ಕೇಬಲ್ ಸಮಸ್ಯೆಯಿಂದ ಸುದ್ದಿಯಾಗಿದ್ದ ಪೀಣ್ಯ ಫ್ಲೈಓವರ್ ಕುರಿತ ಮಾಹಿತಿ ಇಲ್ಲಿದೆ. ಮೇಲ್ಸೇತುವೆಯು ಭಾರ ತಡೆಯುವ ಸಾಮರ್ಥ್ಯ ಹೊಂದಿದೆಯೇ ಎಂದು ಮೇ 5 ರಿಂದ ಲೋಡ್ ಟೆಸ್ಟಿಂಗ್ ನಡೆಸಿದೆ. ಈ ಪರೀಕ್ಷೆಯ ಫಲಿತಾಂಶ ಹೊರ ಬಂದಿದೆ.
- Home
- News
- State
- Karnataka News Live: ಪೀಣ್ಯ ಫ್ಲೈಓವರ್ಗೆ ಕಠಿಣ ಪರೀಕ್ಷೆ ನಡೆಸಿದ ಪರಿಣಿತರ ತಂಡ; ರಿಸಲ್ಟ್ನಲ್ಲಿ ಬಂದಿದ್ದೇನು?
Karnataka News Live: ಪೀಣ್ಯ ಫ್ಲೈಓವರ್ಗೆ ಕಠಿಣ ಪರೀಕ್ಷೆ ನಡೆಸಿದ ಪರಿಣಿತರ ತಂಡ; ರಿಸಲ್ಟ್ನಲ್ಲಿ ಬಂದಿದ್ದೇನು?

ಬೆಂಗಳೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಚಿವ ಡಿ.ಸುಧಾಕರ್ ಇಂದು ಬೆಳಗಿನ ಜಾವ 3.15ರ ವೇಳೆಗೆ ನಿಧನರಾಗಿದ್ದಾರೆ. ಡಿ.ಸುಧಾಕರ್ ಅವರು ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಮಂಡಿ ಚಿಪ್ಪಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆಪರೇಷನ್ ಬಳಿಕ ಇನ್ನೇನು ಡಿಸ್ಚಾರ್ಜ್ ಆಗಬೇಕು ಎನ್ನುವಷ್ಟರಲ್ಲಿ ಶ್ವಾಸಕೋಶಕ್ಕೆ ಸೋಂಕು ತಗುಲಿತ್ತು ಹೆಚ್ಚು ಧೂಮಪಾನ ಮಾಡ್ತಿದ್ದ ಕಾರಣಕ್ಕೆ ಶ್ವಾಸಕೋಶದ ಸೋಂಕು ತೀವ್ರವಾಗಿತ್ತು. ಕೊನೆಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೂ ಯಾವುದೇ ಚೇತರಿಕೆ ಕಾಣಲಿಲ್ಲ

ಕೊನೆಗೆ ವೈದ್ಯರು ECMO ಅಳವಡಿಕೆ ಮಾಡಿದ್ದರು. ಶ್ವಾಸಕೋಶ ಹಾಗೂ ಹೃದಯ ಸರಿಯಾಗಿ ಕೆಲಸ ಮಾಡದ ಕಾರಣ, ECMO ಮಷಿನ್ ಈ ಕಾರ್ಯ ನಿರ್ವಹಿಸುತ್ತದೆ ನಾಲ್ಕು ವಾರಗಳ ನಿಗಾದಲ್ಲಿ ಇರಿಸಲಾಗಿತ್ತು. ಚೇತರಿಕೆ ಕಂಡುಬಂದರೆ ಶ್ವಾಸಕೋಶದ ಟ್ರಾನ್ಸ್ಪ್ಲಾಂಟ್ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಯಾವುದೇ ಚೇತರಿಕೆ ಕಾಣದೆ ಬೆಳಗಿನ ಜಾವ ಸುಧಾಕರ್ ಕೊನೆಯುಸಿರೆಳಿದಿದ್ದಾರೆ
Karnataka News Live 10 May 2026ಪೀಣ್ಯ ಫ್ಲೈಓವರ್ಗೆ ಕಠಿಣ ಪರೀಕ್ಷೆ ನಡೆಸಿದ ಪರಿಣಿತರ ತಂಡ; ರಿಸಲ್ಟ್ನಲ್ಲಿ ಬಂದಿದ್ದೇನು?
Karnataka News Live 10 May 2026ಯಶವಂತಪುರ -ವಿಜಯಪುರ-ಸಿಂಧನೂರು ರೈಲಿಗೆ ಜರ್ಮನ್ ತಂತ್ರಜ್ಞಾನ ; ಈಗ ಮತ್ತಷ್ಟು ಆರಾಮದಾಯಕ ಪ್ರಯಾಣ
ಯಶ್ವಂತಪುರ ವಿಜಯಪುರ ಯಶ್ವಂತಪುರ (16 547/48) ಹಾಗೂ ಯಶ್ವಂತಪುರ ಸಿಂಧನೂರು ಯಶ್ವಂತಪುರ (16 545/46) ಪ್ರಯಾಣಿಕರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಆಧುನಿಕ ಮೂಲ ಸೌಲಭ್ಯ ನೀಡುತ್ತಿರುವ ಕುರಿತು ಅಧಿಕಾರಿಗಳು ನೀಡಿದ ಮಾಹಿತಿ ಇಲ್ಲಿದೆ.
Karnataka News Live 10 May 2026ಸಚಿವ ಡಿ. ಸುಧಾಕರ್ ನಿಧನ; ಡಿಸಿಎಂ ಡಿಕೆಶಿ ರಾಯಚೂರು ಪ್ರವಾಸ ದಿಢೀರ್ ರದ್ದು?
Karnataka News Live 10 May 2026Belagavi - ಪತಿ ಮನೆಯಲ್ಲೇ ಕಳ್ಳತನ ಮಾಡಿ ಪ್ರಿಯಕರನೊಂದಿಗೆ ತಗ್ಲಾಕೊಂಡ ನವವಿವಾಹಿತೆ
Karnataka News Live 10 May 2026DK Shivakumar Raichur visit Today - ಇಂದು ರಾಯಚೂರಿಗೆ ಡಿಸಿಎಂ ಡಿಕೆಶಿ ಸೇರಿ ‘ಕೈ’ ನಾಯಕರ ದಂಡು!
Karnataka News Live 10 May 2026Minister D Sudhakar No More: ಹಿರಿಯೂರಿನ ಧ್ವನಿ ಮೌನ: ಸಚಿವ ಡಿ. ಸುಧಾಕರ್ ಇನ್ನಿಲ್ಲ
ಸಾಂಖ್ಯಿಕ ಮತ್ತು ಅಂಕಿ ಸಂಖ್ಯೆ ಸಚಿವರಾಗಿದ್ದ ಡಿ. ಸುಧಾಕರ್ ಅವರು ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಿರಿಯೂರು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ತಮ್ಮ ಚಿಕ್ಕಪ್ಪನ ರಾಜಕೀಯ ಮಾರ್ಗದರ್ಶನದಲ್ಲಿ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು.