ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಬೆಳಗಾವಿ ಫೀಲ್ಡಿಂಗ್ ಆಯ್ದುಕೊಂಡಿತು. ಶಿವಮೊಗ್ಗ ತಂಡವನ್ನು 175 ರನ್’ಗಳಿಗೆ ನಿಯಂತ್ರಿಸಿದ ಬೆಳಗಾವಿ ಬ್ಯಾಟಿಂಗ್’ನಲ್ಲಿ ಅಮೋಘ ಪ್ರದರ್ಶನ ತೋರಿತು.
SPORTS Aug 25, 2019, 7:44 PM IST
ಬೆಂಗಳೂರಿನಲ್ಲಿದ್ದರೆ ವಿದ್ಯಾರ್ಥಿ ಭವನ ಹೊಟೆಲ್ನಲ್ಲಿ ದೋಸೆ ತಿನ್ನದಿದ್ದರೆ ಹೇಗೆ? 76 ವರ್ಷಗಳಿಂದ ದೋಸೆಯಲ್ಲಿ ಹೆಸರುವಾಸಿಯಾಗಿರುವ ವಿದ್ಯಾರ್ಥಿ ಭವನಕ್ಕೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಭೇಟಿ ನೀಡಿ ಬೆಣ್ಣೆ ದೋಸೆ ಸವಿದಿದ್ದಾರೆ.
SPORTS Aug 24, 2019, 12:00 PM IST
ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಹೊಸ ದಾಖಲೆನಿ ನಿರ್ಮಾಣವಾಗಿದೆ. ಕೆ.ಗೌತಮ್ ಅಬ್ಬರಕ್ಕೆ ಎರಡೆರಡು ದಾಖಲೆ ನಿರ್ಮಾಣವಾಗಿದೆ. ಕೇವಲ 39 ಎಸೆತಗಲ್ಲಿ ಶತಕ ಹಾಗೂ 8 ವಿಕೆಟ್ ಕಬಳಿಸೋ ಮೂಲಕ ಈ ಹಿಂದಿನ ಎಲ್ಲಾ ದಾಖಲೆ ಮುರಿದಿದ್ದಾರೆ.
SPORTS Aug 24, 2019, 10:06 AM IST
ಬೆಂಗಳೂರು ಬ್ಲಾಸ್ಟರ್ಸ್ ಕಳಪೆ ಬ್ಯಾಟಿಂಗ್ ತಂಡಕ್ಕೆ ಮುಳುವಾಗಿದೆ. ಬೆಂಗಳೂರು ಚರಣದ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ ಮುಗ್ಗರಿಸಿದೆ. ಆದರೆ ಸತತ ಸೋಲಿನಿಂದ ಬೇಸರಗೊಂಡಿದ್ದ ಬೆಳಗಾವಿ ಪ್ಯಾಂಥರ್ಸ್ ಕೊನೆಗೂ ಗೆಲುವಿನ ಗೆರೆ ದಾಟಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
SPORTS Aug 23, 2019, 8:01 PM IST
ಗುರುವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು 16 ಓವರಲ್ಲಿ 8 ವಿಕೆಟ್ಗೆ 93 ರನ್ ಗಳಿಸಿತು. 12 ಓವರ್ಗಳಲ್ಲಿ 4 ವಿಕೆಟ್ಗೆ 63 ರನ್ ಗಳಿಸಿದ್ದಾಗ ಮಳೆ ಸುರಿದ ಕಾರಣ ಪಂದ್ಯವನ್ನು 16 ಓವರ್ಗೆ ಸೀಮಿತಗೊಳಿಸಲಾಯಿತು.
SPORTS Aug 23, 2019, 11:24 AM IST
ಬೆಂಗಳೂರು(ಆ.22): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಈ ಬಾರಿ ಹಲವು ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸಿದೆ. ಕಾವೇರಿ ಕೂಗು ಅಭಿಯಾನದ ಮೂಲಕ ಕಾವೇರಿ ನದಿ ಪುನಶ್ಚೇತನ ಹಾಗೂ ಪ್ರವಾಹದಲ್ಲಿ ಕೊಚ್ಚಿ ಹೋದ ಜನರ ಬದುಕನ್ನು ಮತ್ತೆ ಕಟ್ಟಿ ಕೊಡಲು ಮುಂದಾಗಿದೆ. ಫ್ರಾಂಚೈಸಿ ಕೂಡ ತಮ್ಮದೇ ಆದ ರೀತಿಯಲ್ಲಿ ನೆರ ಸಂತ್ರಸ್ತರಿಗೆ ನೆರವು ನೀಡುತ್ತಿದೆ. ಈ ಬಾರಿ ರಣಭೀಕರ ಮಳೆಗೆ ಬೆಳಗಾವಿ ತತ್ತರಿಸಿದೆ. ಪ್ರವಾಹದಲ್ಲಿ ಬೆಳಗಾವಿ ಜನತೆ ಮನೆಗಳು ಕೊಚ್ಚಿ ಹೋಗಿವೆ. ಇದೀಗ KPL ಟೂರ್ನಿಯ ಬೆಳಗಾವಿ ಪ್ಯಾಂಥರ್ಸ್ ತಂಡ ನೆರ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸೋ ಮೂಲಕ ನೆರವು ನೀಡಿದೆ.
SPORTS Aug 22, 2019, 12:33 PM IST
ಮನೀಶ್ ಪಾಂಡೆ ಶತಕದ ನೆರವಿನಿಂದ ಗೆಲುವಿನ ವಿಶ್ವಾಸದಲ್ಲಿದ್ದ ಬೆಳಗಾವಿ ಪ್ಯಾಂಥರ್ಸ್ಗೆ ಸೋಲು ಎದುರಾಗಿದೆ. ರೋಚಕ ಪಂದ್ಯದಲ್ಲಿ ಹುಬ್ಳಿ ಟೈಗರ್ಸ್ 5 ವಿಕೆಟ್ ಗೆಲುವು ಸಾಧಿಸಿದೆ.
SPORTS Aug 21, 2019, 10:45 PM IST
ಕೆಪಿಎಲ್ ಟೂರ್ನಿಲ್ಲಿ ಹಾಲಿ ಚಾಂಪಿಯನ್ ಬಿಜಾಪುರ ಬುಲ್ಸ್ ಕೊನೆಗೂ ಗೆಲುವಿನ ಸಿಹಿ ಕಂಡಿದೆ. ಆದರೆ ಮೈಸೂರು ವಾರಿಯರ್ಸ್ ಮಾತ್ರ ಇನ್ನೂ ಸೋಲಿನಿಂದ ಹೊರಬಂದಿಲ್ಲ. ಭರತ್ ಚಿಪ್ಲಿ ನೀಡಿದ ಚಮಕ್ನಿಂದ ಮೈಸೂರು ವಾರಿಯರ್ಸ್ ತಂಡದ ಗೆಲುವಿನ ಲಕ್ ಮತ್ತೆ ಮರೆಯಾಯಿತು.
SPORTS Aug 21, 2019, 7:00 PM IST
ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ 8ನೇ ಆವೃತ್ತಿಯಲ್ಲಿ ಬಳ್ಳಾರಿ ಟಸ್ಕರ್ಸ್ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಬಿಜಾಪುರ ಬುಲ್ಸ್ ಮಣಿಸಿದ ಬಳ್ಳಾರಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
SPORTS Aug 20, 2019, 8:12 PM IST
ಬೆಂಗಳೂರು[ಆ.20]: ಎಲ್ಲಿಯ ಕ್ರಿಕೆಟ್? ಎಲ್ಲಿಯ ಯಕ್ಷಗಾನದ ಚೆಂಡೆ? ಹೀಗೆಂದು ಪ್ರಶ್ನಿಸಬೇಡಿ. ಆಸ್ಪ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಲೆಗ್ಸ್ಪಿನರ್ ಬ್ರಾಡ್ ಹಾಗ್, ಬಾಲ್ ಹಿಡಿವ ಕೈಯಲ್ಲಿ ಕೋಲು ಹಿಡಿದು ಚೆಂಡೆವಾದನ ನಡೆಸುವ ಮೂಲಕ ಯಕ್ಷಗಾನ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದರು. ಇದೇ ವೇಳೆ ಧೀಂಗಿಣ ತೆಗೆದು ಸೈ ಅನ್ನಿಸಿಕೊಂಡರು. ಈಗ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವಿವಿ ಪುರಂ ಕಾಲೇಜಿನಲ್ಲಿ ಪ್ರತಿ ಭಾನುವಾರ ಸಂಕೃತಿ ಯಕ್ಷಾನುಭವ ತಂಡದಿಂದ ತೆಂಕು ಹಾಗೂ ಬಡಗು ತಿಟ್ಟಿನ ಯಕ್ಷಗಾನ ಹಿಮ್ಮೇಳ ಹಾಗೂ ಮುಮ್ಮೇಳದ ತರಬೇತಿ ನಡೆಯುತ್ತಿದೆ. ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ಟೂರ್ನಿಯಲ್ಲಿ ಕ್ರೀಡಾ ಚಾನೆಲ್ಗೆ ವೀಕ್ಷಕ ವಿವರಣೆಗೆ ಕಾರ್ಯನಿರ್ವಹಿಸಲು ಬೆಂಗಳೂರಿಗೆ ಆಗಮಿಸಿದ್ದ ಬ್ರಾಡ್ ಹಾಗ್ ಈ ಶಿಬಿರಕ್ಕೆ ಭಾನುವಾರ ಹಠಾತ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ತೆಂಕುತಿಟ್ಟಿನ ಹಿಮ್ಮೇಳ ಹಾಗೂ ಮುಮ್ಮೇಳವನ್ನು ವೀಕ್ಷಿಸಿ ಸಂತಸಪಟ್ಟರು. ಅಲ್ಲದೆ ಯಕ್ಷಗಾನದ ತಿಟ್ಟುಗಳು, ಪಾತ್ರ ಪ್ರಪಂಚ ಹಾಗೂ ಮಾತುಗಾರಿಕೆ, ಕುಣಿತ ಎಲ್ಲ ಮಗ್ಗುಲುಗಳ ಬಗ್ಗೆ ಮಾಹಿತಿ ಪಡೆದರು.
ಚೆಂಡೆ ಬಾರಿಸಿದರು, ಕುಣಿದರು: ತೆಂಕುತಿಟ್ಟಿನ ಹಿರಿಯ ಹಿಮ್ಮೇಳವಾದಕ ಅಡೂರು ಮೋಹನ ಸರಳಾಯ ಅವರು ಬಾರಿಸುತ್ತಿದ್ದ ಚೆಂಡೆ ವಾದನಕ್ಕೆ ತಲೆದೂಗಿದ ಹಾಗ್, ಬಳಿಕ ತಾನೂ ಚೆಂಡೆಯನ್ನು ಹೆಗಲಿಗೇರಿಸಿ ಎರಡೂ ಕೈಗಳಿಂದ ಕೋಲು ಹಿಡಿದು ವಾದನ ನಡೆಸಿ ಅಲ್ಲಿದ್ದವರಿಂದ ಭೇಷ್ ಎನಿಸಿಕೊಂಡರು.
‘ಓ ಮೈ ಗುಡ್ನೆಸ್’ ಎಂದು ಉದ್ಗರಿಸಿದ್ದಾರೆ. ಅಷ್ಟೇ ಅಲ್ಲ, ಬಳಿಕ ನಡೆಯುತ್ತಿದ್ದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಂಡು ಚಕಿತಗೊಂಡ ಬ್ರಾಡ್ ಹಾಗ್, ತಾನೂ ತ್ರಿವುಡೆ ತಾಳಕ್ಕೆ ಕುಣಿಯಲು ಪ್ರಯತ್ನಿಸಿದ್ದಾರೆ, ಮಾತ್ರವಲ್ಲ ಧಿಂಗಿಣ(ನಿಂತಲ್ಲೇ ಸುತ್ತು ಹೊಡೆಯುವುದು) ನಡೆಸಿದ್ದಾರೆ. ಇದಕ್ಕೆ ಗುರು ಪ್ರಸಾದ್ ಚೆರ್ಕಾಡು ನಿರ್ದೇಶನ ನೀಡಿದ್ದಾರೆ. ಬ್ರಾಡ್ ಹಾಗ್ನ ಈ ಎಲ್ಲ ಅವತಾರಗಳನ್ನು ಸ್ಟಾರ್ ಸ್ಪೋಟ್ಸ್ರ್ ಚಾನೆಲ್ ದಾಖಲೀಕರಿಸಿಕೊಂಡಿದೆ ಎಂದು ಯಕ್ಷಗಾನ ಸಂಘಟಕ ಸತೀಶ್ ತಿಳಿಸಿದ್ದಾರೆ.
SPORTS Aug 20, 2019, 11:49 AM IST
ಬಳ್ಳಾರಿ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಹುಬ್ಳಿ ಮೊದಲ ಓವರ್’ನಲ್ಲೇ ಮೊಹಮ್ಮದ್ ತಾಹಾ ವಿಕೆಟ್ ಕಳೆದುಕೊಂಡಿತು. ಆ ಬಳಿಕ ವಿಶ್ವನಾಥನ್[30], ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಲವ್’ನೀತ್ ಸಿಸೋಡಿಯಾ[22], ಶಿರ್ಜಿತ್[22] ತಂಡಕ್ಕೆ ಆಸರೆಯಾದರು.
SPORTS Aug 19, 2019, 7:40 PM IST
ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ಗೆಲವಿನ ನಾಗಾಲೋಟ ಮುಂದುವರಿದಿದೆ. ಮೊದಲಲ ಪಂದ್ಯದಲ್ಲಿ ನಿಹಾಲ್ ಉಲ್ಲಾಳ್ ಅಬ್ಬರಿಸಿದರೆ, 2ನೇ ಪಂದ್ಯದಲ್ಲಿ ಪವನ್ ದೇಶ್ಪಾಂಡೆ ಅಸರೆಯಾದರು. ಈ ಮೂಲಕ ಶಿವಮೊಗ್ಗ 14 ರನ್ ರೋಚಕ ಗೆಲುವು ಸಾಧಿಸಿದೆ.
SPORTS Aug 18, 2019, 7:40 PM IST
ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯ 3ನೇ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ಹೋರಾಟ ನಡೆಸಿತು. ಆರಂಭಿಕ ಹಂತದಲ್ಲಿ ರನ್ ವೇಗ ಕಡಿಮೆಯಾಗಿದ್ದರೂ, ಅಂತ್ಯದಲ್ಲಿ ರೋಚಕ ಘಟ್ಟ ತಲುಪಿತು. ಬೆಳಗಾವಿ ಹಾಗೂ ಬಳ್ಳಾರಿ ನಡುವಿನ ಪಂದ್ಯದ ಹೈಲೈಟ್ಸ್ ಇಲ್ಲಿದೆ.
SPORTS Aug 17, 2019, 10:49 PM IST
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಳಿ ಟೈಗರ್ಸ್ ಕೆ.ಬಿ ಪವನ್[53], ಕೆ.ಎಲ್ ಶಿರ್ಜಿತ್[33] ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.
SPORTS Aug 17, 2019, 6:57 PM IST
ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಆದರೆ ಮೊದಲ ಪಂದ್ಯವೇ ಮಳೆಗೆ ಆಹುತಿಯಾಗೋ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಹೋರಾಡಿದ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರ್ ವಾರಿಯರ್ಸ್ ಫಲಿತಾಂಶ ಕಾಣದೆ ಅಂಕ ಹಂಚಿಕೊಂಡಿತು.
SPORTS Aug 16, 2019, 10:36 PM IST