Asianet Suvarna News Asianet Suvarna News

ಅನ್ನ ಚೆಲ್ಲಬೇಡಿ...ಮಠದ ಆವರಣದಲ್ಲಿ ಆಹಾರದ ಮಹತ್ವ ಸಾರಿದ ಬಾಲಕ

ಸಿದ್ಧಗಂಗಾ ಶ್ರೀಗಳು ನಮಗೆಲ್ಲಾ ಬಿಟ್ಟು ಹೋದ ಆದರ್ಶ ಯಾವ ರೀತಿ ಪಾಲನೆಯಾಗುತ್ತಿದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ಸಿದ್ಧಗಂಗಾ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಬಂದ ಭಕ್ತರೊಬ್ಬರು ಊಟ ಮಾಡಿ ನಂತರ ಒಂದಿಷ್ಟು ಅನ್ನ ಮತ್ತು ಸಾಂಬಾರ್‌ ಅನ್ನು ಎಸೆಯಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿಯೇ ಇದ್ದ ಮಠದ ಬಾಲಕನೊಬ್ಬ ದಯವಿಟ್ಟು ಎಸೆಯಬೇಡಿ ಎಂದು ಹೇಳಿ, ತಿಂದು ಮುಗಿಸಿ ಎಂದು ತಟ್ಟೆಯನ್ನು ವಾಪಸ್ ನೀಡಿದ್ದಾರೆ. ಬಾಲಕ ಆಹಾರದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿ ಹೇಳಿದ್ದಾನೆ.

ಸಿದ್ಧಗಂಗಾ ಶ್ರೀಗಳು ನಮಗೆಲ್ಲಾ ಬಿಟ್ಟು ಹೋದ ಆದರ್ಶ ಯಾವ ರೀತಿ ಪಾಲನೆಯಾಗುತ್ತಿದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ. ಸಿದ್ಧಗಂಗಾ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಬಂದ ಭಕ್ತರೊಬ್ಬರು ಊಟ ಮಾಡಿ ನಂತರ ಒಂದಿಷ್ಟು ಅನ್ನ ಮತ್ತು ಸಾಂಬಾರ್‌ ಅನ್ನು ಎಸೆಯಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿಯೇ ಇದ್ದ ಮಠದ ಬಾಲಕನೊಬ್ಬ ದಯವಿಟ್ಟು ಎಸೆಯಬೇಡಿ ಎಂದು ಹೇಳಿ, ತಿಂದು ಮುಗಿಸಿ ಎಂದು ತಟ್ಟೆಯನ್ನು ವಾಪಸ್ ನೀಡಿದ್ದಾರೆ. ಬಾಲಕ ಆಹಾರದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿ ಹೇಳಿದ್ದಾನೆ.