11:01 PM (IST) Dec 01

Karnataka News Live 1 December 2025Brahmagantuಗೆ ನಟಿ ಪದ್ಮಾ ವಾಸಂತಿ ಎಂಟ್ರಿ! ವೀಕ್ಷಕರಿಂದ ಭಾರಿ ಅಸಮಾಧಾನ- ಕಾರಣ ಇಲ್ಲಿದೆ

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಹೊಸ ತಿರುವು, ಚಿರು ಅಜ್ಜಿಯ ಪ್ರವೇಶದಿಂದ ದೀಪಾ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಅಜ್ಜಿ ನೀಡಿದ ಸವಾಲನ್ನು ಸ್ವೀಕರಿಸಿರುವ ದೀಪಾ, ಸೋತರೆ ಶಾಶ್ವತವಾಗಿ ಮನೆ ಬಿಟ್ಟು ಹೋಗುವುದಾಗಿ ಪಣ ತೊಟ್ಟಿದ್ದಾಳೆ. ಸೌಂದರ್ಯ ಮತ್ತು ಅಜ್ಜಿ ಸೇರಿ ದೀಪಾಳನ್ನು ಸೋಲಿಸಲು ಕುತಂತ್ರ ರೂಪಿಸಿದ್ದಾರೆ.
Read Full Story
09:53 PM (IST) Dec 01

Karnataka News Live 1 December 2025ಸಿಂಹಾದ್ರಿಯ ಸಿಂಹ ಪಾರ್ಟ್​-2ನಲ್ಲಿ ಡಾ.ಬ್ರೋ! ಅವಮಾನ ಮಾಡಿದವರ ಮೇಲೆ ಸೇಡು ತೀರಿಸಿಕೊಂಡ ಗಗನ್

ಕೆಲಕಾಲ ಯೂಟ್ಯೂಬ್‌ನಿಂದ ದೂರವಿದ್ದ ಖ್ಯಾತ ಟ್ರಾವೆಲ್ ಬ್ಲಾಗರ್ ಡಾ. ಬ್ರೋ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಹಿಂದೆ ತನಗೆ ತಮಾಷೆ ಮಾಡಿದ್ದ ಸಿಂಹದ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಹೇಳಿ, ಸಿಂಹಗಳ ಜೊತೆ ವಾಕಿಂಗ್ ಮಾಡಿ, ಅವುಗಳ ಮರಿಗಳೊಂದಿಗೆ ಆಟವಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.
Read Full Story
09:19 PM (IST) Dec 01

Karnataka News Live 1 December 2025ಮಹಿಳೆಯ ಅಂಗೈನಲ್ಲಿ ಬರೆದು ಭರವಸೆ ನೀಡಿದ ಸಚಿವ - ನಂಬಬಹುದಾ ಈ ಭರವಸೆ ನಾ?

Minister writes pledge on womans hand: ಸಚಿವರು ಪೇಪರ್‌ನಲ್ಲಿ ಬರೆದು ಸಹಿ ಹಾಕಿ ಭರವಸೆ ನೀಡುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಸಚಿವರೊಬ್ಬರು ಮಹಿಳೆಯ ಕೈಯಲ್ಲಿ ಪೆನ್‌ನಿಂದ ಬರೆದು ಭರವಸೆ ನೀಡಿದ್ದು, ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

Read Full Story
09:16 PM (IST) Dec 01

Karnataka News Live 1 December 2025Bigg Bossಗೆ ಸೂರಜ್‌ ಸಿಂಗ್‌ ಎಂಟ್ರಿ ಕೊಟ್ಟಾಗ ರಿಷಾ ಗೌಡಗೆ ಏನಾಯ್ತು? ಎಲ್ಲವನ್ನೂ ಓಪನ್‌ ಆಗೇ ಹೇಳಿದ ನಟಿ

ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿ ಹೊರಬಂದಿರುವ ರಿಷಾ ಗೌಡ, ಮನೆಯೊಳಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದ ಸೂರಜ್ ಸಿಂಗ್ ಮೇಲೆ ತಮಗೆ ಕ್ರಷ್ ಇರಲಿಲ್ಲ ಎಂದು ಸ್ಪಷ್ಟಪಡಿಸಿರೋ ಅವರು ಹೇಳಿದ್ದೇನು ಕೇಳಿ.

Read Full Story
08:27 PM (IST) Dec 01

Karnataka News Live 1 December 2025ಹಾನಿಕಾರಕ ಆಹಾರ ಮಾರಾಟ, ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್‌ ವಿರುದ್ಧ ಕೇಸ್‌ ದಾಖಲು!

ಪೊಂಗಲ್‌ನಲ್ಲಿ ಹುಳ ಸಿಕ್ಕಿತ್ತು ಅನ್ನೋ ವಿಚಾರದಲ್ಲಿ ಗ್ರಾಹಕರಿಗೆ ರಾಮೇಶ್ವರಂ ಕೆಫೆ ಮಾಲೀಕರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈಗಾಗಲೇ ಈ ಕೇಸ್‌ನಲ್ಲಿ ರಾಮೇಶ್ವರಂ ಕೆಫೆ ಕೇಸ್‌ ದಾಖಲು ಮಾಡಿದ್ದು, ಈಗ ಗ್ರಾಹಕನಿಂದ ಪ್ರತಿದೂರು ದಾಖಲಾಗಿದೆ.

Read Full Story
08:22 PM (IST) Dec 01

Karnataka News Live 1 December 2025ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

ಮೂಡುಬಿದಿರೆಯ ಆಳ್ವಾಸ್ ಶಾಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯವನ್ನು 'ಚಂದ್ರಮಾನವ' ಖ್ಯಾತಿಯ ಡಾ. ಮೈಲ್ಸ್ವಾಮಿ ಅನ್ನಾದುರೈ ಉದ್ಘಾಟಿಸಿದರು. ಈ ಪ್ರಯೋಗಾಲಯವು ಭಾರತದ ಭವಿಷ್ಯದ ಬಾಹ್ಯಾಕಾಶ ಸಾಧನೆಗಳಿಗೆ ದೃಢ ಹೆಜ್ಜೆಯಾಗಬಲ್ಲದು ಎಂದು ಅವರು ಆಶಯ ವ್ಯಕ್ತಪಡಿಸಿದರು.

Read Full Story
08:06 PM (IST) Dec 01

Karnataka News Live 1 December 2025ಚಿನ್ನುಮರಿ ಹುಡುಕಲು ವೇಷ ಬದಲಿಸಿದ ಸೈಕೋ ಜಯಂತ್; ವಿಶ್ವನ ಮನೆಯಲ್ಲಿ ಸಿಕ್ಕಿಬಿದ್ದ ಜಾಹ್ನವಿ!

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಸೈಕೋ ಗಂಡ ಜಯಂತನಿಂದ ತಪ್ಪಿಸಿಕೊಂಡು ವಿಶ್ವನ ಮನೆಯಲ್ಲಿರುವ ಜಾಹ್ನವಿ ಹುಡುಕಲು ಜಯಂತ್ ವಿಫಲನಾಗುತ್ತಾನೆ. ಇದೀಗ, ವೃದ್ಧನ ವೇಷ ಧರಿಸಿ ಕಾರ್ಮಿಕನಾಗಿ ವಿಶ್ವನ ಮನೆಗೆ ಪ್ರವೇಶಿಸಿದ್ದಾನೆ. ಜಯಂತನ ಈ ಹೊಸ ನಾಟಕದಲ್ಲಿ ಜಾಹ್ನವಿ ಸಿಕ್ಕಿಬೀಳುತ್ತಾಳೆಯೇ ಎಂಬುದು ಕಥೆಯ ತಿರುವು.

Read Full Story
07:59 PM (IST) Dec 01

Karnataka News Live 1 December 2025ಮನ್‌ ಕೀ ಬಾತ್ - ಕರ್ನಾಟಕದ ಜೇನು ಕೃಷಿಗೆ ಪ್ರಧಾನಿ ಮೋದಿ ಶ್ಲಾಘನೆ, ಪುತ್ತೂರು ಮತ್ತು ತುಮಕೂರು ಉಲ್ಲೇಖ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 'ಮನ್‌ ಕೀ ಬಾತ್' ಕಾರ್ಯಕ್ರಮದಲ್ಲಿ ಕರ್ನಾಟಕದ ಜೇನು ಕೃಷಿಯನ್ನು ಶ್ಲಾಘಿಸಿದ್ದಾರೆ. ಪುತ್ತೂರಿನ 'ಗ್ರಾಮಜನ್ಯ' ಮತ್ತು ತುಮಕೂರಿನ 'ಶಿವಗಂಗಾ ಕಾಲಂಜಿಯಾ' ಸಂಸ್ಥೆಗಳು ಸಾವಿರಾರು ರೈತರಿಗೆ ಸ್ವಾವಲಂಬನೆ ನೀಡಿವೆ.

Read Full Story
07:36 PM (IST) Dec 01

Karnataka News Live 1 December 2025ಸುಪ್ರೀಂ ಆದೇಶ ಹಿನ್ನೆಲೆ ಮಂಗಳೂರಿನಲ್ಲಿ ಶ್ವಾನಗಳಿಗೆ ಪ್ರತ್ಯೇಕ ಆಹಾರ ಕೇಂದ್ರ ತೆರೆದ ಮೊದಲ ಕಂಪನಿ!

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ, ಮಂಗಳೂರಿನ ಎನ್‌ಎಂಪಿಎ ಬೀದಿ ಶ್ವಾನಗಳಿಗಾಗಿ ಪ್ರತ್ಯೇಕ ಆಹಾರ ವಲಯಗಳನ್ನು ಸ್ಥಾಪಿಸಿದೆ. ಪ್ರಾಣಿಗಳ ಆರೈಕೆಗಾಗಿ ಅನಿಮಲ್‌ ಕೇರ್‌ ಟ್ರಸ್ಟ್‌ ಜೊತೆ ಒಪ್ಪಂದ ಮಾಡಿಕೊಂಡಿರುವ ಎನ್‌ಎಂಪಿಎ, ಬೀಡಾಡಿ ಗೋವುಗಳಿಗಾಗಿಯೂ ಗೋಶಾಲೆ ತೆರೆದು ಮಾದರಿಯಾಗಿದೆ.

Read Full Story
07:29 PM (IST) Dec 01

Karnataka News Live 1 December 2025ಬಸವ ತತ್ವದವರು ತಾಲಿಬಾನಿ ಇದ್ದಂತೆ ಎಂದು ಕಾಡಸಿದ್ದೇಶ್ವರ ಸ್ವಾಮೀಜಿಗೆ 'ಕಾಡು ಪ್ರಾಣಿ' ಎಂದ ಚನ್ನಬಸವಾನಂದ ಶ್ರೀ!

ಬಸವ ತತ್ವದ ಅನುಯಾಯಿಗಳನ್ನು 'ತಾಲಿಬಾನಿಗಳು' ಎಂದು ಕರೆದ ಕನ್ಹೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಡಾ. ಚನ್ನಬಸವಾನಂದ ಸ್ವಾಮೀಜಿ, ಕನ್ಹೇರಿ ಶ್ರೀಗಳನ್ನು 'ಕಾಡು ಪ್ರಾಣಿ' ಎಂದು ಜರಿದಿದ್ದು, ಹೇಳಿಕೆ ಹಿಂಪಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Read Full Story
07:21 PM (IST) Dec 01

Karnataka News Live 1 December 2025ಡಿಕೆಶಿ ಮನೆಯಲ್ಲಿ ಸಿಎಂ ಉಪಹಾರ, ಕನಕಪುರದ ಫಾರ್ಮ್ ನಲ್ಲಿ ಸಾಕಿದ ನಾಟಿ ಕೋಳಿ ಗಮ್ಮತ್ತು, ಮೆನು ರೆಡಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಗಾಗಿ ಸಿಎಂಗೆ ಇಷ್ಟವಾದ ಕನಕಪುರದ ನಾಟಿ ಕೋಳಿ ಸಾರು ಸೇರಿದಂತೆ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ.

Read Full Story
07:08 PM (IST) Dec 01

Karnataka News Live 1 December 202590 ದಿನಗಳಲ್ಲಿ 44 ವಿದ್ಯಾರ್ಥಿಗಳ ಟಾರ್ಗೆಟ್ - 6 ವರ್ಷದಲ್ಲಿ ವಿದೇಶದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳೆಷ್ಟು?

ವಿದೇಶದಲ್ಲಿ ಶಿಕ್ಷಣ ಮತ್ತು ಉದ್ಯೋಗ ಪಡೆಯುವುದು ಅನೇಕ ಭಾರತೀಯರ ಕನಸಾಗಿದ್ದು, ಇದಕ್ಕಾಗಿ ಕುಟುಂಬಗಳು ಅಪಾರ ತ್ಯಾಗ ಮಾಡುತ್ತವೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ದೊಡ್ಡ ಪ್ರಶ್ನೆಯಾಗಿದೆ.

Read Full Story
06:49 PM (IST) Dec 01

Karnataka News Live 1 December 2025ಬೆಂಗಳೂರು ಸುರಂಗ ರಸ್ತೆಗೆ ನಾಗರೀಕರು, ತಜ್ಷರ ವ್ಯಾಪಕ ವಿರೋಧ, 42 ಸಾವಿರ ಕೋಟಿ ಪ್ರಾಜೆಕ್ಟ್‌ ದುರಂತ ಎಂದ ಜನರು!

ಬೆಂಗಳೂರು ಉಳಿಸಿ ಸಮಿತಿ ಆಯೋಜಿಸಿದ್ದ ನಾಗರಿಕರ ಸಮಾವೇಶದಲ್ಲಿ, ತಜ್ಞರು ಮತ್ತು ಕಾರ್ಯಕರ್ತರು ಬೆಂಗಳೂರು ಸುರಂಗ ರಸ್ತೆ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದರು. ಈ ಯೋಜನೆಯು ಅವೈಜ್ಞಾನಿಕ, ಆರ್ಥಿಕವಾಗಿ ಹೊರೆಯಾಗಲಿದ್ದು, ನಗರದ ಪರಿಸರಕ್ಕೆ ಮಾರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. 

Read Full Story
06:36 PM (IST) Dec 01

Karnataka News Live 1 December 2025ಡಾ. ಬ್ರೋ ಸೇಡು - ಮೈಮೇಲೆ ಮೂತ್ರ ಮಾಡಿ ಅವಮಾನಿಸಿದ್ದ ಸಿಂಹವನ್ನು, ನಾಯಿಯಂತೆ ವಾಕಿಂಗ್ ಮಾಡಿಸಿದ ಗಗನ್!

ಯೂಟ್ಯೂಬರ್ ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್, 2 ವರ್ಷಗಳ ಹಿಂದೆ ಉಗಾಂಡಾದಲ್ಲಿ ತಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಸಿಂಹದ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಕೋಲು ಹಿಡಿದು ದೈತ್ಯ ಸಿಂಹಗಳನ್ನು ನಾಯಿಯಂತೆ ವಾಕಿಂಗ್ ಮಾಡಿಸಿ ಪ್ರತೀಕಾರ ತೀರಿಸಿಕೊಂಡ ವಿಡಿಯೋ ವೈರಲ್ ಆಗಿದೆ.

Read Full Story
05:57 PM (IST) Dec 01

Karnataka News Live 1 December 2025ಕಡ್ಡಾಯ ಪೀರಿಯಡ್ಸ್‌ ಲೀವ್‌ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್‌ ಅಸೋಸಿಯೇಷನ್‌

ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸಿದ ಸರ್ಕಾರದ ನಿರ್ದೇಶನವನ್ನು ಬೆಂಗಳೂರು ಹೋಟೆಲ್‌ಗಳ ಸಂಘವು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಸರ್ಕಾರಕ್ಕೆ ಇಂತಹ ಆದೇಶ ಹೊರಡಿಸಲು ಅಧಿಕಾರವಿಲ್ಲ ಮತ್ತು ಇದು ತಾರತಮ್ಯದಿಂದ ಕೂಡಿದೆ ಎಂದು ಸಂಘ ವಾದಿಸಿದೆ.
Read Full Story
05:51 PM (IST) Dec 01

Karnataka News Live 1 December 202522 ವರ್ಷ ಚಾಲಕನಾಗಿದ್ದವನಿಗೆ ತಾವೇ ಡ್ರೈವ್ ಮಾಡಿ ಅಪರೂಪದ ಬೀಳ್ಕೊಡುಗೆ ಕೊಟ್ಟ ಧಾರವಾಡ ವಿವಿ ಕುಲಸಚಿವ!

ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ನಿಜಲಿಂಗಪ್ಪ ಮಟ್ಟಿಹಾಳ ಅವರು, 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ತಮ್ಮ ಚಾಲಕ ರುದ್ರಪ್ಪ ಅವರಿಗೆ ವಿಶೇಷ ಗೌರವ ಸಲ್ಲಿಸಿದರು. ನಿವೃತ್ತಿಯ ದಿನದಂದು, ಸ್ವತಃ ಕಾರು ಚಲಾಯಿಸಿ ಚಾಲಕನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಮನೆಗೆ ಬಿಟ್ಟರು .

Read Full Story
05:06 PM (IST) Dec 01

Karnataka News Live 1 December 2025ಬಸವತತ್ವದ ಅನುಯಾಯಿಗಳು ತಾಲಿಬಾನಿಗಳು, ಮತ್ತೊಮ್ಮೆ ವಿವಾದದಾತ್ಮಕ ಹೇಳಿಕೆ ಕೊಟ್ಟ ಕನ್ನೇರಿ ಶ್ರೀ!

ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಚಿಕ್ಕೋಡಿಯ ರಾಯಬಾಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಸವ ತತ್ವದ ಅನುಯಾಯಿಗಳನ್ನು 'ತಾಲಿಬಾನ್‌ಗಳು' ಎಂದು ಕರೆದು ಹೊಸ ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆಗೆ ಇತರೆ ಮಠಾಧೀಶರಿಂದ ತೀವ್ರ ಆಕ್ರೋಶ ವ್ಯಕ್ತವಾಗಿವೆ.

Read Full Story
04:53 PM (IST) Dec 01

Karnataka News Live 1 December 2025ಭಾರತವೇ ಮೆಚ್ಚಿದ ಸೀತೆಯನ್ನು ಲವ್‌ ಮಾಡುತ್ತಿದ್ದಾರಾ ಕ್ರಿಕೆಟರ್ ಶ್ರೇಯಸ್‌ ಅಯ್ಯರ್‌?‌ ಸತ್ಯ ಬಯಲು

ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌ ಪ್ರೀತಿ ಮಾಡುತ್ತಿದ್ದಾರಂತೆ. ಕೆಲವು ಕ್ರಿಕೆಟರ್‌ಗಳು ನಟಿಯರ ಮಧ್ಯೆ ಲವ್‌ ಸ್ಟೋರಿ ನಡೆದಿದೆ. ಶ್ರೇಯಸ್ ಅಯ್ಯರ್ ಜೊತೆ ಮೃಣಾಲ್ ಠಾಕೂರ್ ಹೆಸರು ಥಳುಕು ಹಾಕಿಕೊಂಡ ಮರುದಿನವೇ, ಅವರು ತಮ್ಮ ಬಗ್ಗೆ ಹರಡುತ್ತಿರುವ 'ವದಂತಿ'ಗಳ ಬಗ್ಗೆ ಮಾತನಾಡಿದ್ದಾರೆ.

Read Full Story
04:36 PM (IST) Dec 01

Karnataka News Live 1 December 2025ಮಾನಸಿಕ ಖಿನ್ನತೆಯಿಂದ ಜೀವ ಕಳೆದುಕೊಂಡ ತಾಯಿ, ಇಬ್ಬರು ಪುಟ್ಟ ಮಕ್ಕಳು ಅನಾಥ!

ಗಂಡನ ಸಾವಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ 31 ವರ್ಷದ ತಾಯಿ ಸೌಭಾಗ್ಯ, ನೆಲಮಂಗಲದ ಬಳಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರಂತದಿಂದ ಅವರ ಇಬ್ಬರು ಮಕ್ಕಳು ಅನಾಥರಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story
04:25 PM (IST) Dec 01

Karnataka News Live 1 December 2025ಸೋಶಿಯಲ್ ಮೀಡಿಯಾದಿಂದ ದೂರವಿದ್ದು 10 ಸರ್ಕಾರಿ ನೌಕರಿ ಪಡೆದು ಸ್ಫೂರ್ತಿಯಾದ ಸಾಧಕ!

ಬೆಳಗಾವಿ ಜಿಲ್ಲೆಯ ಬಡ ಕುಟುಂಬದ ಯುವಕ ಧರೆಪ್ಪ ನಾಗಗೋಳ, ಕಠಿಣ ಪರಿಶ್ರಮ ಮತ್ತು ಸ್ವ-ಅಧ್ಯಯನದಿಂದ ಬರೋಬ್ಬರಿ 10 ಸರ್ಕಾರಿ ಹುದ್ದೆಗಳನ್ನು ಪಡೆದು ಇತರರಿಗೆ ಮಾದರಿಯಾಗಿದ್ದಾರೆ. ಪ್ರಸ್ತುತ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದು, ಐಎಎಸ್ ಅಧಿಕಾರಿಯಾಗುವ ಕನಸು ಕಾಣುತ್ತಿದ್ದಾರೆ.

Read Full Story