02:08 PM (IST) Jul 24

India News Live Updates;'ಡ್ಯಾಡೀಸ್ ಹೋಮ್'.. ಯಶ್ ಹೋದಲ್ಲೆಲ್ಲಾ ಫಾಲೋ ಮಾಡ್ತಿದೆ ಈ ಡೈಲಾಗ್; ಅಷ್ಟಕ್ಕೂ ಇದರಲ್ಲಿರೋ ಸೀಕ್ರೆಟ್ ಏನು?

ನಟ ಯಶ್ ಅವರು ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಟಾಕ್ಸಿಕ್ ಸಿನಿಮಾದ ಆ ಡೈಲಾಗ್ ಅವರನ್ನು ಬಿಟ್ಟೂಬಿಡದೇ ಹಿಂಬಾಲಿಸುತ್ತಿದೆ. ಸದ್ಯಕ್ಕೆ ಈ ಡೈಲಾಗ್ 'ಯುವಜನತೆಯ ಮಂತ್ರ' ಎನ್ನುವಂತಾಗಿದೆ. ಇನ್ನು ಟಾಕ್ಸಿಕ್ ಸಿನಿಮಾ ಬಿಡುಗಡೆ ಬಳಿಕ ಅದ್ಯಾವ ಡೈಲಾಗ್ ಯುಥ್‌ ಸಮೂಹವನ್ನು ಸೆಳೆಯಲಿದೆಯೋ ಏನೋ!?

Read Full Story
01:59 PM (IST) Jul 24

India News Live Updates;ಹೈದರಾಬಾದ್‌ to ಲಂಡನ್‌ ಹೊರಟಿದ್ದ ವಿಮಾನ ಹಾರಾಡುತ್ತಿದ್ದಾಗಲೇ ಎಲ್ಲಾ ಪೈಲಟ್‌ಗಳು ದಿಢೀರ್ ಅಸ್ವಸ್ಥ, ಮುಂದಾಗಿದ್ದೇನು?

ಹೈದರಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಮೂವರು ಪೈಲಟ್‌ಗಳು 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ತೀವ್ರ ಅಸ್ವಸ್ಥಗೊಂಡರು. ಈ ಸವಾಲಿನ ನಡುವೆಯೂ ಅವರು ವಿಮಾನವನ್ನು ಲಂಡನ್‌ನಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದು, ಹೈದರಾಬಾದ್‌ನಲ್ಲಿ ಸೇವಿಸಿದ ಆಹಾರವೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.
Read Full Story
01:55 PM (IST) Jul 24

India News Live Updates;ಜಿಂಬಾಬ್ವೆ ಎದುರಿನ ಸರಣಿ ಬೆನ್ನಲ್ಲೇ ಮತ್ತೊಂದು ಟಿ20 ಸರಣಿ ಘೋಷಣೆ! ಈ ಮೈದಾನದಲ್ಲಿ ನಡೆಯಲಿದೆ 3 ಬ್ಯಾಕ್ ಟು ಬ್ಯಾಕ್ ಮ್ಯಾಚ್

ಬೆಂಗಳೂರು: ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ನಡೆಯುತ್ತಿರುವ ಬೆನ್ನಲ್ಲೇ ಮತ್ತೊಂದು ಟಿ20 ಸರಣಿ ಘೋಷಣೆಯಾಗಿದೆ. ಇದೀಗ ಭಾರತದಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಟಿ20 ಪಂದ್ಯಗಳು ನಡೆಯಲಿವೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story
01:37 PM (IST) Jul 24

India News Live Updates;NEET ಗಲಾಟೆ ಮಧ್ಯೆ ಶಿಕ್ಷಣ ವ್ಯವಸ್ಥೆಗೆ ಮತ್ತೊಂದು ಕಪ್ಪುಚುಕ್ಕೆ.. ಇಲ್ಲಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು..! Video

ದೇಶಾದ್ಯಂತ ಪರೀಕ್ಷಾ ಪೇಪರ್ ಲೀಕ್ ಹಗರಣಗಳು ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಶಿಕ್ಷಣ ವ್ಯವಸ್ಥೆಗೆ ಕಪ್ಪುಚುಕ್ಕೆಯಂತಿರುವ ಮತ್ತೊಂದು ಘಟನೆ ರಜಾಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷಾ ಕೊಠಡಿಯಲ್ಲಿ ಪಾರದರ್ಶಕತೆ ಕಾಪಾಡಬೇಕಾದ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿಕೊಡುತ್ತಾ ರೆಡ್‌ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ!

Read Full Story
01:19 PM (IST) Jul 24

India News Live Updates;ಬಜೆಟ್ ಬೆಲೆಯಲ್ಲಿ ಬೊಂಬಾಟ್ ಫೀಚರ್ಸ್ - ಲಾವಾದಿಂದ ಹೊಸ 'ವಿರಾಟ್' ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ!

ಭಾರತದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ 'ಲಾವಾ', ಫ್ಲಿಪ್‌ಕಾರ್ಟ್ ಸಹಯೋಗದೊಂದಿಗೆ 'ವಿರಾಟ್' ಸರಣಿಯ ಎರಡು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಫೋನ್‌ಗಳು, ಜಾಹೀರಾತು ರಹಿತ ಅನುಭವ ಮತ್ತು ಮನೆ ಬಾಗಿಲಿಗೆ ಸರ್ವೀಸ್‌ನಂತಹ ವಿಶಿಷ್ಟ ಸೌಲಭ್ಯಗಳನ್ನು ಹೊಂದಿವೆ.
Read Full Story
01:09 PM (IST) Jul 24

India News Live Updates;ಮ್ಯಾರಥಾನ್​ ವೇಳೆ ಮುಟ್ಟಿನ ರಕ್ತಸ್ರಾವವಾದ್ರೂ ಡೋಂಟ್​ ಕೇರ್​ - ಗುರಿ ತಲುಪಿದ ಛಲಗಾತಿ- ವಿಡಿಯೋ ವೈರಲ್​

ಚೀನಾದ ಮ್ಯಾರಥಾನ್ ಓಟಗಾರ್ತಿ ಲಿ ಮೀಜೆನ್, ಮ್ಯಾರಥಾನ್​ ಓಟದ ಮಧ್ಯದಲ್ಲಿ ಋತುಸ್ರಾವವಾದರೂ ಓಟ ನಿಲ್ಲಿಸದೆ ಗುರಿ ಸಾಧಿಸಿದರು. ಕ್ರೀಡೆಯಲ್ಲಿ ಮಹಿಳೆಯರು ಎದುರಿಸುವ ಸವಾಲು ಮತ್ತು ಮುಟ್ಟಿನ ಬಗೆಗಿನ ಕಳಂಕದ ಚರ್ಚೆಯನ್ನು ಹುಟ್ಟುಹಾಕಿದ ಅವರ ದೃಢಸಂಕಲ್ಪವು ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.
Read Full Story
01:07 PM (IST) Jul 24

India News Live Updates;Bigg Boss Kannada 13 Launch - ಬಿಗ್‌ಬಾಸ್ ಕನ್ನಡ ಸೀಸನ್ 13 ಲಾಂಚ್ ಡೇಟ್ ಫಿಕ್ಸ್ - ಈ ಬಾರಿ ಕಾದಿದೆ ಬಿಗ್ ಟ್ವಿಸ್ಟ್!

ಸದ್ಯಕ್ಕೆ ಗಾಂಧಿನಗರದ ಗಲ್ಲಿಯಿಂದ ಸೋಶಿಯಲ್ ಮೀಡಿಯಾದವರೆಗೆ ಚರ್ಚೆಯಾಗುತ್ತಿರೋದು ಒಂದೇ ವಿಷಯ... "ಯಾರಪ್ಪಾ ಆ ಹೊಸ ಸ್ಪರ್ಧಿಗಳು?" ಅಂತ. ಕೆಲವು ಫೇಮಸ್ ರೀಲ್ಸ್ ಸ್ಟಾರ್‌ಗಳು, ವಿವಾದಾತ್ಮಕ ನಾಯಕರು ಮತ್ತು ಸೀರಿಯಲ್ ತಾರೆಯರ ಹೆಸರುಗಳು ಕೇಳಿಬರುತ್ತಿವೆ. ಆದರೆ, ಬಿಗ್‌ಬಾಸ್ ಅಂದ್ರೆ ಅಲ್ಲಿ ಸರ್ಪ್ರೈಸ್ ಇರಲೇಬೇಕಲ್ವಾ?

Read Full Story
12:24 PM (IST) Jul 24

India News Live Updates;ತನಗಿಂತ ಮಕ್ಕಳೆಂದ್ರೆ ಹೆಂಡ್ತಿಗೆ ಪ್ರೀತಿ - ಕೋಪದಿಂದ 20 ವರ್ಷ ಮಾತು ಬಿಟ್ಟ ಗಂಡ! ಮುಂದೇನಾಯ್ತು ನೋಡಿ

ಜಪಾನ್‌ನ ಒಟ್ಟೊ ಕಟಯಾಮಾ ಎಂಬ ವ್ಯಕ್ತಿ, ತನ್ನ ಪತ್ನಿ ಮಕ್ಕಳ ಮೇಲೆ ಹೆಚ್ಚು ಪ್ರೀತಿ ತೋರುತ್ತಾಳೆ ಎಂಬ ಅಸೂಯೆಯಿಂದಾಗಿ ಬರೋಬ್ಬರಿ 20 ವರ್ಷಗಳ ಕಾಲ ಆಕೆಯೊಂದಿಗೆ ಮಾತನಾಡಲಿಲ್ಲ. ಒಟ್ಟಿಗೆ ವಾಸಿಸುತ್ತಿದ್ದರೂ, ಮೂವರು ಮಕ್ಕಳನ್ನು ಬೆಳೆಸಿದ್ದರೂ ಈ ಮೌನ ಮುಂದುವರೆದಿತ್ತು, ಕೊನೆಗೆ ಅವರ ಮಗ ಟಿವಿ ಶೋ ಒಂದಕ್ಕೆ ಪತ್ರ ಬರೆದಾಗ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
Read Full Story
12:08 PM (IST) Jul 24

India News Live Updates;'ಹೆದರಿ ಬಿಟ್ಟ... ಥ್ಯಾಂಕ್ಯೂ ಕಾಕ್ರೋಚ್' - ನರೇಂದ್ರ ಮೋದಿ ಮಿಡ್‌ ನೈಟ್‌ ಸೆಲ್ಪಿ ವಿಡಿಯೋ ಬಗ್ಗೆ ಪ್ರಕಾಶ್‌ ರಾಜ್ ಅಣಕ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮಧ್ಯರಾತ್ರಿ ವಿಡಿಯೋ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಈ ವಿಡಿಯೋವನ್ನು ಲೇವಡಿ ಮಾಡಿರುವ ನಟ ಪ್ರಕಾಶ್ ರಾಜ್, 'ಹೆದರಿಬಿಟ್ಟ' ಎಂದು ವ್ಯಂಗ್ಯವಾಡಿದ್ದು, ಈ ಟ್ವೀಟ್ ವೈರಲ್ ಆಗಿದೆ.
Read Full Story
11:49 AM (IST) Jul 24

India News Live Updates;ಪುತ್ರನ ಯಶಸ್ಸಿಗಾಗಿ ಅಪ್ಪ ಮಥುರಾದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದರು.. ಇತ್ತ ಮೊದಲ ಎಸೆತದಲ್ಲೇ ವಿಕೆಟ್ ಕಿತ್ತ ಮಯಾಂಕ್

ಟೀಮ್ ಇಂಡಿಯಾದ ಯುವ ವೇಗಿ ಎದುರಾಳಿ ಬ್ಯಾಟರ್‌ಗಳ ಪಾಲಿನ 'ಸ್ಪೀಡ್ ಗನ್' ಮಯಾಂಕ್ ಯಾದವ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿಯಾಗಿ ಮರಳಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಮಯಾಂಕ್ ತಮ್ಮ ಹಳೆಯ ಲಯಕ್ಕೆ ಮರಳಿರುವುದನ್ನು ಸಾರಿದ್ದಾರೆ.

Read Full Story
11:28 AM (IST) Jul 24

India News Live Updates;ಇಂಡಿಗೋ-ಏರ್‌ಇಂಡಿಯಾಗೆ ಸವಾಲು, ವಿಮಾನಯಾನ ಕ್ಷೇತ್ರಕ್ಕೆ ಬರಲು ನಿಯಮ ಬದಲಿಸುವಂತೆ ಕೇಂದ್ರದ ಮೊರೆ ಹೋದ ಅದಾನಿ!

ಭಾರತದ ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶಿಸಲು ಅದಾನಿ ಸಮೂಹ ಸಜ್ಜಾಗಿದ್ದು, ಅಸ್ತಿತ್ವದಲ್ಲಿರುವ ನಿಯಮಾವಳಿಗಳ ಬದಲಾವಣೆಗೆ ಕೇಂದ್ರ ಸರ್ಕಾರವನ್ನು ಕೋರಿದೆ. ಏರ್‌ಪೋರ್ಟ್‌ ನಿರ್ವಾಹಕರು ವಿಮಾನಯಾನ ಸಂಸ್ಥೆಯಲ್ಲಿ ಶೇ.10ಕ್ಕಿಂತ ಹೆಚ್ಚು ಪಾಲು ಹೊಂದುವುದನ್ನು ನಿರ್ಬಂಧಿಸುವ ನಿಯಮವನ್ನು ಸಡಿಲಗೊಳಿಸಿದರೆ, ಇಂಡಿಗೋ-ಏರ್‌ ಇಂಡಿಯಾ ಪ್ರಾಬಲ್ಯದ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆ ಏರ್ಪಡಲಿದೆ.
Read Full Story
11:20 AM (IST) Jul 24

India News Live Updates;ವಿದ್ಯಾರ್ಥಿಗಳ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿಲ್ಲ, ಅವರ ನಿರಾಸೆಗೆ ಅರ್ಥವಿದೆ; ವಿದ್ಯಾರ್ಥಿಗಳ ಹೋರಾಟದ ಪರ ಧ್ವನಿ ಎತ್ತಿದ ಸಚಿನ್ ತೆಂಡೂಲ್ಕರ್

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ಕುರಿತು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿದಂತೆ ಶುಭ್‌ಮನ್‌ ಗಿಲ್‌, ಯುವರಾಜ್‌ ಸಿಂಗ್‌ರಂತಹ ಹಲವು ಕ್ರೀಡಾಪಟುಗಳು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಮತ್ತು ಅವರ ಭವಿಷ್ಯವನ್ನು ಸುಭದ್ರಗೊಳಿಸಬೇಕು ಎಂದು ಗಣ್ಯರು ಆಗ್ರಹಿಸಿದ್ದಾರೆ.
Read Full Story
11:04 AM (IST) Jul 24

India News Live Updates;ಕಾಮನ್‌ವೆಲ್ತ್ ಗೇಮ್ಸ್‌ 2026 - ಗೇಮ್ಸ್‌ ಆರಂಭಕ್ಕೆ ಮೊದಲೇ ಭಾರತಕ್ಕೆ ಪದಕ ಖಚಿತ!

2026ರ ಕಾಮನ್‌ವೆಲ್ತ್‌ ಗೇಮ್ಸ್‌ ಆರಂಭಕ್ಕೂ ಮುನ್ನವೇ ಭಾರತ ಪದಕ ಖಾತೆ ತೆರೆದಿದೆ. ಬಾಕ್ಸರ್ ಲವ್ಲೀನಾ ಬೊರ್ಗೊಹೈನ್‌ ಸೆಮಿಫೈನಲ್‌ಗೆ ನೇರ ಪ್ರವೇಶ ಪಡೆದು ಕಂಚಿನ ಪದಕ ಖಚಿತಪಡಿಸಿದ್ದಾರೆ. ಆದರೆ, ಡೋಪಿಂಗ್ ನಿಯಮ ಉಲ್ಲಂಘನೆಯಿಂದಾಗಿ ಭಾರತದ ವೇಟ್‌ಲಿಫ್ಟಿಂಗ್‌ ಕೋಟಾದಲ್ಲಿ ಕಡಿತವಾಗಿದ್ದು, ಇದು ತಂಡಕ್ಕೆ ಹಿನ್ನಡೆ ಉಂಟುಮಾಡಿದೆ.
Read Full Story
10:37 AM (IST) Jul 24

India News Live Updates;ಬಂಧಿಸಿದ್ದ ವಿದ್ಯಾರ್ಥಿಗಳ ಬಿಡುಗಡೆಗೆ ಪೊಲೀಸ್ ವ್ಯಾನ್‌ಗೆ ಅಡ್ಡ ನಿಂತ ಯುವತಿ, ವೈರಲ್ ವಿಡಿಯೋದ ಆ ಚೆಲುವೆ ಯಾರು?

ಮುಂಬೈನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ, ಯುವತಿಯೊಬ್ಬರು ಏಕಾಂಗಿಯಾಗಿ ಪೊಲೀಸ್ ವ್ಯಾನ್‌ ತಡೆದು ವಶಕ್ಕೆ ಪಡೆದಿದ್ದ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸುವಂತೆ ಮಾಡಿದ್ದಾರೆ. ಈ ದಿಟ್ಟ ಯುವತಿ ನಟಿ ಹಾಗೂ ಉದ್ಯಮಿ ರಿಯಾ ಅಹಿರ್ ಎಂದು ಗುರುತಿಸಲಾಗಿದ್ದು, ಅವರ ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Read Full Story
10:33 AM (IST) Jul 24

India News Live Updates;Ramayana trailer postponed - ಸಿಜೆಪಿ ಪ್ರತಿಭಟನೆ ಎಫೆಕ್ಟ್..? ಯಶ್ ಫ್ಯಾನ್ಸ್‌ಗೆ ಭಾರೀ ನಿರಾಸೆ..!

ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೈಲರ್ ಬಿಡುಗಡೆಯನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. ಜಾಗತಿಕ ಪಾಲುದಾರಿಕೆಯ ಕಾರಣವನ್ನು ನಿರ್ಮಾಪಕರು ನೀಡಿದ್ದರೂ, ಸಿಜೆಪಿ ಪ್ರತಿಭಟನೆಯೂ ಇದಕ್ಕೆ ಕಾರಣವಿರಬಹುದು ಎಂದು ಚರ್ಚೆಯಾಗುತ್ತಿದೆ. ರಣಬೀರ್ ಕಪೂರ್ ಮತ್ತು ಯಶ್ ನಟನೆಯ ಈ ಚಿತ್ರದ ಹೊಸ ಟ್ರೈಲರ್ ದಿನಾಂಕಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
Read Full Story
09:45 AM (IST) Jul 24

India News Live Updates;ಮುಸ್ತಫಿಜುರ್ ಕೈಬಿಟ್ಟು ಹೀರೋ ಆದರು.. ಈಗ ಪಾಕ್ ಆಟಗಾರನ ಒಪ್ಪಂದ ಮಾಡಿ ಕೆಂಗಣ್ಣಿಗೆ ಗುರಿಯಾದ ಶಾರೂಖ್ ಖಾನ್

ಸನ್ ರೈಸರ್ಸ್ ಮಾಲೀಕಿ ಕಾವ್ಯ ಮಾರನ್ ಅವರಂತೆ, ಶಾರೂಖ್ ಖಾನ್ ಮಾಲೀಕತ್ವದ ಟ್ರಿನಿಬಾಗೋ ನೈಟ್ ರೈಡರ್ಸ್ ತಂಡವು ಕೆರಿಬಿಯನ್ ಪ್ರೀಮಿಯರ್ ಲೀಗ್‌ಗಾಗಿ ಪಾಕಿಸ್ತಾನಿ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರನ್ನು ಉಳಿಸಿಕೊಂಡಿದೆ.

Read Full Story
09:01 AM (IST) Jul 24

India News Live Updates;ಸೋನಂ ವಾಗ್ಚುಕ್ ಆರೋಗ್ಯದ ಬಗ್ಗೆ ಪ್ರಧಾನಿ ಮೋದಿ ಕಾಳಜಿ; ಸೆಲ್ಫಿ ವಿಡಿಯೋ ಮೂಲಕ ನೀಡಿದ್ರು ಅಮೂಲ್ಯ ಸಲಹೆ

ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯವಾಗಿದೆ. ಬೆನ್ನಲ್ಲೇ ಪ್ರೀತಿಯ ಸೋನಂ ಜೀ ತೂಕ ಹೆಚ್ಚಿಸಿಕೊಳ್ಳಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

Read Full Story
08:50 AM (IST) Jul 24

India News Live Updates;'ಇದು ಕೇವಲ ಹಸಿವಿನ ಅಂತ್ಯವಷ್ಟೇ' ಉಪವಾಸ ಸತ್ಯಾಗ್ರಹ ಕೈಬಿಟ್ಟ ಬೆನ್ನಲ್ಲೇ ಸೋನಮ್ ವಾಂಗ್ಚುಕ್ ವಿಡಿಯೋ ರಿಲೀಸ್!

ಖ್ಯಾತ ಪರಿಸರ ತಜ್ಞ ಸೋನಮ್ ವಾಂಗ್ಚುಕ್ ಅವರು ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಸುತ್ತಿದ್ದ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ನಡೆದ ಮಾತುಕತೆ ಯಶಸ್ವಿಯಾಗಿದ್ದು, ಸಂಸತ್ತಿನಲ್ಲಿ ಚರ್ಚೆ ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳ ರದ್ದತಿ ಸೇರಿದಂತೆ ಮೂರು ಪ್ರಮುಖ ಲಿಖಿತ ಭರವಸೆಗಳನ್ನು ಪಡೆದ ನಂತರ ಅವರು ತಮ್ಮ ಹೋರಾಟವನ್ನು ಹಿಂಪಡೆದಿದ್ದಾರೆ.
Read Full Story
08:19 AM (IST) Jul 24

India News Live Updates;ಸಚಿವ ಧರ್ಮೇಂದ್ರ ಪ್ರಧಾನ್‌ ಬದಲು, ಕೇಂದ್ರ ಶಿಕ್ಷಣ ಇಲಾಖೆ ಕಾರ್‍ಯದರ್ಶಿ ತಲೆದಂಡ, ಹಲವು ಉನ್ನತ ಅಧಿಕಾರಿಗಳಿಗೆ ಶಾಕ್

ನೀಟ್‌-ಯುಜಿ ಪರೀಕ್ಷಾ ಅಕ್ರಮ ಮತ್ತು ಸಿಬಿಎಸ್‌ಇ ಮೌಲ್ಯಮಾಪನ ದೋಷಗಳ ವಿವಾದದ ಹಿನ್ನೆಲೆಯಲ್ಲಿ, ಕೇಂದ್ರ ಶಿಕ್ಷಣ ಸಚಿವಾಲಯದಲ್ಲಿ ಭಾರಿ ಆಡಳಿತಾತ್ಮಕ ಬದಲಾವಣೆ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಿನೀತ್ ಜೋಶಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನರೇಶ್ ಪಾಲ್ ಗಂಗ್ವಾರ್ ಮತ್ತು ಟಿ.ಕೆ. ಅನಿಲ್ ಕುಮಾರ್ ಅವರನ್ನು ಹೊಸ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ.
Read Full Story