ತರಬೇತಿಯಾದ ಮಂಗಳೂರಿನ 15200 ಅಭ್ಯರ್ಥಿಗಳಲ್ಲಿ ಕೇವಲ 8.45%ಗೆ ಮಾತ್ರ ಜಾಬ್!
ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ (PMKVY) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಅಧಿಕೃತ ಅಂಕಿಅಂಶಗಳ ಪ್ರಕಾರ, ತರಬೇತಿ ಪಡೆದ ಸಾವಿರಾರು ಯುವಕರಲ್ಲಿ ಕೇವಲ 8% ಕ್ಕಿಂತ ಕಡಿಮೆ ಮಂದಿ ಉದ್ಯೋಗ ಪಡೆದಿದ್ದು, ಇದು ಯೋಜನೆಯ ಪರಿಣಾಮಕಾರಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Karnataka News Live 17 March 2026ಚಿಕ್ಕಮಗಳೂರು - 50 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು - ಅನುಮಾನ ಹುಟ್ಟಿಸಿದ ಆಕ್ಸಿಡೆಂಟ್
ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವಲಯದಲ್ಲಿ ಕಾರೊಂದು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಆದರೆ, ಸ್ಥಳದಲ್ಲಿ ಯಾರೂ ಇಲ್ಲದಿರುವುದು ಮತ್ತು ಪೊಲೀಸರಿಗೆ ಮಾಹಿತಿ ನೀಡದಿರುವುದು ಘಟನೆಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
Karnataka News Live 17 March 2026'ಹುಲಿ ಹುಲಿ..' ಅಂದ್ಕೊಂಡು ಇಬ್ಬರು ಮಹಿಳೆಯರ ಜೊತೆ ಟ್ರಿಪಲ್ ರೈಡ್ ಮಾಡಿದ್ದ ರೀಲ್ಸ್ ಮಂಜಣ್ಣ, ಭರ್ಜರಿ ಫೈನ್ ಹಾಕಿದ ಪೊಲೀಸ್!
ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧರಾಗಲು, ಇಬ್ಬರು ಯುವತಿಯರೊಂದಿಗೆ ತ್ರಿಪಲ್ ರೈಡಿಂಗ್ ಮಾಡಿ ರೀಲ್ಸ್ ಚಿತ್ರೀಕರಿಸಿದ ದೊಡ್ಡಬಳ್ಳಾಪುರದ ವ್ಯಕ್ತಿಗೆ ಸಂಚಾರಿ ಪೊಲೀಸರು ರೂ. ದಂಡ ವಿಧಿಸಿದ್ದಾರೆ. ಹೆಲ್ಮೆಟ್ ಧರಿಸದೆ, ಅಜಾಗರೂಕತೆಯಿಂದ ಬೈಕ್ ಚಲಾಯಿಸಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
Karnataka News Live 17 March 2026ಶಾಸಕ ಬಸವರಾಜ ರಾಯರೆಡ್ಡಿ ಹಿಡಿದ ಕೆಲಸ ಬಿಡದ ಛಲಗಾರ - ಸಿಎಂ ಸಿದ್ದರಾಮಯ್ಯ
ನನ್ನ ಕ್ಷೇತ್ರದಲ್ಲೂ ನಿಮ್ಮ ರಾಯರೆಡ್ಡಿಯಷ್ಟು ನಾನ್ ಕೆಲಸ ಮಾಡಿಲ್ಲ, ಅಷ್ಟು ಅಭಿವೃದ್ಧಿ ಕೆಲಸಗಾರ ನಿಮ್ಮ ಶಾಸಕ ಬಸವರಾಜ ರಾಯರೆಡ್ಡಿ. ಹಿಡಿದ ಕೆಲಸ ಬಿಡದ ಛಲಗಾರ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
Karnataka News Live 17 March 2026ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಸುಸಜ್ಜಿತ ಆರೋಗ್ಯ ಕೇಂದ್ರ ಸ್ಥಾಪನೆ - ಚಲುವರಾಯಸ್ವಾಮಿ
ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
Karnataka News Live 17 March 2026ಸರ್ಕಾರವೇ ಜಾಗಕ್ಕಾಗಿ ಭಿಕ್ಷಾಪಾತ್ರೆ ಹಿಡಿದ ಸ್ಥಿತಿ - ಸಚಿವ ಕೃಷ್ಣ ಬೈರೇಗೌಡ ಬೇಸರ
ಇದ್ದ ಜಮೀನೆಲ್ಲ ಕೊಟ್ಟು ಈಗ ಸ್ಮಶಾನಕ್ಕೆ ಜಾಗ ಸಿಗದೆ ಸರ್ಕಾರವೇ ಜಾಗಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ಓಡಾಡುವ ಸ್ಥಿತಿ ಬಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
Karnataka News Live 17 March 2026ದೇಶದ ಪ್ರಮುಖ ವಿಮಾನ ನಿಲ್ದಾಣಗಳ ಸುರಕ್ಷತಾ ವರದಿ - ಕೆಐಎಯಲ್ಲಿ ಲೇಸರ್ ಕಡಿಮೆ, ಸುರಕ್ಷತೆಯಲ್ಲಿಯೂ ಮುಂಚೂಣಿ
Karnataka News Live 17 March 2026'ಬಿಯರ್ ಬೆಲೆ ಏರಿಸಿದ್ದಕ್ಕೆ ಮಕ್ಕಳು ಗಾಂಜಾ ಮೊರೆ ಹೋಗ್ತಿದ್ದಾರೆ' - ಅಬಕಾರಿ ಬೆಲೆ ಏರಿಕೆಗೆ ಹೆಚ್. ವಿಶ್ವನಾಥ್ ಆಕ್ರೋಶ!
ವಿಧಾನಪರಿಷತ್ತಿನಲ್ಲಿ ರಾಜ್ಯ ಸರ್ಕಾರದ ಬಜೆಟ್ ಚರ್ಚೆಯಲ್ಲಿ, ಹೆಚ್. ವಿಶ್ವನಾಥ್ ಅವರು ಸರ್ಕಾರದ ದುಂದುವೆಚ್ಚ, ಅಬಕಾರಿ ನೀತಿ, ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ತೀವ್ರವಾಗಿ ಟೀಕಿಸಿದರು. ಜಾಹೀರಾತು ವೆಚ್ಚ, ಬಿಯರ್ ಬೆಲೆ ಏರಿಕೆ, ಮತ್ತು ಕುರಿಗಾಹಿಗಳ ಅನುದಾನದ ದುರ್ಬಳಕೆಯನ್ನು ಅವರು ಪ್ರಶ್ನಿಸಿದ್ದಾರೆ.
Karnataka News Live 17 March 2026Heart Health - ಮಹಿಳೆಯರಲ್ಲಿ ಹೃದಯಾಘಾತ ಲಕ್ಷಣಗಳು ವಿಭಿನ್ನ - ಇಲ್ಲಿದೆ ತಪ್ಪದೇ ತಿಳಿಯಬೇಕಾದ ಮಾಹಿತಿ
ಪುರುಷರಿಗಿಂತ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಮತ್ತು ಕಾರಣಗಳು ಬೇರೆಯಾಗಿರುತ್ತವೆ. ಇದೇ ಕಾರಣಕ್ಕೆ ರೋಗ ಪತ್ತೆ ಮಾಡುವುದು ಕೂಡ ತಡವಾಗಬಹುದು. ಈ ಬಗ್ಗೆ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಕೆಲವು ಮುಖ್ಯ ವಿಚಾರಗಳು ಇಲ್ಲಿವೆ.
Karnataka News Live 17 March 2026ಕಾರವಾರ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಗೋವಾ ಆಕರ್ಷಣೆ, ಮೋಜು ಮಸ್ತಿಗೆ ರಸ್ತೆ ಮಧ್ಯೆಯೇ ಜೀವ ಬಿಡ್ತಿರೋ ಮಕ್ಕಳು!
Karnataka News Live 17 March 2026Summer Hair Fall - ಬೇಸಿಗೆಯಲ್ಲಿ ಕೂದಲು ಉದುರುತ್ತಿದೆಯಾ? ಟೆನ್ಶನ್ ಬೇಡ! ಇಲ್ಲಿವೆ 6 ಸಿಂಪಲ್ ಟಿಪ್ಸ್
ಬೇಸಿಗೆ ಬಂತೆಂದರೆ ಬರೀ ಬಿಸಿಲಲ್ಲ, ನಮ್ಮ ಕೂದಲು ಕೂಡಾ ಸುಸ್ತಾಗುತ್ತದೆ. ಬೆವರು, ಧೂಳು ಮತ್ತು ಸೂರ್ಯನ ಕಿರಣಗಳಿಂದ ಕೂದಲು ಉದುರುವುದು ಡಬಲ್ ಆಗುತ್ತದೆ. ಇದಕ್ಕೆ ಹಳೆಯ ಕಾಲದ ಅಜ್ಜಿ ಮದ್ದು ಮಾತ್ರ ಸಾಲದು, Gen Z ಲೈಫ್ಸ್ಟೈಲ್ಗೆ ಹೊಂದುವ ಸ್ಮಾರ್ಟ್ ಟಿಪ್ಸ್ ಬೇಕು.
Karnataka News Live 17 March 2026ರೌಡಿಗಳ ಮೇಲೆ ಕಲ್ಲು ಹಾಕುವಾಗ ನಡುಗಿ ಹೋದೆ - Karna Serial ಫೈಟಿಂಗ್ ಅನುಭವ ಹಂಚಿಕೊಂಡ Annayya ರಾಣಿ
'ಕರ್ಣ' ಸೀರಿಯಲ್ನ ಮಹಿಳಾ ದಿನದ ವಿಶೇಷ ಸಂಚಿಕೆಯಲ್ಲಿನ ಫೈಟಿಂಗ್ ದೃಶ್ಯದ ಬಗ್ಗೆ 'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟಿ ರಾಘವಿ ಅರಳಗುಂಡಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಭಯಪಟ್ಟಿದ್ದು, ನಟ ಕಿರಣ್ ರಾಜ್ ಅವರನ್ನು ಶ್ಲಾಘಿಸಿದ್ದು, ಸಹ-ನಟಿಯರೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.
Karnataka News Live 17 March 2026ನಕಲಿ ಹಕ್ಕು ಪತ್ರ ನೀಡಿದವರ ವಿರುದ್ಧ ಕಠಿಣ ಕ್ರಮ - ಸಚಿವ ಜಮೀರ್ ಅಹ್ಮಮದ್ ಖಾನ್
ಸಚಿವ ಜಮೀರ್ ಅಹ್ಮಮದ್ ಖಾನ್, ಈ ಹಿಂದೆ ನಿಮ್ಮದೇ ಸರ್ಕಾರ ಇದ್ದಾಗ ಹೆಚ್ಚು ಅನುದಾನ ಏಕೆ ತೆಗೆದುಕೊಳ್ಳಲಿಲ್ಲ? ಸರ್ಕಾರ ಸ್ಲಂ ಬೋರ್ಡ್ಗೆ 50 ಕೋಟಿ ರು. ನೀಡಿದೆ. ರಾಜ್ಯದಲ್ಲಿ 2,800 ಕೊಳಗೇರಿಗಳಿವೆ. ಬೆಂಗಳೂರಿನಲ್ಲಿ 480 ಕೊಳಗೇರಿಗಳಿವೆ.