10:34 PM (IST) Feb 14

Karnataka News Live 14 February 2026ಸೆಟ್​ನಲ್ಲಿ ಚಪ್ಪಲಿ ಬದಲಿಸಿದ ಸಿಬ್ಬಂದಿಗೆ ನಟಿ Megha Shetty ಮಾಡಿದ್ದೇನು? ವಿಡಿಯೋ ವೈರಲ್​

'ಜೊತೆಜೊತೆಯಲಿ' ಖ್ಯಾತಿಯ ಮೇಘಾ ಶೆಟ್ಟಿ 'ಚೀತಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ವೇಳೆ ತಮ್ಮ ಚಪ್ಪಲಿ ಬದಲಿಸಿದ ಸಿಬ್ಬಂದಿಗೆ ನಮಸ್ಕರಿಸುವ ಮೂಲಕ ಅವರು ತೋರಿದ ವಿನಯವಂತಿಕೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story
09:34 PM (IST) Feb 14

Karnataka News Live 14 February 2026ಭೂತಾಯಿ ಮೀನಂತಿದ್ದೋಳು ಬಂಗಡೆ ಥರ ಆದ್ರೆ ಹೇಗೆ ಪ್ರಪೋಸ್​ ಮಾಡೋದು ಅನು ಡಿಯರ್​?

ಕಿರುತೆರೆಯಲ್ಲಿ ಬಹುಬೇಡಿಕೆಯ ಆ್ಯಂಕರ್ ಆಗಿರುವ ಅನುಶ್ರೀ, ತಮ್ಮ ನಿರರ್ಗಳ ಮಾತಿನಿಂದಲೇ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ 'ಡಾನ್ಸ್ ಕರ್ನಾಟಕ ಡಾನ್ಸ್' ವೇದಿಕೆಯಲ್ಲಿ ಕೋರಿಯೋಗ್ರಫರ್ ಒಬ್ಬರು ಅವರನ್ನು 'ಬಂಗಡೆ ಮೀನು' ಎಂದು ಹಾಸ್ಯ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ.

Read Full Story
09:23 PM (IST) Feb 14

Karnataka News Live 14 February 2026ಗಾಂಧಾರಿ ನಟಿ ಕಾವ್ಯಾ ಗೌಡ, ಪತಿ ಸೋಮಶೇಖರ್‌ಗೆ ರಿಲೀಫ್‌ ನೀಡಿದ ಹೈಕೋರ್ಟ್‌!

Relief for Kavya Gowda: High Court Stays FIR & Probe in Family Dispute ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯ ಗೌಡ ಮತ್ತು ಅವರ ಪತಿ ಸೋಮಶೇಖರ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

Read Full Story
08:34 PM (IST) Feb 14

Karnataka News Live 14 February 2026SIM Swap Fraud - ಈ 1 ತಪ್ಪಿನಿಂದ 1 ನಿಮಿಷದಲ್ಲೇ ಬ್ಯಾಂಕ್ ಖಾತೆ ಖಾಲಿ ಆಗಬಹುದು, ಬಚಾವಾಗೋದು ಹೇಗೆ?

ಇವತ್ತಿನ ದಿನಗಳಲ್ಲಿ ಸಿಮ್ ಕಾರ್ಡ್ ಕೇವಲ ಕಾಲ್-ಮೆಸೇಜ್‌ಗೆ ಮಾತ್ರ ಸೀಮಿತವಾಗಿಲ್ಲ. ಯುಪಿಐ, ಬ್ಯಾಂಕ್ ಒಟಿಪಿ, ಇಮೇಲ್, ಸೋಶಿಯಲ್ ಮೀಡಿಯಾ ಮತ್ತು ಮ್ಯಾಪ್ಸ್‌ಗೂ ಇದೇ ದಾರಿ. ಹಾಗಾಗಿಯೇ, ಸಿಮ್ ಕಾರ್ಡ್‌ಗೆ ಸಂಬಂಧಿಸಿದ ವಂಚನೆಗಳು ಹೆಚ್ಚುತ್ತಿವೆ. 'ಸಿಮ್ ಸ್ವಾಪ್ ಫ್ರಾಡ್' ನಿಂದ ಬಚಾವಾಗುವುದು ಹೇಗೆ ನೋಡಿ..

Read Full Story
07:15 PM (IST) Feb 14

Karnataka News Live 14 February 2026ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಸ್ಥಳಾಂತರ, ಶಿಫ್ಟ್ ಆಗೋವರೆಗೆ ವರ್ಷಕ್ಕೆ ₹39 ಕೋಟಿ ಬಾಡಿಗೆ! ತೆರವಾದ ಜಾಗದಲ್ಲಿ ಮುಂದೇನು?

ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಬೆಂಗಳೂರು ಟರ್ಫ್ ಕ್ಲಬ್ ಅನ್ನು ಕುಣಿಗಲ್ ಸ್ಟಡ್ ಫಾರಂಗೆ ಸ್ಥಳಾಂತರಿಸಲು ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಯೋಜನೆಯಂತೆ, 110.20 ಎಕರೆ ಜಮೀನನ್ನು 29 ವರ್ಷಗಳ ಗುತ್ತಿಗೆಗೆ ನೀಡಲಾಗಿದೆ.

Read Full Story
06:32 PM (IST) Feb 14

Karnataka News Live 14 February 2026Mysuru - ಪುತ್ರ ಸಂತಾನದ ನೆನಪಿಗೆ ಒಡೆಯರ್ ನೀಡಿದ 11 ಕೆಜಿ ಬಂಗಾರದ ಮುಖವಾಡ; ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ

ಶಿವರಾತ್ರಿಯಂದು ಮೈಸೂರಿನ ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ 11 ಕೆಜಿ ತೂಕದ ಅಪರಂಜಿ ಚಿನ್ನದ ಮುಖವಾಡವನ್ನು ಧಾರಣೆ ಮಾಡಲಾಗುತ್ತದೆ. ಜಯಚಾಮರಾಜೇಂದ್ರ ಒಡೆಯರ್ ಅವರು 1954ರಲ್ಲಿ ನೀಡಿದ ಈ ಮುಖವಾಡದ ದರ್ಶನವು ವರ್ಷಕ್ಕೊಮ್ಮೆ ಮಾತ್ರ ಲಭ್ಯವಿದೆ.

Read Full Story
06:32 PM (IST) Feb 14

Karnataka News Live 14 February 2026ಬೆಂಗಳೂರಿನ ನಿವೃತ್ತ ನೇವಿ ಕ್ಯಾಪ್ಟನ್ ಹತ್ಯೆ ಪ್ರಕರಣ - ಹುಟ್ಟಿಸಿದ ತಂದೆ-ತಾಯಿಯನ್ನೇ ಕೊಂದವನ ಕೈಯಲ್ಲೇ ಅಂತ್ಯಸಂಸ್ಕಾರ!

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ತಂದೆ-ತಾಯಿಯನ್ನು ಹತ್ಯೆ ಮಾಡಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ರೋಹನ್‌ ಚಂದ್ರ ಭಟ್, ಇದೀಗ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾನೆ. ಸಹೋದರಿಯ ಮನವಿಯ ಮೇರೆಗೆ ನ್ಯಾಯಾಲಯದ ಅನುಮತಿ ಪಡೆದು, ಚಿತಾಗಾರಕ್ಕೆ ಬಂದು ವಿಧಿವಿಧಾನ ಪೂರ್ಣಗೊಳಿಸಿದ್ದಾನೆ.

Read Full Story
05:50 PM (IST) Feb 14

Karnataka News Live 14 February 2026ಹೊಸಕೋಟೆ ಭೀಕರ ಅಪಘಾತದ ಇಂಪ್ಯಾಕ್ಟ್, PWD-ನ್ಯಾಷನಲ್ ಹೈವೆ ಅಥಾರಿಟಿ-ಪೊಲೀಸರಿಂದ ಜಂಟಿ ಸರ್ವೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರಿಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಒಂದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳಾಗುತ್ತಿರುವುದರಿಂದ ಪೊಲೀಸರು ಮತ್ತು ಹೈವೇ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಸರ್ವೇ ನಡೆಸಿದ್ದಾರೆ.

Read Full Story
05:42 PM (IST) Feb 14

Karnataka News Live 14 February 2026ಒಂದು ಸಿನಿಮಾ ಮಾಡಿ ಎಂಗೇಜ್‌ ಆದ 'ಗತವೈಭವ' ಹೀರೋ; ತುಮಕೂರು ರಾಜಕಾರಣದಲ್ಲ ಬೀಗರಾದ ಅಪ್ಪಂದಿರು!

ಗತವೈಭವ ಸಿನಿಮಾದ ನಟ ದುಷ್ಯಂತ್‌ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅವರು ರಿಲೇಶನ್‌ಶಿಪ್‌ನಲ್ಲಿದ್ದಾರೆ ಎನ್ನುವ ಸುಳಿವು ಕೊಟ್ಟಿದ್ದರು. ಈಗ ಎಂಗೇಜ್‌ ಆಗಿರೋ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Read Full Story
05:27 PM (IST) Feb 14

Karnataka News Live 14 February 2026ಜೀವ ಬೇಡವೆಂದೆನಿಸಿದರೂ ಬದುಕಬೇಕು ಅಂತೇಕೆ ಅನ್ಸುತ್ತೆ? ಪ್ರೀತಿ ಡೆಫಿನೇಷನ್ ಹೇಳಿದ ಕಿರಣ್ ರಾಜ್

'ಕರ್ಣ' ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್, ಪ್ರೀತಿಯ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ. ಬದುಕೇ ಬೇಡವೆನಿಸಿದಾಗ ಉತ್ಸಾಹ ಮೂಡಿಸುವುದೇ ಪ್ರೀತಿ ಎಂದಿರುವ ಅವರ ಮಾತುಗಳು ವೈರಲ್ ಆಗಿವೆ.

Read Full Story
05:18 PM (IST) Feb 14

Karnataka News Live 14 February 2026ವಯಸ್ಸು 41 ಆಯ್ತು, ದಿನೇ ದಿನೇ ಮಾದಕ ಬೆಡಗಿಯಾಗಿ ಬದಲಾಗ್ತಿರೋ ಜ್ಯೋತಿ ರೈ; ಗುಟ್ಟು ಬಯಲಾಯ್ತು!

Actress Jyothi Rai Photos: ಕಿನ್ನರಿ ಸೇರಿದಂತೆ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಲೀಡ್‌ ಪಾತ್ರಗಳಲ್ಲಿ ನಟಿಸಿರುವ ಜ್ಯೋತಿ ರೈ ಸಣ್ಣಗಾಗಿ, ಈಗ ಸಿನಿಮಾದತ್ತ ಮುಖ ಮಾಡಿದ್ದಾರೆ. ಇಷ್ಟು ಚೆಂದ ಕಾಣಲು ಕಾರಣ ಏನು?

Read Full Story
04:48 PM (IST) Feb 14

Karnataka News Live 14 February 2026ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ಕನ್ನಡಿಗ ನಿಗೂಢ ಕಣ್ಮರೆ, ಪಾರ್ಕ್ ಬಳಿ ಕೊನೆಯದಾಗಿ ಕಾಣಿಸಿಕೊಂಡಾತ ಎಲ್ಲಿ ಹೋದ?

ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ನಾಪತ್ತೆಯಾಗಿದ್ದಾರೆ. ಫೆಬ್ರವರಿ 12ರಂದು ಟಿಲ್ಡೆನ್ ರೀಜನಲ್ ಪಾರ್ಕ್ ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಅವರ ಪತ್ತೆಗಾಗಿ ಸ್ಥಳೀಯ ಪೊಲೀಸ್ ಶೋಧ ಕಾರ್ಯ ನಡೆಸುತ್ತಿವೆ.

Read Full Story
04:45 PM (IST) Feb 14

Karnataka News Live 14 February 2026ಏನ್‌ ಗೊತ್ತಾ? I LoveYou ಅಷ್ಟೇ...; ನಟಿ ರಚಿತಾ ರಾಮ್‌ ಪ್ರಪೋಸ್ ಮಾಡಾಯ್ತು, ಈ ವರ್ಷವೇ ಮದುವೆ!

ಕನ್ನಡದ ಅನೇಕ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿರುವ ಡಿಂಪಲ್‌ ಕ್ವೀನ್‌ ಸಿನಿಮಾ ಖ್ಯಾತಿಯ ನಟಿ ರಚಿತಾ ರಾಮ್‌ ಅವರು ಈ ವರ್ಷ ಮದುವೆ ಆಗ್ತೀನಿ ಎಂದು ಅನೇಕ ಬಾರಿ ಹೇಳಿದ್ದರು. ಈಗ ಐ ಲವ್‌ ಯು ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story
04:45 PM (IST) Feb 14

Karnataka News Live 14 February 2026ವಂದೇ ಭಾರತ್‌ ಟ್ರೇನ್‌ ಟಾಯ್ಲೆಟ್‌ನಲ್ಲಿ ಬುಸ್‌ ಬುಸ್‌ ಎಂದ ಹಾವು, ಎದ್ನೋ ಬಿದ್ನೋ ಅಂತಾ ಓಡಿದ ಪ್ರಯಾಣಿಕರು!

Man Arrested for Leaving Snake in Vande Bharat Express Toilet ಸಿಸಿಟಿವಿ ದೃಶ್ಯ ಮತ್ತು ಸುಳಿವು ಆಧರಿಸಿದ ತನಿಖೆಯ ನಂತರ, ಫೆಬ್ರವರಿ 12 ರಂದು (ಗುರುವಾರ) ಮುಂಬ್ರಾದಲ್ಲಿ ನಾಸಿಕ್ ಜಿಲ್ಲೆಯ ಜಗನ್ ಅರ್ಜುನ್ ಭಲೆ ಎಂಬ ಆರೋಪಿಯನ್ನು ಬಂಧಿಸಲಾಯಿತು.

Read Full Story
04:18 PM (IST) Feb 14

Karnataka News Live 14 February 2026ಬೆಂಗಳೂರು ಬೇಕರಿಯ ದುರಹಂಕಾರ - 2 ಸಾವಿರ ಟೇಬಲ್‌ ಚಾರ್ಜ್‌ ಪ್ರಶ್ನಿಸಿದ ಗ್ರಾಹಕನಿಗೆ 'ಬಡವ' ಎಂದು ನಿಂದಿಸಿದ ಸಿಬ್ಬಂದಿ!

Bask Bakery Koramangala Row: Customer Called 'Poor' Over Table Fee Query ಬೇಕರಿಯ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗೆ ಗ್ರಾಹಕರೊಬ್ಬರು ಕಾಮೆಂಟ್‌ ಮಾಡಿ ಅಲ್ಲಿನ ಅನುಭವವನ್ನು ಟೀಕಿಸಿದ್ದರು. ಅಲ್ಲಿನ 2 ಸಾವಿರ ರೂಪಾಯಿ ಟೇಬಲ್‌ ಶುಲ್ಕವನ್ನು ಅವರು ಪ್ರಶ್ನೆ ಮಾಡಿದ್ದಾರೆ.

Read Full Story
04:05 PM (IST) Feb 14

Karnataka News Live 14 February 2026ಹೊಸಕೋಟೆ ದುರಂತ ಮಾಸುವ ಮುನ್ನವೇ ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ, ಯಾದಗಿರಿಯ ಶಿವನ ಭಕ್ತರ ಸಾವು!

ಶಿವರಾತ್ರಿ ಹಿನ್ನೆಲೆಯಲ್ಲಿ ಶ್ರೀಶೈಲಂಗೆ ತೆರಳುತ್ತಿದ್ದ ಯಾದಗಿರಿ ಜಿಲ್ಲೆಯ ಗೋಗಿ ಗ್ರಾಮದ ಮೂವರು ಭಕ್ತರು ಆಂಧ್ರಪ್ರದೇಶದ ಕಲಕುರ್ತಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕ್ರೂಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. 

Read Full Story
03:39 PM (IST) Feb 14

Karnataka News Live 14 February 2026ಕೊರಿಯನ್ ಗೇಮ್‌ನ ಸುಳಿಯಲ್ಲಿ ಸಾವಿಗೆ ಶರಣಾದ್ನಾ ಧಾರವಾಡದ ಬಾಲಕ, ಮೊಬೈಲ್ ಚೆಕ್ ಮಾಡಿದ ಪೊಲೀಸರು ಶಾಕ್!

ಧಾರವಾಡದಲ್ಲಿ 20 ವರ್ಷದ ಯುವಕನೊಬ್ಬ ನೇಣಿಗೆ ಶರಣಾಗಿದ್ದು, ಈ ಸಾವಿನ ಹಿಂದೆ ಕೊರಿಯನ್ ಗೇಮ್‌ಗಳ ಅತಿಯಾದ ವ್ಯಸನವಿರುವ ಶಂಕೆ ವ್ಯಕ್ತವಾಗಿದೆ. ಸಾವಿಗೂ ಮುನ್ನ 'ನನ್ನ ಸಾವಿಗೆ ನಾನೇ ಕಾರಣ' ಎಂದು ಸೆಲ್ಫ್ ಮೆಸೇಜ್ ಕಳುಹಿಸಿದ್ದ.

Read Full Story
03:02 PM (IST) Feb 14

Karnataka News Live 14 February 2026ಆಸೀಸ್ ಸೋಲುತ್ತೆ ಅಂದಿದ್ದವನಿಂದ ಮತ್ತೊಂದು ಶಾಕಿಂಗ್ ಭವಿಷ್ಯ - ಭಾರತ-ಪಾಕ್ ಪಂದ್ಯದಲ್ಲಿ ಗೆಲ್ಲೋದ್ಯಾರು?

ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ-ಆಸ್ಟ್ರೇಲಿಯಾ ಪಂದ್ಯದ ಬಗ್ಗೆ ನಿಖರವಾಗಿ ಭವಿಷ್ಯ ನುಡಿದಿದ್ದ ವ್ಯಕ್ತಿಯೊಬ್ಬ, ಇದೀಗ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ಸೋಲಲಿದೆ ಎಂದು ಹೇಳಿದ್ದಾನೆ. ಈತನ ಭವಿಷ್ಯವಾಣಿ ಆತಂಕ ಮೂಡಿಸಿದೆ.

Read Full Story
02:55 PM (IST) Feb 14

Karnataka News Live 14 February 2026ಅರ್ಜುನ್ ಸರ್ಜಾ-ಆಶಾರಾಣಿ ಲವ್ ಸ್ಟೋರಿ ಸೀಕ್ರೆಟ್ ಗೊತ್ತಾ? ಇದು ತೀರಾ ಡಿಫ್ರಂಟ್ ಆಂಗಲ್..!

ಅರ್ಜುನ್ ಸರ್ಜಾ-ಆಶಾರಾಣಿ ಜೋಡಿ 1988 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರ ಆಶಾ ರಾಣಿ ಗಂಡ, ಮನೆ ಮತ್ತು ಮಕ್ಕಳು ಅಂತ ತೊಡಗಿಸಿಕೊಂಡರು. ಇವರಿಗೆ ಐಶ್ವರ್ಯ ಮತ್ತು ಅಂಜನಾ ಅನ್ನುವ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಐಶ್ವರ್ಯ ಚಿತ್ರರಂಗದಲ್ಲಿ, ಅಂಜನಾ ಓದಿನಲ್ಲಿ ಬ್ಯುಸಿಯಾಗಿದ್ದಾರೆ.

Read Full Story
02:27 PM (IST) Feb 14

Karnataka News Live 14 February 2026Maha Shivaratri 2026 - ಆರ್ಟ್ ಆಫ್ ಲಿವಿಂಗ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ - ಗುರುದೇವ ಸಮ್ಮುದಲ್ಲಿ ವಿಶೇಷ ಧ್ಯಾನಕ್ಕೆ ಸಜ್ಜಾಗಿ

ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಗುರುದೇವ ಶ್ರೀ ಶ್ರೀ ರವಿ ಶಂಕರರೊಂದಿಗೆ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದ್ದು ರುದ್ರ ಪೂಜೆ, ಉತ್ಸವ ಮತ್ತು ಮಧ್ಯರಾತ್ರಿಯ ಧ್ಯಾನದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಸ್ವಾಗತವಿದೆ. ಕಾರ್ಯಕ್ರಮದ ವಿವರ ಇಲ್ಲಿದೆ

Read Full Story