ಚಿನ್ನದ ಬೆಲೆಯಲ್ಲಿ ಮತ್ತೆ 1,200 ರೂ ಇಳಿಕೆ, ಖರೀದಿಗೆ ಇದು ಸೂಕ್ತವ ಸಮಯವೇ? ಕಾರಣ ದಿನದಿಂದ ದಿನಕ್ಕೆ ಬಂಗಾರ ಬೆಲೆ ಇಳಿಕೆಯಾಗುತ್ತಿದೆ. ಹೀಗಾಗಿ ಕಾಯಬೇಕಾ ಅಥವಾ ಏರಿಕೆ ಕಾಣುವ ಮೊದಲೇ ಖರೀದಿಸಬೇಕಾ ಅನ್ನೋ ಚರ್ಚೆ ಶುರುವಾಗಿದೆ.
- Home
- News
- India News
- India Latest News Live: ಚಿನ್ನದ ಬೆಲೆಯಲ್ಲಿ ಮತ್ತೆ 1,200 ರೂ ಇಳಿಕೆ, ಖರೀದಿಗೆ ಇದು ಸೂಕ್ತವ ಸಮಯವೇ?
India Latest News Live: ಚಿನ್ನದ ಬೆಲೆಯಲ್ಲಿ ಮತ್ತೆ 1,200 ರೂ ಇಳಿಕೆ, ಖರೀದಿಗೆ ಇದು ಸೂಕ್ತವ ಸಮಯವೇ?

ಪಟನಾ : ಬಿಹಾರ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ತರಹೇವಾರಿ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ, ‘ಇಂಥ ಕೆಟ್ಟ ಭಾಷೆ ಬಳಸುವ ಪ್ರಧಾನಿಯನ್ನು ನಾನು ನೋಡಿಲ್ಲ’ ಎಂದು ವಿಪಕ್ಷ ಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಕಿಡಿಕಾರಿದ್ದಾರೆ.
‘ಆರ್ಜೆಡಿಯವರು ಕಾಂಗ್ರೆಸ್ನ ತಲೆಗೆ ‘ಕಟ್ಟಾ’ (ನಾಡಬಂದೂಕಿಗೆ ಇರುವ ಬಿಹಾರದ ಪಕ್ಕಾ ಹಳ್ಳಿ ಭಾಷೆ) ಇಟ್ಟು ಸಿಎಂ ಅಭ್ಯರ್ಥಿ ಹುದ್ದೆ ಬಾಚಿಕೊಂಡರು’ ಎಂದು ಭಾನುವಾರ ಮೋದಿ ಆರೋಪಿಸಿದ್ದರು. ಇದಕ್ಕೆ ಸೋಮವಾರ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್ ಅವರು, ‘ಯಾವುದೇ ಪ್ರಧಾನಿ ಇಂತಹ ಪದಗಳನ್ನು ಬಳಸುವುದನ್ನು ನಾನು ಎಂದಿಗೂ ಕೇಳಿಲ್ಲ. ಪ್ರಧಾನಿಯವರ ಹೇಳಿಕೆಯ ಬಗ್ಗೆ ನಾನು ಏನೂ ಹೇಳಲಾರೆ. ಇದು ಅವರ ಆಲೋಚನಾ ಪ್ರಕ್ರಿಯೆಯನ್ನು ತೋರಿಸುತ್ತದೆ" ಎಂದು ಹೇಳಿದರು. ‘ಪ್ರಧಾನಿ ಗುಜರಾತ್ಗೆ ಹೋದಾಗಲೆಲ್ಲಾ ಐಟಿ, ಸೆಮಿಕಂಡಕ್ಟರ್ ಘಟಕಗಳು ಮತ್ತು ಡೇಟಾ ಕೇಂದ್ರ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಬಿಹಾರಕ್ಕೆ ಬಂದಾಗ ಅವರು ‘ಕಟ್ಟಾ‘ ಬಗ್ಗೆ ಮಾತನಾಡುತ್ತಾರೆ’ ಎಂದು ಯಾದವ್ ಆರೋಪಿಸಿದರು.
India Latest News Live 4 November 2025 ಚಿನ್ನದ ಬೆಲೆಯಲ್ಲಿ ಮತ್ತೆ 1,200 ರೂ ಇಳಿಕೆ, ಖರೀದಿಗೆ ಇದು ಸೂಕ್ತವ ಸಮಯವೇ?
India Latest News Live 4 November 2025 ಫಿಸಿಕ್ಸ್ ಅರಿತರೂ ಕಾನೂನು ಮರೆತ ಫಿಸಿಕ್ಸ್ ವಾಲ್ಲಾ ವಿರುದ್ಧ ದೂರು, ಸಂಕಷ್ಟ ತಂದ ಅದ್ಭುತ ವಿಡಿಯೋ
ಫಿಸಿಕ್ಸ್ ಅರಿತರೂ ಕಾನೂನು ಮರೆತ ಫಿಸಿಕ್ಸ್ ವಾಲ್ಲಾ ವಿರುದ್ಧ ದೂರು, ಸಂಕಷ್ಟ ತಂದ ಅದ್ಭುತ ವಿಡಿಯೋ, 6 ಮಹೀದ್ರ ಸ್ಕಾರ್ಪಿಯೋ ಕಾರುಗಳ ಮೂಲಕ ಸುಂದರ ತಾಣದಲ್ಲಿ ಮಾಡಿದ ಜಾಹೀರಾತು ವಿಡಿಯೋದಿಂದ ಫಿಸಿಕ್ಸ್ ವಾಲ್ಲಾ ವಿರುದ್ದ ದೂರು ದಾಖಲಾಗಿದೆ.
India Latest News Live 4 November 2025 ಚಿನ್ನದ ಮಾರುಕಟ್ಟೆಗೆ ತಳಮಳ ಹುಟ್ಟಿಸಿದ ಚೀನಾದ ಹೊಸ ನಿರ್ಧಾರ!!
China New Gold Rule Removal of VAT Exemption Likely to Hike Global Price ಚೀನಾ ಚಿನ್ನದ ಮೇಲಿನ ವ್ಯಾಟ್ ತೆಗೆದುಹಾಕಲು ನಿರ್ಧರಿಸಿದೆ. ಇದು ಬೆಲೆಗಳನ್ನು ಹೆಚ್ಚಿಸುತ್ತದೆ, ಅದರ ಖರೀದಿಯನ್ನು ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ. ಹೊಸ ನಿಯಮವು ನವೆಂಬರ್ 1, 2025 ರಿಂದ ಜಾರಿಗೆ ಬಂದಿದೆ.
India Latest News Live 4 November 2025 ಭಾರತೀಯ ಸೇನೆ ಶೇ.10ರಷ್ಟಿರುವ ಮೇಲ್ಜಾತಿ ಹಿಡಿತದಲ್ಲಿದೆ, ರಾಹುಲ್ ಗಾಂಧಿ ವಿವಾದದ ಹಿಂದೆ ಷಡ್ಯಂತ್ರ
ಭಾರತೀಯ ಸೇನೆ ಶೇ.10ರಷ್ಟಿರುವ ಮೇಲ್ಜಾತಿ ಹಿಡಿತದಲ್ಲಿದೆ, ರಾಹುಲ್ ಗಾಂಧಿ ವಿವಾದದ ಹಿಂದೆ ಷಡ್ಯಂತ್ರ ಅಡಗಿದೆ. ಕೇಂದ್ರದಲ್ಲಿ ಅಧಿಕಾರ ಗಿಟ್ಟಿಸಲು ಇದೀಗ ರಾಹುಲ್ ಗಾಂಧಿ ನೆರೆ ದೇಶಗಳ ಮಾಡೆಲ್ ಅನುಸರಿಸುತ್ತಿದ್ದಾರ? ಇದಕ್ಕಾಗಿ ವೇದಿಕೆ ಸಿದ್ದಪಡಿಸುತ್ತಿದ್ದರಾ?
India Latest News Live 4 November 2025 ಎಲ್ಲಿ ಹೋದ್ರೂ ವಿವಾದ, ಪ್ರಕಾಶ್ ರಾಜ್ ವಿರುದ್ಧ ಕೇರಳದ ಬಾಲ ಕಲಾವಿದರು ಸಿಟ್ಟಾಗಿರೋದೇಕೆ?
Prakash Raj Slammed by Child Artistes After Kerala State Awards ಪ್ರಕಾಶ್ ರಾಜ್ ನೇತೃತ್ವದ ತೀರ್ಪುಗಾರರು ಅತ್ಯುತ್ತಮ ಮಕ್ಕಳ ಚಿತ್ರ ಮತ್ತು ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಗಳನ್ನು ತಡೆಹಿಡಿದ ನಂತರ 2025 ರ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ವಿವಾದವನ್ನು ಹುಟ್ಟುಹಾಕಿದೆ.
India Latest News Live 4 November 2025 12 ಗಂಟೆಯಿಂದಲೂ ಮಂಗೋಲಿಯಾ ಏರ್ಪೋರ್ಟ್ಲ್ಲಿ ಸಿಲುಕಿದ್ದ ಪ್ರಯಾಣಿಕರ ಕರೆತರಲಿರುವ ಏರ್ ಇಂಡಿಯಾ
ಸ್ಯಾನ್ ಫ್ರಾನ್ಸಿಸ್ಕೋದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ತೊಂದರೆಯ ಅನುಮಾನದಿಂದ ಮಂಗೋಲಿಯಾದ ಉಲಾನ್ಬತಾರ್ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ಇದರಿಂದಾಗಿ 228 ಪ್ರಯಾಣಿಕರು 12 ಗಂಟೆಗಳ ಕಾಲ ಅಲ್ಲಿ ಸಿಲುಕಿದ್ದಾರೆ.
India Latest News Live 4 November 2025 ಹೊಸ ವರ್ಷಕ್ಕೆ ಮೊಬೈಲ್ ರಿಚಾರ್ಜ್ ಶಾಕ್, ಜಿಯೋ-ಏರ್ಟೆಲ್-ವಿಐನಲ್ಲಿ ಶೇ. 10-12ರಷ್ಟು ದರ ಏರಿಕೆ ಫಿಕ್ಸ್!
Mobile Recharge Plans Likely to See 10-12% Price Hike by December End, Driven by Jio-Airtel Growth ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ದರವನ್ನು ಶೀಘ್ರದಲ್ಲೇ ಶೇಕಡಾ 10-12 ರಷ್ಟು ಹೆಚ್ಚಿಸಲು ಸಜ್ಜಾಗುತ್ತಿವೆ.
India Latest News Live 4 November 2025 Breaking ಬಿಲಾಸಪುರದಲ್ಲಿ ಪ್ರಯಾಣಿಕರ ರೈಲು ಅಪಘಾತ, ಸಾವಿನ ಸಂಖ್ಯೆ 5ಕ್ಕೆ ಏರಿಕೆ
Breaking ಬಿಲಾಸಪುರದಲ್ಲಿ ಪ್ರಯಾಣಿಕರ ರೈಲು ಅಪಘಾತ, ಸಾವಿನ ಸಂಖ್ಯೆ 5ಕ್ಕೆ ಏರಿಕೆ, ಗೂಡ್ಸ್ ರೈಲಿಗೆ ಡಿಕ್ಕಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ. ಹಲವರು ಗಾಯಗೊಂಡಿದ್ದಾರೆ.
India Latest News Live 4 November 2025 ಭಾರತ ಪರ ಎರಡನೇ ಗರಿಷ್ಠ ರನ್ ಸಿಡಿಸಿದರೂ ಪ್ರತೀಕಾಗೆ ಸಿಗಲಿಲ್ಲ ಮೆಡಲ್! ಈಕೆಯ ಜರ್ನಿ ಹಲವರಿಗೆ ಸ್ಪೂರ್ತಿ
ಭಾರತೀಯ ಮಹಿಳಾ ಕ್ರಿಕೆಟ್ ತಂಡ 2025ರ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ದೆಹಲಿಯ ಯುವ ಕ್ರಿಕೆಟರ್ ಪ್ರತೀಕಾ ರಾವಲ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದರೂ ಆಕೆಗೆ ಚಾಂಪಿಯನ್ ತಂಡದ ಮೆಡಲ್ ಸಿಗಲಿಲ್ಲ. ಈಕೆಯ ಕ್ರಿಕೆಟ್ ಜರ್ನಿ ಹಲವರಿಗೆ ಸ್ಪೂರ್ತಿ.
India Latest News Live 4 November 2025 ಸಂಕಷ್ಟದಲ್ಲಿದ್ದ ಅಶೋಕ್ ಲೇಲ್ಯಾಂಡ್ ಮೇಲೆತ್ತಿದ್ದ ಹಿಂದೂಜಾ ಗ್ರೂಪ್ ಅಧ್ಯಕ್ಷ ಗೋಪಿಚಂದ್ ಇನ್ನಿಲ್ಲ
Hinduja Group chairman passes away: ಹಿಂದೂಜಾ ಗ್ರೂಪ್ನ ಅಧ್ಯಕ್ಷರಾದ ಗೋಪಿಚಂದ್ ಪಿ ಹಿಂದೂಜಾ ಅವರು ಲಂಡನ್ನಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನಷ್ಟದಲ್ಲಿದ್ದ ಅಶೋಕ್ ಲೇಲ್ಯಾಂಡ್ನಂತಹ ಕಂಪನಿಗಳನ್ನು ಮೇಲೆತ್ತಿ, ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಅವರದ್ದು.
India Latest News Live 4 November 2025 ₹14000 ಕೋಟಿ ವಸೂಲಿ ಲೆಕ್ಕ ಕೊಡ್ರಪ್ಪ, ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಿದ ವಿಜಯ್ ಮಲ್ಯ ಹೈಕೋರ್ಟ್ ಅರ್ಜಿ
₹14000 ಕೋಟಿ ವಸೂಲಿ ಲೆಕ್ಕ ಕೊಡ್ರಪ್ಪ, ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಿದ ವಿಜಯ್ ಮಲ್ಯ ಹೈಕೋರ್ಟ್ ಅರ್ಜಿ, ವಿವಿದ ವಿಚಾರಣೆಗೆ ಮಲ್ಯ ಹಾಜರಾಗಿಲ್ಲ ಎಂಬ ಹೈಕೋರ್ಟ್ ಪ್ರಶ್ನೆಗೂ ಮಲ್ಯ ಪರ ವಕೀಲರು ವಾದ ಮುಂದಿಟ್ಟಿದ್ದಾರೆ. ಲಂಡನ್ನಲ್ಲೇ ಕುಳಿತ ಮಲ್ಯ ಹಾಕಿದ ಗೂಗ್ಲಿ ಇದೀಗ ಗಿರಗಿರ ತಿರುಗುತ್ತಿದೆ.
India Latest News Live 4 November 2025 ಸನ್ರೈಸರ್ಸ್ ಹೈದರಾಬಾದ್ನಿಂದ ಸ್ಪೋಟಕ ಬ್ಯಾಟರ್ ರಿಲೀಸ್? ಕಾವ್ಯಾ ಮಾರನ್ ಅಚ್ಚರಿ ನಿರ್ಧಾರ!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜಿಗೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುತ್ತಿದೆ. ತಂಡದ ಅತ್ಯಂತ ದುಬಾರಿ ಆಟಗಾರರನ್ನು ಸಹ ಬಿಟ್ಟುಕೊಡಲು ಸಿದ್ಧವಾಗಿದೆ ಎಂಬ ಮಾಹಿತಿ ಇದೆ. ಅಸಲಿಗೆ ಕಾವ್ಯಾ ಮಾರನ್ ಅವರ ತಂತ್ರವೇನು?
India Latest News Live 4 November 2025 ವಿಶ್ವಕಪ್ ಗೆದ್ದರೂ ಮಹಿಳಾ ಕ್ರಿಕೆಟ್ ಆಟಗಾರ್ತಿರ ಸಂಬಳಕ್ಕೂ ಆಟಗಾರರ ಸ್ಯಾಲರಿಗೂ ಇಷ್ಟೊಂದು ವ್ಯತ್ಯಾಸ?
ಏಕದಿನ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡಕ್ಕೆ ಕೋಟಿಗಟ್ಟಲೆ ಬಹುಮಾನದ ಸುರಿಮಳೆಯಾಗಿದೆ. ಆದರೆ, ಪುರುಷರ ತಂಡಕ್ಕೆ ಹೋಲಿಸಿದರೆ ಬಹುಮಾನದ ಮೊತ್ತ ಮತ್ತು ಬಿಸಿಸಿಐ ವಾರ್ಷಿಕ ಗುತ್ತಿಗೆಯ ಸಂಭಾವನೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ.
India Latest News Live 4 November 2025 ಆ್ಯಂಡ್ರಾಯ್ಡ್ ಅಥವಾ ಐಫೋನ್ ಯಾವುದು ಹೆಚ್ಚು ಸುರಕ್ಷಿತ? ಗೂಗಲ್-YouGov ಸರ್ವೆ ವರದಿ
ಆ್ಯಂಡ್ರಾಯ್ಡ್ ಅಥವಾ ಐಫೋನ್ ಯಾವುದು ಹೆಚ್ಚು ಸುರಕ್ಷಿತ? ಗೂಗಲ್-YouGov ಸರ್ವೆ ವರದಿ, ಬಹುತೇಕರು ಐಫೋನ್ ದುಬಾರಿಯಾದರೂ ಸುರಕ್ಷತೆ ಹಾಗೂ ಗಣಮಟ್ಟದ ಕಾರಣದಿಂದ ಖರೀದಿಸುತ್ತಾರೆ. ಆದರೆ ಅಧ್ಯಯನ ವರದಿಯಲ್ಲಿ ಅಚ್ಚರಿ ಮಾಹಿತಿ ಹೊರಬಂದಿದೆ.
India Latest News Live 4 November 2025 ಚುನಾವಣೆ ಹೊತ್ತಲ್ಲೇ ಬಿಹಾರದಲ್ಲಿ ಕುಸಿದ 4 ಕೋಟಿ ವೆಚ್ಚದ ಸೇತುವೆ!
Bihar bridge collapse Araria: ಸುಮಾರು ₹4 ಕೋಟಿ ವೆಚ್ಚದಲ್ಲಿ ಆರು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಸೇತುವೆಯೊಂದು ಕುಸಿದು ಬಿದ್ದಿದೆ. ಬಿಹಾರ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಈ ಘಟನೆ ನಡೆದಿದ್ದು, ಇದು ರಾಜ್ಯದಲ್ಲಿ ಸೇತುವೆ ಕುಸಿತದ ಸರಣಿ ಘಟನೆಗಳ ಮುಂದುವರಿದ ಭಾಗವಾಗಿದೆ.
India Latest News Live 4 November 2025 ಗರ್ಲ್ಫ್ರೆಂಡ್ಗಾಗಿ 530 ಕೋಟಿ ರೂ ಸರ್ಕಾರದ ವಿಮಾನ ಬಳಸಿದ್ರಾ FBI ಮುಖ್ಯಸ್ಥ ಕಾಶ್ ಪಟೇಲ್
ಗರ್ಲ್ಫ್ರೆಂಡ್ಗಾಗಿ 530 ಕೋಟಿ ರೂ ಸರ್ಕಾರದ ವಿಮಾನ ಬಳಸಿದ್ರಾ FBI ಮುಖ್ಯಸ್ಥ ಕಾಶ್ ಪಟೇಲ್, ಟೀಕೆ, ಆರೋಪಿಗಳಿಗೆ ಕಾಶ್ ಪಟೇಲ್ ಉತ್ತರಿಸಿದ್ದಾರೆ. ಇದೇ ವೇಳೆ ಪತ್ನಿ ಬಗ್ಗೆ ಮೌನವಾಗಿರುವ ಕಾಶ್ ಪಟೇಲ್ ಗರ್ಲ್ಫ್ರೆಂಡ್ ಪರ ಬ್ಯಾಟ್ ಬೀಸುತ್ತಿದ್ದಾರೆ ಎಂದು ಮತ್ತೊಂದು ಆರೋಪ ಕೇಳಿಬಂದಿದೆ.
India Latest News Live 4 November 2025 ವಿಮಾನ ಟಿಕೆಟ್ ಬುಕ್ ಮಾಡಿದ 48 ಗಂಟೆ ಒಳಗೆ ಕ್ಯಾನ್ಸಲ್ ಮಾಡಿದ್ರೆ ಇನ್ಮುಂದೆ ಶುಲ್ಕವಿಲ್ಲ!
Free Flight Ticket Cancellation/Change Within 48 Hours of Booking ಈ ನಿಯಮದ ಪ್ರಕಾರ, ಬುಕಿಂಗ್ ಮಾಡಿದ 48 ಗಂಟೆಗಳ ಒಳಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಟಿಕೆಟ್ಗಳನ್ನು ರದ್ದುಗೊಳಿಸಲು ಅವಕಾಶ ನೀಡಲಿದೆ.
India Latest News Live 4 November 2025 ನಿಮ್ಮ ವ್ಯಾಟ್ಸಾಪ್ಗೆ ವಾಹನದ RTO ಚಲನ್ ಬಂದಿದೆಯಾ? ಅಪ್ಪಿ ತಪ್ಪಿಯೂ ಓಪನ್ ಮಾಡಬೇಡಿ
ನಿಮ್ಮ ವ್ಯಾಟ್ಸಾಪ್ಗೆ ವಾಹನದ RTO ಚಲನ್ ಬಂದಿದೆಯಾ? ಅಪ್ಪಿ ತಪ್ಪಿಯೂ ಓಪನ್ ಮಾಡಬೇಡಿ, ಕಾರಣ ಹೊಸ ಸ್ಕ್ಯಾಮ್ ಶುರುವಾಗಿದ್ದು, ಡೌನ್ಲೋಡ್ ಮಾಡಿದರೆ, ಓಪನ್ ಮಾಡಿದರೆ ನಿಮ್ಮ ಫೋನ್ ಹ್ಯಾಕ್ ಆಗಲಿದೆ.
India Latest News Live 4 November 2025 ಸೆಲೀನಾ ಜೇಟ್ಲಿ ಸೋದರ, ಭಾರತೀಯ ಸೇನೆಯ ನಿವೃತ್ತ ಮೇಜರ್ ಯುಎಇನಲ್ಲಿ ಬಂಧನ - ಸಹಾಯಕೋರಿ ಕೋರ್ಟ್ ಮೆಟ್ಟಿಲೇರಿದ ನಟಿ
Celina Jaitly moves delhi court: ಬಾಲಿವುಡ್ ನಟಿ ಸೆಲೀನಾ ಜೇಟ್ಲಿ, ಯುಎಇನಲ್ಲಿ ಬಂಧಿತರಾಗಿರುವ ತಮ್ಮ ಸೋದರ, ನಿವೃತ್ತ ಮೇಜರ್ ವಿಕ್ರಾಂತ್ ಕುಮಾರ್ ಜೇಟ್ಲಿಗಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿಕ್ರಾಂತ್ ಅವರ ಬಿಡುಗಡೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.