MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Brahmagantuಗೆ ನಟಿ ಪದ್ಮಾ ವಾಸಂತಿ ಎಂಟ್ರಿ! ವೀಕ್ಷಕರಿಂದ ಭಾರಿ ಅಸಮಾಧಾನ- ಕಾರಣ ಇಲ್ಲಿದೆ

Brahmagantuಗೆ ನಟಿ ಪದ್ಮಾ ವಾಸಂತಿ ಎಂಟ್ರಿ! ವೀಕ್ಷಕರಿಂದ ಭಾರಿ ಅಸಮಾಧಾನ- ಕಾರಣ ಇಲ್ಲಿದೆ

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಹೊಸ ತಿರುವು, ಚಿರು ಅಜ್ಜಿಯ ಪ್ರವೇಶದಿಂದ ದೀಪಾ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಅಜ್ಜಿ ನೀಡಿದ ಸವಾಲನ್ನು ಸ್ವೀಕರಿಸಿರುವ ದೀಪಾ, ಸೋತರೆ ಶಾಶ್ವತವಾಗಿ ಮನೆ ಬಿಟ್ಟು ಹೋಗುವುದಾಗಿ ಪಣ ತೊಟ್ಟಿದ್ದಾಳೆ. ಸೌಂದರ್ಯ ಮತ್ತು ಅಜ್ಜಿ ಸೇರಿ ದೀಪಾಳನ್ನು ಸೋಲಿಸಲು ಕುತಂತ್ರ ರೂಪಿಸಿದ್ದಾರೆ.

1 Min read
Suchethana D
Published : Dec 01 2025, 11:01 PM IST
Share this Photo Gallery
  • FB
  • TW
  • Linkdin
  • Whatsapp
18
ದೀಪಾ ಮತ್ತು ಸೌಂದರ್ಯ
Image Credit : Instagram

ದೀಪಾ ಮತ್ತು ಸೌಂದರ್ಯ

ಬ್ರಹ್ಮಗಂಟು ಸೀರಿಯಲ್​ (Brahmagantu Serial) ಸದ್ಯ ದೀಪಾ ಮತ್ತು ದಿಶಾ ನಡುವೆ ಟ್ವಿಸ್ಟ್​ನಲ್ಲಿ ತೇಲಾಡುತ್ತಿದೆ. ದೀಪಾಳ ಮೇಲೆ ದ್ವೇಷ ಕಾರುವ ಸೌಂದರ್ಯ, ಅವಳೇ ದಿಶಾ ಎನ್ನೋದನ್ನು ಅರಿಯದೇ ಚಿರು ಮತ್ತು ದಿಶಾಳನ್ನು ಒಂದು ಮಾಡಲು ಸ್ಕೆಚ್​ ಹಾಕುತ್ತಿದ್ದಾಳೆ.

28
ಪತ್ನಿಯ ಪ್ರೀತಿ ಇಲ್ಲ
Image Credit : Asianet News

ಪತ್ನಿಯ ಪ್ರೀತಿ ಇಲ್ಲ

ಚಿರುಗೆ ದೀಪಾ ಮೇಲೆ ಪ್ರೀತಿ ಇದ್ದರೂ ಅದು ಪತ್ನಿಯಾಗಿ ಅಲ್ಲ, ಬದಲಿಗೆ ಸ್ನೇಹಿತೆಯಾಗಿ ಅಷ್ಟೇ. ಆದ್ದರಿಂದ ಪತಿಯಾಗಿ ಆತನ ಪ್ರೀತಿ ಪಡೆಯಲು ಹರಸಾಹಸ ಮಾಡುತ್ತಿದ್ದಾಳೆ ದೀಪಾ. ಆದರೆ ಆಕೆ ಏನೇ ಮಾಡಿದರೂ ಚಿರು ಬದಲಾಗುತ್ತಿಲ್ಲ.

Related Articles

Related image1
ಸಿಂಹಾದ್ರಿಯ ಸಿಂಹ ಪಾರ್ಟ್​-2ನಲ್ಲಿ ಡಾ.ಬ್ರೋ! ಅವಮಾನ ಮಾಡಿದವರ ಮೇಲೆ ಸೇಡು ತೀರಿಸಿಕೊಂಡ ಗಗನ್
Related image2
Bigg Bossಗೆ ಸೂರಜ್‌ ಸಿಂಗ್‌ ಎಂಟ್ರಿ ಕೊಟ್ಟಾಗ ರಿಷಾ ಗೌಡಗೆ ಏನಾಯ್ತು? ಎಲ್ಲವನ್ನೂ ಓಪನ್‌ ಆಗೇ ಹೇಳಿದ ನಟಿ
38
ಸೌಂದರ್ಯನೋ, ಗುಣನೊ?
Image Credit : Instagram

ಸೌಂದರ್ಯನೋ, ಗುಣನೊ?

ಮಾಡೆಲ್​ ದಿಶಾ ತಾನೇ ಆಗಿದ್ದರೂ ಪತಿ ಎಲ್ಲಿ, ತನ್ನ ಗುಣಕ್ಕಿಂತ ದಿಶಾಳ ಸೌಂದರ್ಯಕ್ಕೆ ಮಾರುಹೋಗುತ್ತಾನೋ ಎನ್ನುವ ಆತಂಕವೂ ದೀಪಾಗೆ ಇದೆ. ಏಕೆಂದರೆ, ಗುಣಕ್ಕಿಂತ ಸೌಂದರ್ಯನೇ ಮೇಲು ಎಂದು ಚಿರು ಅತ್ತಿಗೆ ಸೌಂದರ್ಯ ಸವಾಲು ಹಾಕಿದ್ದು, ಅದನ್ನು ದೀಪಾ ಎದುರಿಸಬೇಕಿದೆ.

48
ಅಜ್ಜಿಗೂ ದೀಪಾ ಕಂಡ್ರೆ ಆಗಲ್ಲ
Image Credit : Instagram

ಅಜ್ಜಿಗೂ ದೀಪಾ ಕಂಡ್ರೆ ಆಗಲ್ಲ

ಇದರ ನಡುವೆಯೇ ಚಿರು ಅಜ್ಜಿಯಾಗಿ ಹಿರಿಯ ನಟಿ ಪದ್ಮಾ ವಾಸಂತಿ ಎಂಟ್ರಿಯಾಗಿದೆ. ಈಕೆ ಸೌಂದರ್ಯಳ ಪರ. ದೀಪಾಳ ಕಂಡರೆ ಈ ಅಜ್ಜಿಗೂ ಆಗುವುದಿಲ್ಲ. ಹಳ್ಳಿ ಹುಡುಗಿ ಹಳ್ಳಿ ಹುಡುಗಿ ಎಂದೇ ದೀಪಾಳನ್ನು ಹೀಯಾಳಿಸುತ್ತಿದ್ದಾಳೆ.

58
ಹೊರ ಹಾಕುವ ಪ್ಲ್ಯಾನ್​
Image Credit : Instagram

ಹೊರ ಹಾಕುವ ಪ್ಲ್ಯಾನ್​

ಇದೀಗ ಈ ಅಜ್ಜಿ ದೀಪಾಳನ್ನು ಮನೆಯಿಂದ ಹೊರಕ್ಕೆ ಹಾಕುವ ಪ್ಲ್ಯಾನ್ ಮಾಡಿದ್ದಾಳೆ. ಮೂರು ಟಾಸ್ಕ್​ಗಳನ್ನು ದೀಪಾ ಮತ್ತು ಸೌಂದರ್ಯಳಿಗೆ ಕೊಡುತ್ತೇನೆ. ಯಾರು ಎರಡು ಟಾಸ್ಕ್​ ಗೆಲ್ಲುತ್ತಾರೋ ಅವರೇ ಈ ಮನೆಯ ಪರ್ಫೆಕ್ಟ್​ ಸೊಸೆ ಎನ್ನುವುದು ಆಕೆಯ ಚಾಲೆಂಜ್​.

68
ಮನೆ ಬಿಟ್ಟು ಹೋಗುವ ಮಾತು
Image Credit : Instagram

ಮನೆ ಬಿಟ್ಟು ಹೋಗುವ ಮಾತು

ದೀಪಾ ಇದಕ್ಕೆ ಒಪ್ಪಿದ್ದಾಳೆ. ತಾನು ಸೋತರೆ ಮನೆ ಬಿಟ್ಟು ಶಾಶ್ವತವಾಗಿ ಹೊರಗೆ ಹೋಗುವುದಾಗಿ ಹೇಳಿದ್ದಾಳೆ. ಸೌಂದರ್ಯ ಮತ್ತು ಅಜ್ಜಿ ಸೇರಿ ಕುತಂತ್ರದಿಂದ ದೀಪಾಳನ್ನು ಸೋಲಿಸುವ ಪ್ಲ್ಯಾನ್​ ಮಾಡಿದ್ದಾರೆ.

78
ವೀಕ್ಷಕರ ಬೇಸರ
Image Credit : Instagram

ವೀಕ್ಷಕರ ಬೇಸರ

ಇದೀಗ ನಟಿ ಪದ್ಮಾ ವಾಸಂತಿ ಅವರ ಎಂಟ್ರಿ ವೀಕ್ಷಕರಿಗೆ ತುಂಬಾ ಬೇಸರ ತಂದಿದೆ. ಅದಕ್ಕೆ ಕಾರಣ, ನಟಿಯನ್ನು ನೆಗೆಟಿವ್​ ರೋಲ್​ನಲ್ಲಿ ತೋರಿಸಿರುವುದು. ಅವರನ್ನು ಪ್ಲೀಸ್​ ವಿಲನ್​ ಮಾಡಬೇಡಿ. ಚಿರು ಮತ್ತು ದೀಪಾ ಇಬ್ಬರನ್ನೂ ಒಂದು ಮಾಡುವ ಕ್ಯಾರೆಕ್ಟರ್​ ಮಾಡಿ ಬದಲಾಯಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

88
ಸದ್ಯ ವಿಲನ್​
Image Credit : Instagram

ಸದ್ಯ ವಿಲನ್​

ಆದರೆ ಸದ್ಯದ ಮಟ್ಟಗೆ ಪದ್ಮಾ ವಾಸಂತಿ (Actress Padma Vasanti) ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಮುಂದೆ ಸೀರಿಯಲ್​ ಯಾವ ಸ್ವರೂಪ ಪಡೆಯುತ್ತದೆಯೋ ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬ್ರಹ್ಮಗಂಟು ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
ರಿಯಾಲಿಟಿ ಶೋ
ಟಿವಿ ಶೋ
ಮನರಂಜನಾ ಸುದ್ದಿ

Latest Videos
Recommended Stories
Recommended image1
Bigg Bossಗೆ ಸೂರಜ್‌ ಸಿಂಗ್‌ ಎಂಟ್ರಿ ಕೊಟ್ಟಾಗ ರಿಷಾ ಗೌಡಗೆ ಏನಾಯ್ತು? ಎಲ್ಲವನ್ನೂ ಓಪನ್‌ ಆಗೇ ಹೇಳಿದ ನಟಿ
Recommended image2
ಚಿನ್ನುಮರಿ ಹುಡುಕಲು ವೇಷ ಬದಲಿಸಿದ ಸೈಕೋ ಜಯಂತ್; ವಿಶ್ವನ ಮನೆಯಲ್ಲಿ ಸಿಕ್ಕಿಬಿದ್ದ ಜಾಹ್ನವಿ!
Recommended image3
ಡಾ. ಬ್ರೋ ಸೇಡು: ಮೈಮೇಲೆ ಮೂತ್ರ ಮಾಡಿ ಅವಮಾನಿಸಿದ್ದ ಸಿಂಹವನ್ನು, ನಾಯಿಯಂತೆ ವಾಕಿಂಗ್ ಮಾಡಿಸಿದ ಗಗನ್!
Related Stories
Recommended image1
ಸಿಂಹಾದ್ರಿಯ ಸಿಂಹ ಪಾರ್ಟ್​-2ನಲ್ಲಿ ಡಾ.ಬ್ರೋ! ಅವಮಾನ ಮಾಡಿದವರ ಮೇಲೆ ಸೇಡು ತೀರಿಸಿಕೊಂಡ ಗಗನ್
Recommended image2
Bigg Bossಗೆ ಸೂರಜ್‌ ಸಿಂಗ್‌ ಎಂಟ್ರಿ ಕೊಟ್ಟಾಗ ರಿಷಾ ಗೌಡಗೆ ಏನಾಯ್ತು? ಎಲ್ಲವನ್ನೂ ಓಪನ್‌ ಆಗೇ ಹೇಳಿದ ನಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved