- Home
- News
- India News
- India Latest News Live: 'ನಾವು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಬಯಸುತ್ತೇವೆ' ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ಉದಿತ್ ರಾಜ್ ಕಿಡಿ!
India Latest News Live: 'ನಾವು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಬಯಸುತ್ತೇವೆ' ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ಉದಿತ್ ರಾಜ್ ಕಿಡಿ!

ಬೆಂಗಳೂರು (ಜುಲೈ 26): ಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಲೂ ಮುಂದಾಗಿದ್ದ ದ್ವೀಪದೇಶ ಮಾಲ್ಡೀವ್ಸ್ ಈಗ ತಣ್ಣಗಾಗಿದೆ. ಉಭಯ ದೇಶಗಳ ಬಿಕ್ಕಟ್ಟಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್ ನೀಡಿದ ಮೊದಲ ಭೇಟಿ ಯಶಸ್ಸು ಕಂಡಿದ್ದು, ಎರಡೂ ದೇಶಗಳ ಮಧ್ಯೆ ಸ್ನೇಹದ ಬೆಸುಗೆ ಏರ್ಪಟ್ಟಿದೆ. ಇದರ ಬೆನ್ನಲ್ಲಿಯೇ ಭಾರತ 4850 ಕೋಟಿ ರೂಪಾಯಿ ಸಾಲವನ್ನು ಮಾಲ್ಡೀವ್ಸ್ಗೆ ನೀಡಿದೆ. ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 26th July: 'ನಾವು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಬಯಸುತ್ತೇವೆ' ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ಉದಿತ್ ರಾಜ್ ಕಿಡಿ!
India News Live 26th July: ಚೀನಾ ಜೊತೆ ಸೇರಿ ಯಾವ ದೇಶ ಭಾರತದ ವಿರುದ್ಧ ತೊಡೆ ತಟ್ಟಿತ್ತೋ, ಇಂದು ಅದೇ ಮಾಲ್ಡೀವ್ಸ್ ಸ್ವಾತಂತ್ರ್ಯೋತ್ಸವದ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ!
India News Live 26th July: ಪುಟ್ಟ ಮಕ್ಕಳು ಚಪಾತಿ ಮಾಡ್ತಾರೆ ಬಟ್ಟೆ ಹೊಲಿತಾರೆ ತರಕಾರಿ ಬೆಳಿತಾರೆ - ಚೀನಾ ಶಾಲೆಯ ವೀಡಿಯೋ ನೋಡಿ
India News Live 26th July: ಇಬ್ಬರಿಗೂ ಆಕೆ ಸ್ನೇಹಿತೆ - ಸಹಿಸಲಾಗದೇ ಬ್ಲೇಡ್ನಿಂದ ಯುವಕನ ಕತ್ತು ಸೀಳಿದ ವಿದ್ಯಾರ್ಥಿ
ಸ್ನೇಹಿತೆಯ ವಿಚಾರದಲ್ಲಿ ಯುವಕನೊಬ್ಬ ಮತ್ತೊಬ್ಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಇದೇ ವೇಳೆ ಹೈದರಾಬಾದ್ನಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.
India News Live 26th July: ಇಬ್ಬರು ಮುಸ್ಲಿಂ ಮಹಿಳೆಯರಿಂದ ಹಿಂದೂ ಧರ್ಮ ಸ್ವೀಕಾರ
Islam To Hindu: ಇಬ್ಬರು ಮುಸ್ಲಿಂ ಮಹಿಳೆಯರು ಸನಾತನ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ವೈದಿಕ ಸಂಪ್ರದಾಯದಂತೆ ಹೋಮ ಹವನ ನೆರವೇರಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
India News Live 26th July: ಎಂಬಿಎ ವಿದ್ಯಾರ್ಥಿಗಳೇ ಮಾರ್ಕೆಟಿಂಗ್ ಅಂದ್ರೇನು? ಈ ಪ್ರೊಫೆಸರ್ ಉತ್ತರಕ್ಕೆ ಬಿದ್ದು ಬಿದ್ದು ನಗ್ತೀರಾ?
ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ನಿಜ ಬದುಕಿನ ಉದಾಹರಣೆಗಳೊಂದಿಗೆ ವಿವರಿಸಿದರೆ ಸುಲಭವಾಗಿ ಅರ್ಥವಾಗುತ್ತದೆ. ಒಬ್ಬ ಪ್ರೊಫೆಸರ್ ಮಾರ್ಕೆಟಿಂಗ್ ಪರಿಕಲ್ಪನೆಗಳನ್ನು ತಮಾಷೆಯಾಗಿ, ನಿಜ ಜೀವನದ ಉದಾಹರಣೆಗಳೊಂದಿಗೆ ವಿವರಿಸಿದ್ದು, ನಗುತರಿಸುತ್ತಿದೆ..
India News Live 26th July: ಸಮಾಜದ ಸ್ವಾಸ್ಥ್ಯ ಕದಡುವ ವಿಡಿಯೋ - ಖ್ಯಾತ ಯುಟ್ಯೂಬರ್ ಮೊಹಮ್ಮದ್ ಆಮೀರ್ ಅರೆಸ್ಟ್
YouTuber mohammad aamir: ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿಕೊಂಡ ಆರೋಪದ ಮೇಲೆ ಯುಟ್ಯೂಬರ್ ಮೊಹಮ್ಮದ್ ಆಮೀರ್ನನ್ನು ಬಂಧಿಸಲಾಗಿದೆ. ಸಂತರು ಮತ್ತು ದೇವತೆಗಳ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ಗಳನ್ನು ಮಾಡಿದ ಆರೋಪದ ಮೇಲೆ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
India News Live 26th July: ದಾರಿತಪ್ಪಿಸಿದ ಗೂಗಲ್ ಮ್ಯಾಪ್ - ಹೊಂಡಕ್ಕೆ ಉರುಳಿದ ಕಾರು - ಕುಡುಕನ ಕಿತಾಪತಿಗೆ ಕಾಂಪೌಂಡ್ ಏರಿದ ಕಾರು
ಗೂಗಲ್ ಮ್ಯಾಪ್ ದಾರಿ ತಪ್ಪಿಸಿದ್ದರಿಂದ ಕಾರೊಂದು ನೀರಿಗೆ ಬಿದ್ದಿದೆ. ಮತ್ತೊಂದು ಪ್ರಕರಣದಲ್ಲಿ ಕಾರು ಚಾಲಕ ಕುಡಿದ ಮತ್ತಿನಲ್ಲಿ ಕಾರನ್ನು ಮನೆಯ ಬೌಂಡರಿ ಮೇಲೇರಿಸಿ ನಿಲ್ಲಿಸಿದ್ದಾನೆ.
India News Live 26th July: ರೈಲಿನಲ್ಲಿ ಹರಿದ್ವಾರಕ್ಕೆ ಹೊರಟಿದ್ದ ಬಿಜೆಪಿ ನಾಯಕನ ತಾಯಿಯ ಚಿತಾಭಸ್ಮ ಕಳ್ಳತನ
India News Live 26th July: Morning Consult Survey - ವಿಶ್ವದ ನಂಬಿಕಸ್ಥ ಜನನಾಯಕ, ಅಗ್ರಸ್ಥಾನದಲ್ಲಿ ಪ್ರಧಾನಿ ಮೋದಿ!
ಜಾಗತಿಕ ಪಟ್ಟಿಯಲ್ಲಿ ಮೋದಿ ಅಗ್ರಸ್ಥಾನದಲ್ಲಿದ್ದಾರೆ, ದಕ್ಷಿಣ ಕೊರಿಯಾದ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರು ಶೇ. 59 ರಷ್ಟು ಅನುಮೋದನೆಯೊಂದಿಗೆ ಎರಡನೇ ಸ್ಥಾನ ಪಡೆದರು.
India News Live 26th July: ಆಸ್ಪತ್ರೆಗೆ ತಂದರೂ ಬದುಕುಳಿಯದ ಪಾರಿವಾಳ - ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಬಾಲಕ
ಇಬ್ಬರು ಪುಟ್ಟ ಮಕ್ಕಳ ವೀಡಿಯೋ ಈಗ ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡ್ತಿದೆ. ಪುಟ್ಟ ಬಾಲಕನೋರ್ವ ಗಾಯಾಗೊಂಡ ಪಾರಿವಾಳವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಿಸದೇ ಅದು ಸಾವನ್ನಪ್ಪಿದೆ. ಇದರಿಂದ ಬಾಲಕ ಬಿಕ್ಕಳಿಸಿ ಅತ್ತಿದ್ದಾನೆ. ಮತ್ತೊಂದು ಮಗುವಿನ ವೀಡಿಯೋ ಏನು ಇಲ್ಲಿದೆ ನೋಡಿ..
India News Live 26th July: ಹಿಂದೂ ಗೆಳೆಯನೊಂದಿಗೆ ಕನ್ವರ್ ಯಾತ್ರೆಗೆ ತೆರಳಿ ಹಿಂದಿರುಗಿದ ಮುಸ್ಲಿಂ ಯುವಕನಿಗೆ ಬಿಗ್ ಶಾಕ್!
ಕಳೆದ ಮೂರು ವರ್ಷಗಳಿಂದ ಶಿವ ಭಕ್ತನಾಗಿರುವ ಮುಸ್ಲಿಂ ಯುವಕ ಈ ಬಾರಿ ಹಿಂದೂ ಗೆಳೆಯನೊಂದಿಗೆ 101 ಲೀಟರ್ ಗಂಗಾಜಲ ಹೊತ್ತುಕೊಂಡು ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದನು. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
India News Live 26th July: ಕಂಪೌಂಡಿಂಗ್ ಮ್ಯಾಜಿಕ್ - ಬರೀ 1 ಲಕ್ಷ ಹಣ 1 ಕೋಟಿಯಾಗಿ ಬದಲಾಗಲು ಸಾಧ್ಯ!
ಕೇವಲ 20ನೇ ವಯಸ್ಸಿನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡುವುದರಿಂದ ೬೦ರ ವಯಸ್ಸಿಗೆ 1 ಕೋಟಿ ರೂಪಾಯಿ ಗಳಿಸಬಹುದು. ಸಂಯೋಜಿತ ಬಡ್ಡಿಯ ಮಹತ್ವ ಮತ್ತು ದೀರ್ಘಾವಧಿಯ ಹೂಡಿಕೆಯ ಲಾಭಗಳನ್ನು ಈ ಲೇಖನ ವಿವರಿಸುತ್ತದೆ.
India News Live 26th July: ಜಪಾನ್ನ ಬಹುಕೋಟಿ ಉದ್ಯಮಿಯ ಬದುಕು ಬದಲಿಸಿದ ತಮಿಳುನಾಡಿನ ನಾಡಿ ಜ್ಯೋತಿಷಿಯ ಭವಿಷ್ಯ
ಅನಾದಿ ಕಾಲದಿಂದಲೂ ಅನೇಕ ಪಾಶ್ಚಿಮಾತ್ಯ ದೇಶಗಳ ಜನರು ಕೂಡ ಮುಕ್ತಿ ಹಾಗೂ ಮೋಕ್ಷವನ್ನು ಅರಸಿ ಭಾರತಕ್ಕೆ ಬಂದಿದ್ದಾರೆ. ಅದೇ ರೀತಿ ಈಗ ಜಪಾನ್ನ ಉದ್ಯಮಿಯೊಬ್ಬರು ಭಾರತಕ್ಕೆ ಬಂದಿದ್ದು ಕನ್ವರ್ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅವರ ಕತೆ ಇಲ್ಲಿದೆ.
India News Live 26th July: ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಳವಳ, ದೇಶಾದ್ಯಂತ ಮಾರ್ಗಸೂಚಿ ಹೊರಡಿಸಿದ ಸುಪ್ರೀಂ ಕೋರ್ಟ್
ಎಲ್ಲಾ ಶಿಕ್ಷಣ ಸಂಸ್ಥೆಗಳು, ಮಾನಸಿಕ ಆರೋಗ್ಯ ಸೇವೆಗಳು, ಸ್ಥಳೀಯ ಆಸ್ಪತ್ರೆಗಳು ಮತ್ತು ಆತ್ಮಹತ್ಯೆ ತಡೆಗಟ್ಟುವ ಸಹಾಯವಾಣಿಗಳ ಲಿಖಿತ ಶಿಷ್ಟಾಚಾರಗಳನ್ನು ಸ್ಥಾಪಿಸಬೇಕು ಎಂದು ಇಬ್ಬರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
India News Live 26th July: ಪ್ಯಾಲೆಸ್ತೇನ್ ಪರ ಮೆರವಣಿಗೆಗೆ ಅನುಮತಿ ಕೇಳಿದ್ದ ಸಿಪಿಐಎಂ ಪಕ್ಷಕ್ಕೆ ತಿವಿದ ಸೂಚಿಸಿದ ಹೈಕೋರ್ಟ್!
India News Live 26th July: ಕಾಂಬೋಡಿಯ - ಥಾಯ್ ಕದನ ವಿರಾಮಕ್ಕೆ ಒಪ್ಪಿಗೆ
ಗಡಿಯಲ್ಲಿರುವ ಹಿಂದೂ ಶಿವ ದೇವಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಆರಂಭವಾಗಿದ್ದ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ಸಮರಕ್ಕೆ 2ನೇ ದಿನವಾದ ಶುಕ್ರವಾರ ಬ್ರೇಕ್ ಬಿದ್ದಿದ್ದು, ಕದನ ವಿರಾಮಕ್ಕೆ ಉಭಯ ದೇಶಗಳು ಸಮ್ಮತಿಸಿವೆ.
India News Live 26th July: 1 ಕೈಯಿಲ್ಲದ ಕೈದಿ ಗೋಡೆ ಹಾರಿ ಜೈಲಿಂದ ಪರಾರಿ, ಬಳಿಕ ಸೆರೆ!
2011ರಲ್ಲಿ ದೇಶದಲ್ಲಿ ಸುದ್ದಿ ಮಾಡಿದ್ದ ಕೇರಳದ ಸೌಮ್ಯಾ ಅತ್ಯಾಚಾ*, ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಯೊಬ್ಬ, ಗೋಡೆ ಹಾರಿ ಪರಾರಿಯಾದ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದಿದೆ. ಆದರೆ ಕೆಲವೇ ಗಂಟೆಗಳ ಬಳಿಕ ಸಿಕ್ಕಿಬಿದ್ದಿದ್ದಾನೆ.
India News Live 26th July: ಭಾರತ - ಮಾಲ್ಡೀವ್ಸ್ ಮತ್ತೆ ಭಾಯಿ ಭಾಯಿ!
ಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಲೂ ಮುಂದಾಗಿದ್ದ ಮಾಲ್ಡೀವ್ಸ್ ಈಗ ತಣ್ಣಗಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ದ್ವೀಪದೇಶಕ್ಕೆ ನೀಡಿದ ಮೊದಲ ಭೇಟಿ ಯಶಸ್ಸು
India News Live 26th July: ಜಾತಿ ಗಣತಿ ನಡೆಸದೇ ಇದ್ದದ್ದು ನನ್ನ ತಪ್ಪು, ಪಕ್ಷದ್ದಲ್ಲ : ರಾಹುಲ್
ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಜಾತಿಗಣತಿ ಮಾಡದೇ ಇದ್ದದ್ದು ಕಾಂಗ್ರೆಸ್ ಪಕ್ಷದ ತಪ್ಪಲ್ಲ. ಅದು ನನ್ನ ತಪ್ಪು. ಅದನ್ನು ಈಗ ಸರಿಪಡಿಸಿಕೊಂಡು ಗಣತಿ ಮಾಡುತ್ತಿದ್ದೇವೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.