08:42 PM (IST) Jul 26

India News Live 26th July: 'ನಾವು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಬಯಸುತ್ತೇವೆ' ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ಉದಿತ್ ರಾಜ್ ಕಿಡಿ!

ಆಪರೇಷನ್ ಸಿಂದೂರ್ ನಂತರ ಭಾರತ ವಿಶ್ವದಲ್ಲಿ ಏಕಾಂಗಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಉದಿತ್ ರಾಜ್ ಟೀಕಿಸಿದ್ದಾರೆ. ಪಾಕಿಸ್ತಾನದ ನಡವಳಿಕೆ ಸುಧಾರಿಸಿದರೆ ಮಾತ್ರ ಉತ್ತಮ ಸಂಬಂಧ ಸಾಧ್ಯ ಎಂದಿದ್ದಾರೆ. ಐಎಂಎಫ್ ನೆರವು ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಹೋರಾಡಲು ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
Read Full Story
06:50 PM (IST) Jul 26

India News Live 26th July: ಚೀನಾ ಜೊತೆ ಸೇರಿ ಯಾವ ದೇಶ ಭಾರತದ ವಿರುದ್ಧ ತೊಡೆ ತಟ್ಟಿತ್ತೋ, ಇಂದು ಅದೇ ಮಾಲ್ಡೀವ್ಸ್ ಸ್ವಾತಂತ್ರ್ಯೋತ್ಸವದ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ!

ಪ್ರಧಾನಿ ಮೋದಿ ಮಾಲ್ಡೀವ್ಸ್ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿ, ದ್ವಿಪಕ್ಷೀಯ ಸಂಬಂಧ ವೃದ್ಧಿಸಿದರು. ಈ ಭೇಟಿ ಚೀನಾவுಗೆ ಕಿರಿಕಿರಿ ಉಂಟುಮಾಡಿದ್ದು, ಭಾರತ-ಮಾಲ್ಡೀವ್ಸ್ ಸಂಬಂಧದಲ್ಲಿ ಹೊಸ ತಿರುವು ಸೂಚಿಸುತ್ತದೆ.
Read Full Story
06:38 PM (IST) Jul 26

India News Live 26th July: ಪುಟ್ಟ ಮಕ್ಕಳು ಚಪಾತಿ ಮಾಡ್ತಾರೆ ಬಟ್ಟೆ ಹೊಲಿತಾರೆ ತರಕಾರಿ ಬೆಳಿತಾರೆ - ಚೀನಾ ಶಾಲೆಯ ವೀಡಿಯೋ ನೋಡಿ

ಚೀನಾದ ಶಾಲೆಯೊಂದರಲ್ಲಿ ಮಕ್ಕಳಿಗೆ ಅಡುಗೆ ಮಾಡುವುದು, ತರಕಾರಿ ಬೆಳೆಯುವುದು, ಕೂದಲು ಕತ್ತರಿಸುವುದು, ಬಟ್ಟೆ ಹೊಲಿಯುವುದು ಮುಂತಾದ ಜೀವನ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಈ ವೀಡಿಯೋ ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Read Full Story
05:00 PM (IST) Jul 26

India News Live 26th July: ಇಬ್ಬರಿಗೂ ಆಕೆ ಸ್ನೇಹಿತೆ - ಸಹಿಸಲಾಗದೇ ಬ್ಲೇಡ್‌ನಿಂದ ಯುವಕನ ಕತ್ತು ಸೀಳಿದ ವಿದ್ಯಾರ್ಥಿ

ಸ್ನೇಹಿತೆಯ ವಿಚಾರದಲ್ಲಿ ಯುವಕನೊಬ್ಬ ಮತ್ತೊಬ್ಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಇದೇ ವೇಳೆ ಹೈದರಾಬಾದ್‌ನಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.

Read Full Story
04:41 PM (IST) Jul 26

India News Live 26th July: ಇಬ್ಬರು ಮುಸ್ಲಿಂ ಮಹಿಳೆಯರಿಂದ ಹಿಂದೂ ಧರ್ಮ ಸ್ವೀಕಾರ

Islam To Hindu: ಇಬ್ಬರು ಮುಸ್ಲಿಂ ಮಹಿಳೆಯರು ಸನಾತನ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ವೈದಿಕ ಸಂಪ್ರದಾಯದಂತೆ ಹೋಮ ಹವನ ನೆರವೇರಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

Read Full Story
04:04 PM (IST) Jul 26

India News Live 26th July: ಎಂಬಿಎ ವಿದ್ಯಾರ್ಥಿಗಳೇ ಮಾರ್ಕೆಟಿಂಗ್ ಅಂದ್ರೇನು? ಈ ಪ್ರೊಫೆಸರ್ ಉತ್ತರಕ್ಕೆ ಬಿದ್ದು ಬಿದ್ದು ನಗ್ತೀರಾ?

ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ನಿಜ ಬದುಕಿನ ಉದಾಹರಣೆಗಳೊಂದಿಗೆ ವಿವರಿಸಿದರೆ ಸುಲಭವಾಗಿ ಅರ್ಥವಾಗುತ್ತದೆ. ಒಬ್ಬ ಪ್ರೊಫೆಸರ್ ಮಾರ್ಕೆಟಿಂಗ್ ಪರಿಕಲ್ಪನೆಗಳನ್ನು ತಮಾಷೆಯಾಗಿ, ನಿಜ ಜೀವನದ ಉದಾಹರಣೆಗಳೊಂದಿಗೆ ವಿವರಿಸಿದ್ದು, ನಗುತರಿಸುತ್ತಿದೆ..

Read Full Story
04:01 PM (IST) Jul 26

India News Live 26th July: ಸಮಾಜದ ಸ್ವಾಸ್ಥ್ಯ ಕದಡುವ ವಿಡಿಯೋ - ಖ್ಯಾತ ಯುಟ್ಯೂಬರ್ ಮೊಹಮ್ಮದ್ ಆಮೀರ್ ಅರೆಸ್ಟ್

YouTuber mohammad aamir: ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿಕೊಂಡ ಆರೋಪದ ಮೇಲೆ ಯುಟ್ಯೂಬರ್ ಮೊಹಮ್ಮದ್ ಆಮೀರ್‌ನನ್ನು ಬಂಧಿಸಲಾಗಿದೆ. ಸಂತರು ಮತ್ತು ದೇವತೆಗಳ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ ಆರೋಪದ ಮೇಲೆ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. 

Read Full Story
03:09 PM (IST) Jul 26

India News Live 26th July: ದಾರಿತಪ್ಪಿಸಿದ ಗೂಗಲ್ ಮ್ಯಾಪ್ - ಹೊಂಡಕ್ಕೆ ಉರುಳಿದ ಕಾರು - ಕುಡುಕನ ಕಿತಾಪತಿಗೆ ಕಾಂಪೌಂಡ್ ಏರಿದ ಕಾರು

ಗೂಗಲ್ ಮ್ಯಾಪ್‌ ದಾರಿ ತಪ್ಪಿಸಿದ್ದರಿಂದ ಕಾರೊಂದು ನೀರಿಗೆ ಬಿದ್ದಿದೆ. ಮತ್ತೊಂದು ಪ್ರಕರಣದಲ್ಲಿ ಕಾರು ಚಾಲಕ ಕುಡಿದ ಮತ್ತಿನಲ್ಲಿ ಕಾರನ್ನು ಮನೆಯ ಬೌಂಡರಿ ಮೇಲೇರಿಸಿ ನಿಲ್ಲಿಸಿದ್ದಾನೆ.

Read Full Story
02:59 PM (IST) Jul 26

India News Live 26th July: ರೈಲಿನಲ್ಲಿ ಹರಿದ್ವಾರಕ್ಕೆ ಹೊರಟಿದ್ದ ಬಿಜೆಪಿ ನಾಯಕನ ತಾಯಿಯ ಚಿತಾಭಸ್ಮ ಕಳ್ಳತನ

ಬಿಜೆಪಿ ನಾಯಕರೊಬ್ಬರು ತಾಯಿಯ ಚಿತಾಭಸ್ಮ ವಿಸರ್ಜನೆಗೆ ಹೋಗುವಾಗ ರೈಲಿನಲ್ಲಿ ಚಿತಾಭಸ್ಮ ಕಳುವಾಗಿದೆ. ಸಹಪ್ರಯಾಣಿಕರ ಸಹಾಯದಿಂದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಘಟನೆ ಆಗ್ರಾ ಬಳಿ ನಡೆದಿದೆ.
Read Full Story
02:43 PM (IST) Jul 26

India News Live 26th July: Morning Consult Survey - ವಿಶ್ವದ ನಂಬಿಕಸ್ಥ ಜನನಾಯಕ, ಅಗ್ರಸ್ಥಾನದಲ್ಲಿ ಪ್ರಧಾನಿ ಮೋದಿ!

ಜಾಗತಿಕ ಪಟ್ಟಿಯಲ್ಲಿ ಮೋದಿ ಅಗ್ರಸ್ಥಾನದಲ್ಲಿದ್ದಾರೆ, ದಕ್ಷಿಣ ಕೊರಿಯಾದ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರು ಶೇ. 59 ರಷ್ಟು ಅನುಮೋದನೆಯೊಂದಿಗೆ ಎರಡನೇ ಸ್ಥಾನ ಪಡೆದರು.

Read Full Story
01:37 PM (IST) Jul 26

India News Live 26th July: ಆಸ್ಪತ್ರೆಗೆ ತಂದರೂ ಬದುಕುಳಿಯದ ಪಾರಿವಾಳ - ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಬಾಲಕ

ಇಬ್ಬರು ಪುಟ್ಟ ಮಕ್ಕಳ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡ್ತಿದೆ. ಪುಟ್ಟ ಬಾಲಕನೋರ್ವ ಗಾಯಾಗೊಂಡ ಪಾರಿವಾಳವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಿಸದೇ ಅದು ಸಾವನ್ನಪ್ಪಿದೆ. ಇದರಿಂದ ಬಾಲಕ ಬಿಕ್ಕಳಿಸಿ ಅತ್ತಿದ್ದಾನೆ. ಮತ್ತೊಂದು ಮಗುವಿನ ವೀಡಿಯೋ ಏನು ಇಲ್ಲಿದೆ ನೋಡಿ..

Read Full Story
01:00 PM (IST) Jul 26

India News Live 26th July: ಹಿಂದೂ ಗೆಳೆಯನೊಂದಿಗೆ ಕನ್ವರ್ ಯಾತ್ರೆಗೆ ತೆರಳಿ ಹಿಂದಿರುಗಿದ ಮುಸ್ಲಿಂ ಯುವಕನಿಗೆ ಬಿಗ್ ಶಾಕ್!

ಕಳೆದ ಮೂರು ವರ್ಷಗಳಿಂದ ಶಿವ ಭಕ್ತನಾಗಿರುವ ಮುಸ್ಲಿಂ ಯುವಕ ಈ ಬಾರಿ ಹಿಂದೂ ಗೆಳೆಯನೊಂದಿಗೆ 101 ಲೀಟರ್ ಗಂಗಾಜಲ ಹೊತ್ತುಕೊಂಡು ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದನು. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Read Full Story
12:53 PM (IST) Jul 26

India News Live 26th July: ಕಂಪೌಂಡಿಂಗ್‌ ಮ್ಯಾಜಿಕ್ - ಬರೀ 1 ಲಕ್ಷ ಹಣ 1 ಕೋಟಿಯಾಗಿ ಬದಲಾಗಲು ಸಾಧ್ಯ!

ಕೇವಲ 20ನೇ ವಯಸ್ಸಿನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡುವುದರಿಂದ ೬೦ರ ವಯಸ್ಸಿಗೆ 1 ಕೋಟಿ ರೂಪಾಯಿ ಗಳಿಸಬಹುದು. ಸಂಯೋಜಿತ ಬಡ್ಡಿಯ ಮಹತ್ವ ಮತ್ತು ದೀರ್ಘಾವಧಿಯ ಹೂಡಿಕೆಯ ಲಾಭಗಳನ್ನು ಈ ಲೇಖನ ವಿವರಿಸುತ್ತದೆ.

Read Full Story
12:16 PM (IST) Jul 26

India News Live 26th July: ಜಪಾನ್‌ನ ಬಹುಕೋಟಿ ಉದ್ಯಮಿಯ ಬದುಕು ಬದಲಿಸಿದ ತಮಿಳುನಾಡಿನ ನಾಡಿ ಜ್ಯೋತಿಷಿಯ ಭವಿಷ್ಯ

ಅನಾದಿ ಕಾಲದಿಂದಲೂ ಅನೇಕ ಪಾಶ್ಚಿಮಾತ್ಯ ದೇಶಗಳ ಜನರು ಕೂಡ ಮುಕ್ತಿ ಹಾಗೂ ಮೋಕ್ಷವನ್ನು ಅರಸಿ ಭಾರತಕ್ಕೆ ಬಂದಿದ್ದಾರೆ. ಅದೇ ರೀತಿ ಈಗ ಜಪಾನ್‌ನ ಉದ್ಯಮಿಯೊಬ್ಬರು ಭಾರತಕ್ಕೆ ಬಂದಿದ್ದು ಕನ್ವರ್‌ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅವರ ಕತೆ ಇಲ್ಲಿದೆ.

Read Full Story
09:33 AM (IST) Jul 26

India News Live 26th July: ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಳವಳ, ದೇಶಾದ್ಯಂತ ಮಾರ್ಗಸೂಚಿ ಹೊರಡಿಸಿದ ಸುಪ್ರೀಂ ಕೋರ್ಟ್‌

ಎಲ್ಲಾ ಶಿಕ್ಷಣ ಸಂಸ್ಥೆಗಳು, ಮಾನಸಿಕ ಆರೋಗ್ಯ ಸೇವೆಗಳು, ಸ್ಥಳೀಯ ಆಸ್ಪತ್ರೆಗಳು ಮತ್ತು ಆತ್ಮಹತ್ಯೆ ತಡೆಗಟ್ಟುವ ಸಹಾಯವಾಣಿಗಳ ಲಿಖಿತ ಶಿಷ್ಟಾಚಾರಗಳನ್ನು ಸ್ಥಾಪಿಸಬೇಕು ಎಂದು ಇಬ್ಬರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

Read Full Story
09:10 AM (IST) Jul 26

India News Live 26th July: ಪ್ಯಾಲೆಸ್ತೇನ್‌ ಪರ ಮೆರವಣಿಗೆಗೆ ಅನುಮತಿ ಕೇಳಿದ್ದ ಸಿಪಿಐಎಂ ಪಕ್ಷಕ್ಕೆ ತಿವಿದ ಸೂಚಿಸಿದ ಹೈಕೋರ್ಟ್‌!

ಗಾಜಾ ನರಮೇಧದ ವಿರುದ್ಧ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಿಪಿಐ(ಎಂ) ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯವು 'ಮೊದಲು ನಮ್ಮ ದೇಶದ ನಾಗರಿಕರಿಗೆ ದೇಶಭಕ್ತಿಯನ್ನು ತೋರಿಸಬೇಕು' ಎಂದು ಹೇಳಿದೆ.
Read Full Story
08:01 AM (IST) Jul 26

India News Live 26th July: ಕಾಂಬೋಡಿಯ - ಥಾಯ್‌ ಕದನ ವಿರಾ​ಮಕ್ಕೆ ಒಪ್ಪಿ​ಗೆ

ಗಡಿಯಲ್ಲಿರುವ ಹಿಂದೂ ಶಿವ ದೇವ​ಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಆರಂಭವಾಗಿದ್ದ ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ಸಮ​ರ​ಕ್ಕೆ 2ನೇ ದಿನ​ವಾದ ಶುಕ್ರ​ವಾರ ಬ್ರೇಕ್‌ ಬಿದ್ದಿದ್ದು, ಕದನ ವಿರಾ​ಮಕ್ಕೆ ಉಭಯ ದೇಶ​ಗಳು ಸಮ್ಮ​ತಿ​ಸಿವೆ.

Read Full Story
08:00 AM (IST) Jul 26

India News Live 26th July: 1 ಕೈಯಿಲ್ಲದ ಕೈದಿ ಗೋಡೆ ಹಾರಿ ಜೈಲಿಂದ ಪರಾರಿ, ಬಳಿಕ ಸೆರೆ!

2011ರಲ್ಲಿ ದೇಶದಲ್ಲಿ ಸುದ್ದಿ ಮಾಡಿದ್ದ ಕೇರಳದ ಸೌಮ್ಯಾ ಅತ್ಯಾಚಾ*, ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಯೊಬ್ಬ, ಗೋಡೆ ಹಾರಿ ಪರಾರಿಯಾದ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದಿದೆ. ಆದರೆ ಕೆಲವೇ ಗಂಟೆಗಳ ಬಳಿಕ ಸಿಕ್ಕಿಬಿದ್ದಿದ್ದಾನೆ.

Read Full Story
07:58 AM (IST) Jul 26

India News Live 26th July: ಭಾರತ - ಮಾಲ್ಡೀವ್ಸ್‌ ಮತ್ತೆ ಭಾಯಿ ಭಾಯಿ!

ಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಲೂ ಮುಂದಾಗಿದ್ದ ಮಾಲ್ಡೀವ್ಸ್‌ ಈಗ ತಣ್ಣಗಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ದ್ವೀಪದೇಶಕ್ಕೆ ನೀಡಿದ ಮೊದಲ ಭೇಟಿ ಯಶಸ್ಸು

Read Full Story
07:57 AM (IST) Jul 26

India News Live 26th July: ಜಾತಿ ಗಣತಿ ನಡೆಸದೇ ಇದ್ದದ್ದು ನನ್ನ ತಪ್ಪು, ಪಕ್ಷದ್ದಲ್ಲ : ರಾಹುಲ್‌

ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಜಾತಿಗಣತಿ ಮಾಡದೇ ಇದ್ದದ್ದು ಕಾಂಗ್ರೆಸ್‌ ಪಕ್ಷದ ತಪ್ಪಲ್ಲ. ಅದು ನನ್ನ ತಪ್ಪು. ಅದನ್ನು ಈಗ ಸರಿಪಡಿಸಿಕೊಂಡು ಗಣತಿ ಮಾಡುತ್ತಿದ್ದೇವೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

Read Full Story