ಮನೆಯಲ್ಲಿ ಪೋಷಕರ ಜೊತೆ ಕಾಲ ಕಳೆಯುತ್ತಾ, ನಿರ್ಗತಿಕರಿಗೆ ಸೈಲೆಂಟ್ ಆಗಿ ಸಹಾಯ ಮಾಡಿದ ರಚಿತಾ ರಾಮ್ ಈಗ ಫ್ಯಾನ್ಸ್ಗೆ ಒಂದು ಗುಡ್ ನ್ಯೂಸ್ ಹೇಳಲು ಕಾತುರದಿಂದ ಕಾಯುತ್ತಿದ್ದಾರೆ.
Sandalwood May 28, 2020, 4:38 PM IST
ಸ್ಯಾಂಡಲ್ವುಡ್ ಗೋಲ್ಡನ್ ಬಾಯ್ ಗಣೇಶ್ ಲಾಕ್ಡೌನ್ ಟೈಮಲ್ಲಿ ಸುಂದರವಾದ ಜಾಗದಲ್ಲಿ ಪುಸ್ತಕ ಹಿಡಿದು ಕಾಲ ಕಳೆಯುತ್ತಿದ್ದಾರೆ. ಅಷ್ಟಕ್ಕೂ ಆ ಸುಂದರವಾದ ಜಾಗವೆಂದರೆ ಅವರ ಹುಟ್ಟೂರಾ? ಅಲ್ಲ, ಮತ್ತೆ? ನೀವೇ ನೋಡಿ...
Sandalwood May 28, 2020, 4:22 PM IST
ನಾಲ್ಕನೇ ಹಂತದ ಲಾಕ್ಡೌನ್ ಮೇ. 31 ಕ್ಕೆ ಮುಕ್ತಾಯಗೊಳ್ಳಲಿದೆ. ಜೂನ್ 1 ರಿಂದ ಹೊಸ ಮಾರ್ಗಸೂಚಿ ಬರಲಿದೆ. ಜಿಮ್, ಬಾರ್ ಹಾಗೂ ರೆಸ್ಟೊರೆಂಟ್ ಆರಂಭಿಸಲು ಅವಕಾಶ ಕೊಡುವುದಿಲ್ಲ. ಹೊಟೇಲ್ ಆರಂಭಿಸಲು ಅವಕಾಶ ನೀಡುತ್ತೇವೆ ಎಂದು ಕಂದಾಯ ಸಚಿವ ಅರ್ ಅಶೋಕ್ ಹೇಳಿದ್ದಾರೆ. ಜೂನ್ 1 ರ ನಂತರ ಕೇಂದ್ರ ಸರ್ಕಾರದ ಗೈಡ್ಲೈನ್ಸ್ ನೋಡಿ ಆನಂತರ ಇಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ.
state May 28, 2020, 3:44 PM IST
ಕೊರೋನಾ ವೈರಸ್ ವಕ್ಕರಿಸಿದ ಮೇಲೆ ಬಹುತೇಕರು ಒಂದಲ್ಲಾ ಒಂದು ರೀತಿ ಸಂಕಷ್ಟ ಎದುರಿಸಿದ್ದಾರೆ. ವಿದೇಶದಲ್ಲಿ ಸಿಲುಕಿದ್ದ ಹಲವು ಭಾರತೀಯರು ಸ್ವದೇಶಕ್ಕೆ ಮರಳುತ್ತಿದ್ದಾರೆ. ಮಕ್ಕಳನ್ನು ದೂರದಿಂದ ನೋಡಿದ ಪೋಷಕರು ಆನಂದ ಬಾಷ್ಪ ಸುರಿದ ಘಟನೆಗಳು ನಡೆದಿದೆ. ಇದೀಗ 5 ವರ್ಷದ ಬೆಂಗಳೂರು ಹುಡುಗಿ ಪೋಷಕರ ಮಡಿಲು ಸೇರಲು ಒಬ್ಬಳೆ ಆಸ್ಟ್ರೇಲಿಯಾಗೆ ಪ್ರಯಾಣಿಸಿದ್ದಾಳೆ. ಈ ಹೃದಯಸ್ಪರ್ಶಿ ಘಟನೆ ಕುರಿತ ವಿವರ ಇಲ್ಲಿದೆ.
Bengaluru Rural May 28, 2020, 3:25 PM IST
ಈ ಹಿಂದೆ ಒಂದೇ ತಾಯಿಯ ಮಕ್ಕಳಂತೆ ಇದ್ದ ಈಗಿನ ಜಿಲ್ಲಾ ಮಂತ್ರಿ ನಾರಾಯಣಗೌಡ ಹಾಗೂ ಜೆಡಿಎಸ್ ಶಾಸಕರು ಮಲತಾಯಿ ಮಕ್ಳಳಂತೆ ಈಗ ದಾಯಾದಿಗಳಾಗಿ ಕಾದಾಡುತ್ತಿದ್ದಾರೆ.
Karnataka Districts May 28, 2020, 3:14 PM IST
ಕೊರೊನಾ ಪಾಸಿಟೀವ್ ಕೇಸ್ಗಳು ಹೆಚ್ಚಾಗತ್ತಲೇ ಇವೆ. ಇಂದು ಒಂದೇ ದಿನ 75 ಪಾಸಿಟೀವ್ ಕೇಸ್ಗಳು ದಾಖಲಾಗಿವೆ. ನಿನ್ನೆ 135 ಕೇಸ್ಗಳು, ಇಂದುಉ 75 ಕೇಸ್ಗಳು ದಾಖಲಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2493 ಕ್ಕೆ ಏರಿಕೆಯಾಗಿದೆ. ಬೆಂಗಳೂರು 7, ಉಡುಪಿಯಲ್ಲಿ 7, ಹಾಸನದಲ್ಲಿ 13, ವಿಜಯಪುರದಲ್ಲಿ 2 ಪ್ರಕರಣಗಳು ದಾಖಲಾಗಿವೆ. ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಪಾಸಿಟೀವ್ ಕೇಸ್ಗಳು ಹೆಚ್ಚಳವಾಗಿರುವುದು ಆತಂಕ ಮೂಡಿಸಿದೆ. ಬೆಂಗಳೂರಿನಲ್ಲಿ ಕೊರೊನಾ ಕಾರ್ಖಾನೆಯಾಗುತ್ತಿದೆ ಮಂಗಮ್ಮನ ಪಾಳ್ಯ. ಇಲ್ಲಿ 6 ಮಂದಿಗೆ ಪಾಸಿಟೀವ್ ಬಂದಿದೆ.
state May 28, 2020, 3:06 PM IST
ಕೋಲಾರ ಜಿಲ್ಲೆಯಲ್ಲಿ ಸದ್ಯ ಪತ್ತೆಯಾಗುತ್ತಿರುವ ಕೊರೋನಾ ಸೋಂಕಿತರಲ್ಲಿ ಯಾವುದೇ ಸೋಂಕಿನ ಗುಣಲಕ್ಷಣಗಳು ಇರುವುದಿಲ್ಲ. ಆದರೆ ಅವರಲ್ಲಿ ಪಾಸಿಟಿವ್ ಖಚಿತವಾಗಿರುತ್ತದೆ. ಇದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ತಲೆ ನೋವು ತಂದಿದೆ.
Karnataka Districts May 28, 2020, 2:53 PM IST
ಮುಂದಿನ ಲಾಕ್ಡೌನ್ ಬಗ್ಗೆ ಹಲವು ಊಹಾಪೋಹ ಕೇಳಿ ಬರುತ್ತಿದ್ದರೂ, ಕೇಂದ್ರದ ಸೂಚನೆಯಂತೆಯೇ ರಾಜ್ಯ ನಡೆಯಬೇಕಾಗುತ್ತದೆ. ಈ ನಡುವೆ ರಾಜ್ಯದಲ್ಲಿ ಅಗತ್ಯವಾಗಿ ಓಪನ್ ಮಾಡಬೇಕು ಎನ್ನುವಂತಹ ಕ್ಷೇತ್ರಗಳ ಬಗ್ಗೆ ಸಿಎಂ ಯಡಿಯೂರಪ್ಪ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
Karnataka Districts May 28, 2020, 2:27 PM IST
ಕೆಲವರು ಧೋನಿ ರಿಟೈರ್ ಎನ್ನುವ ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡಿದರೆ, ಧೋನಿ ಅಭಿಮಾನಿಗಳು, ಧೋನಿ ಎಂದಿಗೂ ದಣಿಯುವುದಿಲ್ಲ ಎನ್ನುವ ಹ್ಯಾಷ್ಟ್ಯಾಗ್ ಬಳಸಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡಾ #DhoniNeverTires ಎನ್ನುವ ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ. ಧೋನಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಹೆಂಡತಿ-ಮಗಳೊಂದಿಗೆ ನೆಮ್ಮದಿಯ ಜೀವನ ಲೀಡ್ ಮಾಡ್ತಾ ಇದ್ದಾರೆ. ಈ ಕುರಿಯಾದ ಒಂದಷ್ಟು ಫೋಟೋ ಝಲಕ್ ಇಲ್ಲಿದೆ ನೋಡಿ.
Cricket May 28, 2020, 2:17 PM IST
ದೇಶದಲ್ಲಿ ಕೋವಿಡ್-19 ವೈರಸ್ನಿಂದ ಸುಮಾರು ಶೇ.75 ರಷ್ಟು ಬಡವರು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ದಿನನಿತ್ಯದ ಆಹಾರ ಸಾಮಗ್ರಿಗಳನ್ನು ಖರೀದಿಗೆ ಮಾಡಿಕೊಳ್ಳಲು ಹಣವಿಲ್ಲದೇ ಸಂಕಷ್ಟದಲ್ಲಿ ಇದ್ದಾರೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ಬಿಪಿಎಲ್ ಕಾರ್ಡ್ದಾರರಿಗೆ 50000 ಪರಿಹಾರ ನೀಡಬೇಕು ಎಂದು ಶರಣ ಪಡೆ ಲಿಂಗಾಯತ ಜಾಗರಣ ವೇದಿಕೆಯ ಅಧ್ಯಕ್ಷ ಕೆ.ಆರ್. ಕಡೇಚೂರ ಒತ್ತಾಯಿಸಿದ್ದಾರೆ.
Karnataka Districts May 28, 2020, 1:38 PM IST
ಪಕ್ಷಾಂತರ ಕಾಯ್ದೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ಸಲಹೆಗಳು, ರಾಜ್ಯದಲ್ಲಿ ಆಗುತ್ತಿರುವ ವ್ಯಾಪಕ ಚರ್ಚೆ ಬಗ್ಗೆ ಸಮಿತಿ ರಚನೆ ಆಗಿದೆ. ಅಧಿಕಾರದಾಸೆಗೆ ಬೇರೆ ಪಕ್ಷಕ್ಕೆ ವಲಸೆ ಹೋಗುವುದು ನಡೆಯಬಾರದು ಎಂದು ತಿಳಿಸಿದ್ದೇವೆ ಎಂದು ಮಾಜಿ ಸಚಿವ ಡಿಕ. ಕೆ. ಶಿವಕುಮಾರ್ ತಿಳಿಸಿದ್ದಾರೆ.
state May 28, 2020, 1:27 PM IST
ಮಾವಿನ ಹಣ್ಣು ಮುಟ್ಟೋಕು ಮುನ್ನ ಈ ಸುದ್ದಿಯನ್ನೊಮ್ಮೆ ನೋಡಲೇಬೇಕು. ಮಾವಿನ ಹಣ್ಣನ್ನ ತಿನ್ನುವುದರಿಂದ ಕೊರೊನಾ ಬರತ್ತಂತೆ! ಮಾವಿನ ಹಣ್ಣನ್ನು ತಿಂದ 14 ಮಂದಿಗೆ ಕೊರೊನಾ ವಕ್ಕರಿಸಿದೆಯಂತೆ! ಹೀಗಂತ ಸಚಿವ ನಾರಾಯಣ ಗೌಡ ಬಹಿರಂಗಪಡಿಸಿದ್ದಾರೆ. ಮಾವಿನ ಹಣ್ಣಿನಿಂದ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಮರುವನಹಳ್ಳಿ ಗ್ರಾಮಕ್ಕೆ ಕೊರೊನಾ ಬಂದಿದೆಯಂತೆ! ಈ ಕೊರೊನಾಗೂ ಮಾವಿನಹಣ್ಣಿಗೂ ಲಿಂಕ್ ಇದೆಯಂತೆ! ಏನಿದು ಸಂಬಂಧ? ಇಲ್ಲಿದೆ ನೋಡಿ..!
state May 28, 2020, 1:16 PM IST
ಒಂದೆಡೆ ಕೊರೋನಾ ಸೋಂಕಿನ ಭೀತಿ, ಮತ್ತೊಂದೆಡೆ ಭಾರತ- ಚೀನಾ ಗಡಿಯಲ್ಲಿ ಯುದ್ದೋನ್ಮಾದ ವಾತಾವರಣ ಇರುವ ನಡುವೆಯೇ ಚೀನಾ ತನ್ನ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮುಂದಾಗಿದ್ದು, ಅವರಿಗಾಗಿಯೇ ಮೈಸೂರು ವಿವಿ ಹತ್ತು ದಿನ ಮುಂಚಿತವಾಗಿ ಪರೀಕ್ಷೆ ನಡೆಸುತ್ತಿದೆ.
Karnataka Districts May 28, 2020, 12:57 PM IST
ಎಸ್ಎಸ್ಎಲ್ಸಿ ಪರೀಕ್ಷೆಗೆ ಹೈಕೋರ್ಟ್ ಅಸ್ತು, ಜೂನ್ 25ರಿಂದ ಪರೀಕ್ಷೆ ಆರಂಭಕ್ಕೆ ನ್ಯಾಯಾಲಯದ ಹಸಿರು ನಿಶಾನೆ
state May 28, 2020, 12:46 PM IST
ಮಂಡ್ಯ, ವಿಜಯಪುರ ಕ್ವಾರಂಟೈನ್ ಸೆಂಟರ್ನಲ್ಲಿ ಅವ್ಯವಸ್ಥೆ ಬಗ್ಗೆ ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಆರೋಗ್ಯ ಸಚಿವ ಬಿ ಶ್ರೀರಾಮುಲು ಡಿಎಚ್ಒಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
state May 28, 2020, 12:40 PM IST